ಪೋಸ್ಟ್‌ಗಳು

*ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

*ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ

*ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :- ಕರ್ನಾಟಕ, ಮಾರ್ಚ್ 05:ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ : 1) ಶ್ರೀ ಧೀರೇಂದ್ರತೀರ್ಥರ ವೃಂದಾವನ ಯಾವ ಕ್ಷೇತ್ರದಲ್ಲಿ ಯಾವ ನದೀತೀರದಲ್ಲಿದೆ ? *ಉತ್ತರ :- ಹೊಸರಿತ್ತಿ ಕ್ಷೇತ್ರದಲ್ಲಿ ವರದಾನದೀತೀರದಲ್ಲಿದೆ.* ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :-  2) *ಮಾಷವಟಿಕಾ* ಎಂಬ ಪದಕ್ಕೆ ಕನ್ನಡದ ಅರ್ಥವೇನು ? *ಉತ್ತರ :- ಉತ್ತರ :- ಉದ್ದಿನವಡಾ.* ದಿನಕ್ಕೊಂದು ಮಹಾಭಾರತ ಪ್ರಶ್ನೋತ್ತರ :-  3) ಕರ್ಣನ ಸರ್ಪಾಸ್ತ್ರದಿಂದ ಅರ್ಜುನನನ್ನು ರಕ್ಷಣೆ ಯಾರು ಹೇಗೆ ಮಾಡಿದರು? *ಉತ್ತರ :- ರಥವನ್ನು ನೆಲಕ್ಕೆ ತುಳಿಯುವ ಮೂಲಕ ಶ್ರೀಕೃಷ್ಣಪರಮಾತ್ಮನು ರಕ್ಷಿಸಿದನು.* ದಿನಕ್ಕೊಂದು ವೇಂಕಟೇಶಮಹಾತ್ಮೆ ಪ್ರಶ್ನೋತ್ತರ :-  4) ಶಿಷ್ಟರಕ್ಷಣೆ, ದುಷ್ಟರಿಗೆ ಶಿಕ್ಷೆ ನೀಡುವ ಕೆಲಸವನ್ನು ಶ್ರೀನಿವಾಸ ಯಾರಿಗೆ ನೀಡಿದನು? *ಉತ್ತರ :- ಯಮದೇವರಿಗೆ.* ದಿನಕ್ಕೊಂದು ಭಾಗವತ ಪ್ರಶ್ನೋತ್ತರ :-  5) ದುಷ್ಯಂತ-ಶಕುಂತಲೆಯರ ಮಗ ಯಾರು ? *ಉತ್ತರ :- ಭರತ (ಸರ್ವದಮನ)* ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :- 6) ವಾಯುಸ್ತುತಿಯನ್ನು ರಚಿಸಿದವರು ಯಾರು ? *ಉತ್ತರ :- ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು* ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :-  7) *ತಕ್ರಂ* ಅನ್ನುವ ಪದಕ್ಕೆ ಕನ್ನಡದ ಅರ್ಥವೇನು? *ಉತ್ತರ :- ಮಜ್ಜಿಗೆ ಎಂದು ಅರ್ಥ.* ದಿನಕ್ಕೊಂದು ಮಹಾಭಾರತ ಪ್ರಶ್ನೋತ್ತರ :-...