ಪೋಸ್ಟ್‌ಗಳು

_ ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ,

 ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ, ರಾಗ ವರಾಳಿ  #ಗೊಲ್ಲನಾದಕ್ಕಿದೇ #ಗುಣಗಳ #ತೋರಿದಿಯೋ _,_ _#ಶ್ರೀಕೃಷ್ಣ #ಮಹಿಮಾ #ಸುಳಾದಿ_ ,_#ಶ್ರೀವಿಜಯದಾಸರ #ರಚನೆ, #ರಾಗ #ವರಾಳಿ ದಾಸರೆಂದರೆ ಪುರಂದರ ಕುರಿತು ಕೆಲ ವಿಷಯಗಳು:-  ಎಲ್ಲವನ್ನೂ ತೊರೆದು ಕಾಲಿಗೆ ಗೆಜ್ಜೆ ಕಟ್ಟಿ ಕೈಯಲಿ ತಂಬೂರಿ ಹಿಡಿದು ಜೋಳಿಗೆ ಏರಿಸಿಕೊಂಡು ಭಗವಂತನ ಸೇವೆಗೆ ಹೊರಟೇಬಿಡುತ್ತಾರೆ. ಈ ದಾಸರು, ಶ್ರೀ ಪುರಂದರ ದಾಸರು. ಅದನ್ನೇ ತಮ್ಮ ಒಂದು ಹಾಡಿನಲ್ಲಿ ಗುರುವಿನ ಗುಲಾಮನಾಗೋ ತನಕ ದೊರೆಯದಣ್ಣ ಮುಕುತಿ ಪರಪರಿ ಅನೇಕ ಶಾಸ್ತ್ರಗಳೋದಿ ವ್ಯರ್ಥವಾಯ್ತು ಭಕುತಿ  ಎನ್ನುತ್ತಾರೆ.  ಗುರುಗಳ ಉಪದೇಶ ಮಾರ್ಗದರ್ಶನ ಪಡೆದು ಸನ್ಮಾರ್ಗದಲ್ಲಿ ನಡೆದು ಸತ್ಸಾಧನೆ ಮಾಡಿರಿ ಎಂದು ನಮಗೆ ಗುರುವಾಗಿ ದಾರಿ ತೋರಿಸಿದ್ದಾರೆ ಶ್ರೀ ದಾಸಾರ್ಯರು.  *ದಾಸರೆಂದರೆ ಪುರಂದರದಾಸರೆಂದೆನಿಸುತ್ತ* = ' ದಾಸರೆಂದರೆ ಪುರಂದರದಾಸರಯ್ಯ ' ಎಂಬ ಶ್ರೀಚಂದ್ರಿಕಾಚಾರ್ಯರ ಉಕ್ತಿಯ ಅನುವಾದ ;  *ಹೀನದೈವವೆ* = ಅವೈಷ್ಣವ ದೇವತೆಗಳನ್ನು ;  *ಜವನ ದೂತರಿಗೆ* = ಯಮನ ದೂತರಿಗೆ ;  *ಪರಾಭವ ಮಾಡಿ ದೂರಿರಿಸಿ* = ಕಳೆದು - ತಮ್ಮಲ್ಲಿ ಪರಿಣಾಮವಿಲ್ಲದಂತೆ ಮಾಡಿ ;  *ಕವಿಗಳ ಮನದ ತಾಪವನು ಪರಿಹರಿಸಿ* = ತಮ್ಮನ್ನು ಅನುಸರಿಸಿದ ಜ್ಞಾನಿಗಳ ತ್ರಿವಿಧ ತಾಪ ಪರಿಹರಿಸಿ ; "ಕಾಲಿಗೆ ಗೆಜ್ಜೆ ಕಟ್ಟಿ ನೀಲವ...

_ ಸಾಗಿಬಾರಯ್ಯ ಭವರೋಗದ ವೈದ್ಯನೆ _ ,_ಶ್ರೀ ವಿಜಯದಾಸರ ರಚನೆ ,

_ ಸಾಗಿಬಾರಯ್ಯ ಭವರೋಗದ ವೈದ್ಯನೆ _ ,_ಶ್ರೀ ವಿಜಯದಾಸರ ರಚನೆ , _ರಾಗ ಸಾವೇರಿ , ಆದಿತಾಳ.mp3 #ಸಾಗಿಬಾರಯ್ಯ #ಭವರೋಗದ #ವೈದ್ಯನೆ _ ,_ಶ್ರೀ #ವಿಜಯದಾಸರರಚನೆ , _#ರಾಗ #ಸಾವೇರಿ , #ಆದಿತಾಳ #mp3 ವಿಜಯದಾಸಾರ್ಯ ವಿರಚಿತ*  *ಕದರಿ ಮಹಾತ್ಮೆ ಸುಳಾದಿ*  *ರಾಗ ಸಿಂಧುಭೈರವಿ*  *ಧ್ರುವತಾಳ*  ಜಗದೊಳಗಿದಕೆಲ್ಲಿ ಮಿಗಿಲುಗಾಣೆನೊ ಸರ್ಪ | ನಗದ ಪ್ರದೇಶ ಇದರ ಅಗಲಾ ಸುತ್ತ ಯೋಜನ | ಯುಗಯುಗದಲ್ಲಿ ಯಾತ್ರೆಗಳ ಮಾಡಿದ ಪುಣ್ಯ | ಹಗಲೊಂದು ಕ್ಷಣವಿಲ್ಲಿ ಸುಗುಣನಾಗಿ ಇರಲು | ಅಗಣಿತದಲ್ಲಿ ಭಕ್ತಗೆ ತಂದು ಕೊಡುವದೂ | ನಿಗಮಾಸನ್ನುತ ಹರಿ ಮೊಗನ ಹಗೆಗಳಿಗಿಲ್ಲ | ಖಗರಾಜಾನಿಲ್ಲಿ ತಪಸಿಗನಾಗಿ ಕೃಷ್ಣನ | ಹೆಗಲಲ್ಲಿ ಪೊತ್ತು ತಿರಗುವ ವರವನ್ನು ಪಡೆದು | ಪೊಗಳಿದ ಜನ ಕಣ್ಣಿಗೆ ಸುಳಿವ ಸುಲಭಾ ನರ - | ಮೃಗರೂಪ *ವಿಜಯವಿಠ್ಠಲಾ* ಕದರಿನಿವಾಸ | ಬಗೆಬಗೆಯಿಂದ ಚನ್ನಿಗನಾಗಿ ಮೆರೆವ ॥ 1 ॥ *ಮಟ್ಟತಾಳ*  ಪ್ರಹ್ಲಾದಗೆ ಮೆಚ್ಚಿ ಶ್ರೀಹರಿ ಉದುಭವಿಸಿ | ಅಹಿತ ದಿತಿಸುತನ ಆವಹದೊಳು ಕೊಂದು | ಸಾಹಸವುಳ್ಳ ಸುರರ ದಾಹನ ಮಾಡುವೆನೆಂದು | ಅಹೋಬಲದಿಂದ ಈ ಮಹಿಯೊಳಗೆ ಸ್ತೋತ್ರ | ಮಹಿಧರಕೆ ಬಂದು ವಹಿಲದಲ್ಲಿ ಕೆಡಹಿ ಖಳರ ಕೊಂದೂ ಗಹಗಹಿಸಲು  ವಾರಿರುಹ ಭವಬಂದು ಬಿನ್ನಾಹ ಮಾಡುತಿರಲು ಬಹು ಮಹಿಮನಾದ *ವಿಜಯವಿಠ್ಠಲರೇಯಾ* | ಮಹ ಸಂತೋಷದಲಿ ಬಾಹುಬಲದಿ ಮೆರೆದಾ ॥ 2 ॥ *ತ್ರಿವಿಡಿತಾಳ*  ಈ ತೆರದಲಿ ಇಲ್ಲಿ ನರಹರಿ ಇರುತಿರೆ | ಶ್ವೇತ ಮುನೇಶ್ವ...

. ಸುಳಾದಿ_: _ಪರಿಪೂರ್ಣ ಕಾಮ ವಿಸ್ತರ ಮಹಿಮ ಪರಂಧಾಮ_,_ _ಹರಿನಾಮ ,_ಶ್ರೀವಿಜಯದಾಸರ ರಚನೆ,_ರಾಗ ಕಾಂಬೋಧಿ

ಪರಿಪೂರ್ಣ ಕಾಮ ವಿಸ್ತರ ಮಹಿಮ ಪರಂಧಾಮ_,_ _ಹರಿನಾಮ ,_ಶ್ರೀವಿಜಯದಾಸರ ರಚನೆ, ರಚನೆ,_ರಾಗ ಕಾಂಬೋಧಿ #ರಾಗ ಕಾಂಬೋಧಿ# ಶ್ರೀ #ವಿಜಯದಾಸರ #ಸುಳಾದಿ: #ಸತ್ಸಭೆಗೆ #ನೇಮಿಸುವೆ #ಮಾಸ #ನಿಯಾಮಕ #ತ್ರಿವಿಕ್ರಮಾಯ #ನಮಃ #ರಾಗ #ತಾಳ #ಕಾಮ #ವಿಸ್ತರ #ಮಹಿಮ ಮೈದುನ ಎಂಬ ಶಬ್ದಪ್ರಯೋಗದ ಅರ್ಥ ನಿಮಗೆ ತಿಳಿದಿದೆಯೇ ಮೇ? ಶ್ರೀವಿಜಯದಾಸಾರ್ಯರು "ಮೈದುನಗೊಲಿದ ಶ್ರೀವಿಜಯ ವಿಠ್ಠಲ" ಎಂಬುದಾಗಿ ಎನ್ನುತ್ತಾರೆ . ಶ್ರೀವಿಜಯದಾಸಾರ್ಯರು ಅಪರೋಕ್ಷಜ್ಞಾನಿಗಳು , ಅಂತಹ ಮಹಾನುಭಾವರು ತಮ್ಮ ಕೃತಿಗಳಲ್ಲಿ ಶಬ್ದಪ್ರಯೋಗದ ಒಳನೋಟದ ಅರ್ಥಗಳು ಸಮಸ್ತ ಶಾಸ್ತ್ರಗಳ ಸಾರವನ್ನೇ ತಮ್ಮ ಒಡಲಲ್ಲಿ ತುಂಬಿಕೊಂಡಿರುತ್ತವೆ.  ಶ್ರೀವಿಜಯದಾಸಾರ್ಯರ ಶಬ್ದಪ್ರಯೋಗದ ಉದ್ದೇಶ :- ಮೈದುನ ಈ ಶಬ್ದವನ್ನು ವಿಂಗಡಿಸಿದಾಗ  ಮ+ಐ+ದ+ಉ+ನ= ಮೈದುನ ಅಂತ ಆಗ್ತದ .  ',ಮ' ಎಂದರೆ ಸಮಯ ,ಕಾಲ ಎನ್ನುವ ಅರ್ಥಗಳಿವೆ .  'ಐ' ಎಂದರೆ ಸಂಬೋಧನೆ ,  'ದ' ಎಂದರೆ ಕೊಡುವವ ,  ಉ' ಎಂದರೆ ಅಂಗೀಕಾರ ,  'ನ' ಎಂದರೆ ಜ್ಞಾನ ಅಂತ ಅಂತ ಏಕಾಕ್ಷರ ಕೋಶದಲ್ಲಿ ಅರ್ಥಗಳಿರುವದರಿಂದ , ಈ ಜೀವಿಯು ಯಾವುದೇ ಸಮಯದಲ್ಲಾಗಲೀ , ಭಕ್ತಿಯಿಂದ ಅನನ್ಯಶರಣಾಗತಿಯಿಂದ ಭಗವಂತನನ್ನು ಸಂಬೋಧಿಸುತ್ತಾನೋ, ಆ ಪರಮಾತ್ಮನನ್ನೇ ಪರದೈವೆಂದು ಅಂಗೀಕರಿಸುವ ಭಕ್ತರೇ ಮೈದುನ ಎನಿಸಿಕೊಳ್ಳುವರು ಇಂತಹ ಮೈದುನನಿಗೆ  ಇಲ್ಲಿ ಸಹ ಶ್ರೀವಿಜಯದಾಸಾರ್ಯರು ಭಾಗವತಾಮೃತವನ್ನೇ ತುಂಬಿದ್ದಾರೆ ....

_ ವಾಮನ ವಟು ಇಂದ್ರಾನುಜ ಉಪೇಂದ್ರನೆ _,_ _ಶ್ರೀವಾಮನ ದೇವರ ಸ್ತೋತ್ರಸುಳಾದಿ_ ,_ಶ್ರೀವಿಜಯದಾಸರ ರಚನೆ , ರಾಗ ನಾಟಿ.mp3

_ ವಾಮನ ವಟು ಇಂದ್ರಾನುಜ ಉಪೇಂದ್ರನೆ _,_ _ಶ್ರೀವಾಮನ ದೇವರ ಸ್ತೋತ್ರಸುಳಾದಿ_ ,_ಶ್ರೀವಿಜಯದಾಸರ ರಚನೆ , ರಾಗನಾಟಿ #ವಾಮನ #ವಟು #ಇಂದ್ರಾನುಜ #ಉಪೇಂದ್ರನೆ _,_ _#ಶ್ರೀವಾಮನ #ದೇವರ #ಸ್ತೋತ್ರಸುಳಾದಿ_ ,_#ಶ್ರೀವಿಜಯದಾಸರ #ರಚನೆ , #ರಾಗನಾಟಿ. #mp3 * *ಸ್ಮರಿಸಿ ಬದುಕಿರೋ* *ದಿವ್ಯ ಚರಣಕ್ಕೆರಗಿರೋ|* *ದುರಿತ ತರೆದು ಪೊರೆವ ವಿಜಯ ಗುರುಗಳೆಂಬರಾ| *ಶ್ರೀ ವಿಜಯದಾಸಾರ್ಯರು *ಆಯಾ ಕಾಲ ಸಂಧರ್ಭದಲ್ಲಿ ಶ್ರೀ ಹರಿಯ ನಾಮ ಸ್ಮರಣೆ ಯಿಂದ ಬರುವ ಫಲ ಮತ್ತು ನಾಮ ಸ್ಮರಣೆ ಮಾಡದೇ ಹೋದರೆ ಬರುವ ದುಷ್ಫಲದ ಬಗ್ಗೆ ಶ್ರೀ ವಿಜಯಪ್ರಭುಗಳು ತಿಳಿಸಿದ್ದಾರೆ.  ಶ್ರೀ ವಿಜಯದಾಸರ ಕುರಿತು ರಘುಪತಿವಿಟ್ಠಲದಾಸಾರ್ಯರ ಕೃತಿ*  *ರಾಗ ಆರಭಿ ಆದಿತಾಳ*  ವಿಜಯರಾಜ ಗುರುರಾಜಾಧಿರಾಜ ಮಹ - ರಾಜಶಿರೋರತುನ ॥ ಪ ॥ ತ್ಯಜಿಸದೆ ನಿಮ್ಮ ಪದಬುಜವ ಬಿಡೆನೆಂಬೊ  ಸುಜನರ ಪಾಲಿಸಯ್ಯ ॥ ಅ ಪ ॥  ಜ್ಞಾನಭಕುತಿ ಕೊಡು ಗಾನಶೀಲನ ಮಾಡು ಹೀನಮನವ ಕೆಡಿಸೋ । ನಾನೆಂಬೊ ಅಹಂಕಾರವನ್ನೆ ತೊಲಗಿಸೋ ನಿನ್ನವರವನೆನಿಸೋ । ಧೇನಿಸುವಂದದಿ ಹರಿಯ ಪದಬುಜವ ಮಾನಸದಲಿ ಸರ್ವದಾ । ಕಾಣಿಸಿಕೊಡು ನಾನು ಜೀವನು ನಿಜವೆಂಬೊ ಜ್ಞಾನ ಮನಕೆ ಬರಲಿ ॥ 1 ॥  ಮೌನವಾಗಿರಲಾರು ಹೀನತಿ ನುಡಿಯಲು ಪ್ರಾಣಪ್ರೇರಕರಿಂದಲಿ । ಆನೇನಾಡುವುದೆಲ್ಲ ಆನೆ ಎನ್ನುವೆನೆಲ್ಲ ಆನೆ ಸ್ವತಂತ್ರನಲ್ಲ । ದೀನನಾಗೆರಗಿ ಸಜ್ಜನರ ಪದಾಬ್ಜಕ್ಕೆ  ರೇಣುವಾಗಿ ನಡೆದು । ನೀನೇ ಗತಿಯೆಂದು ನಿನ್ನ ಮೊರೆಹೊಕ...

_ ಮುನಿಜನರ ನೆನಿಸಿ ಜನರೂ _ ,_19ನೇ ಕಕ್ಷದಲ್ಲಿಯ ಮುನಿಗಳ_ _ಪ್ರಮೇಯ ತಾರತಮ್ಯ ಪದ__ಶ್ರೀ ವಿಜಯದಾಸರ ರಚನೆ , ಉದಯರಾಗ

_ ಮುನಿಜನರ ನೆನಿಸಿ ಜನರೂ _ ,_19ನೇ ಕಕ್ಷದಲ್ಲಿಯ ಮುನಿಗಳ_ _ಪ್ರಮೇಯ ತಾರತಮ್ಯ ಪದ__ಶ್ರೀ ವಿಜಯದಾಸರ ರಚನೆ , ಉದಯರಾಗ _#ಮುನಿಜನರ #ನೆನಿಸಿ #ಜನರೂ _ ,_#19ನೇ #ಕಕ್ಷದಲ್ಲಿಯ #ಮುನಿಗಳ_ _#ಪ್ರಮೇಯ #ತಾರತಮ್ಯ #ಪದ__#ಶ್ರೀವಿಜಯದಾಸರ #ರಚನೆ , #ಉದಯರಾಗ *ಈ ಮಂತ್ರ ಪಠಿಸಲು ,ಸುತ್ತಲೂ ಖಡ್ಗ ಹಿಡಿದು ರಕ್ಷಕರು ಬಂದರು* ನಿತ್ಯದಲ್ಲಿ ಯಾವುದೇ ಸಂಕಷ್ಟಗಳು ಬಂದಾಗ, ದುಃಖ ಉಂಟಾದಾಗ, ದುಃಸ್ವಪ್ನಗಳು ಆಗುತ್ತಿರುವಾಗ ಶ್ರೀವಿಜಯದಾಸರ ಸುಳಾದಿಗಳನ್ನು  ಪಠಿಸುತ್ತಾ ಇದ್ದರೆ, ಎಲ್ಲ ತಾಪಗಳು ಶೀಘ್ರದಲ್ಲಿ ಪರಿಹಾರವಾಗುತ್ತವೆ,  ಈ ಕೆಳಕಂಡ ಮಂತ್ರ/ಪ್ರಾರ್ಥನೆ ವಿಶೇಷ ಫಲಕಾರಿ. ಹಿಂದೆ  ಹಲವಾರು ಮಂದಿ ಮನೆಯ ಮುಂದೆ ಈ ಆಪತ್ತು ಸ್ತೋತ್ರವನ್ನು ಫಲಕ (boad) ಹಾಕುತ್ತಿದ್ದರು.  ಒಂದು ಕೈಯಲಿ ಖಡ್ಗ l ಒಂದು ಕೈಯಲಿ ಹಲಿಗೆ l ಅಂದವಾಗಿ ಪಿಡಿದು l ದಿವಾ ರಾತ್ರಿಯಲಿ ಬಂದು ಬದಿಯಲಿ ನಿತ್ಯ ಬಾರಾಸನನಾಗಿ l ಹಿಂದು ಮುಂದುಪದ್ರವಾಗದಂತೆ l ಇಂದಿರೇರಮಣ ಕಾಯುತ್ತಲಿರೆ l ಎನಗಾವ ಬಂಧಕಗಳಿಲ್ಲ l ಧನ್ಯ ಧನ್ಯ ಕಂದರ್ಪನಯ್ಯ l ಸಿರಿವಿಜಯ ವಿಠಲರೇಯ ಎಂದೆಂದಿಗಾಪತ್ತು ಬರಲೀಯನೋ || ಉಡುಪಿಗೆ ಹೋಗುವ ಹಾದಿಯಲ್ಲಿ ಮಂಡಗಡ್ಡಿ ಭೀಮನೆಂಬ ಕಳ್ಳನು ಬಹಳ ವರ್ಷಗಳಿಂದ ಸಾವಿರಾರು ಜನರನ್ನು ಸುಲಿಗೆ ಮಾಡಿ ಉಪದ್ರವ ಕೊಡುತ್ತಿದ್ದನು. ಶ್ರೀ ಕೃಷ್ಣನ ದರ್ಶನಕ್ಕೆ  ಶ್ರೀ ಗೋಪಾಲ ದಾಸರು ಉಡುಪಿಗೆ ಹೊರಟಿದ್ದನ್ನು ತಿಳಿದ ಶ್ರೀ ವಿಜಯದಾಸರು ದೇವರನ್ನು ಪ...

_ ಪ್ರಣವ ಮಂತ್ರವ ಗ್ರಹಿಸು ಪ್ರಣುತನಾಗಿ _ ,_ _ಪ್ರಣವ ಮಂತ್ರ ಸುಳಾದಿ_ ,_ಶ್ರೀ ವಿಜಯದಾಸರ ರಚನೆ , ರಾಗ ಸಾರಂಗ

_ ಪ್ರಣವ ಮಂತ್ರವ ಗ್ರಹಿಸು ಪ್ರಣುತನಾಗಿ _ ,_ _ಪ್ರಣವ ಮಂತ್ರ ಸುಳಾದಿ_ ,_ಶ್ರೀ ವಿಜಯದಾಸರ ರಚನೆ , ರಾಗ ಸಾರಂಗ #ಪ್ರಣವ #ಮಂತ್ರವ #ಗ್ರಹಿಸು #ಪ್ರಣುತನಾಗಿ _ ,_ #ಪ್ರಣವಮಂತ್ರ #ಸುಳಾದಿ_ #ಶ್ರೀ ವಿಜಯದಾಸರ #ರಚನೆ , #ರಾಗಸಾರಂಗ    *ತಾತ ಪಡೆದ ನಾಯಿಯ ಜನ್ಮ‌ ವ ಪರಿಹರಿಸಿದ ಶ್ರೀ ವಿಜಯದಾಸರು*  ನಮ್ಮ ಶ್ರೀ ವಿಜಯಪ್ರಭುಗಳು ಸಾಮಾನ್ಯ ರಲ್ಲ. ಇವರ ಮಹಿಮೆ ಅಸಂಖ್ಯಾತ, ನಮ್ಮ ಹಾಗೆ ನರ ಮನುಷ್ಯರಲ್ಲ. ದೇವತಾ ಕಕ್ಷೆಯಲ್ಲಿ ಇರುವ ಮಹಾನುಭಾವರು..*.. ಧರ್ಮ ಕರ್ಮವಶದಿಂದ ಶ್ರೀ ವಿಜಯದಾಸರ ತಂದೆಯ ತಾತ ಅವರಿಗೆ (ಪಿತೃಪಿತಾಮಹ) ನಾಯಿಯ ಜನ್ಮ‌ಬಂದಿತ್ತು ಇದನ್ನು ಅರಿತ ದಾಸರು  ಕಾಶಿಯಾತ್ರೆಗೆ ಹೋಗಿದ್ದಾಗ ಗಯಾ ವಿಷ್ಣುಪಾದದಲ್ಲಿ ಪಿತೃಗಳ ಉದ್ದಾರಕ್ಕೆ , ಪಿಂಡ ಪ್ರಧಾನ ಮಾಡಿ ಶ್ರೀ ಗಯಾ ಗದಾಧರನಿಗೆ ಅರ್ಪಿಸಲು ಅವರ ಪಿತೃ, ಪಿತಾಮಹರು, ನಾಯಿ ಯೋನಿಯಿಂದ ಮುಕ್ತರಾಗುತ್ತಾರೆ..*. ಇದನ್ನು ಅರಿತ ಸಾಂಶರಾದ ಶ್ರೀ ವಿಜಯಪ್ರಭುಗಳು ಸೂಕ್ಷ್ಮ ರೂಪದಿಂದ ಚೀಕಲಪರವಿಯಲ್ಲಿ ಇದ್ದ ತನ್ನ  ಸಹೋದರ ರಾದ ಹಯವದನ ವಿಠ್ಠಲ ರಿಗೆ(ಆನಂದ ದಾಸರಿಗೆ) ದರ್ಶನ ಕೊಟ್ಟು  ಸಹೋದರ ಆನಂದ ನೇ !!ಇಂದು ನಾವು ಮಾಡಿದ ಗಯಾ ಶ್ರಾದ್ದದಿಂದ ತೃಪ್ತನಾದ ಶ್ರೀ ಗಯಾ ಗದಾಧರನು ಕರ್ಮವಶಾತ ನಮ್ಮ ಮುತ್ತಜ್ಜನಿಗೆ ಬಂದಿದ್ದ ನಾಯಿ ಜನ್ಮವನ್ನು ಕಳೆದನು.ಎಂದು ಹೇಳುತ್ತಾರೆ. *ಮುತ್ತಜ್ಜನನ್ನು ಅನುಗ್ರಹ ಮಾಡಿ ಶ್ರೀ ಹರಿಯು ನಮ್ಮ ವಂಶವನ್ನು ಉದ್ದಾರ ಮಾಡಿದನ...

_ ಪೋಗಿ ಬರುವೆ ಗೋಪ ನಾಗವೇಣಿಯರೆ _ ,_ಶ್ರೀ ರಾಮಸುಂದರವಿಟ್ಠಲ ದಾಸರ ರಚನೆ ,_ರಾಗ ಮೋಹನ , ಖಂಡಛಾಪುತಾಳ

_ ಪೋಗಿ ಬರುವೆ ಗೋಪ ನಾಗವೇಣಿಯರೆ _ ,_ಶ್ರೀ ರಾಮಸುಂದರವಿಟ್ಠಲ ದಾಸರ ರಚನೆ ,_ರಾಗ ಮೋಹನ , ಖಂಡಛಾಪುತಾಳ _ #ಪೋಗಿ #ಬರುವೆ #ಗೋಪ #ನಾಗವೇಣಿಯರೆ _ ,_ಶ್ರೀ #ರಾಮಸುಂದರವಿಟ್ಠಲ #ದಾಸರರಚನೆ ,_#ರಾಗಮೋಹನ , #ಖಂಡ #ಛಾಪುತಾಳ*  *ಆಕಾಶದಲ್ಲಿ ಸಹ್ರಸ್ರಾರು ದೇವತೆಗಳ ಸಮೂಹ ಕಂಡು ಜನರು: ವಿಜಯದಾಸರ  ಅವತಾರ ಕಾಲ ಮುಗಿಯುವ ಸಂದರ್ಭದಲ್ಲಿ*   ಬದುಕಿದ್ದ ಎಲ್ಲಾ ಸಮಯದಲ್ಲಿ ಸಹ ಹರಿನಾಮದ ಸ್ಮರಣೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ಜೀವನದ ಅವಸಾನದ ಸಮಯದಲ್ಲಿ ಮಾಡುವ ಹರಿ ಸ್ಮರಣೆಯೂ  ಅಜಮಿಳನ ದೃಷ್ಟಾಂತವೇ ಸಾಕ್ಷಿ.. ವಿಜಯ ಪ್ರಭುಗಳ ಮಹಾನುಭಾವರ ಜೀವನ ಚರಿತ್ರೆಗಳು ನಮಗೆ ಈ ಪಾಠವನ್ನು ಕಲಿಸಿಕೊಡ್ತವೆ.   ದೇವಾಂಗ ಸಂಭೂತರಾದ ಶ್ರೀ ದಾಸರು ಕಾರ್ತೀಕ ಶುದ್ಧ ದಶಮಿಯ ದಿನ , ಪ್ರಾತಃಕಾಲದಲ್ಲೇ ಎದ್ದು ಸ್ನಾನ ಆಹ್ನಿಕಗಳೆಲ್ಲವನ್ನೂ ಮುಗಿಸಿ, ತಮಗೆ ಅನುಗ್ರಹವಾದ ಶ್ರೀ ಗೋಪಾಲಕೃಷ್ಣ ಮೂರ್ತಿಯ ಪೂಜೆ ಮಾಡಿದರು.   ನಂತರ ಅಲ್ಲಿರುವಂತಹ ಸಾಕುಮಗ ಶ್ರೀ ಮೋಹನದಾಸಾರ್ಯರು, ಹಾಗೂ ಸೋದರರಾದ ಶ್ರೀ ಹಯವದನವಿಠಲರು, ಪ್ರೀತಿಯ ಶ್ರೀ ವ್ಯಾಸವಿಠಲರೇ ಮೊದಲು ಎಲ್ಲ ಶಿಷ್ಯರಿಗೆ ತೀರ್ಥವನ್ನು ನೀಡಿದರು. ಶ್ರೀ ದಾಸರು ಹೊಲದಲ್ಲಿ ತಾವು ಕಟ್ಟಿಸಿದ ಕಟ್ಟಿಯ ಹತ್ತಿರವೇ ದರ್ಭಾಸನಸ್ಥರಾಗಿ ಕುಳಿತು, ಎಲ್ಲ ಸಜ್ಜನರಿಗೆ ಕೈ ಮುಗಿದು - *ನಮ್ಮ ಅವತಾರ ಕಾಲ ಮುಗಿತು , ಮಹಾ ಯಾತ್ರೆಗೆ ಹೊರಡುವೆವು ಎಂದು ಘೋಷ ಮಾಡಿದರು.  ಲೋಕರೀತ್...

_ ಜಯತು ಕೋದಂಡರಾಮ ಜಯತು ದಶರಥರಾಮ _ , _ಶ್ರೀ ಪುರಂದರದಾಸರ ರಚನೆ , ರಾಗ ಹಿಂದೋಳ , ಖಂಡಛಾಪುತಾಳ

_ ಜಯತು ಕೋದಂಡರಾಮ ಜಯತು ದಶರಥರಾಮ _ , _ಶ್ರೀ ಪುರಂದರದಾಸರ ರಚನೆ , ರಾಗ ಹಿಂದೋಳ , ಖಂಡಛಾಪುತಾಳ  #ಜಯತು #ಕೋದಂಡರಾಮ #ಜಯತು #ದಶರಥರಾಮ _#ಶ್ರೀ ಪುರಂದರದಾಸರ #ರಚನೆ , #ರಾಗ #ಹಿಂದೋಳ , #ಖಂಡಛಾಪುತಾಳ *ಶ್ರೀವಿಜಯದಾಸಾರ್ಯ ವಿರಚಿತ ಹರಿನಾಮ ಸುಳಾದಿ*  ಮತ್ತು ನೈವೇದ್ಯ ಪ್ರಮೇಯ* *ರಾಗ ಕಾಂಬೋಧಿ*  *ಧ್ರುವತಾಳ*  ಹರಿಯೆ ಜಗದ ದೊರಿಯೆ ನಿರುತ ಭಾಗ್ಯದ ಶಿರಿಯೆ ದುರಿತ ಗಜಕೆ ಸರಿಯೆ ದನುಜಾರಿಯಾ ಸ್ಮರಣೆಯ ಮಾಡಲರಿಯಾ ಅರಿಯದ ನರಗುರಿಯ ಕರಿಸಿ ಯಮ ಪರಿಪರಿಯಾ ತೀವರುರಿಯಾ ನರಕಾದಿಗೆ ಗುರಿಯಾ ನಿರಿಸುವನು ಘನಸಿರಿಯಾ ವರ ಕಲ್ಪ ಕಲ್ಪಕ್ಕೆ ದೋಷಕಾರಿಯಾ ದುರತಿಕ್ರಮ ನಾಮ *ವಿಜಯವಿಟ್ಠಲನ್ನ*  ಮರಿಯಾದಿರೆ ವಿರಂಚಿ ದುರ್ಲೇಖ ಬರಿಯಾ ॥ 1 ॥  *ಮಟ್ಟತಾಳ*  ಸ್ನಾನ ಜಪ ತಪವು ಮೌನವನುಷ್ಠಾನ ದಾನ ಪರ್ವಣಿ ಪುಣ್ಯ ಜ್ಞಾನ ಸುಯಾಗಗಳು  ನಾನಾಕ ಯಾತ್ರಿಗಳು ಏನೇನು ಕರ್ಮ ನಿ - ದಾನದಿಂದಲಿ ಮಾಡೆ ಶ್ರೀನಾರೇಯಣನ ಧ್ಯಾನ ನಾಮಂಗಳು ತಾ ನುಡಿಯದಿರೆ ಕಾಣರು ನಿರ್ವಾಣ  ಅನಾದಿ ನಿಧನ *ವಿಜಯವಿಟ್ಠಲನ್ನ*  ನೀನೆ ಎನ್ನದವನು ಜ್ಞಾನಿಯಾದರೇನು ॥ 2 ॥  *ತ್ರಿವಿಡಿತಾಳ*  ಹಲವು ವೇದಗಳೋದಿ ಹಲವು ಕೇಳಿದರೇನೂ ಇಳಿಯೊಳು ಯತಿಯಾಗಿ ಚರಿಸಲೇನೂ  ಬಲು ವಿವೇಕ ಮತಿ ಸತತವಾದರು ತನ್ನ ಒಳಗಿದ್ದ ನರಹರಿಯ ಗೆಳೆಯನೆಂದರಿಯಾದೆ ಕಲಿ ಮಾನವನು ಧರ್ಮಾವಳಿ ನೆಸಗಿದರೇನೂ ಫಲವಿಲ್ಲವೊ ಬಲುಕಾಲ ಬಳಲಿದರೂ  ಬೆ...

_ ದುರಿತವನಕುಠಾರಿ ದುರ್ಜನ ಕುಲವೈರಿ _ ,_ _ಶ್ರೀಲಕ್ಷ್ಮೀನೃಸಿಂಹ ಸುಳಾದಿ_ ,_ಶ್ರೀ ಜಗನ್ನಾಥದಾಸರ ರಚನೆ , ರಾಗ ನಾಟ

_ ದುರಿತವನಕುಠಾರಿ ದುರ್ಜನ ಕುಲವೈರಿ _ ,_ _ಶ್ರೀಲಕ್ಷ್ಮೀನೃಸಿಂಹ ಸುಳಾದಿ_ ,_ಶ್ರೀ ಜಗನ್ನಾಥದಾಸರ ರಚನೆ ,   #ದುರಿತವನಕುಠಾರಿ #ದುರ್ಜನ #ಕುಲವೈರಿ #ಶ್ರೀಲಕ್ಷ್ಮೀನೃಸಿಂಹ #ಸುಳಾದಿ #ಶ್ರೀ #ಜಗನ್ನಾಥದಾಸರ #ರಚನೆ , #ರಾಗನಾಟ ಏನ್ ಆಶ್ಚರ್ಯ ಪಢರಪುರದ ಗರ್ಭಗುಡಿಗೆ ಪರದೆ ಹಾಕಿಕೊಂಡಿತು - ಶ್ರೀ ವಿಜಯದಾಸರ ಪವಾಡ  ಒಮ್ಮೆ ಶ್ರೀ ವಿಜಯದಾಸಪ್ರಭುಗಳು ಚೀಕಲಪರವಿಯಲ್ಲಿ ಇದ್ದಾರೆ.ಆಗ ಪಂಢರಪುರ ದಲ್ಲಿ ಆಷಾಢ ಶುದ್ದ ಏಕಾದಶಿಯ ಕಾಲ. ಅಂದು ವಿಠ್ಠಲನ ಉತ್ಸವ ಅಲ್ಲಿ ವಿಜ್ರಂಭಣೆಯಿಂದ ನಡೆಯುತ್ತಿದೆ. ಆದರೆ ಕೆಲವು ಶಿಷ್ಯರು ಶ್ರೀ ವಿಜಯ ಪ್ರಭುಗಳ ಜೊತೆಯಲ್ಲಿ ಚೀಕಲಪರವಿಯಲ್ಲಿ ಇದ್ದಾರೆ. ಕೆಲವರು ಪಂಢರಾಪುರಕ್ಕೆ ವಿಜಯ ದಾಸರ ಅಪ್ಪಣೆ ಪಡೆದು ಹೋಗಿದ್ದಾರೆ. *ಶ್ರೀ ಶ್ರೀಪಾದರಾಜರು ಪ್ರತಿಷ್ಠಿತ ಅಶ್ವತ್ಥ ಶ್ರೀ ನರಸಿಂಹ ದೇವರ ಕಟ್ಟಿಇರುವ ಚೀಕಲಪರ್ವಿಯಲ್ಲಿನ  ಕೆಲ ಶಿಷ್ಯರು ,   ನಾವು ಸಹ ಪಂಢರಾಪುರಕ್ಕೆ ಹೋಗಿದ್ದರೆ ಶ್ರೀಪಾಂಡುರಂಗದೇವರ ದರುಶನ ಆಗುತ್ತಾ ಇತ್ತು .ಆಗಲಿಲ್ಲವಲ್ಲ ಅಂತ ಮನದೊಳಗೆ ಭಕ್ತಿಯಿಂದ  ಪೇಚಾಡಿ ಕೊರಗುತ್ತಾ ಇದ್ದಾರೆ. ಆದರೆ ಅವರೆಲ್ಲರೂ ಮನದೊಳಗೆ ಹೋಗಬೇಕು ಅಂದು ಕೊಂಡಿದ್ದು  ಗುರು ವಿಜಯದಾಸರ ಅರಿವಿ ಬಂದಿತ್ತು. ತಕ್ಷಣ ನಮ್ಮ ಶ್ರೀವಿಜಯಪ್ರಭುಗಳು ತಮ್ಮ ಶಿಷ್ಯ ವೃಂದವನ್ನು ಕುರಿತು ನೀವೆಲ್ಲರು ಮುಸುಕು ಹಾಕಿಕೊಳ್ಳಿರಿ ಎಂದರು. *ತಕ್ಷಣ ಎಲ್ಲಾರು ಗುರುಗಳು ಆದೇಶದಂತೆ ತಮ್ಮ ಮೋರೆ...

_ ದಾಸರ ಮಹಿಮೆಗೆ ಅನಂತ ನಮೊ ನಮೊ _,_ _ಶ್ರೀಪುರಂದರದಾಸರ ಸ್ತೋತ್ರ ಸುಳಾದಿ_ ,_ಶ್ರೀ ವಿಜಯದಾಸರ ರಚನೆ ,

ದಾಸರ ಮಹಿಮೆಗೆ ಅನಂತ ನಮೊ ನಮೊ _,_ _ಶ್ರೀಪುರಂದರದಾಸರ ಸ್ತೋತ್ರ ಸುಳಾದಿ_ ,_ಶ್ರೀ ವಿಜಯದಾಸರ ರಚನೆ  #ದಾಸರ #ಮಹಿಮೆಗೆ #ಅನಂತ #ನಮೊ #ಶ್ರೀಪುರಂದರದಾಸರ #ಸ್ತೋತ್ರಸುಳಾದಿ #ವಿಜಯದಾಸರ #ರಚನೆ  ಶ್ರೀ ಹರಿ ವಾಯು ಗುರುಗಳ ಅನುಗ್ರಹದಿಂದ ಸಂತಸದಾಯಕವಾಗಿ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಸನ್ಮಂಗಳವನ್ನುಂಟು ಮಾಡಲಿ. ರಾಗ - ವರಾಳಿ : ತಾಳ - ತ್ರಿವಿಡಿತಾಳ ಪ್ರಥಮ ದೈವವೇ ಪಂಢರಿರೇಯಾ  ಪೃಥ್ವಿಯೊಳಗೆ ಭಾಗೀರಥಿಗೆ ಪಥವ ತೋರೊ ll ಪ ll  ಸಕಲ ಭಯನಾಶ ಸಾತ್ವಿಕ ಮೂರುತಿ ಭಕ್ತಜನಪೋಷಕ ನೀನಲ್ಲವೇ ತ್ವಕು ಇಂದ್ರಿಯಂಗಳು ನಿನ್ನಾಧೀನವೋ ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ ll 1 ll ಸರ್ವರಂತರಿಯ ಸಿದ್ಧ ಫಲದಾಯಕ ಸರ್ವರಲಿ ಸ್ವಾಮಿಯೆಂದೆನಿಪ ಸರ್ವ ವಿಘ್ನೋಪ ಶಾಂತಾ ವೇದಾಂತನೆ ಗೀರ್ವಾಣ ಮುನಿನುತ ಗಿರಿಧರ ದೇವಾ ll 2 ll ಸಾಧು ಮೂರುತಿ ಸಿದ್ಧ ಫಲದಾ ಬೋಧ ಕೀರುತಿ ಆದಿಪರಬೊಮ್ಮ ವಿಜಯವಿಟ್ಠಲರೇಯಾ ನೀನು ಈ ಜಗದೊಳು ಭೀಮಾ ತೀರನಿವಾಸಾ ll 3 l ಪ್ರಥಮ ದೈವವೇ ಪಂಢರಿರೇಯಾ  ಪೃಥ್ವಿಯೊಳಗೆ ಭಾಗೀರಥಿಗೆ ಪಥವ ತೋರೊ ll ಪ  ll  ಸಕಲ ಭಯನಾಶ ಸಾತ್ವಿಕ ಮೂರುತಿ ಭಕ್ತಜನಪೋಷಕ ನೀನಲ್ಲವೇ ತ್ವಕು ಇಂದ್ರಿಯಂಗಳು ನಿನ್ನಾಧೀನವೋ ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ ll 1 ll ಸರ್ವರಂತರಿಯ ಸಿದ್ಧ ಫಲದಾಯಕ ಸರ್ವರಲಿ ಸ್ವಾಮಿಯೆಂದೆನಿಪ ಸರ್ವ ವಿಘ್ನೋಪ ಶಾಂತಾ ವೇದಾಂತನೆ ಗೀರ್ವಾಣ ಮುನಿನುತ ಗಿರಿಧರ ದೇವಾ ll 2 ll ಸಾಧು...