_ ಮುನಿಜನರ ನೆನಿಸಿ ಜನರೂ _ ,_19ನೇ ಕಕ್ಷದಲ್ಲಿಯ ಮುನಿಗಳ_ _ಪ್ರಮೇಯ ತಾರತಮ್ಯ ಪದ__ಶ್ರೀ ವಿಜಯದಾಸರ ರಚನೆ , ಉದಯರಾಗ

_ ಮುನಿಜನರ ನೆನಿಸಿ ಜನರೂ _ ,_19ನೇ ಕಕ್ಷದಲ್ಲಿಯ ಮುನಿಗಳ_ _ಪ್ರಮೇಯ ತಾರತಮ್ಯ ಪದ__ಶ್ರೀ ವಿಜಯದಾಸರ ರಚನೆ , ಉದಯರಾಗ

_#ಮುನಿಜನರ #ನೆನಿಸಿ #ಜನರೂ _ ,_#19ನೇ #ಕಕ್ಷದಲ್ಲಿಯ #ಮುನಿಗಳ_ _#ಪ್ರಮೇಯ #ತಾರತಮ್ಯ #ಪದ__#ಶ್ರೀವಿಜಯದಾಸರ #ರಚನೆ , #ಉದಯರಾಗ

*ಈ ಮಂತ್ರ ಪಠಿಸಲು ,ಸುತ್ತಲೂ ಖಡ್ಗ ಹಿಡಿದು ರಕ್ಷಕರು ಬಂದರು*

ನಿತ್ಯದಲ್ಲಿ ಯಾವುದೇ ಸಂಕಷ್ಟಗಳು ಬಂದಾಗ, ದುಃಖ ಉಂಟಾದಾಗ, ದುಃಸ್ವಪ್ನಗಳು ಆಗುತ್ತಿರುವಾಗ ಶ್ರೀವಿಜಯದಾಸರ ಸುಳಾದಿಗಳನ್ನು  ಪಠಿಸುತ್ತಾ ಇದ್ದರೆ, ಎಲ್ಲ ತಾಪಗಳು ಶೀಘ್ರದಲ್ಲಿ ಪರಿಹಾರವಾಗುತ್ತವೆ,  ಈ ಕೆಳಕಂಡ ಮಂತ್ರ/ಪ್ರಾರ್ಥನೆ ವಿಶೇಷ ಫಲಕಾರಿ.


ಹಿಂದೆ  ಹಲವಾರು ಮಂದಿ ಮನೆಯ ಮುಂದೆ ಈ ಆಪತ್ತು ಸ್ತೋತ್ರವನ್ನು ಫಲಕ (boad) ಹಾಕುತ್ತಿದ್ದರು. 

ಒಂದು ಕೈಯಲಿ ಖಡ್ಗ l
ಒಂದು ಕೈಯಲಿ ಹಲಿಗೆ l
ಅಂದವಾಗಿ ಪಿಡಿದು l ದಿವಾ ರಾತ್ರಿಯಲಿ ಬಂದು ಬದಿಯಲಿ ನಿತ್ಯ ಬಾರಾಸನನಾಗಿ l ಹಿಂದು ಮುಂದುಪದ್ರವಾಗದಂತೆ l
ಇಂದಿರೇರಮಣ ಕಾಯುತ್ತಲಿರೆ l
ಎನಗಾವ ಬಂಧಕಗಳಿಲ್ಲ l ಧನ್ಯ ಧನ್ಯ ಕಂದರ್ಪನಯ್ಯ l ಸಿರಿವಿಜಯ ವಿಠಲರೇಯ ಎಂದೆಂದಿಗಾಪತ್ತು ಬರಲೀಯನೋ ||

ಉಡುಪಿಗೆ ಹೋಗುವ ಹಾದಿಯಲ್ಲಿ ಮಂಡಗಡ್ಡಿ ಭೀಮನೆಂಬ ಕಳ್ಳನು ಬಹಳ ವರ್ಷಗಳಿಂದ ಸಾವಿರಾರು ಜನರನ್ನು ಸುಲಿಗೆ ಮಾಡಿ ಉಪದ್ರವ ಕೊಡುತ್ತಿದ್ದನು.

ಶ್ರೀ ಕೃಷ್ಣನ ದರ್ಶನಕ್ಕೆ  ಶ್ರೀ ಗೋಪಾಲ ದಾಸರು ಉಡುಪಿಗೆ ಹೊರಟಿದ್ದನ್ನು ತಿಳಿದ ಶ್ರೀ ವಿಜಯದಾಸರು ದೇವರನ್ನು ಪ್ರಾರ್ಥಿಸಿ ಈ ಕೃತಿಯನ್ನು ರಚಿಸಿದರು.

 ಗೋಪಾಲದಾಸರಿಗೆ ಹಾದಿಯಲ್ಲಿ ಮಂಡಗಡ್ಡೆ ಗ್ರಾಮದ ಬಳಿ ಆ ಭೀಮನು ಬಂದು ದಾಸರನ್ನು ದೋಚಲು ಬಂದಾಗ ಅವರ ಸುತ್ತಲೂ ಖಡ್ಗ ಹಿಡಿದು ರಕ್ಷಕರು ಇದ್ದುದನ್ನು ನೋಡಿ ಹೆದರಿ ಒಡಿದನು.

 ಇನ್ನೂ ಮುಂದೆ ಹೋಗಿ ಆ ಭೀಮನು ದಾಸರನ್ನು ಸುಲಿಯಲು ಮುಂದೊಂದು ದೇವಸ್ಥಾನದ ಬಳಿ ತನ್ನ ಗುಂಪಿನ ಜನರೊಂದಿಗೆ ಮತ್ತೆ ಬಂದನು. ಆಗಲೂ ಗೋಪಾಲದಾಸರ ಬಳಿ ಖಡ್ಗ ಹಿಡಿದು ರಕ್ಷಕರು ಇದ್ದರು.

 ಆಗ ಮುಂದೆ ಹೋಗಿ ಏನೊ ಬಹಳ ಅಮೂಲ್ಯ ವಾದ ವಸ್ತುಗಳೇ ಇರಬೇಕು ಅಂದುಕೊಂಡು, ಇಷ್ಟು ಶಕ್ತಿಶಾಲಿ, ಪ್ರಖರ ಸೈನಿಕರು ಇದ್ದಾರೆ ಎಂದು ಮೊದಲಾಗಿ ಭಾವಿಸಿದ ಕಳ್ಳನು,ಮತ್ತೊಮ್ಮೆ ಬಂದಾಗಲೂ ಖಡ್ಗಧಾರಿಗಳು ಗೋಪಾಲ ದಾಸರ ಬಳಿ ಇದ್ದರು. 

ಇವರ ಮಹಿಮೆ ಕಂಡು  ಮಂಡಗಡ್ಡೆ ಭೀಮನು ಶರಣಾಗಿ ಉದ್ಧರಿಸಿರೆಂದು ಕೋರಿದ. ಇದಕ್ಕೆ ಕಾರಣ ವಿಜಯದಾಸರು ಮುಂದಾಲೋಚನೆ ಮಾಡಿ ರಚಿಸಿದ್ದ ಕೃತಿ - ಒಂದು ಕೈಯಲ್ಲಿ ಖಡ್ಗ" ವನ್ನು ಗೋಪಾಲ ದಾಸರು ಹೇಳಿಕೊಳ್ಳುತ್ತಿದ್ದರು.

ಶ್ರೀಹರಿಯೇ ಗೋಪಾಲ ದಾಸರನ್ನು ರಕ್ಷಿಸುತ್ತಿದ್ದರು. ನಮಗೆ ದೋಚುವವರು, ಅನ್ಯಾಯ ಮಾಡುವವರು, ಸುಲಿಗೆ ಮಾಡುವವರು, ಮತ್ಸರಿಸುವವರು ಹೆಜ್ಜೆ ಹೆಜ್ಜೆಗೆ ಇದ್ದಾರೆ. ಇವರೆಲ್ಲರಿಂದ ರಕ್ಷಿಸುವಂತಹ ಈ ಸ್ತೋತ್ರವನ್ನು  ಪಠಿಸುವ ಪ್ರಯತ್ನ ಮಾಡೋಣ.



*ವೀರ:* ಅಂದರೆ ವಿಶಿಷ್ಟ ವಾದ ಇಚ್ಛಾ ಶಕ್ತಿ ಉಳ್ಳವರು ಅಂತ ಅರ್ಥ. 
*ವಿ* ಅಂದ್ರೆ ವಿಶಿಷ್ಟ,
*ಈರ*:ಅಂದ್ರೆ ಇಚ್ಚಾ ಶಕ್ತಿ, ಅಥವಾ ಪ್ರೇರಣೆ ಅಂತ ಅರ್ಥ.

ಎಷ್ಟೇ ಕಷ್ಟ ಬಂದರೂ ಏನೇ ವಿಘ್ನಗಳು ಬಂದರೂ ಸತ್ಯವಾದ ಮಾರ್ಗದಲ್ಲಿ ಧರ್ಮದ ಮಾರ್ಗದಲ್ಲಿ ,ತಮ್ಮ ಈ ಭೂ ಲೋಕದ ಪ್ರಯಾಣವನ್ನು ಮಾಡಿ ಜೀವ ಯಾವತ್ತೂ *ದಾಸನೇ* ,ಪರಮಾತ್ಮ ಯಾವತ್ತೂ *ಈಶನೇ* ಅನ್ನುವ ಸತ್ಯವಾದ ದ್ವೈತ ಸಿದ್ಧಾಂತದ ತಮ್ಮ ಅತ್ಯದ್ಭುತ ಕೃತಿಗಳ ಮೂಲಕ , ದಾಸ ಸಾಹಿತ್ಯದ ಮೂಲಕ *ವಿಜಯ* ಪತಾಕಿಯನ್ನು ಹಾರಿಸಿದವರು ಇಂದಿನ ಆರಾಧ್ಯದ್ವಯರಾದ , ದಾಸವರೇಣ್ಯರಾದ ,
ಮಹಾ ಮಹಿಮರಾದ 
*ಶ್ರೀ ವಿಜಯದಾಸರು* 


. ಶ್ರೀ ವಿಜಯದಾಸರೇ ಹೇಳಿದಂತೆ 
*ಶ್ರವಣವೇ ಮೊದಲಾದ ನವವಿಧ ಭಗವದ್ಭಕ್ತಿಯನ್ನು * *ಪ್ರೇರಿಸುವ* ಸಾಹಿತ್ಯವನ್ನು ದಯಪಾಲಿಸಿ, ಸಂಸಾರದ ಮೇಲಿನ ವಿಜಯ ಮಾರ್ಗದತ್ತ ಕರೆದೊಯ್ಯುತ್ತಾರೆ ಆದ್ದರಿಂದಲೂ ಶ್ರೀ ವಿಜಯದಾಸರು ಅಂತ ಸಾರ್ಥಕ ಹೆಸರು.

 ಎಲ್ಲ ವಿಘ್ನಗಳ ಮೇಲೆ *ವಿಶೇಷ ವಾದ ಜಯ* ಪಡೆಯಲಿಕ್ಕೆ ಶ್ರೀ ವಿಜಯ ದಾಸರು , ಶ್ರೀ ಸತ್ಯವೀರ ತೀರ್ಥರು ಅನುಗ್ರಹಿಸಿ ನಮ್ಮನ್ನು ಸನ್ಮಾರ್ಗದಲ್ಲಿ ತರಲಿ, ಆ ಮಾರ್ಗದಲ್ಲಿ ಬರೋ ಅನಾರೋಗ್ಯಾದಿ ಸಕಲ ವಿಘ್ನಗಳನ್ನು ನಿವಾರಣೆ ಮಾಡಿ, ಸನ್ಮಾರ್ಗದಲ್ಲಿ 
ತಂದು ಇರಿಸಲಿ

*ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ*

ಜೈ ವಿಜಯರಾಯ. 

*ಸಂತಾಪಾನ್ ಹರತು ಶ್ರೀಮಾನ್ ಸತ್ಯವೀರೇಂದುರಂಜಸಾ*

ಶ್ರೀ ಸತ್ಯವೀರ ಗುರುರಾಜೋ ವಿಜಯತೇ...

*ಜೈ ವಿಜಯರಾಯ* 
*ಜೈ ವಿಜಯರಾಯ* 
*ಜೈ ವಿಜಯರಾಯ* 

#Refer #code #referralcode #gift #giftcode
#Prize #lottery #deals #offer #win 
#chethanaMuniswamy #gowda #yogi #riya
#cashbak #Reedom #points #award 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ