*ನಾಡು ಕಂಡ ಅಪರೂಪದ ಸಾಹಿತಿ ಕೆ.ಎಸ್. ನರಸಿಂಹಸ್ವಾಮಿ: ಎನ್ ಚಲುವರಾಯಸ್ವಾಮಿ*
*ನಾಡು ಕಂಡ ಅಪರೂಪದ ಸಾಹಿತಿ ಕೆ.ಎಸ್. ನರಸಿಂಹಸ್ವಾಮಿ: ಸಚಿವ * ಕರ್ನಾಟಕ, ಮಾರ್ಚ್ 23:ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಅಪರೂಪದ ಸಾಹಿತಿ ಕೆ. ಎಸ್ ನರಸಿಂಹಸ್ವಾಮಿ ಅವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬಣ್ಣಿಸಿದರು. agriculture video #ಸಾಹಿತಿ #ಕೆ.ಎಸ್ #ನರಸಿಂಹಸ್ವಾಮಿ #ಜಿಲ್ಲಾ #ಉಸ್ತುವಾರಿ #ಸಚಿವ ಹಾಗೂ #ಕೃಷಿ ಸಚಿವ #ಎನ್. #ಚಲುವರಾಯಸ್ವಾಮಿ ಇಂದು (ಮಾ.23) ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ಕೆ.ಎಸ್. ನರಸಿಂಹಸ್ವಾಮಿ ಸಾಹಿತ್ಯ ಪ್ರಶಸ್ತಿ ಹಾಗೂ ಕಾವ್ಯ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆ.ಎಸ್ ನರಸಿಂಹಸ್ವಾಮಿರವರು ಮಲ್ಲಿಗೆ ಕವಿ ಎಂದೇ ಮನೆ ಮನೆ ಮಾತಾಗಿದ್ದಾರೆ ಎಂದು ಹೇಳಿದರು. ಜಗತ್ತಿನ ಯಾವ ದೇಶದಲ್ಲೂ ಇರದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಶ್ರೀಮಂತಿಕೆಯನ್ನು ನಮ್ಮ ಭಾರತದ ದೇಶ ಹೊಂದಿದೆ, ಕುವೆಂಪು, ದಾ.ರಾ.ಬೇಂದ್ರೆ ಅಂತಹಾ ಮಹಾನ್ ಸಾಹಿತಿಗಳು ದೇಶ ಸಾಹಿತ್ಯ ವೈಭವನ್ನು ಹೆಚ್ಚಿಸಿದ್ದಾರೆ. ಅವರೆಲ್ಲಾರ ಸಾಧನೆಗಳು ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು. ನಾಡಿನ ಖ್ಯಾತ ಸಾಹಿತಿ ನರಸಿಂಹಾಚಾರ್ ಹಾಗೂ ಕೆ. ಎಸ್ ನರಸಿಂಹಸ್ವಾಮಿ ಅವರ ಟ್ರಸ್ಟ್ ಗಳ ಜವಾಬ್ದಾರಿಯನ್ನು ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಪ್ರೊ. ಕೃಷ್ಣೇಗೌಡ ರವರಿಗೆ ನೀಡಲಾಗಿದೆ, ಟ್ರಸ್ಟ್ನ ಅಭ...