* ಶಿವರಾತ್ರಿ ಉಪವಾಸದ ನಂತರ ಫೆಬ್ರವರಿ 27ರಂದು ಎಲ್ಲರಿಗೂ ಭರ್ಜರಿ ಊಟ* ಇದಕ್ಕಿದೆ ಶತಮಾನದ ಇತಿಹಾಸ*
kack fruit salad full video
* ಶಿವರಾತ್ರಿ ಉಪವಾಸದ ನಂತರ ಫೆಬ್ರವರಿ 27ರಂದು ಎಲ್ಲರಿಗೂ ಭರ್ಜರಿ ಊಟ* ಇದಕ್ಕಿದೆ ಶತಮಾನದ ಇತಿಹಾಸ*
ಕರ್ನಾಟಕ, ಫೆಬ್ರವರಿ 26: ಗುರುವಾರ ಎಳೆಯ ಹಲಸಿನ ಕಾಯಿ ಸಾಂಬರು ರಾಗಿ ಮುದ್ದೆ 15 ಸಾವಿರ ಜನರಿಗೆ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿದೆ.
*ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಬಡವನಹಳ್ಳಿ ಪಕ್ಕದ ಅಪನಹಳ್ಳಿ ನಂಜುಡೇಶ್ವರ ದೇವಾಲಯದ ಆವರಣದಲ್ಲಿ (ದಿನಾಂಕ: 27-02-25) ಗುರುವಾರ ಬೆಳಿಗ್ಗೆಯಿಂದ 10 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಶಿವರಾತ್ರಿಯ ಉಪವಾಸ ಬಿಡುವ ಕಾರ್ಯಕ್ರಮ ನಡೆಯುತ್ತದೆ*
ಹಲವು ದಶಕಗಳಿಂದ ಸ್ಥಳೀಯ ಸಮಿತಿಯವರು ದಾನಿಗಳ ಮತ್ತು ಭಕ್ತರ ಸಹಕಾರದಿಂದ ಎಳೆಯ ಹಲಸಿನ ಕಾಯಿ ಕೆತ್ತಕಾಯಿ ಸಾಂಬರು, ರಾಗಿ ಮುದ್ದೆ, ಅನ್ನ ಮತ್ತು ಪಾಯಸವನ್ನು ಉಚಿತವಾಗಿ ಪ್ರತಿ ವರ್ಷ 10-15 ಸಾವಿರ ಜನರುಗಳಿಗೆ ಸಾಮೂಹಿಕ ಭೋಜನ ವ್ಯವಸ್ಥೆ ಮಾಡುತ್ತಾರೆ.
ಬುಧವಾರ ಮದ್ಯಾಹ್ನದಿಂದ ಹಲಸಿನ ಕಾಯಿ ಕೋಚ್ಚುವ ಕೆಲಸವನ್ನು ಪ್ರಾರಂಭವಾದರೆ ಗುರುವಾರ ಬೆಳಗಿನ ಜಾವದವರೆಗೂ ನಡೆಯುತ್ತದೆ.
ಮದ್ಯರಾತ್ರಿ ಭಕ್ತರು ದಾನ ನೀಡಿರುವ, ಖರೀದಿಸಿರುವ ದ್ವಿದಳ ಧಾನ್ಯಗಳನ್ನು ಬೇಯಿಸಲು ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಹಾಕಿ ಕೆಲವು ಗಂಟೆಗಳ ನಂತರ ಹಲಸಿನ ಕೊಚ್ಚಿರುವ ಚೂರುಗಳನ್ನು ಹಾಕುತ್ತಾರೆ.
ಈ ಸನ್ನಿವೇಶ ಗಳನ್ನು ಕಣ್ಣುತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಅಗಮಿಸುತ್ತಾರೆ.
ಶುಚಿ ಮತ್ತು ರುಚಿಗೆ ಆದ್ಯತೆ ನೀಡುವ ಸ್ಥಳೀಯ ಸಮಿತಿಯವರು ಭಕ್ತರುಗಳಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಸಾಮೂಹಿಕ ಭೋಜನದ ನಡೆಸುತ್ತಾರೆ.
ಸಾವಿರಾರು ಭಕ್ತರು ಊಟ ಸೇವಿಸದ ನಂತರ ಮನೆಗಳಿಗೂ ಸಾಂಬರನ್ನು ಬಾಕ್ಸ್ ಗಳಲ್ಲಿ ತೆಗೆದು ಕೊಂಡು ಹೋಗುತ್ತಾರೆ. ಭಕ್ತರು ತರುವ ಪಾತ್ರೆಗಳಿಗೆ ತುಂಬಿ ಕೊಡಲು ಪ್ರತ್ಯೇಕ ಕೌಂಟರ್ ಮಾಡಿರುತ್ತಾರೆ.
*ಕಳೆದ ಮೂರು ವರ್ಷದಿಂದ ಪ್ರತಿ ವರ್ಷ ಸುಮಾರು 15 ಸಾವಿರ ಜನ ಭಕ್ತರು ಭಾಗವಹಿಸಿದ್ದರು*
ಹಿಂದಿನ ವರ್ಷಗಳ ಕೆಲವು ಪೋಟೋ ಗಳು ಇಲ್ಲಿವೆ 👇🏾 #ಉಚಿತಊಟ #ಉಪವಾಸ #ತುಮಕೂರು #Okkaliga #gowda #ಮಂಡ್ಯ #ಊರು #ಪುರ #ನಗರ #ಕೃಷಿ #book #Muniswamy #Riya #YOGI #ಚೇತನಾ #ಆದಿಚುಂಚನಗಿರಿ #ನಿರ್ಮಲಾನಂದನಾಥ #ಕುವೆಂಪು #ವಚ #Dasaokkaliga
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏