ಸೇನೆ ಬೆಂಬಲಿಸಿ, ಕರ್ನಾಟಕದ ತುಮಕೂರು ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ- 🇮🇳
ಸೇನೆ ಬೆಂಬಲಿಸಿ, ಕರ್ನಾಟಕದ ತುಮಕೂರು ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ- 🇮🇳
ಭಾರತೀಯರು ಭಾರತ ದೇಶಕ್ಕಾಗಿ ಹೋರಾಡಲು ಯಾವಾಗಲೂ ಸಿದ್ಧರಿದ್ದಾರೆ ಮತ್ತು ವಿಶ್ವದ ನಾಯಕ ನರೇಂದ್ರ ಮೋದಿಜಿ ಅವರೊಂದಿಗೆ ನಿಲ್ಲುತ್ತಾರೆ.
#ತ್ರಿವರ್ಣ ಯಾತ್ರೆ #ಗುಜರಾತ್ #ಸೂರತ್ #🇮🇳
#BohraMuslims #tookout #ತ್ರಿವರ್ಣ #ಮೆರವಣಿಗೆ #Bohra #ಮುಸ್ಲಿಮರು #ಯಾವಾಗಲೂ #ಸಜ್ಜು #ದೇಶದ ಕಾದಾಟ
#ಅವರ ಜೊತೆ ನಿಂತಿದೆ #ವಿವರಣೆ #ಭಾರತ #ಭಾರತ್ #ಭಾರತೀಯ #ತಿರಂಗಯಾತ್ರೆ
#tiranga #modi #narendramodi #gujarat #breakingnews #viralvideo #viralshorts #motivation #muslimah #muslimfashion #MuslimUmmah #MuslimYouth #masjidnabawi #MasjidAlAqsa #TirangaYatra #tirangareels #TirangaRally
#ತಾಜಾಸುದ್ದಿಗಳು #ಸುವರ್ಣನ್ಯೂಸ್ #ಕನ್ನಡಸುದ್ದಿ #24x7 #ಕನ್ನಡಲೈವ್ನ್ಯೂಸ್ #ಏಷ್ಯಾನೆಟ್ #ನ್ಯೂಸ್ಲೈವ್
ಕಾಶ್ಮೀರದ ಪಹಲ್ಗಾಮ್ನಲ್ಲಿ ಧರ್ಮ ಕೇಳಿ ಪ್ರವಾಸಿಗರನ್ನು ಹತ್ಯೆ ಮಾಡಿದ ಪಾಕಿಸ್ತಾನಿ ಪ್ರಾಯೋಜಿತ ಉಗ್ರರಿಗೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಲಾಗಿದೆ.
ಈ ಪರಿಸ್ಥಿತಿಯಲ್ಲಿ ದೇಶದ ಐಕ್ಯತೆಗಾಗಿ ರಾಷ್ಟ್ರಭಕ್ತಿ ಅನಾವರಣಗೊಳಿಸುವ ತಿರಂಗ ಯಾತ್ರೆಯನ್ನು ಮೇ 18ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವಿಧ ಸಮಾಜ, ಸಂಘ ಸಂಸ್ಥೆಗಳ ಮುಖಂಡರು ತಿಳಿಸಿದರು.
ಪಹಲ್ಗಾಮ್ ಹತ್ಯೆ ವಿರುದ್ಧ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವಾರು ರಾಜತಾಂತ್ರಿಕ ನಿರ್ಧಾರಗಳನ್ನು ಕೈಗೊಂಡು ಉಗ್ರರ ಹುಟ್ಟಡಗಿಸುವ ಕ್ರಮ ಕೈಗೊಂಡಿದೆ. ಪಾಕಿಸ್ತಾನದಲ್ಲಿರುವ 9 ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ 100 ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದಿದೆ ಎಂದರು. ಈ ಸಂದರ್ಭದಲ್ಲಿ ನಮ್ಮ ಸೈನಿಕರಿಗೆ ನೈತಿಕ ಬೆಂಬಲ ನೀಡಲು, ಭಾರತೀಯರೆಲ್ಲಾ ಒಂದಾಗಿ ದೇಶಭಕ್ತಿ ಪ್ರದರ್ಶಿಸುವ ಭಾವನಾತ್ಮಕ ಕಾರ್ಯಕ್ರಮವಾಗಿ ಮೇ 18 ರಂದು ನಗರದಲ್ಲಿ ಸಾವಿರಾರು ಜನರನ್ನೊಳಗೊಂಡ ಬೃಹತ್ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಎಸ್ಐಟಿ ಕಾಲೇಜು ಮುಂಭಾಗದಿಂದ ಗಂಗೋತ್ರಿ ರಸ್ತೆ, ಎಸ್.ಎಸ್.ಪುರಂ ಮುಖ್ಯ ರಸ್ತೆ ಮೂಲಕ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದವರೆಗೆ ತಿರಂಗ ಯಾತ್ರೆ ನಡೆಯಲಿದೆ ಎಂದರು.ವಿವಿಧ ಮಠಾಧೀಶರು, ಚರ್ಚ್ ಪಾದ್ರಿಗಳು, ಮಸೀದಿ ಮೌಲ್ವಿಗಳು, ಶಾಸಕರು, ಸಂಸದರು ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಅಲ್ಲದೆ, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಜಿಲ್ಲಾ ವೈದ್ಯರ ಸಂಘ, ಜಿಲ್ಲಾ ವಕೀಲರ ಸಂಘ, ದಲಿತ ಸಂಘಟನೆಗಳು, ಆಟೋಚಾಲಕರ ಸಂಘ, ಸಹಕಾರಿ ಬ್ಯಾಂಕುಗಳು, ನಿವೃತ್ತ ಸೈನಿಕರ ಸಂಘ, ದಕ್ಷಿಣಕನ್ನಡ ಮಿತ್ರಬಳಗ ಸೇರಿದಂತೆ ಹಲವಾರು ಸಂಘಟನೆಗಳು, ನಾಗರೀಕ ಮುಖಂಡರು ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ದೇಶ ಭಕ್ತಿ ಪ್ರದರ್ಶಿಸುವರು .
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏