ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ*
police commissioner love video *ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ* ಕರ್ನಾಟಕ, ಫೆಬ್ರವರಿ 28: ಇಂದು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ನಗರ ಪೊಲೀಸ್ ಆಯುಕ್ತ ಸಿ ದಯಾನಂದ ಮಾತನಾಡಿದರು. ಕೆಆರ್ ಪುರ ಪೊಲೀಸ್ ಠಾಣೆಯವರು ಒಂದು ಉತ್ತಮ ಕೆಲಸವನ್ನು ಮಾಡಿದ್ದಾರೆ.ಬೆಂಗಳೂರು ನಗರ ಸೇರಿದಂತೆ ಹೊರ ರಾಜ್ಯಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದಂತಹ ಓರ್ವ ಅಂತರ್ ರಾಜ್ಯ ಕಳ್ಳನನ್ನ ವಾಹನಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಆತನಿಂದ ಬೇರೆ ಬೇರೆ ಕಂಪನಿಗಳ ಒಟ್ಟು 100 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 1,45,00,000 ಆಗಿದೆ. ಬಹುಶಃ ಇದುವರೆಗಿನ ಬೆಂಗಳೂರು ನಗರದಲ್ಲಿಗಳಲ್ಲಿ ಇದು ಅತ್ಯಂತ ಹೆಚ್ಚಿನ ವಾಹನಗಳ ರಿಕವರಿ ಅಂತ ನಾನು ಭಾವಿಸುತ್ತೇನೆ. .ತಿಂಗಳು ಜನವರಿ ಹತ್ತನೇ ತಾರೀಕಿನಂದು ಕೆ ಆರ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹ ಒಂದು ಮನೆಯ ಮುಂಭಾಗ ನಿಲ್ಲಿಸಿದ್ದ ಅಂತಹ ವಾಹನವನ್ನು ಯಾರೋ ಕಳ್ಳರು ದ್ವಿಚಕ್ರ ವಾಹನ ಕದ್ದು ಕೊಂಡು ಹೋಗುತ್ತಾರೆ ,ಅದರಂತೆ ಅವರು ಹತ್ತನೇ ತಾರೀಖು ಈ ದೂರನ್ನ ದಾಖಲಿಸಿದ್ದಾರೆ. ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ಹಾಗೆ ದಾಖಲಿಸಿಕೊಂಡ ಈ ದೂರಿನ ಅನ್ವಯ ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ತನಿಖೆಯನ್ನ ಕೈಗೊಂಡು ಆರನೇ ತಾರೀಖು ಫೆಬ್ರವರ...