15 k. g. ಅಕ್ರಮ ಚಿನ್ನ ಸಾಗಣೆ :ನಟಿ ರನ್ಯಾ ರಾವ್ ಬಂಧನ- ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರತಿಕ್ರಿಯೆ
15 k. g. ಅಕ್ರಮ ಚಿನ್ನ ಸಾಗಣೆ :ನಟಿ ರನ್ಯಾ ರಾವ್ ಬಂಧನ- ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರತಿಕ್ರಿಯೆ. ಕರ್ನಾಟಕ, ಮಾರ್ಚ್ 05: ಅಕ್ರಮ ಚಿನ್ನ ಸಾಗಣೆ ಆರೋಪದಲ್ಲಿ ನಟಿ ರನ್ಯಾ ರಾವ್ ಬಂಧನವಾಗಿರುವ ಪ್ರಕರಣದ ಕುರಿತು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆ ವೀಡಿಯೋ #ಚಿನ್ನ #ಬಂಗಾರ #ಗೃಹ #airport #dubai #actorsarrest . ದುಬೈನಿಂದ ನಿಗದಿಗಿಂತ ಹೆಚ್ಚು ಚಿನ್ನ ತಂದ ಕಾರಣಕ್ಕೆ ಬೆಂಗಳೂರ ವಿಮಾನ ನಿಲ್ದಾಣದಲ್ಲಿ ಕನ್ನಡ ಸಿನಿಮಾ ನಟಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರನ್ಯಾ ರಾವ್ ಅವರು ದುಬೈನಿಂದ ಬೆಂಗಳೂರಿಗೆ ಮಾರ್ಚ್ 3 ರ ರಾತ್ರಿ ಹಿಂದಿರುಗಿದ್ದರು. ಪ್ರಯಾಣಿಕರ ತಪಾಸಣೆ ನಡೆಸಿದಂತೆ ಇವರ ತಪಾಸಣೆಯೂ ನಡೆದಿದ್ದು, ಈ ವೇಳೆ ವಿದೇಶದಿಂದ ಹೆಚ್ಚುವರಿ ಚಿನ್ನ ತಂದಿದ್ದಾರೆ ಎಂದು ಪತ್ತೆಯಾಗಿದೆ. ಕೂಡಲೇ ನಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ video ಆಕೆಯ ದುಬೈ ಪ್ರವಾಸದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಒಂದು ವರ್ಷದಲ್ಲಿ 40 ಬಾರಿ ದುಬೈಗೆ ಹೋಗಿ ಬಂದಿದ್ದು, ಮಲೇಷ್ಯಾ-ಬೆಂಗಳೂರು-ದುಬೈ ನಡುವೆ ಹಣದ ಹರಿವಿನ ಬಗ್ಗೆಯೂ ತನಿಖೆ ನಡೆಯುತ್ತಿದೆ.ಇವರು ನಟ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ನಟಿ ಅಭಿನಯ ಮಾಡಿದ್ದರು. ದುಬೈನಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ನಿಗದಿತ ಪ್ರಮಾಣ ಚಿನ್ನವನ್ನು ಮಾತ್ರ ತೆಗೆದುಕೊಂಡು ಬರಲು ಅನು...