ತೆಂಗಿನ ಗರಿಯಲ್ಲಿ ಮೂಡಿಬಂದ ಶ್ರೀ ಗುರು ಬಾಲಗಂಗಾಧರನಾಥ ಸ್ವಾಮೀಜಿ*

full video link

*ತೆಂಗಿನ ಗರಿಯಲ್ಲಿ ಮೂಡಿಬಂದ ಶ್ರೀ ಗುರು ಬಾಲಗಂಗಾಧರನಾಥ ಸ್ವಾಮೀಜಿ*
ಕರ್ನಾಟಕ, ಜನವರಿ 29: ಬಾಲಗಂಗಾಧರನಾಥ ಸ್ವಾಮೀಜಿ ಅವರು ಧಾರ್ಮಿಕ, ಸಾಮಾಜಿಕ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಸೇವೆಯ ಮೂಲಕ ದೇಶದ ಗಮನ ಸೆಳೆದವರು. ಆದಿಚುಂಚನಗಿರಿ ಶ್ರೀ ಮಠದ 71ನೇ ಪೀಠಾಧೀಶರಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ. ಪರಿಚಯ
ಬಾಲಗಂಗಾಧರನಾಥ ಸ್ವಾಮೀಜಿ ಅವರು ಜನವರಿ 18, 1945 ರಂದು ರಾಮನಗರ ಜಿಲ್ಲೆಯ ಬಾನಂದೂರಿನಲ್ಲಿ ಜನಿಸಿದರು. ಇವರ ತಂದೆ ಚಿಕ್ಕ ಲಿಂಗೇಗೌಡ, ತಾಯಿ ಮೋಟಮ್ಮ. ಇವರ ಮೂಲ ಹೆಸರು ಗಂಗಾಧರಯ್ಯ. ತಮ್ಮ ಬಾಲ್ಯದ ಶಿಕ್ಷಣವನ್ನ ಹುಟ್ಟೂರಿನಲ್ಲಿ ಮುಗಿಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು. ಬಾಲ್ಯದಲ್ಲಿಯೇ ಜನರ ಸೇವೆ ಮಾಡುವ ಬಯಕೆಯನ್ನು ಹೊಂದಿದ್ದ ಇವರು ಆಧ್ಯಾತ್ಮದೆಡೆಗೆ ಹೆಚ್ಚು ಒಲವು ತೋರಿದ್ದರು .

ಫೆ.12, 1968 ರಲ್ಲಿ ಸ್ವಾಮೀಜಿಯವರು ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಅಂದಿನ ಪೀಠಾಧಿಪತಿ ಶ್ರೀ ರಾಮಾನಂದನಾಥ ಸ್ವಾಮೀಜಿ ಅವರು ಗಂಗಾಧರಯ್ಯನಿಗೆ ಮಂತ್ರೋಪದೇಶದೊಂದಿಗೆ ಸನ್ಯಾಸ ದೀಕ್ಷೆ ನೀಡಿ, ‘ಶ್ರೀ ಬಾಲಗಂಗಾಧರನಾಥ’ ಎಂದು ಮರು ನಾಮಕರಣ ಮಾಡಿದರು. ಆ ಬಳಿಕ ಬೆಂಗಳೂರಿನ ಕೈಲಾಸಾಶ್ರಮದಲ್ಲಿ ಇದ್ದುಕೊಂಡು ಅದ್ವೈತ ವೇದಾಂತ ಸಂಸ್ಕೃತ ಪದವಿ ಪಡೆದರು.

ಬಾಲಗಂಗಾಧರನಾಥ ಸ್ವಾಮೀಜಿ ಅವರು ಸೆಪ್ಟೆಂಬರ್ 24, 1974 ರಂದು ಪ್ರಾಚೀನ ನಾಥ ಆರಾಧನಾ ಕೇಂದ್ರವಾದ ಶ್ರೀ ಆದಿಚುಂಚನಗಿರಿ ಮಠದ 71 ನೇ ಪೀಠಾಧಿಪತಿಯಾಗಿ ತಮ್ಮ 30 ನೇ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡರು. ಮಠದ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಕ್ರಾಂತಿಯನ್ನುಂಟು ಮಾಡುವ ತಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸಲು ಅವಿಶ್ರಾಂತವಾಗಿ ಶ್ರಮಿಸಿದರು.

ಬಾಲಗಂಗಾಧರನಾಥ ಸ್ವಾಮೀಜಿ ಸಾಕ್ಷಾತ್ಕಾರ ಪಡೆಯಲು ಅತ್ಯಂತ ಕಡಿಮೆ ಮಾರ್ಗವೆಂದರೆ ಪರಮಾತ್ಮನಲ್ಲಿನ ಸಂಪೂರ್ಣ ಭಕ್ತಿ ಎಂದು ಪ್ರತಿಪಾದಿಸುತ್ತಾರೆ. @mib_india #MIB Photography Contest
#ChethanaMuniswamygowda #Riya #YOGI  #ಚೇತನಾ #ಮುನಿಸ್ವಾಮಿಗೌಡ
https://explurger.com/pf/rm15io6a0yb8luzkg

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ