ಪೋಸ್ಟ್‌ಗಳು

* ಶರಣರ ಸಂದೇಶ ಮತ್ತು ತತ್ವಗಳನ್ನು ಎಲ್ಲಾ ಜನರು ತಿಳಿಯಬೇಕು: ಶಾಕೀರ್ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

* ಶರಣರ ಸಂದೇಶ ಮತ್ತು ತತ್ವಗಳನ್ನು ಎಲ್ಲಾ ಜನರು ತಿಳಿಯಬೇಕು: ಶಾಕೀರ್

ಇಮೇಜ್
 *  ಕರ್ನಾಟಕ,ಮಾ.14:* ನಾಡಿನಲ್ಲಿ ಆಗಿಹೋಗಿರುವ ದಾರ್ಶನಿಕರ, ಶರಣರ ಸಂದೇಶ ಮತ್ತು ತತ್ವಗಳನ್ನು ಪಾಲಕರು ಹಾಗೂ ಹಿರಿಯರು ಮಕ್ಕಳೊಂದಿಗೆ ಹಂಚಿಕೊಳ್ಳಬೇಕು. ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಬಗ್ಗೆ ಎಲ್ಲ ತಾಯಂದಿರು ಮಕ್ಕಳಿಗೆ ಮನೆಯಲ್ಲಿ ಅವರ ಜೀವನ ಚರಿತ್ರೆಯ ಬಗ್ಗೆ ತಿಳಿಸಬೇಕು ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಅವರು ಹೇಳಿದರು.  #ಶಾಕಿರ್ #ಆಹ್ಮದ್ #ಕೈವಾರ #ತಾತಯ್ಯ #ಜಯಂತಿ  ಅವರು ಇಂದು (ಮಾ.14) ಮಧ್ಯಾಹ್ನ ನಗರದ ಆಲೂರು ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಜರುಗಿದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಶ್ರೀ ಯೋಗಿನಾರೇಯಣ ಯತೀಂದ್ರರ ಅವರು ಸುಮಾರು 17 ನೇ ಶತಮಾನದಲ್ಲಿ ಜನಿಸಿದವರು. ಕನ್ನಡ, ಸಂಸ್ಕøತ ಭಾಷೆ ಅಲ್ಲದೆ, ಹಲವಾರು ಭಾಷೆಗಳನ್ನು ಬಲವರಾಗಿದ್ದರು. ಅದರಿಂದಾಗಿ ಅಪಾರ ಜ್ಞಾನವನ್ನು ಪಡೆದುಕೊಂಡಿದರು. ಸಮಾಜಕ್ಕೆ ಹಲವಾರು ಕೊಡುಗೆಯನ್ನು ನೀಡಿದವರು ಯೋಗಿನಾರೇಯಣ ಯತೀಂದ್ರರವರು. ಒಂದೇ ಸಮಾಜಕ್ಕೆ ಸೀಮಿತವಾಗದೆ, ಧರ್ಮ ಜಾತಿಯನ್ನು ಮೀರಿ ಮಾನವನ ಜಾತಿಗೆ ಒಳಿತು ಮಾಡುವಲ್ಲಿ ಯೋಗಿ ನಾರಾಯಣರು ಶ್ರಮಿಸಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ...