ಶ್ರೀ ವಿಜಯದಾಸರ ಸುಳಾದಿ: ಸತ್ಸಭೆಗೆ ನಮಿಸುವೆ
ಶ್ರೀ ವಿಜಯದಾಸರ ಸುಳಾದಿ: ಸತ್ಸಭೆಗೆ ನಮಿಸುವೆ ಮಾಸ ನಿಯಾಮಕ ಶ್ರೀ ರಮಾಪತಿ ಶ್ರೀ ತ್ರಿವಿಕ್ರಮಾಯ ನಮಃ #ಶ್ರೀ #ವಿಜಯದಾಸರ #ಸುಳಾದಿ: #ಸತ್ಸಭೆಗೆ #ನೇಮಿಸುವೆ #ಮಾಸ #ನಿಯಾಮಕ #ತ್ರಿವಿಕ್ರಮಾಯ #ನಮಃ #ರಾಗ #ತಾಳ ರಾಗ - : ತಾಳ - ಶರಣು ಶರಣು ಸುರಾರಿ ಭಂಜನ ಶರಣು ತ್ರಿಭುವನ ರಂಜನ ಶರಣು ಸೇವಿತ ಸಕಲ ಮುನಿಜನ ಶರಣು ರವಿಕುಲವರ್ಧನ ಶರಣು ll ಪ ll ಹರಿಮುಕುಂದ ಮುರಾರಿ ಶ್ರೀಧರ ಆದಿಪುರುಷ ರಮಾವರ ಪರಮಭಕ್ತ ಸರೋಜ ಭಾಸ್ಕರ ಪಾಹಿ ಪಾಹಿ ಕೃಪಾಕರ ll 1 ll ತರುಣಿ ದ್ರೌಪದಿ ಮಾನ ರಕ್ಷಕ ದಾಸ ಜನ ಪರಿಪಾಲಕ ದುರುಳ ದನುಜಾರಣ್ಯ ಪಾವಕ ದುರಿತಹರ ರಘುನಾಯಕ ll 2 ll ಕೇಶವಾಚ್ಯುತ ಕೃಷ್ಣವಾಮನ ವಾಸುದೇವ ಜನಾರ್ದನ ವಾಸವನುತ ವನಜಲೋಚನ ವಂದಿತಾಖಿಲ ಬುಧಜನ ll 3 ll ಬ್ರಹ್ಮರುದ್ರೇಂದ್ರಾದಿ ಪೂಜಿತ ಬ್ರಹ್ಮಋಷಿಗಣ ಭಾವಿತ ಬ್ರಹ್ಮಪಿತ ಪ್ರಹ್ಲಾದವರದ ನೃಸಿಂಹದೇವ ನಮೋಸ್ತುತೇ ll 4 ll ಎನುತ ಭಜಿಸುವ ಭಕ್ತ ಜನರಿಗೆ ಮನದಭೀಷ್ಟವ ಪಾಲಿಪ ಜನವರನೆ ಗುರುರಾಮವಿಟ್ಠಲ ಜಾನಕೀ ಪ್ರಾಣವಲ್ಲಭ ll 5 ll ರಾಗ - : ತಾಳ - ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಠ ಮಾಡಿದ ॥ಪ॥ ತಾಯಿಯ ಕರೆದು ಕೈ ಮಾಡಿ ತೋರಿದ ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ ಚಿನ್ನಿಕೊಳು ಚಂಡು ಬುಗುರಿ ಎಲ್ಲವ ಬೇಡ ಬೇಡ ಎಂದು ತಾ ಬಿಸಾಡಿದ ॥1॥ ಕಂದ ಬಾ ಎಂದು ತಾಯಿ ಕರೆದಳು ಮಮ್ಮು ಉಣ್ಣೆಂದು ಬಣ್ಣಿಸುತ್ತಿದ್ದಳು ತಾಯಿ ಕೌಸಲ್ಯ ಕಳವಳ ಗೊಂಡಳು ಕಂದ ಅಂಜಿದನು ಎನ್ನುತ...