*ಹೆಚ್ಚು ಲಾಭ ತರುತ್ತಿರುವ ಬೆಳೆಗಳಲ್ಲಿ ಅವೊಕಾಡೊ/ ಬೆಣ್ಣೆ ಹಣ್ಣು ಕೂಡ ಒಂದು. ಹಾಗಾಗಿ ಬೆಣ್ಣೆ ಹಣ್ಣಿನ ಕೃಷಿ ಬಗ್ಗೆ ತಿಳಿಯೋಣ

*ಹೆಚ್ಚು ಲಾಭ ತರುತ್ತಿರುವ ಬೆಳೆಗಳಲ್ಲಿ ಅವೊಕಾಡೊ/ ಬೆಣ್ಣೆ ಹಣ್ಣು ಕೂಡ ಒಂದು. ಹಾಗಾಗಿ  ಬೆಣ್ಣೆ ಹಣ್ಣಿನ ಕೃಷಿ ಬಗ್ಗೆ  ತಿಳಿಯೋಣ*

ಭಾರತ, ಮಾರ್ಚ್ 24: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹಣ್ಣು ಅವಕ್ಯಾಡೋ ಅಥವಾ ಬೆಣ್ಣೆ ಹಣ್ಣು, ಹೆಚ್ಚು ಲಾಭ ತರುತ್ತಿರುವ ಬೆಳೆಯಾಗಿದೆ.
 
ಇಂದು ಭಾರತದ ರೈತರು  ಹೊಸ ಪ್ರಯೋಗಳನ್ನು ಮೂಲಕ ಹೆಚ್ಚಿನ ಆದಾಯ  ಗಳಿಸುತ್ತಿದ್ದಾರೆ.ಆಧುನಿಕ ಕೃಷಿಯತ್ತ ಮುಖ ಮಾಡಿರುವ ರೈತರು ಇಂದು ಸುಖೀ ಜೀವನದೊಂದಿಗೆ ಕಾರು ಬಂಗಲೆ ಮಾಲೀಕರಾಗುತ್ತಿದ್ದಾರೆ.

#Profit #agriculture #ಬೆಣ್ಣೆ #ಹಣ್ಣು #ಅವಕ್ಯಾಡೋ #ಬೆಳೆ #ಫಸಲು


ತಂತ್ರಜ್ಞಾನ ಮತ್ತು ಸರಿಯಾದ ಜ್ಞಾನದ ಅಭಿವೃದ್ಧಿಯೊಂದಿಗೆ, ಈ ಹಣ್ಣಿನ ಕೃಷಿಯನ್ನು ಸುಲಭವಾಗಿ ಮಾಡಬಹುದು. ಈ ಹಣ್ಣಿನ ಕೃಷಿಗೆ ತಾಪಮಾನವು 20 ರಿಂದ 40 ಡಿಗ್ರಿಗಳಾಗಿರಬೇಕು. ಭಾರತದಲ್ಲಿ, ಈ ಹಣ್ಣನ್ನು ಪ್ರಸ್ತುತ ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದ ಭಾಗಗಳಲ್ಲಿ ಬೆಳೆಯಲಾಗುತ್ತದೆ.ಕರ್ನಾಟಕ ರ ಬಹುತೇಕ ಜಿಲ್ಲೆಗಳಲ್ಲಿ ಬೆಣ್ಣೆ ಹಣ್ಣು ಕೃಷಿ ಇದೆ ,ನಾಗಮಂಗಲ, ಮಂಡ್ಯ ಹತ್ತಿರ ಹೆಚ್ಚಾಗಿ ಕಂಡು ಬರುತ್ತದೆ. ಈ ಬೆಳೆಯ ಮೂಲಕ ನೀವು ಖಂಡಿತವಾಗಿಯೂ ಮಿಲಿಯನೇರ್ ಆಗಬಹುದು. 

 ಒಂದು ಗಿಡಕ್ಕೆ ಎಷ್ಟು ಹಣ ಹಣ್ಣು ಬಂದ್ಮೇಲೆ ಮಾರ್ಕೆಟಿಂಗ್ ಎಲ್ಲಿ ಮಾಡುವುದು ಎಂಬುದರ ಬಗ್ಗೆ ಸರಿಯಾದ ತಿಳುವಳಿಕೆ ಇರಬೇಕು. ಹಣ್ಣಾದ ಮತ್ತು ಸರಿಯಾದ ಆವಕಾಡೊವನ್ನು ಹೇಗೆ ಆರಿಸುವುದು ಹೆಚ್ಚಿನ ಸಮಯ  ಖರೀದಿದಾರರು ಆವಕಾಡೊಗಳನ್ನು ಖರೀದಿಸುವಾಗ ಕಷ್ಟಪಡುತ್ತಾರೆ, ಹೆಚ್ಚಿನ ಬಾರಿ, ಜನರು ಕಚ್ಚಾ ಆವಕಾಡೊಗಳನ್ನು ಖರೀದಿಸುತ್ತಾರೆ, ಅದು ಸ್ವಲ್ಪ ಕಹಿಯಾಗಿರುತ್ತದೆ- ಮತ್ತು ಆದ್ದರಿಂದ ಆವಕಾಡೊಗಳು ಎಂದಿಗೂ ಹೋಮ್ ಮೆನುವಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. 


ಈ ಹಣ್ಣಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ಇವೆ,  ಇದು ಅತ್ಯುತ್ತಮವಾದ ಸೂಪರ್‌ಫುಡ್ - ತೂಕವನ್ನು ನಿರ್ವಹಿಸಲು, ಮಧುಮೇಹವನ್ನು ತಡೆಗಟ್ಟಲು, ಜೀರ್ಣಕ್ರಿಯೆ, ಮೆದುಳು ಮತ್ತು ಕಣ್ಣುಗಳನ್ನು ಸುಧಾರಿಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಹಣ್ಣುಗಳನ್ನು ಕತ್ತರಿಸುವಾಗ  ಜಾಗರೂಕರಾಗಿರಿ ಮತ್ತು ನಿಮ್ಮ ಬೆರಳುಗಳಿಗೆ ನೋವುಂಟು ಮಾಡಬೇಡಿ. .

 ಬೆಣ್ಣೆ ಹಣ್ಣು ಬೆಳೆದವರ  ಅನುಭವಗಳು, ಬೆಳೆಸುವಲ್ಲಿ ಅವರು ಮಾಡಿದ ಪ್ರಯೋಗ, ನಡೆಸಿದ ವಿಶೇಷಗಳು ಇತ್ಯಾದಿಗಳ ಜ್ಞಾನ ಇರಲಿ. ಬೆಣ್ಣೆ ಹಣ್ಣು ಬೆಳೆಸುವಲ್ಲಿನ ತಮ್ಮ ಸ್ವಾನುಭವ ಅಥವಾ ಸ್ವಯಂ ಅರ್ಜಿತ ಜ್ಞಾನದ ಆಧಾರದಲ್ಲಿ ಕೈಗೊಂಡ ವಿವರ, ಮಾರುಕಟ್ಟೆ ವ್ಯವಸ್ಥೆ, ದಾರಣೆಗಳು, ವಿವಿಧ ತಳಿಗಳು, ಸಸ್ಯ ಮೂಲ, ಬೆಳೆಯುವ ಪ್ರದೇಶಗಳು, ರೋಗ ಗಳು ತಿಳುವಳಿಕೆ ಅಗತ್ಯವಾಗಿದೆ.


 ಒಂದು ಬಾರಿ ಬೆಣ್ಣೆ ಹಣ್ಣು ಕಿತ್ತು ನಂತರ, ಒಂದು ವಾರದ ನಂತರ ಅವು ಹಣ್ಣುಗಳು ಹಣ್ಣಾಗುವ ಹೊತ್ತಿಗೆ ಹಿಂತಿರುಗಿ ಬರುತ್ತವೆ ,ಅಡಿಕೆ ಮೊದಲಾದ ತೋಟಗಾರಿಕೆ ಗಿಡಗಳ  ನಡುವೆ ಆವಕಾಡೊಗೆ ಅಗತ್ಯವಿರುವ ಸೂರ್ಯನ ಬೆಳಕು ಸಾಧ್ಯವಾಗದಿರಬಹುದು.

ರಾಜ್ಯದಲ್ಲಿ  ದೇಶಿಯ ಅನೇಕ ಬೆಣ್ಣೆ ಹಣ್ಣು ಮರಗಳ ಕಾಣಬಹುದು, ಇವು ಬೃಹತ್ ಆಗಿರುತ್ತದೆ ಮರ ಚೆನ್ನಾಗಿ ಬೆಳೆದಿದೆ. ಇವು ಇಳುವರಿ ಕಡಿಮೆ.



ಆಧುನಿಕ ಗಿಡಗಳ ಇಳುವರಿಯೂ ಚೆನ್ನಾಗಿದೆ. ಆದರೆ ಕೋಮಲ ಆವಕಾಡೊಗಳು ಹೆಚ್ಚು ಉದುರುತ್ತವೆ. ಹಣ್ಣಿನ ಗಾತ್ರ ಸರಾಸರಿ. ಆದರೆ ರುಚಿ ಒಳ್ಳೆಯದು.
ಸಮಸ್ಯೆ ಏನೆಂದರೆ ಇಳುವರಿ ಚೆನ್ನಾಗಿದ್ದಾಗ, ಕೊಂಬೆಗಳು ಬಹಳ ಸುಲಭವಾಗಿ ಮುರಿಯುತ್ತವೆ.


 ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹಣ್ಣು ಅವಕ್ಯಾಡೋ ಅಥವಾ ಬೆಣ್ಣೆ ಹಣ್ಣು. ಹೆಚ್ಚು ಲಾಭ ತರುತ್ತಿರುವ ಬೆಳೆಗಳಲ್ಲಿ ಅವೊಕಾಡೊ, ಬೆಣ್ಣೆ ಹಣ್ಣು ಕೂಡ ಪ್ರಮುಖವಾದದ್ದು.

ಕನಸಿನ ತೋಟದ ನಿರ್ಮಾಣಕ್ಕಿದು ಸಕಾಲ. ಇದಕ್ಕೆ ಯಾವ ಹೊಸ ಗಿಡಗಳಿವೆ? ಹುಡುಕಾಟ ಶುರು ಮಾಡಿದರೆ ಸಕಾಲದಲ್ಲಿ ಸಿದ್ಧತೆ ಮಾಡಿಕೊಳ್ಳಬಹುದು. ಈ ಹಣ್ಣು ಪಾನೀಯದ ರೂಪದಲ್ಲಿ ಜ್ಯೂಸ್ ಅಂಗಡಿಗಳಲ್ಲೂ ಲಭ್ಯ. ಊಟಿ ಆಪಲ್ ತರಹದ ಆಕಾರ. ಹಚ್ಚ ಹಸಿರು ಬಣ್ಣ. ಒಳಗೆ ದಪ್ಪವೆನಿಸುವ ಬೀಜ. ಸುತ್ತಲಿರುವ ಮೆತ್ತನೆಯ ತಿರುಳೇ ತಿನ್ನುವ ವಸ್ತು. ಬೆಣ್ಣೆಯಷ್ಟು ಮೃದು, ಮರಳು ಮಿಶ್ರಿತ ಮಣ್ಣು ಮತ್ತು ತಂಪು ಹಾಗೂ ತೇವಾಂಶದಿಂದ ಕೂಡಿದ ವಾತಾವರಣ, ಜತೆಗೆ ಸಮುದ್ರ ಮಟ್ಟದಿಂದ 600-900 ಮೀ ಎತ್ತರದ ಪ್ರದೇಶ ಹಾಗೂ ಉಷ್ಣಾಂಶವು ಕನಿಷ್ಠ 12 ಡಿಗ್ರಿ ಯಿಂದ 35 ಡಿಗ್ರಿ ಸೆಲ್ಸಿಯಸ್ ವರೆಗಿದ್ದು, ಮಣ್ಣಿನ ರಸಸಾರ 5.5 ರಿಂದ 7.0 ರವರೆಗಿದ್ದರೆ ಅಂತಹ ಪ್ರದೇಶಗಳಲ್ಲಿ ಬೆಣ್ಣೆಹಣ್ಣು ಹುಲುಸಾಗಿ ಬೆಳೆದು ಹೆಚ್ಚಿನ ಫಸಲು ನೀಡುತ್ತದೆ.

ಮುಂಗಾರು ಚುರುಕಾಗುವ ಮುನ್ನ ಕೃಷಿ ಚಟುವಟಿಕೆಗಳು ಚುರುಕುಗೊಳ್ಳ ಬೇಕಾಗಿದೆ. ಗಿಡ ಮರ ನೆಡುವ ಮುನ್ನ ಸಾಕಷ್ಟು ತಯಾರಿ ನಡೆಸಬೇಕಾಗುತ್ತದೆ. ಪ್ಲಾಸ್ಟಿಕ್ ಚೀಲಗಳಲ್ಲಿ ಬೀಜಗಳನ್ನು ನೆಟ್ಟು ಸಸಿಗಳನ್ನು ಮಾಡಿಕೊಳ್ಳಬೇಕು. ತಯಾರಾದ ಸಸಿ ನೆಡಲು ಮುಂಗಾರಿನ ಸಮಯ ಸುಸಮಯ. ತೇವಾಂಶ ಉಪಯೋಗಿಸಿಕೊಂಡು ಬೇರುಗಳು ಆಳಕ್ಕಿಳಿದು ಬೆಳೆಯುವುದು ಸುಲಭವಾಗುತ್ತದೆ.



ಹಾಗಾಗಿ ವಯಸ್ಸಿನ ಬೇಧವಿಲ್ಲದೇ ಎಲ್ಲರೂ ತಿನ್ನಬಹುದಾದ ಹಣ್ಣು. ಸಕ್ಕರೆ ಬೆರೆಸಿ ಬೀಟ್ ಮಾಡಿದರಂತೂ ಐಸ್ ಕ್ರೀಮ್‌ನಷ್ಟು ಮೃದು. ಸ್ವಲ್ಪ ಗಟ್ಟಿಯಾಗಿರುವಾಗಲೇ ಆದರೆ, ಕತ್ತರಿಸಿ, ಉಪ್ಪು ಮೆಣಸು ಹಾಕಿ ತಿನ್ನಬಹುದು. ತಿರುಳಿನ ಭಾಗ ತೆಗೆದು ಮಿಕ್ಸಿಯಲ್ಲಿ ತಿರುಗಿಸಿ, ಹಾಲು ಸಕ್ಕರೆ ಬೆರೆಸಿದರೆ ಪಾನೀಯ ಸಿದ್ಧ. ಇಷ್ಟೇ ಅಲ್ಲ, ಇದು ಪೌಷ್ಟಿಕಾಂಶಗಳ ಆಗರವೂ ಹೌದು. 

ವಿಟಮಿನ್ ಕೆ, ನಾರಿನ ಅಂಶ, ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಬಿ 6 ಇರುವ ಹಣ್ಣು. ಸಾಕಷ್ಟು ಶಕ್ತಿಯನ್ನೂ ಕೊಡುತ್ತದೆ. ಇಷ್ಟೆಲ್ಲಾ ಗುಣಗಳನ್ನು ತುಂಬಿರುವ ಈ ಹಣ್ಣಿನ ಗಿಡ ಬೆಳೆಯದಿದ್ದರೆ ಹೇಗೆ? ಈ ಗಿಡವನ್ನು ಎಲ್ಲ ತರಹದ ವಾತಾವರಣಗಳಲ್ಲೂ ಬೆಳೆಯಬಹುದು. ಹೆಚ್ಚಿನ ನೀರು, ಗೊಬ್ಬರ ಬೇಡದೆ ಬೆಳೆಯುವ ಗಿಡ. ಅಲ್ಲದೆ ವರ್ಷದಲ್ಲಿ ಎರಡು ಬಾರಿ ಫಲ ನೀಡುವ, ಯಾವುದೇ ರೋಗ ರುಜಿನ ಇಲ್ಲದ, ನೋಡಲು ಆಕರ್ಷಕವಾದ ಗಿಡವಾಗಿದೆ.


ಇದರ ಬೀಜದಿಂದ ಸಸ್ಯಾಭಿವೃದ್ಧಿ ಸಾಧ್ಯ. . ಮೂಲತಃ ವೆಸ್ಟ್ ಇಂಡೀಸ್, ಮೆಕ್ಸಿಕೊ, ದಕ್ಷಿಣ ಅಮೆರಿಕ ದೇಶಗಳಲ್ಲಿ ಬೆಳೆಯುತ್ತಿದ್ದ ಗಿಡವನ್ನು ಈಗೀಗ ಭಾರತದ ಬಹುತೇಕ ರಾಜ್ಯಗಳಲ್ಲಿ ಬೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ  ರಾಜ್ಯದ ಹಾಪ್‌ಕಾಮ್ಸ್ ಮತ್ತು ಸಾವಯವ ಮಳಿಗೆಗಳಲ್ಲೂ ಈ ಹಣ್ಣು ಮಾರಾಟವಾಗುತ್ತಿವೆ.

ಕಳೆದೆರಡು ವರ್ಷಗಳಿಂದ ತಳ್ಳುಗಾಡಿಗಳಲ್ಲೂ ಬಹುತೇಕ ಮಾರಾಟಗಾರರ ಮೂಲಕ ಈ ಹಣ್ಣು ಮಾರಾಟವಾಗುತ್ತಿರುವುದು ಇದರ ಜನಪ್ರಿಯತೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿ. ತಂಪು ಪಾನೀಯ ಮಾರುವವರ ಅಂಗಡಿಯಲ್ಲಿ ಈ ಬೆಣ್ಣೆ ಹಣ್ಣಿನ ಪಾನೀಯಕ್ಕೆ ಹೆಚ್ಚಿನ ಬೇಡಿಕೆ. ಚೀನಾ ಮತ್ತು ಭಾರತದ ಹಲವು ಭಾಗಗಳಲ್ಲಿ ಬೆಳೆಯುವ ಈ ಹಣ್ಣಿಗೆ ಬಟರ್ ಫ್ರೂಟ್ ಎಂಬ ಹೆಸರೂ ಇದೆ.

ಬಲಿತ ಹಣ್ಣುಗಳ ಬೀಜ ತೆಗೆದು ಮಣ್ಣು ಮರಳು ಗೊಬ್ಬರದ ಮಿಶ್ರಣ ತುಂಬಿರುವ ಪ್ಲಾಸ್ಟಿಕ್ ಚೀಲದಲ್ಲಿ ನಾಟಿ ಮಾಡಿ. ಕೆಲವೇ ದಿನಗಳಲ್ಲಿ ಮೊಳಕೆಯೊಡೆದು ಹೊಸ ಎಲೆಗಳು ಬರುತ್ತವೆ. ಗಿಡ ಒಂದರಿಂದ ಒಂದೂವರೆ ಅಡಿ ಎತ್ತರ ಬೆಳೆದ ಮೇಲೆ, ಮುಂಗಾರಿನ ಸಮಯದಲ್ಲಿ ನಾಟಿ ಮಾಡಬಹುದು. ಗಿಡ ದೊಡ್ಡದಾಗಲು ನಾಲ್ಕೈದು ವರ್ಷಗಳಾದರೂ ಬೇಕು. ಐದಾರು ವರ್ಷದಲ್ಲಿ ಗಿಡ ಫಲ ಕೊಡಲಾರಂಭಿಸುತ್ತದೆ.

ಗಿಡ ದೊಡ್ಡದಾಗುವವರೆಗೆ ದ್ವಿದಳ ಧಾನ್ಯಗಳನ್ನೋ, ಹಸಿರೆಲೆ ಗೊಬ್ಬರಗಳನ್ನೋ ಬೆಳೆದುಕೊಳ್ಳಬಹುದು. ಅತಿ ಹೆಚ್ಚಿನ ಬಯೋಮಾಸ್ ಇದ್ದು, ಸದಾ ಹಸಿರಾಗಿರುತ್ತದೆ. ನವೆಂಬರ್ ಡಿಸೆಂಬರ್‌ನಲ್ಲಿ ಒಣಗಿದ ಎಲೆಗಳನ್ನೆಲ್ಲ ಉದುರಿಸಿಕೊಂಡು ಭೂಮಿ ಫಲವತ್ತತೆಗೆ ದಾರಿ ತೋರಿಸುತ್ತದೆ. ಹೊಸ ಚಿಗುರು, ಮೊಗ್ಗು ಹೂವುಗಳಿಂದ ಗಿಡ ಸಂಭ್ರಮಿಸುತ್ತದೆ. ಒಂದು ದೊಡ್ಡ ಗಿಡ ನೂರರಿಂದ ನೂರ ಇಪ್ಪತ್ತು ಹಣ್ಣು ಬಿಡಬಲ್ಲದು. ಮೊದಲ ವರ್ಷ ಹೆಚ್ಚು ಹಣ್ಣು ಬಿಟ್ಟರೆ, ಎರಡನೆಯ ವರ್ಷ ಕಮ್ಮಿಯಾಗುವ ಸಂಭವ ಉಂಟು.

ಸಮೃದ್ಧವಾಗಿ ಬಿಡುವ ಹೂಗಳು ಅತಿ ಹೆಚ್ಚು ಜೇನು ಹುಳುಗಳನ್ನು ಆಕರ್ಷಿಸುತ್ತದೆ. ಪರೋಕ್ಷವಾಗಿ ಪರಾಗ ಸ್ಪರ್ಶಕ್ಕೆ ಸಹಕರಿಸಿ ಇಳುವರಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಜೇನು ಉತ್ಪಾದನೆಗೂ ಸಹಕರಿಸುತ್ತದೆ. ಈ ಗಿಡದ ವಿಶೇಷತೆ ಇನ್ನೂ ಒಂದಿದೆ. ಕಾಯಿಗಳು ಎಷ್ಟೇ ಬಲಿತರೂ, ಗಿಡದ ಮೇಲೆ ಹಣ್ಣಾಗುವುದಿಲ್ಲ. ಬೇಕೆಂದಾಗ, ಬೇಕಿದ್ದಷ್ಟು ಕಾಯಿಗಳನ್ನು ಮಾತ್ರ ಕಿತ್ತು ಮಾರಾಟ ಮಾಡಬಹುದು. ಕಿತ್ತ ಮೇಲೂ ಹಣ್ಣಾಗಲು ಎರಡು ದಿನ ಬೇಕು. ಹಾಗಾಗಿ ಹಣ್ಣಿನ ಈ ಗುಣ ಬೆಳೆಯುವವರಿಗೊಂದು ಬೋನಸ್.

ಹೂವು ಬಿಟ್ಟಾಗ ಸಿಂಗರಿಸಿದ ತೇರಿನಂತೆ ಕಂಗೊಳಿಸುವ, ಮೈ ತುಂಬ ಬಿಟ್ಟಿರುವ ಕಾಯಿಗಳ ಭಾರಕ್ಕೆ ತೊನೆದಾಡುವ ಕೊಂಬೆಗಳು ಇರುವ ಗಿಡ ತೋಟಕ್ಕೆ ಕೊಡುಗೆ. ಹಿತ್ತಿಲಾಗಲೀ, ತೋಟವಾಗಲೀ, ಒಂದೇ ರೀತಿಯ ಗಿಡಗಳನ್ನು ಬೆಳೆಸುವುದರ ಬದಲಿಗೆ, ಜೀವ ವೈವಿಧ್ಯಕ್ಕೆ ಒತ್ತು ಕೊಟ್ಟು ಬೇರೆ ಬೇರೆ ತರಹದ ಗಿಡ ಮರಗಳನ್ನು ಬೆಳೆಸುವುದು ಉತ್ತಮ ಪರಿಸರ ನಿರ್ಮಾಣಕ್ಕೆ ಸಹಾಯಕ.


#school #college #puc #ಶಿಕ್ಷಣ #coach #Chethana #gowda #Riya #YOGI #ವಿದ್ಯಾರ್ಥಿ #ನೌಕರ #ಆದೇಶ #ಚಿತ್ರ #ದೃಶ್ಯ #ದೇವರು #ನೀರು #ರಾತ್ರಿ #ಹೂ #ಕನ್ನಡ #ಭಾಷೆ #ಮುನಿಸ್ವಾಮಿ #book #AI #child 
https://youtu.be/RoBA52NN-9U?si=s_r9S891hN9LVcj_


 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ