*ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ




*ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :-
ಕರ್ನಾಟಕ, ಮಾರ್ಚ್ 05:ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :

1) ಶ್ರೀ ಧೀರೇಂದ್ರತೀರ್ಥರ ವೃಂದಾವನ ಯಾವ ಕ್ಷೇತ್ರದಲ್ಲಿ ಯಾವ ನದೀತೀರದಲ್ಲಿದೆ ?

*ಉತ್ತರ :- ಹೊಸರಿತ್ತಿ ಕ್ಷೇತ್ರದಲ್ಲಿ ವರದಾನದೀತೀರದಲ್ಲಿದೆ.*


ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :- 

2) *ಮಾಷವಟಿಕಾ* ಎಂಬ ಪದಕ್ಕೆ ಕನ್ನಡದ ಅರ್ಥವೇನು ?

*ಉತ್ತರ :- ಉತ್ತರ :- ಉದ್ದಿನವಡಾ.*



ದಿನಕ್ಕೊಂದು ಮಹಾಭಾರತ ಪ್ರಶ್ನೋತ್ತರ :- 

3) ಕರ್ಣನ ಸರ್ಪಾಸ್ತ್ರದಿಂದ ಅರ್ಜುನನನ್ನು ರಕ್ಷಣೆ ಯಾರು ಹೇಗೆ ಮಾಡಿದರು?

*ಉತ್ತರ :- ರಥವನ್ನು ನೆಲಕ್ಕೆ ತುಳಿಯುವ ಮೂಲಕ ಶ್ರೀಕೃಷ್ಣಪರಮಾತ್ಮನು ರಕ್ಷಿಸಿದನು.*


ದಿನಕ್ಕೊಂದು ವೇಂಕಟೇಶಮಹಾತ್ಮೆ ಪ್ರಶ್ನೋತ್ತರ :- 

4) ಶಿಷ್ಟರಕ್ಷಣೆ, ದುಷ್ಟರಿಗೆ ಶಿಕ್ಷೆ ನೀಡುವ ಕೆಲಸವನ್ನು ಶ್ರೀನಿವಾಸ ಯಾರಿಗೆ ನೀಡಿದನು?

*ಉತ್ತರ :- ಯಮದೇವರಿಗೆ.*


ದಿನಕ್ಕೊಂದು ಭಾಗವತ ಪ್ರಶ್ನೋತ್ತರ :- 

5) ದುಷ್ಯಂತ-ಶಕುಂತಲೆಯರ ಮಗ ಯಾರು ?

*ಉತ್ತರ :- ಭರತ (ಸರ್ವದಮನ)*


ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :-

6) ವಾಯುಸ್ತುತಿಯನ್ನು ರಚಿಸಿದವರು ಯಾರು ?

*ಉತ್ತರ :- ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು*


ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :- 

7) *ತಕ್ರಂ* ಅನ್ನುವ ಪದಕ್ಕೆ ಕನ್ನಡದ ಅರ್ಥವೇನು?

*ಉತ್ತರ :- ಮಜ್ಜಿಗೆ ಎಂದು ಅರ್ಥ.*



ದಿನಕ್ಕೊಂದು ಮಹಾಭಾರತ ಪ್ರಶ್ನೋತ್ತರ :- 

8) ಕರ್ಣನನ್ನು ಕೊಲ್ಲಲು ಅರ್ಜುನನು ಬಳಸಿದ ಅಸ್ತ್ರ ಯಾವುದು ? 

*ಉತ್ತರ :- ಅಂಜಲಿಕಾಸ್ತ್ರ*


ದಿನಕ್ಕೊಂದು ವೇಂಕಟೇಶಮಹಾತ್ಮೆ ಪ್ರಶ್ನೋತ್ತರ :- 

8) ಪರಿಮಳ‌ ದ್ರವ್ಯಗಳ ವ್ಯವಸ್ಥೆಯನ್ನು ಶ್ರೀನಿವಾಸನು ಯಾರಿಗೆ ನೀಡಿದನು ? 

*ಉತ್ತರ :- ವಾಯುದೇವರಿಗೆ*


ದಿನಕ್ಕೊಂದು ಭಾಗವತ ಪ್ರಶ್ನೋತ್ತರ :- 

9) ಸಂಕೃತಿಯ ಮಗ ಯಾರು?

*ಉತ್ತರ :- ರಂತಿದೇವ*


ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :-

10) ರುಕ್ಮಿಣೀದೇವಿ ಯಾರ ಅವತಾರ ? 

*ಉತ್ತರ :- ಸಾಕ್ಷಾತ್ ಶ್ರೀ ಲಕ್ಷ್ಮೀದೇವಿಯ ಅವತಾರ.*


ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :- 

11) *ಕೂಷ್ಮಾಂಡ* ಅನ್ನುವ ಪದಕ್ಕೆ ಕನ್ನಡದ ಅರ್ಥವೇನು?

*ಉತ್ತರ :- ಸಿಹಿಗುಂಬಳ*

ದಿನಕ್ಕೊಂದು ಮಹಾಭಾರತ ಪ್ರಶ್ನೋತ್ತರ :-

*12) ಸತ್ತ ಅರ್ಜುನನನ್ನು ಬದುಕಿಸಲು ಬಭ್ರುವಾಹನನು ಏನು ಮಾಡಿದನು ?

*ಉತ್ತರ :- ನಾಗಲೋಕಕ್ಕೆ ಹೋಗಿ ಸಂಜೀವಕಮಣಿಯನ್ನು ತಂದನು.*


ದಿನಕ್ಕೊಂದು ವೇಂಕಟೇಶಮಹಾತ್ಮೆ ಪ್ರಶ್ನೋತ್ತರ :-

*13) ಕುಬೇರ ಶ್ರೀನಿವಾಸನಿಗೆ ಸಾಲ ಕೊಟ್ಟ ವಿಷಯದಲ್ಲಿ ಎರಡನೇ ಸಾಕ್ಷಿ ಯಾರಾಗಿದ್ದರು ?

*ಉತ್ತರ :- ರುದ್ರದೇವರು*


ದಿನಕ್ಕೊಂದು ಭಾಗವತ ಪ್ರಶ್ನೋತ್ತರ :-

*14) ವಸುದೇವನು ಬುಟ್ಟಿಯಲ್ಲಿ ಪುಟ್ಟ ಶ್ರೀಕೃಷ್ಣನನ್ನು ಎಲ್ಲಿಗೆ ಕರೆದೊಯ್ದನು ?

*ಉತ್ತರ :- ನಂದಗೋಕುಲಕ್ಕೆ.*


ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :-

*15) ಶ್ರೀಮನ್ನ್ಯಾಯಸುಧಾಗ್ರಂಥಕ್ಕೆ 'ಬಿಂದು' ಎಂಬ ವ್ಯಾಖ್ಯಾನವನ್ನು ಬರೆದವರು ಯಾರು ?

*ಉತ್ತರ :- ಶ್ರೀ ವಿಜಯೀಂದ್ರತೀರ್ಥರು.*


ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :-

*16) ಸೇವಂತಿಪುಷ್ಪ ಎಂಬ ಪದಕ್ಕೆ ಅರ್ಥವೇನು ?

*ಉತ್ತರ :- ಶ್ಯಾವಂತಿಗೆ ಹೂವು.*




*17) ಬಭ್ರುವಹನನಿಂದ ಹತನಾದ ಪಾಂಡವ ಯಾರು?

*ಉತ್ತರ :- ಅರ್ಜುನ*


ದಿನಕ್ಕೊಂದು ವೇಂಕಟೇಶಮಹಾತ್ಮೆ ಪ್ರಶ್ನೋತ್ತರ :-

*18) ಕುಬೇರ ಶ್ರೀನಿವಾಸನಿಗೆ ಸಾಲ ಕೊಟ್ಟ ವಿಷಯದಲ್ಲಿ ಮೊದಲನೇ ಸಾಕ್ಷಿ ಯಾರು ?

*ಉತ್ತರ :- ಬ್ರಹ್ಮದೇವರು.*


ದಿನಕ್ಕೊಂದು ಭಾಗವತ ಪ್ರಶ್ನೋತ್ತರ :-

19) ವಸುದೇವನು ಹೋಗುವಾಗ ಯಮನಾನದಿ ದಾರಿ ಬಿಡಲು ಕಾರಣವೇನು ?

*ಉತ್ತರ :- ವಸುದೇವನ ಕೈಯಲ್ಲಿ ಬಂಧಮೋಚಕನಾದ ಶ್ರೀಕೃಷ್ಣ ಇದ್ದ. ಕಾರಣ*


ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :-

*20) ಕುಂಭಕೋಣ ಕ್ಷೇತ್ರದಲ್ಲಿ ಯಾರ ಮೂಲವೃಂದಾವನ ಇದೆ ?

*ಉತ್ತರ :- ಶ್ರೀ ವಿಜಯೀಂದ್ರತೀರ್ಥರ ಮೂಲವೃಂದಾವನ ಇದೆ.*


ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :-

*21) ಕಾಡುಮಲ್ಲಿಗೆಗೆ ಸಂಸ್ಕೃತದಲ್ಲಿ ಏನೆಂದು ಕರೆಯುತ್ತಾರೆ?

*ಉತ್ತರ :- ಮಾಲತಿಪುಷ್ಪ ಎಂದು ಕರೆಯುತ್ತಾರೆ.*

#ಶ್ರೀ #ನಾಮ #hill #om #temple #Book #story #Chethana #Oldest #culture #tradition #mantra #ಸನಾತನ #ಗೌಡ #yogi #riya #swami #ಶ್ರೀಮತಿ #ಭಾರತ #truth #trust #ಮಠ #raya #ದಾಸ #ಕೃಷ್ಣ #ರಾಮ #ಈಶ್ವರ #Devi #Litrature  
https://pratilipi.page.link/yyeYky1GboXSBxrr9

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ವಕೀಲರಿಗೆ ಬೇಷರತ್ತಾಗಿ ಕ್ಷಮೆ ಕೋರಿದ:ಸಂಪಾದಕ ವಿಶ್ವೇಶ್ವರ ಭಟ್ವ*