*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಪ್ರತಿಷ್ಠಿತ ಆದಿಚುಂಚನಗಿರಿ  ವಸತಿ ಶಾಲೆಯಲ್ಲಿ  ಬಡ  ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

ಕರ್ನಾಟಕ, ಜನವರಿ 30:ಪ್ರತಿಭಾನ್ವಿತ ಬಡ ಮಕ್ಕಳ ಸರ್ವಾಂಗೀಣ ಶಿಕ್ಷಣದ ಏಳ್ಳೆಯ ದೃಷ್ಟಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಶ್ರೀ ಆದಿಚುಂಚನಗಿರಿ ಪ್ರತಿಭಾವಂತ ಮಕ್ಕಳ ಉಚಿತ ವಸತಿ ಶಾಲೆ SAMVIT (Sri Adichunchanagiri Mutt Vijnatham Institute for Talented) 2023-24 ರಲ್ಲಿ ಪ್ರಾರಂಭಿಸಿದರು. 
   ಈ ಶಾಲೆ 6 ರಿಂದ 12ನೇ ತರಗತಿಯವರೆಗೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅಂಗ್ಲ ಮಾಧ್ಯಮದ ಸಂಪೂರ್ಣ ಉಚಿತ ವಸತಿ ಶಾಲೆಯಾಗಿದ್ದು, ಪಿಯುಸಿ ನಂತರದ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯವನ್ನು ಶ್ರೀಮಠದಿಂದ ನೀಡಲಾಗುವುದು. ಪ್ರಸ್ತುತ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ 6 ಮತ್ತು 7ನೇ ತರಗತಿಯ ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಈ ಸೌಲಭ್ಯವನ್ನು ಮುಂದಿನ ಶೈಕ್ಷಣಿಕ ವರ್ಷವಾದ 2025-26 ನೇ ಸಾಲಿಗೆ ತುಮಕೂರು ಜಿಲ್ಲೆಗೂ ವಿಸ್ತರಿಸಲಾಗಿದೆ.

ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಪುರಾಣ ಪ್ರಸಿದ್ಧವಾದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ನಾಡಿನ ಹೆಸರಾಂತ ಧಾರ್ಮಿಕ ಪುಣ್ಯಕ್ಷೇತ್ರವಾಗಿದೆ. 
ನಮ್ಮೆಲ್ಲರ ಆರಾಧ್ಯದೈವ ಯುಗಯೋಗಿ ಧರ್ಮರತ್ನಾಕರ ಪದ್ಮಭೂಷಣ ಭೈರವೈಕ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು 71ನೇ ಜಗದ್ಗುರುಗಳಾಗಿ ಸಿಂಹಾಸನರೂಢರಾಗಿ ಮಾಡಿದ ಅಚ್ಚಳಿಯದ ಸಾಧನೆಗಳು ಅವಿಸ್ಮರಣೀಯವಾಗಿವೆ. 
ಸಮಾಜದ ಏಳಿಗೆ ಶಿಕ್ಷಣದಿಂದಲೇ ಸಾಧ್ಯವೆಂದು ಬಗೆದ ಶ್ರೀಗುರುಗಳು ಅದಕ್ಕಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸ್ಥಾಪಿಸಿ ಮಾಡಿದ ಶಿಕ್ಷಣ ಕ್ರಾಂತಿ ಅವರ ದೂರದೃಷ್ಟಿಗೆ ಕೈಗನ್ನಡಿಯಾಗಿದೆ. 
ಇಂದು ನರ್ಸರಿಯಿಂದ ಪಿ.ಜಿಯವರೆಗೂ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ಒಂದುವರೆ ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಪರಮಪೂಜ್ಯರ ಕರಕಮಲ ಸಂಜಾತರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಶ್ರೀಮಠದ ಎಲ್ಲಾ ಸೇವಾಕೈಂಕರ್ಯಗಳನ್ನು ಮತ್ತಷ್ಟು ಉತ್ಕೃಷ್ಣತೆಯಿಂದ ಮುನ್ನಡೆಸಿಕೊಂಡು ಹೋಗುತ್ತಿರುವುದು ಸ್ತುತ್ಯಾರ್ಹವಾಗಿದೆ.


ಪ್ರತಿ ವರ್ಷವೂ 6ನೇ ತರಗತಿಗೆ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ. ಮನೆ ಭೇಟಿ ಮತ್ತು ಹಿನ್ನಲೆ ಪರಿಶೀಲನೆಯ ಮೂಲಕ ಆಯ್ಕೆಮಾಡಲಾಗುವುದು, 2025-26ನೇ ಸಾಲಿಗೆ ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಯ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ಆರಂಭಿಸಲಾಗಿದೆ. ಪ್ರಸ್ತುತ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆಗೆ ಅರ್ಹರು.
ದಿನಾಂಕ: 03-02-2025 00 29-03-2025  . . ಮಾಲೂರು, ಶ್ರೀನಿವಾಸಪುರ ಮತ್ತು ಕೋಲಾರದ ನಮ್ಮ ಬಿಜಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ತುಮಕೂರು ಜಿಲ್ಲೆಯ ತಿಪಟೂರಿನ ಒಕ್ಕಲಿಗರ ಸಂಘದ ಕಛೇರಿ, ಕುಣಿಗಲ್‌ನ ಬಿಜಿಎಸ್ ಶಾಲೆ, ಮಧುಗಿರಿಯ ಚೇತನ ಇಂಗ್ಲೀಷ್ ಸ್ಕೂಲ್ ಹಾಗೂ ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯ ನಳಂದ ಪಬ್ಲಿಕ್ ಶಾಲೆಗಳಲ್ಲಿ ಅರ್ಜಿಯನ್ನು ವಿತರಿಸಲಾಗುವುದು.

ಅರ್ಜಿಯನ್ನು ಸಲ್ಲಿಸಲು ದಿನಾಂಕ : 31-03-2025 ರಂದು ಕೊನೆಯ ದಿನವಾಗಿರುತ್ತದೆ. ದಿನಾಂಕ : 06-04-2025 ರಂದು ಪ್ರವೇಶ ಪರೀಕ್ಷೆಯನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಗಳ ನಮ್ಮ ಬಿಜೆಎಸ್ ಸಂಸ್ಥೆಗಳಲ್ಲಿ ಹಾಗೂ ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯ ನಳಂದ ಪಬ್ಲಿಕ್ ಶಾಲೆಯಲ್ಲಿ ನಡೆಸಲಾಗುವುದು. 
ಹೆಚ್ಚಿನ ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಲು ತಾವೆಲ್ಲರೂ ಸಹಕರಿಸಬೇಕಾಗಿ ಕೋರಲಾಗಿದೆ.

ಮಾಹಿತಿ ಮತ್ತು ಸಂಪರ್ಕ ಕೇಂದ್ರಗಳು
ಚಿಕ್ಕಬಳ್ಳಾಪುರ, ಅಗಲಗುರ್ಕಿ 9632352946, ಮಂಚನಬೆಲೆ - 9902712289, ಗೌರಿಬಿದನೂರು - 9900433002. ಬಾಗೇಪಲ್ಲಿ -
9480420965. 59742668712. - 9686850302, A3 6361614731. - 9743496836.- 9164375121, 22-9611130481, 9611568306, 3-8970474748,
9900423469.
ಪ್ರಕಟಣೆ:-
ವ್ಯವಸ್ಥಾಪಕರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮತ ಚಿಕ್ಕಬಳ್ಳಾಪುರ ಶಾಖೆ, ಚಿಕ್ಕಬಳ್ಳಾಪುರ.

#Okkaliga #gowda #Vokkaligar #gowdas #ಮಂಡ್ಯ #ಮೈಸೂರು #ಬೆಂಗಳೂರು #ತುಮಕೂರು #ಚಿಕ್ಕಬಳ್ಳಾಪುರ #ರಾಮನಗರ #ಗೌಡ್ರು #ಬೇಸಾಯ #ಕೃಷಿ #Chethana #book #Muniswamygowda #Riya #YOGI #ಚೇತನಾ #ಮುನಿಸ್ವಾಮಿಗೌಡ #ಆದಿಚುಂಚನಗಿರಿ #ಚಿಕ್ಕಮಗಳೂರು #ಹಾಸನ #ಕೊಡಗು #ಮಂಗಳೂರು #ಶಿವಮೊಗ್ಗ #ಬಾಲಗಂಗಾಧರ #ನಿರ್ಮಲಾನಂದನಾಥ #ಕುವೆಂಪು #ವಚನ #ಸಾಹಿತ್ಯ #ದಾಸ #ರಾಜ್ಯ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ