ಬಜೆಟ್ ಅತ್ಯುತ್ತಮ ದಿಶಾ ಸಭೆಯಲ್ಲಿ, ಸಂಸದ ಡಾ. ಮಂಜುನಾಥ್*
ಬಜೆಟ್ ಅತ್ಯುತ್ತಮ ದಿಶಾ ಸಭೆಯಲ್ಲಿ, ಸಂಸದ ಡಾ. ಮಂಜುನಾಥ್* ಕರ್ನಾಟಕ*, ಫೆ. 21: ಕೇಂದ್ರ ಸರ್ಕಾರದ ವಿತ್ತ ಸಚಿವರಾದ ನಿರ್ಮಲ ಸೀತಾರಾಮನ್ ಅವರು ಸತತ 8ನೇ ಬಾರಿಗೆ ಮಂಡಿಸಿರುವ ಬಜೆಟ್ನಲ್ಲಿ ಆರೋಗ್ಯ, ರಕ್ಷಣೆ, ಕೃಷಿ ಉತ್ಪಾದಕತೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಮಂಜುನಾಥ್ ಅವರು ಸಂತಸ ವ್ಯಕ್ತ ಪಡಿಸಿದರು. ಅವರು ಫೆ. 21ರ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ನ ಮಿನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕೃಷಿಗೆ ಆದ್ಯತೆ ನೀಡಿರುವ ಬಜೆಟ್ನಲ್ಲಿ ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆಯಡಿ 1.70 ರೈತರಿಗೆ ನೆರವು ನೀಡಲಾಗುತ್ತಿದೆ. ತೊಗರಿ ಬೆಳೆ ಹಾಗೂ ಅವರೆ ಬೇಳೆಯ ಉತ್ತಮ ಇಳುವರಿಗೆ ಕ್ರಮಕೈಗೊಳ್ಳಲಾಗಿದೆ. ರೈತರಿಗೆ 6,000 ರೂ.ಗಳ ನೇರ ನೆರವು ನೀಡಲಾಗುತ್ತಿದೆ. ರಾಗಿ, ಭತ್ತ ಸೇರಿದಂತೆ 23 ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ಬೆಳೆಗಳನ್ನು ಖರೀದಿಸಲಾಗುವುದು. ಫಸಲ್ ಭೀಮಾ ಯೋಜನೆಯಡಿ ರಾಮನಗರ ಜಿಲ್ಲೆಯಲ್ಲಿ 2.60 ಕೋಟಿ ರೂ.ಗಳನ್ನು ಕ್ಲೆöÊಮ್ ಮಾಡಲಾಗಿದೆ ಎಂದರು. ಜನ್ಧನ್ ಯೋಜನೆಯಡಿ 73 ಕೋಟಿ ಬ್ಯಾಂಕ್ ಖಾತೆಗಳನ್ನು ಮಾಡಿಕೊಡಲಾಗಿದೆ. ದೇಶದಲ್ಲಿಯೇ ಯೂರಿಯಾ ಉತ್ಪಾದನೆಗೆ ಆದ್ಯತೆ ನೀಡಿರುವ ಸರ್ಕಾರವು ಅಸ್ಸಾಂನಲ್ಲಿ 22 ಲಕ್ಷ ಟನ್ ಯೂರಿಯಾ ಉತ್ಪಾದನೆಯ ಫ್ಯಾಕ್ಟರಿಯನ್ನು ಆರಂಭಿಸಲು ಬಜೆಟ್ನ...