*BANK ROBBERY; 17 ಕೆಜಿ ಚಿನ್ನ ವಶ- ಪೊಲೀಸರ ಭರ್ಜರಿ ಬೇಟೆ*

https://youtube.com/shorts/vxEL9it-WBk?feature=shared

*BANK ROBBERY; 17 ಕೆಜಿ ಚಿನ್ನ ವಶ- ಪೊಲೀಸರ ಭರ್ಜರಿ ಬೇಟೆ* 

ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಮಾಹಿತಿ 🙏
ಭಾರತ, ಮಾರ್ಚ್ 31: ಪ್ರಕರಣವನ್ನ ಭೇದಿಸಿದ ಪೊಲೀಸರು ಆರೋಪಿಗಳಿಂದ 13 ಕೋಟಿ ಮೌಲ್ಯದ 17 ಕೆಜಿ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ.
ಬೇಕರಿ ಉದ್ಯಮಕ್ಕೆ ಅಗತ್ಯವಿದ್ದ ಸಾಲವನ್ನ ನೀಡಲು ನಿರಾಕರಿಸಿದ್ದರಿಂದ ಆರೋಪಿಗಳು ನ್ಯಾಮತಿ ಬ್ಯಾಂಕ್ನಲ್ಲಿ ದರೋಡೆ ಮಾಡಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಭಾರತದ ಇತಿಹಾಸದಲ್ಲಿಯೇ ಇಂತಹದೊಂದು ದೊಡ್ಡ ಕಳ್ಳತನ ಪ್ರಕರಣ ಭೇದಿಸಿದ ಖ್ಯಾತಿಗೆ ದಾವಣಗೆರೆ ಪೊಲೀಸರು ಪಾತ್ರರಾಗಿದ್ದಾರೆ.
#accused #arrested #police #nyamathi-#bankrobbery #case #bankebihari #bankholiday #bankloan #banking #bankrobber 


ಪೂರ್ವ ವಲಯದ ಐಜಿಪಿ ರವಿ ಕಾಂತೇಗೌಡ ಅವರು ಮಾತನಾಡಿದರು:-
ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಅ. 28 ರಂದು ಭಾರತೀಯ ಸ್ಟೇಟ್ ಬ್ಯಾಂಕ್ ದರೋಡೆ ಪ್ರಕರಣ ನಡೆದಿತ್ತು. ಆರೋಪಿಗಳ ಸೆರೆಗಾಗಿ ಪೊಲೀಸರು ಐದಾರು ತಂಡ ಕಟ್ಟಿಕೊಂಡು ಕಳ್ಳರ ಬಂಧನಕ್ಕೆ ಅಲೆದಾಡಿದ್ದರೂ ಪ್ರಯೋಜ‌ನ ಆಗಿರಲಿಲ್ಲ. ಇದೀಗ ಆರು ತಿಂಗಳ ಬಳಿಕ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ತಮಿಳುನಾಡಿನ ವಿಜಯ ಕುಮಾರ್(30), ಅಜಯ್ ಕುಮಾರ್(28), ಪರಮಾನಂದ (30), ಹೊನ್ನಾಳಿ ಹಾಗೂ ನ್ಯಾಮತಿಯ ಅಭಿಷೇಕ(23) ಚಂದ್ರು (23) ಮಂಜುನಾಥ್ (32) ಬಂಧಿತ ಆರೋಪಿಗಳು.

15 ಲಕ್ಷ ಸಾಲಕ್ಕೆ ಅರ್ಜಿ, ಸಾಲ ಕೊಡದ ಬ್ಯಾಂಕನ್ನೇ ದರೋಡೆ : ವಿಜಯಕುಮಾರ್‌ನು ನ್ಯಾಮತಿ ಪಟ್ಟಣದಲ್ಲಿ 25-30 ವರ್ಷಗಳಿಂದ ವಿಐಪಿ ಸ್ನ್ಯಾಕ್ಸ್ ಹೆಸರಿನ ಬೇಕರಿ ಮತ್ತು ಸ್ವೀಟ್ಸ್ ಅಂಗಡಿಯನ್ನು ಅವರ ತಂದೆಯೊಂದಿಗೆ ನಡೆಸಿಕೊಂಡು ಬಂದಿದ್ದರು. ಬೇಕರಿ ಉದ್ಯಮದಲ್ಲಿ ಹೆಚ್ಚು ಲಾಭಗಳನ್ನು ಗಳಿಸಲು ಸಾಧ್ಯವಾಗದ ಕಾರಣ ವ್ಯಾಪಾರ ಅಭಿವೃದ್ದಿಪಡಿಸಲು ಸುಮಾರು 15 ಲಕ್ಷ ರೂಪಾಯಿಗಳ ಸಾಲಕ್ಕಾಗಿ 2023, ಮಾರ್ಚ್ರಲ್ಲಿ ನ್ಯಾಮತಿಯ ಎಸ್‌ಬಿಐ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು.


ಕ್ರೆಡಿಟ್ ಸ್ಕೋರ್ ಸರಿಯಾಗಿ ಇಲ್ಲದಿದ್ದರಿಂದ ಬ್ಯಾಂಕ್ ಸಿಬ್ಬಂದಿ ಅವರ ಅರ್ಜಿ ತಿರಸ್ಕೃತಗೊಳಿಸಿದ್ದರು. ನಂತರ ಅವರು ತಮ್ಮ ಸಂಬಂಧಿಕರ ಹೆಸರಿನಲ್ಲಿ ಸಾಲಕ್ಕಾಗಿ ಮತ್ತೆ ಅದೇ ಎಸ್ಬಿಐ ನ್ಯಾಮತಿ ಬ್ರಾಂಚ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೂ ಸಹ ಸದರಿ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಇದರಿಂದಾಗಿ ದ್ವೇಷ ಬೆಳೆದು ಈ ದರೋಡೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೆಟ್ಫ್ಲಿಕ್ಸ್ನಲ್ಲಿ ವೆಬ್ ಸೀರಿಸ್ ನೋಡಿ ಕಳ್ಳತನ : ಆರೋಪಿಗಳು ಬ್ಯಾಂಕ್ ದರೋಡೆ ಮಾಡಲು ಯೂಟ್ಯೂಬ್‌ನಲ್ಲಿ ಹಾಗೂ ವಿವಿಧ ಓಟಿಟಿ ಆನ್ಲೈನ್ ಫ್ಲಾಟ್ಫಾರ್ಮ್ಗಳಲ್ಲಿ ಬ್ಯಾಂಕ್ ದರೋಡೆ, ಬ್ಯಾಂಕ್ ರಾಬರಿ ಹಾಗೂ ಬ್ಯಾಂಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಅನೇಕ ಸರಣಿ ವಿಡಿಯೋಗಳನ್ನು ಸುಮಾರು 6 ತಿಂಗಳು ಕಾಲ ನೋಡಿದ್ದರು. ತಾನು ಒಂದು ಬ್ಯಾಂಕ್ ಕಳ್ಳತನ ಮಾಡಲು ಬೇಕಾಗುವಂತಹ ಎಲ್ಲಾ ಮಾಹಿತಿಗಳನ್ನು ಹಾಗೂ ಕೌಶಲ್ಯಗಳನ್ನು ಪದೇ ಪದೆ ಆ ವಿಡಿಯೋಗಳನ್ನು ನೋಡಿ ಸಂಗ್ರಹಿಸಿ ಬ್ಯಾಂಕ್ ಕಳ್ಳತನ ಹೇಗೆ ಮಾಡಬಹುದೆಂಬ ಬಗ್ಗೆ ಕರಗತ ಮಾಡಿಕೊಂಡಿದ್ದಾಗಿ ಆರೋಪಿಗಳು ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ತಮಿಳುನಾಡಿನ ಮಧುರೈ ನಿರ್ಜನ ಪ್ರದೇಶದಲ್ಲಿನ ದಟ್ಟ ಅರಣ್ಯದ ಬಾವಿ 
ಕೃತ್ಯ ಎಸಗಲು ಆರು ತಿಂಗಳಿಂದ ಅಭ್ಯಾಸ : ಈ ಕೃತ್ಯ ಎಸಗಲು 06 ತಿಂಗಳಿಂದ ಆರೋಪಿಗಳು ಅಭ್ಯಾಸ ಮಾಡಿದ್ದರು.‌ ಅಲ್ಲದೆ ದರೋಡೆಗೆ ಬೇಕಾಗುವ ವಿವಿಧ ಸಲಕರಣೆಗಳನ್ನು ಶಿವಮೊಗ್ಗ ಹಾಗೂ ನ್ಯಾಮತಿ ಪಟ್ಟಣದಿಂದ ಖರೀದಿ ಮಾಡಿದ್ದರು. ದರೋಡೆ ಮಾಡುವ 03 ತಿಂಗಳ ಹಿಂದೆ ಆರು ಜನ ಆರೋಪಿಗಳು ಸೇರಿ ಸುರಹೊನ್ನೆ ಶಾಲೆಯ ಬಳಿ ಕೃತ್ಯಕ್ಕೆ ಸಂಬಂಧಿಸಿದ ರೂಪುರೇಷಗಳನ್ನು ತಯಾರು ಮಾಡಿದ್ದರು. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗಬೇಕು, ಐಷಾರಾಮಿ ಜೀವನ ನಡೆಸುವ ಹಣದ ಅವಶ್ಯಕತೆ ಬಹಳ ಇರುವುದರಿಂದ ತಾನೊಂದು ಪ್ಲಾನ್ ಮಾಡಿದ್ದು, ಅದರಂತೆ ಬ್ಯಾಂಕ್ ದರೋಡೆ ಮಾಡಿದರೆ ಬೇಗ ಶ್ರೀಮಂತರು ಆಗಬಹುದು ಎಂದು ಸಂಚು ರೂಪಿಸಿದ್ದರು. ಇನ್ನುಳಿದ ಮಂಕಿ ಕ್ಯಾಪ್, ಗ್ಲೌಸ್, ಬ್ಲ್ಯಾಕ್ ಶರ್ಟ್ ಮತ್ತು ಪ್ಯಾಂಟ್ಗಳನ್ನು ಮಾರ್ಕೆಟ್‌ನಿಂದ ಖರೀದಿ ಮಾಡಿದ್ದರು. 15 ದಿನಗಳ ಹಿಂದೆಯೇ ವಿಜಯ್ ಕುಮಾರ್, ಅಭಿಷೇಕ್ನೊಂದಿಗೆ ಬ್ಯಾಂಕ್ ಕಳ್ಳತನ ಮಾಡಲು ಅಭ್ಯಾಸಮಾಡಿದ್ದರು.

ಕದ್ದ ಚಿನ್ನವನ್ನು ಕಾರು, ಬಾವಿಯಲ್ಲಿ ಮುಚ್ಚಿಟ್ಟಿದ್ದ ಕಳ್ಳರು : ಆರೋಪಿಗಳು ಕಳ್ಳತನ ಮಾಡಿದ್ದ ಚಿನ್ನವನ್ನು ವಿಜಯಕುಮಾರ್ ತನ್ನ ಮನೆಯಲ್ಲಿದ್ದಂತಹ ಸಿಲ್ವರ್ ಕಲರ್ ಡಸ್ಟರ್ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದ. ಬಳಿಕ ಆರೋಪಿ ವಿಜಯ್ ಕುಮಾರ್ ಒಂದು ಸಣ್ಣ ಲಾಕರ್‌ಗೆ ಚಿನ್ನವನ್ನು ತುಂಬಿ ತಮಿಳುನಾಡಿನ ಮಧುರೈ ನಿರ್ಜನ ಪ್ರದೇಶದಲ್ಲಿನ ದಟ್ಟ ಅರಣ್ಯದ ಬಾವಿಯಲ್ಲಿ ಬಚ್ಚಿಟ್ಟಿದ್ದ.
#Refer #code #referralcode #gift #giftcode
#Prize #lottery #deals #offer #win 
#chethanaMuniswamy #gowda #yogi #riya
#cashbak #Reedom #points #award 
https://x.com/oneperfectthink/status/1906756230624002462?t=alICWg7XT6MzYT925XVpTg&s=19

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ