*ಎಂಟಿಎಂ ಕಾರ್ಡ್ಇರುವರು ಮರಣ ಹೊಂದಿದರೆ:ಕುಟುಂಬಕ್ಕೆ 2 ಲಕ್ಷ ಹಣ*
*ಎಂಟಿಎಂ ಕಾರ್ಡ್ಇರುವರು ಮರಣ ಹೊಂದಿದರೆ:ಕುಟುಂಬಕ್ಕೆ 2 ಲಕ್ಷ ಹಣ* -ಸಾವಿನ ನಂತರ ATM ಕಾರ್ಡ್ನ ಪ್ರಯೋಜನ- ಕರ್ನಾಟಕ ಫೆಬ್ರವರಿ 20:ಯಾವುದೇ ಬ್ಯಾಂಕ್ನ ಎಟಿಎಂ ಕಾರ್ಡ್ (ರೂಪೇ ಕಾರ್ಡ್) ಕಾರ್ಡ್ ಉಳ್ಳವರು ಆಕಸ್ಮಿಕ ಮರಣಕ್ಕೆ ತುತ್ತಾದರೆ ಕುಟುಂಬದವರಿಗೆ 2 ಲಕ್ಷ ರೂ. ಪರಿಹಾರ ಸಿಗ ಲಿದೆ ಎಂದು ಸಾಕ್ಷರತಾ ಸಲಹೆಗಾರ. ಕುಮಾರಸ್ವಾಮಿ ತಿಳಿಸಿದರು. ಸಾಕ್ಷರತಾ ಕೇಂದ್ರದಿಂದ ಹುಳಿಯಾರು ಹೋಬಳಿಯ ಚಿಕ್ಕಬಿದರೆಯ ಶ್ರೀಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಹಾರಕ್ಕಾಗಿ ಯಾವುದೇ ವಿಮಾ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ, ಯಾವ ರೀತಿಯಲ್ಲಿ ಸಾವನ್ನಪ್ಪಿದರೂ ಸಹ ಪರಿಹಾರ ಸಿಗಲಿದೆ, ಯಾವುದೇ ವಯಸ್ಸಿನ ನಿಬಂಧನೆ ಇರುವುದಿಲ್ಲ, ಆದರೆ ಎಟಿಎಂ ಕಾರ್ಡ್ ಅನ್ನು 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಬಳ ಸಬೇಕಿದೆ ಎಂದು ಮಾಹಿತಿ ನೀಡಿದರು. ಸೈಬರ್ ಕ್ರೈಂಗಳು ಹೆಚ್ಚಾಗುತ್ತಿವೆ. ಜನರು ಜಾಗೃತ ರಾಗಿರಬೇಕು, ಹಣಕಾಸಿನ ಮೋಸ ಮಾಡುವವರು ಯಾವುದೇ ರೀತಿಯಲ್ಲಿ ತಮ್ಮನ್ನು ಸಂಪರ್ಕಿಸಿ ತಮ್ಮಿಂದ ಮಾಹಿತಿ ಪಡೆದು ಹಣ ಕಿತ್ತುಕೊಳ್ಳುತ್ತಾರೆ, ಇಂತಹ ಪ್ರಕರಣಗಳು ನಡೆದರೆ ತಕ್ಷಣ ಸೈಬರ್ ಕೈಂ ಬ್ರಾಂಚಿಗೆ ದೂರು ನೀಡಬೇಕು ಎಂದು ತಿಳಿಸಿದರು. ಸಾವಿನ ನಂತರ ATM ಕಾರ್ಡ್ನ ಪ್ರಯೋಜನ:- ATM ಕಾರ್ಡ್ ವಿಮೆಯನ್ನು ಅಪಘಾತ ಮರಣ ವಿಮೆ ಎಂದೂ ಕರೆಯುತ್ತಾರೆ, ಇದು ಕಾರ್ಡುದಾರರ ಮರ...