*ರಾಗಿ, ಶ್ರೀ ರಾಮ ಮೆಚ್ಚಿದ- ರಾಗಿ-ರಾಘವ*ರಾಮಧಾನ್ಯ ಚರಿತೆ" ಕಥೆ :- #ಭತ್ತ #ರಾಗಿ #ಧಾನ್ಯ #ಅಕ್ಕಿ #ಮಗುರಾಗ
*ರಾಗಿ, ಶ್ರೀ ರಾಮ ಮೆಚ್ಚಿದ- ರಾಗಿ-ರಾಘವ* ರಾಮಧಾನ್ಯ ಚರಿತೆ" ಕಥೆ :- #ಭತ್ತ #ರಾಗಿ #ಧಾನ್ಯ #ಅಕ್ಕಿ #ಮಗುರಾಗ ರಾಗಿ ವೀಡಿಯೋ ಕರ್ನಾಟಕ, ಫೆಬ್ರವರಿ 22:ರಾಗಿ ಉಂಡವ ನಿರೋಗಿ’, ‘ಅಕ್ಕಿ ಉಂಡವ ಹಕ್ಕಿ ಜೋಳ ಉಂಡವ ತೋಳ’ ಎಂಬ ಗಾದೆ ಮಾತುಗಳನ್ನು ನೀವು ಕೇಳಿರುತ್ತೀರ. ಈ ಗಾದೆಗಳು ಆಹಾರ ಧಾನ್ಯಗಳಾಗಿ ರಾಗಿ ಮತ್ತು ಅಕ್ಕಿಯ ಮಹತ್ವವನ್ನು ಸಾರಿ ಹೇಳುತ್ತವೆ. ಪುರಂದರದಾಸರು ರಾಗಿ ತಂದಿರಾ ಭಿಕ್ಷೆಗೆ ರಾಗಿ ತಂದಿರಾ ಎಂದು ಹೇಳಿದರು..ಕನಕದಾಸರು ರಾಗಿಯ ಮಹಿಮೆ ಕುರಿತು "ರಾಮಧಾನ್ಯ ಚರಿತೆ" ಬರೆದರು.. ಆಧುನಿಕ ಜಗತ್ತಿನಲ್ಲಿ ಅಕ್ಕಿ ಮತ್ತು ಅದರಿಂದ ಮಾಡುವ ಅನ್ನದ ಆರೋಗ್ಯ ಪ್ರಯೋಜನಗಳ ಬಗ್ಗೆ ಆಗಿಂದಾಗ್ಗೇ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹೆಚ್ಚು ಅನ್ನ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ, ಅನ್ನ ಉಂಡರೆ ಮಧುಮೇಹ ಬರುತ್ತದೆ, ಬಿಜ್ಜು ಹೆಚ್ಚುತ್ತದೆ ಎಂದೆಲ್ಲಾ ಹೇಳುತ್ತಾರೆ. ಅದೇ ರಾಗಿ ಎಂದಾಕ್ಷಣ ಎಲ್ಲರೂ ಆರೋಗ್ಯ ಮಂತ್ರ ಜಪಿಸಲು ಆರಂಭಿಸುತ್ತಾರೆ. ಪುರಾಣಗಳ ಪ್ರಕಾರ ರಾಮಾಯಣದ ಘಟನಾವಳಿಗಳು ನಡೆದದ್ದು ಈ ತ್ರೇತಾಯುಗದಲ್ಲಿ. ಇದೇ ಯುಗದಲ್ಲಿ ಭತ್ತ ಹಾಗೂ ರಾಗಿ ನಡುವೆ ವಾಕ್ಸಮರ ನಡೆದು, ಅವುಗಳ ವ್ಯಾಜ್ಯ ಪ್ರಭು ಶ್ರೀರಾಮನ ಬಳಿ ಹೋಗಿತ್ತು. ಈ ವೃತ್ತಾಂತವನ್ನು ಶ್ರೀ ಕನಕದಾಸರು ತಮ್ಮ ‘ರಾಮಧ್ಯಾನ ಚರಿತೆ’ಯಲ್ಲಿ ವಿವರಿಸಿದ್ದಾರೆ. ರಾಮಧ್ಯಾನ ಚರಿತೆಯು ಕನಕದಾಸರು ರಚಿಸಿರುವ ಒಂದು ವಿಡಂಬನಾ ಕಾವ್ಯ. ...