*ರಾಗಿ, ಶ್ರೀ ರಾಮ ಮೆಚ್ಚಿದ- ರಾಗಿ-ರಾಘವ*ರಾಮಧಾನ್ಯ ಚರಿತೆ" ಕಥೆ :- #ಭತ್ತ #ರಾಗಿ #ಧಾನ್ಯ #ಅಕ್ಕಿ #ಮಗುರಾಗ
*ರಾಗಿ, ಶ್ರೀ ರಾಮ ಮೆಚ್ಚಿದ- ರಾಗಿ-ರಾಘವ*
ರಾಮಧಾನ್ಯ ಚರಿತೆ" ಕಥೆ :-
#ಭತ್ತ #ರಾಗಿ #ಧಾನ್ಯ #ಅಕ್ಕಿ #ಮಗುರಾಗ
ರಾಗಿ ವೀಡಿಯೋ
ಕರ್ನಾಟಕ, ಫೆಬ್ರವರಿ 22:ರಾಗಿ ಉಂಡವ ನಿರೋಗಿ’, ‘ಅಕ್ಕಿ ಉಂಡವ ಹಕ್ಕಿ ಜೋಳ ಉಂಡವ ತೋಳ’ ಎಂಬ ಗಾದೆ ಮಾತುಗಳನ್ನು ನೀವು ಕೇಳಿರುತ್ತೀರ. ಈ ಗಾದೆಗಳು ಆಹಾರ ಧಾನ್ಯಗಳಾಗಿ ರಾಗಿ ಮತ್ತು ಅಕ್ಕಿಯ ಮಹತ್ವವನ್ನು ಸಾರಿ ಹೇಳುತ್ತವೆ.
ಪುರಂದರದಾಸರು ರಾಗಿ ತಂದಿರಾ ಭಿಕ್ಷೆಗೆ ರಾಗಿ ತಂದಿರಾ ಎಂದು ಹೇಳಿದರು..ಕನಕದಾಸರು ರಾಗಿಯ ಮಹಿಮೆ ಕುರಿತು "ರಾಮಧಾನ್ಯ ಚರಿತೆ" ಬರೆದರು.. ಆಧುನಿಕ ಜಗತ್ತಿನಲ್ಲಿ ಅಕ್ಕಿ ಮತ್ತು ಅದರಿಂದ ಮಾಡುವ ಅನ್ನದ ಆರೋಗ್ಯ ಪ್ರಯೋಜನಗಳ ಬಗ್ಗೆ ಆಗಿಂದಾಗ್ಗೇ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹೆಚ್ಚು ಅನ್ನ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ, ಅನ್ನ ಉಂಡರೆ ಮಧುಮೇಹ ಬರುತ್ತದೆ, ಬಿಜ್ಜು ಹೆಚ್ಚುತ್ತದೆ ಎಂದೆಲ್ಲಾ ಹೇಳುತ್ತಾರೆ. ಅದೇ ರಾಗಿ ಎಂದಾಕ್ಷಣ ಎಲ್ಲರೂ ಆರೋಗ್ಯ ಮಂತ್ರ ಜಪಿಸಲು ಆರಂಭಿಸುತ್ತಾರೆ.
ಪುರಾಣಗಳ ಪ್ರಕಾರ ರಾಮಾಯಣದ ಘಟನಾವಳಿಗಳು ನಡೆದದ್ದು ಈ ತ್ರೇತಾಯುಗದಲ್ಲಿ. ಇದೇ ಯುಗದಲ್ಲಿ ಭತ್ತ ಹಾಗೂ ರಾಗಿ ನಡುವೆ ವಾಕ್ಸಮರ ನಡೆದು, ಅವುಗಳ ವ್ಯಾಜ್ಯ ಪ್ರಭು ಶ್ರೀರಾಮನ ಬಳಿ ಹೋಗಿತ್ತು. ಈ ವೃತ್ತಾಂತವನ್ನು ಶ್ರೀ ಕನಕದಾಸರು ತಮ್ಮ ‘ರಾಮಧ್ಯಾನ ಚರಿತೆ’ಯಲ್ಲಿ ವಿವರಿಸಿದ್ದಾರೆ.
ರಾಮಧ್ಯಾನ ಚರಿತೆಯು ಕನಕದಾಸರು ರಚಿಸಿರುವ ಒಂದು ವಿಡಂಬನಾ ಕಾವ್ಯ. ಇದು ಸಂಪೂರ್ಣವಾಗಿ ನೆರೆದೆಲಗ (ರಾಗಿ) ವ್ರೀಹಿ (ಭತ್ತ) ನಡುವಿನ ಜಗಳದ ಕಥೆಯಾಗಿದೆ.
ರಾಗಿ-ಭತ್ತದ ಜಗಳದ ಕಥೆ:-
ರಾಗಿ ಮತ್ತು ಭತ್ತ ನಾನೆಚ್ಚು ತಾನೆಚ್ಚು ಎಂದು ಜಗಳ ಮಾಡುತ್ತಿರುತ್ತವೆ. ಈ ವಿಷಯ ಶ್ರೀ ರಾಮನ ಕಿವಿಗೂ ಮುಟ್ಟಿ, ಪ್ರಭು ಶ್ರೀರಾಮರು ಇವೆರಡೂ ಧಾನ್ಯಗಳನ್ನು ತಮ್ಮ ಆಸ್ತಾನಕ್ಕೆ ಕರೆಸಿಕೊಂಡು, ಅವೆರಡರ ವಾದವನ್ನು ಕೇಳುತ್ತಾರೆ. ಮೊದಲು ಮಾತನಾಡಿದ ಭತ್ತ ಈ ಜಗತ್ತಿಗೆ ತನ್ನ ಅನಿವಾರ್ಯತೆ ಮತ್ತು ಅಗತ್ಯವನ್ನು ಒತ್ತಿ ಹೇಳುತ್ತದೆ
ಭತ್ತ ಹೇಳುತ್ತದೆ...
‘ಪ್ರಭು ಶ್ರೀರಾಮ, ಆ ರಾಗಿಗಿಂತ ನಾನೇ ಶ್ರೇಷ್ಠ. ಹೇಗೆಂದರೆ ಭೂಸುರರು ಅಂದರೆ ಮಾನವರು ನಿತ್ಯ ಆಹಾರವಾಗಿ ಬಳಸುವುದು ನನ್ನನ್ನೇ (ಅನ್ನವನ್ನೇ). ಹುಟ್ಟಿನಿಂದ ಸಾಯುವವರೆಗೂ ನಡೆಯುವ ಎಲ್ಲಾ ರೀತಿಯ ಕಾರ್ಯಗಳಲ್ಲೂ ನನ್ನ ಉಪಸ್ಥಿತಿ ಇರಲೇಬೇಕು. ಮನುಷ್ಯ ಹುಟ್ಟಿದಾಗಿನಿಂದ ಮಣ್ಣು ಸೇರುವವರೆಗೂ ನಾನೇ ಅವನಿಗೆ ಆಹಾರ. ನಾನಿಲ್ಲದೆ ಶುಭ ಕಾರ್ಯಗಳಾಗಲಿ ಅಶುಭ ಕಾರ್ಯಗಳಾಗಲಿ ನಡೆಯುವುದಿಲ್ಲ. ಈ ಲೋಕವು ನನ್ನನ್ನು ಹೆಚ್ಚಾಗಿ ಬಳಸುವುದರಿಂದ . ನಾನೇ ಶ್ರೇಷ್ಠ,’ ಎಂದು ತನ್ನ ಗುಣಗಾನ ಮಾಡಿಕೊಳ್ಳುತ್ತದೆ.
ರಾಗಿ ಹೇಳುತ್ತದೆ...
ಮಹಾಪ್ರಭು, ಪ್ರಪಂಚದಲ್ಲಿ ನನ್ನ ಬಳಕೆಯೇ ಹೆಚ್ಚು. ಹೇಗೆಂದರೆ ಈ ಲೋಕದಲ್ಲಿ ಶ್ರೀಮಂತರಿಗಿAತ ಬಡವರೆ ಜಾಸ್ತಿ. ನಾನು ಬಡವರ ಅನು‘ರಾಗಿ’. ಕೂಲಿ ಕೆಲಸ ಮಾಡುವವರಿಂದ ಹಿಡಿದು, ಶ್ರೀಮಂತರವರೆಗೂ ನನ್ನನ್ನು ಬಳಸುತ್ತಾರೆ. ನನ್ನನ್ನು ತಿಂದವರು ಶಕ್ತಿಶಾಲಿಗಳಾಗುತ್ತಾರೆ. ‘ ಹಾಗೇ ನನ್ನನ್ನು ಸೇವಿಸಿದವರಿಗೆ ಅನಾರೋಗ್ಯದ ಚಿಂತೆಯೇ ಇರುವುದಿಲ್ಲ. ಇದಕ್ಕೂ ಕೂಡ ‘ರಾಗಿ ತಿಂದವ ನಿರೋಗಿ’ ಎಂಬ ಗಾದೆ ಮಾತಿದೆ. ಆದುದರಿಂದ ನಾನೇ ಹೆಚ್ಚು. ನಾನೇ ಶ್ರೇಷ್ಠ,’ ಎಂದು ತನ್ನನ್ನು ತಾನು ಬಣ್ಣಿಸಿಕೊಳ್ಳುತ್ತದೆ.
ಎರಡೂ ಧಾನ್ಯಗಳ ವಾದದಲ್ಲಿದ್ದ ‘ನಾನು’ ಎಂಬ ಅಹಂಕಾರ ಕಂಡು ಶ್ರೀರಾಮರಿಗೆ ಕೋಪ ಬರುತ್ತದೆ. ಕೂಡಲೇ ಅವೆರಡನ್ನು ಕಾರಾಗೃಹಕ್ಕೆ ತಳ್ಳುವಂತೆ ತನ್ನ ಸೇವಕರಿಗೆ ಶ್ರೀರಾಮ ಆಜ್ಞಾಪಿಸುತ್ತಾರೆ. ಹೀಗೆ ಧಾನ್ಯಗಳೆರಡನ್ನೂ ಸೆರೆಮನೆಗೆ ತಳ್ಳಿದ ಪ್ರಭ ಶ್ರೀರಾಮ, ಐದಾರು ತಿಂಗಳು ತಮ್ಮ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಅವುಗಳನ್ನು ಮರೆತು ಬಿಡುತ್ತಾರೆ. ಆರು ತಿಂಗಳ ನಂತರ ಅವುಗಳ ನೆನಪು ಬಂದು ಎರಡನ್ನೂ ವಿಚಾರಣೆಗೆ ಕರೆಸಿದಾಗ, ರಾಗಿ ಚೆನ್ನಾಗಿ ಇರುತ್ತದೆ. ಭತ್ತ ಅನಾರೋಗ್ಯದಿಂದ ನಿತ್ರಾಣಗೊಂಡಿರುತ್ತದೆ.
ಶ್ರೀರಾಮ, ‘ನಿಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಈಗ ಹೇಳಿ’ ಎಂದಾಗ ಭತ್ತ ನಾಚಿಕೆಯಿಂದ ತಲೆ ತಗ್ಗಿಸುತ್ತದೆ. ಶ್ರೀರಾಮ ರಾಗಿಯನ್ನು ತನ್ನ ಬಳಿ ಕರೆದು ಅದನ್ನು ನೇವರಿಸಿ, ಅದಕ್ಕೆ ‘ರಾಮಧಾನ್ಯ’ ಎಂಬುದಾಗಿ ಹೊಸ ಹೆಸರೊಂದನ್ನು ಕೊಡುತ್ತಾನೆ.
ನಮ್ಮ ರಾಗಿ ಬಡವನಿಗೆ ಶ್ರೀ ರಾಮರಿಗೆ ಭಾಷೆ ಕೊಟ್ಟ ಬೆಳೆ. ಅದು ಎಂದೂ ಬೆಳೆದ ರೈತನನ್ನು ಹಸಿವಿಗೆ ದೂಡುವುದಿಲ್ಲ ನಿರಾಸೆಗೆ ತಳ್ಳುವುದಿಲ್ಲ .
ರಾಗಿಯು ಶ್ರೀ ರಾಮ ಪ್ರಭುವಿನ ಆಶೀರ್ವಾದ ಪಡೆದ ಧಾನ್ಯವಾಗಿದೆ.
ಆದ್ದರಿಂದ, ಶ್ರೀರಾಮನು ಹೇಳಿದನು, “ಅಕ್ಕಿಯು ಬಿಳಿ ಬಣ್ಣದ್ದಾಗಿರಬಹುದು ಆದರೆ ಅದು ಹಾಳಾಗುತ್ತದೆ. ಮತ್ತೊಂದೆಡೆ, ರಾಗಿ ಬಿಳಿಯಾಗದಿರಬಹುದು, ಆದರೆ ತುಂಬಾ ಆರೋಗ್ಯಕರ ಮತ್ತು ಸುಲಭವಾಗಿ ಕೆಡುವುದಿಲ್ಲ. ಆದ್ದರಿಂದ, ನಾನು ರಾಗಿಯನ್ನು ಶ್ರೇಷ್ಠ ಎಂದು ಉಚ್ಚರಿಸುತ್ತೇನೆ.
ರಾಗಿಯನ್ನು ರಾಮರಾಜ್ಯದಿಂದಲೂ ರಾಮಧಾನ್ಯ ಎಂದು ಕರೆಯುತ್ತಾರೆ. ಈ ಚರಿತೆಯಿಂದ ಭತ್ತ ಮತ್ತು ರಾಗಿ ಧಾನ್ಯಗಳು ಪುರಾಣಗಳ ಕಾಲದಿಂದಲೂ ಇರುವುದು ಖಚಿತವಾಗುತ್ತದೆ.
#karnataka #state #jds #bjp #minister #Bengaluru #ರಾಜ್ಯ #ಸಚಿವ #ಜಿಲ್ಲಾಧಿಕಾರಿ #ಒಕ್ಕಲಿಗ #AI #Riya #YOGI #ಆದೇಶ #ಭಾಷೆ #ಚೇತನಾ #ಮುನಿಸ್ವಾಮಿ #ಗೌಡ
https://whatsapp.com/channel/0029VacbYbeCMY0C0whFMu13
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏