ಸುಧಾರಣೆ ಹಾದಿಯಲ್ಲಿ ಕಾರಾಗೃಹಗಳು-ಕೈದಿಗಳಿಗೆ ಕೌಶಲ್ಯಾಧಾರಿತ ಕೋರ್ಸುಗಳ ತರಬೇತಿ*
*ಸುಧಾರಣೆ ಹಾದಿಯಲ್ಲಿ ಕಾರಾಗೃಹಗಳು-ಕೈದಿಗಳಿಗೆ ಕೌಶಲ್ಯಾಧಾರಿತ ಕೋರ್ಸುಗಳ ತರಬೇತಿ*
ಕರ್ನಾಟಕ , ಮಾರ್ಚ್ 25: ಬೆಂಗಳೂರು-ಮೈಸೂರು ಹೆದ್ದಾರಿಯ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದ ಎರಡೂವರೆ ಎಕರೆ ವಿಸ್ತೀರ್ಣದಲ್ಲಿರುವ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯ ಜಿಲ್ಲಾ ಕಾರಾಗೃಹ ಸಾಕಷ್ಟು ಸುಧಾರಣೆಯಿಂದ ಗಮನ ಸೆಳೆಯುತ್ತಿದೆ. ವಿವಿಧ ರೀತಿಯ ಅಪರಾಧಗಳನ್ನು ಮಾಡಿ ಶಿಕ್ಷೆಗೆ ಒಳಗಾಗಿರುವ ಕಾರಾಗೃಹ ನಿವಾಸಿಗಳನ್ನು ಸುಧಾರಣೆ ಮಾಡಲು ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ರಾಕೇಶ್ ಕಾಂಬಳೆ ಹಲವಾರು ರೀತಿಯ ಉತ್ತಮ ಕ್ರಮಗಳನ್ನು ಕೈಗೊಂಡಿದ್ದಾರೆ.
#ಸುಧಾರಣೆ #ಹಾದಿ #ಕಾರಾಗೃಹ #ಕೈದಿ #ಕೌಶಲ್ಯಾಧಾರಿತ #ಕೋರ್ಸುಗಳ #ತರಬೇತಿ
ಬಂಧಿಖಾನೆ ನಿವಾಸಿಗಳನ್ನು ಸುಧಾರಣೆ ತರುವ ಹಂತವಾಗಿ ಜಿಲ್ಲಾ ಕಾರಗೃಹದಲ್ಲಿ ವಿವಿಧ ರೀತಿಯ ಸಕಾರಾತ್ಮಕ ಚಟುವಟಿಕೆಗಳು ಹಾಗೂ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಆಸಕ್ತ ಬಂಧಿಖಾನೆ ನಿವಾಸಿಗಳಿಗೆ ಕೌಶಲ್ಯಾಧಾರಿತ ಕೋರ್ಸುಗಳ ತರಬೇತಿ ನೀಡಲಾಗಿದೆ ಹಾಗೂ ನೀಡಲಾಗುತ್ತಿದೆ.
ಮುಖ್ಯವಾಗಿ ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂಧಿಖಾನೆ ನಿವಾಸಿಗಳಲ್ಲಿ ಅಕ್ಷರ ಜ್ಞಾನವನ್ನು ಬಿತ್ತಲಾಗುತ್ತಿದೆ, ಮೇಣದಬತ್ತಿ, ಅಗರಬತ್ತಿ ತಯಾರಿಕೆಯಂತಹ ಕೆಲಸಗಳು, ಪ್ಲಂಬಿAಗ್ ಕೆಲಸದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಕಾರಾಗೃಹದಲ್ಲಿ ಕೆಲಸ ಮಾಡಲು ಆಸಕ್ತರಿರುವ ಬಂಧಿ ನಿವಾಸಿಗಳಿಗೆ ಕೆಲಸವನ್ನು ಸಹ ನೀಡಲಾಗುತ್ತಿದೆ. ಇಲ್ಲಿ ಬಾಣಸಿಗರ ಕೆಲಸ ಹಾಗೂ ಸ್ವಚ್ಛತಾ ಕೆಲಸ ಮಾಡಲು ಬಯಸುವವರಿಗೆ ಅವಕಾಶ ಉಂಟು. ಈ ಕೆಲಸದಲ್ಲಿ ಆಸಕ್ತಿ ತೋರುವ ಬಂಧಿ ನಿವಾಸಿಗಳ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿದ ಬಳಿಕ ವೈದ್ಯರು ಇವರು ಕೆಲಸ ಮಾಡಲು ಸಮರ್ಥರು ಎಂದು ದಾಖಲಾತಿ ನೀಡಿದಾಗ ಮಾತ್ರ ಅವರಿಗೆ ಬಾಣಸಿಗರ ಹಾಗೂ ಸ್ವಚ್ಛತಾ ಸೇವೆಗಳ ಕೆಲಸಗಳನ್ನು ನೀಡಲಾಗುವುದು. ಈ ರೀತಿ ಕೆಲಸಕ್ಕೆ ಸೇರಿದವರಿಗೆ ಪ್ರತಿ ದಿನಕ್ಕೆ 524 ರೂ.ಗಳ ದಿನಗೂಲಿ ನೀಡಲಾಗುತ್ತದೆ.
ಅಷ್ಟು ಮಾತ್ರವಲ್ಲದೇ ಕಾರಾಗೃಹದಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಅಲ್ಲಿ ವಿವಿಧ ದಿನಪತ್ರಿಕೆಗಳು ಹಾಗೂ ಆನ್ಲೈನ್ ಮೂಲಕ ಸುದ್ದಿವಾಹಿನಿ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಒಳಾಂಗಣ ಆಟಗಳಾದ ಕೇರಂ ಹಾಗೂ ಚೆಸ್ಗಳನ್ನು ಆಡಬಹುದಾಗಿದೆ.
ಜಿಲ್ಲಾ ಬಂಧಿಖಾನೆಯಲ್ಲಿ 318 ಬಂದಿ ನಿವಾಸಿಗಳಿದ್ದಾರೆ. ಯಾವುದೇ ದೊಂಬಿ, ಜಗಳ, ಗಲಾಟೆ ನಡೆದಿಲ್ಲ. ಕಳೆದ ಮೂರು ವರ್ಷಗಳಲ್ಲಿ ಯಾವುದೇ ಎಫ್.ಐ.ಆರ್. ದಾಖಲಾಗಿಲ್ಲ.
ಬಂಧಿಖಾನೆ ನಿವಾಸಿಗಳ ಸುಧಾರಣೆಗೆ ಅವರ ಮನ ಪರಿವರ್ತನೆ ಮಾಡಿ ಅವರ ಕುಟುಂಬ ಹಾಗೂ ಸಮಾಜದಲ್ಲಿ ಮತ್ತೆ ಉತ್ತಮವಾದ ಜೀವನ ನಡೆಸಲು ಅವಕಾಶ ಮಾಡಿಕೊಡಲು ಜಿಲ್ಲಾ ಕಾರಾಗೃಹದ ಒಳ ಆವರಣವನ್ನು ಕಲಿಕಾ ಶಾಲೆಯಲ್ಲಿರುವ ವಾತಾವರಣದಂತೆ ನಿರ್ಮಿಸಿ ಪ್ರತಿ ಮುಂಜಾನೆ ಪ್ರಾರ್ಥನೆ, ಯೋಗ ಮಾಡಲು ಅವಕಾಶ ನೀಡಲಾಗಿದೆ. ಪ್ರತಿ ದಿನವು ನಾಡಗೀತೆ ಹಾಗೂ ರಾಷ್ಟç ಗೀತೆಯನ್ನು ಬಂದಿ ನಿವಾಸಿಗಳು ಹಾಡುತ್ತಾರೆ. ಬಂದಿ ನಿವಾಸಿಗಳ ಅರಿವಿಗಾಗಿ ಕೆಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆಯೇ ಅವರ ಮನರಂಜನೆಗಾಗಿಯೂ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅವರ ಆರೋಗ್ಯ ಏರುಪೇರು ಅಥವಾ ಗಂಭೀರ ಸ್ಥಿತಿ ಉಂಟಾದರೆ ಕೂಡಲೇ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ವೈದ್ಯರೆ ಬಂದಿಖಾನೆಗೆ ಬಂದು ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡುತ್ತಾರೆ. ಮನೋವ್ಯಾಕುಲಕ್ಕೆ ಸಂಬಂಧಿಸಿದಂತೆ ಪ್ರತಿ ಶನಿವಾರ ಮನೋವೈಧ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಪದ್ಮರೇಖಾ ಅವರು ಬಂಧಿ ನಿವಾಸಿಗೆ ಕೌನ್ಸಿಲಿಂಗ್ ಮಾಡುತ್ತಾರೆ.
ಮುಂಬರುವ ದಿನಗಳಲ್ಲಿ ಕಾರಾಗೃಹದೊಳಗೆ ಸಣ್ಣ ಪಾರ್ಕ್ ಅನ್ನು ನಿರ್ಮಿಸುವ ಆಲೋಚನೆ ಇದೆ. ಬಂಧಿ ನಿವಾಸಿಗಳಲ್ಲಿ ಇಲ್ಲಿನ ವಾತಾವರಣ ಹಾಗೂ ವಿವಿಧ ಚಟುವಟಿಕೆಗಳನ್ನು ನೋಡಿ ತಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಂಡಿದ್ದಾರೆ. ಕೆಲವರು ಸುಧಾರಣೆ ಆಗಿಲ್ಲ, ಹಾಗೆಂದ ಮಾತ್ರಕ್ಕೆ ಎಲ್ಲರೂ ಕೆಟ್ಟವರಲ್ಲ. ಬಂಧಿ ನಿವಾಸಿಗಳಲ್ಲಿ ಯಾವಾಗಲೂ ಒಂದೇ ಪ್ರೀತಿ ಇರುವುದಿಲ್ಲ. ಕೆಲವೊಮ್ಮೆ ಅವರನ್ನು ಕಂಟ್ರೋಲ್ ಮಾಡಲು ಬಾಯಿ ಮಾತಿನಲ್ಲಿ ಸಾಧ್ಯ. ಅವರ ವರ್ತನೆ ಮಿತಿಮೀರಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.
ಅಪರಾಧ ಮಾಡದೆ, ಸಿಟ್ಟಿನ ಕೈಗೆ ಬುದ್ಧಿ ಕೊಡದೆ, ಪ್ರೀತಿ, ತಾಳ್ಮೆ ಮತ್ತು ವಾತ್ಸಲ್ಯದಿಂದ ಇದ್ದರೆ ಯಾವುದೇ ಅಪರಾಧಗಳು ಜರುಗುವುದಿಲ್ಲ ಎಂಬ ಸಲಹೆಯನ್ನು ನೀಡಿ ಜೊತೆಗೆ ಬಂದಿ ನಿವಾಸಿಗಳನ್ನು ಸುಧಾರಣೆ ಮಾಡಿ ಹೊರಗೆ ಕಳುಹಿಸುವುದು ಇಲಾಖೆಯ ಜವಾಬ್ದಾರಿ ಎನ್ನುತ್ತಾರೆ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ. ಅವರ ಈ ಕಾರ್ಯದಲ್ಲಿ ಸಹಾಯಕ ಜೈಲರ್ಗಳಾದ ಬಾಬು, ಪ್ರವೀಣ್ ಕುಮಾರ್, ವಿವೇಕಾನಂದ ಗೌಡ ಹಾಗೂ ಕಾರಾಗೃಹ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಕಾರವನ್ನು ಅವರು ಸ್ಮರಿಸುತ್ತಾರೆ.
#nature #amazon #green #forest #falls #river #sea #moon #earth #goodmorning #goodnight #light #Trip #ಚೇತನಾ #ಸ್ವಾಮಿ #ಗೌಡ #flower #leaf #tribal #Lake #hill #sunset #yogi #riya #air #water #ಮೋಡ
#link https://www.hipi.co.in/@informationforpeople
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏