. ಸುಳಾದಿ_: _ಪರಿಪೂರ್ಣ ಕಾಮ ವಿಸ್ತರ ಮಹಿಮ ಪರಂಧಾಮ_,_ _ಹರಿನಾಮ ,_ಶ್ರೀವಿಜಯದಾಸರ ರಚನೆ,_ರಾಗ ಕಾಂಬೋಧಿ
ಪರಿಪೂರ್ಣ ಕಾಮ ವಿಸ್ತರ ಮಹಿಮ ಪರಂಧಾಮ_,_ _ಹರಿನಾಮ ,_ಶ್ರೀವಿಜಯದಾಸರ ರಚನೆ,
ರಚನೆ,_ರಾಗ ಕಾಂಬೋಧಿ
#ರಾಗ ಕಾಂಬೋಧಿ#
ಶ್ರೀ #ವಿಜಯದಾಸರ #ಸುಳಾದಿ: #ಸತ್ಸಭೆಗೆ #ನೇಮಿಸುವೆ #ಮಾಸ #ನಿಯಾಮಕ #ತ್ರಿವಿಕ್ರಮಾಯ #ನಮಃ #ರಾಗ #ತಾಳ #ಕಾಮ #ವಿಸ್ತರ #ಮಹಿಮ
ಮೈದುನ ಎಂಬ ಶಬ್ದಪ್ರಯೋಗದ ಅರ್ಥ ನಿಮಗೆ ತಿಳಿದಿದೆಯೇ ಮೇ?
ಶ್ರೀವಿಜಯದಾಸಾರ್ಯರು "ಮೈದುನಗೊಲಿದ ಶ್ರೀವಿಜಯ ವಿಠ್ಠಲ" ಎಂಬುದಾಗಿ ಎನ್ನುತ್ತಾರೆ .
ಶ್ರೀವಿಜಯದಾಸಾರ್ಯರು ಅಪರೋಕ್ಷಜ್ಞಾನಿಗಳು , ಅಂತಹ ಮಹಾನುಭಾವರು ತಮ್ಮ ಕೃತಿಗಳಲ್ಲಿ ಶಬ್ದಪ್ರಯೋಗದ ಒಳನೋಟದ ಅರ್ಥಗಳು ಸಮಸ್ತ ಶಾಸ್ತ್ರಗಳ ಸಾರವನ್ನೇ ತಮ್ಮ ಒಡಲಲ್ಲಿ ತುಂಬಿಕೊಂಡಿರುತ್ತವೆ.
ಶ್ರೀವಿಜಯದಾಸಾರ್ಯರ ಶಬ್ದಪ್ರಯೋಗದ ಉದ್ದೇಶ :-
ಮೈದುನ ಈ ಶಬ್ದವನ್ನು ವಿಂಗಡಿಸಿದಾಗ
ಮ+ಐ+ದ+ಉ+ನ= ಮೈದುನ ಅಂತ ಆಗ್ತದ .
',ಮ' ಎಂದರೆ ಸಮಯ ,ಕಾಲ ಎನ್ನುವ ಅರ್ಥಗಳಿವೆ .
'ಐ' ಎಂದರೆ ಸಂಬೋಧನೆ ,
'ದ' ಎಂದರೆ ಕೊಡುವವ ,
ಉ' ಎಂದರೆ ಅಂಗೀಕಾರ ,
'ನ' ಎಂದರೆ ಜ್ಞಾನ ಅಂತ ಅಂತ ಏಕಾಕ್ಷರ ಕೋಶದಲ್ಲಿ ಅರ್ಥಗಳಿರುವದರಿಂದ , ಈ ಜೀವಿಯು ಯಾವುದೇ ಸಮಯದಲ್ಲಾಗಲೀ , ಭಕ್ತಿಯಿಂದ ಅನನ್ಯಶರಣಾಗತಿಯಿಂದ ಭಗವಂತನನ್ನು ಸಂಬೋಧಿಸುತ್ತಾನೋ, ಆ ಪರಮಾತ್ಮನನ್ನೇ ಪರದೈವೆಂದು ಅಂಗೀಕರಿಸುವ ಭಕ್ತರೇ ಮೈದುನ ಎನಿಸಿಕೊಳ್ಳುವರು ಇಂತಹ ಮೈದುನನಿಗೆ
ಇಲ್ಲಿ ಸಹ ಶ್ರೀವಿಜಯದಾಸಾರ್ಯರು ಭಾಗವತಾಮೃತವನ್ನೇ ತುಂಬಿದ್ದಾರೆ .
ಇಲ್ಲಿ ಮೈದುನ ಎಂಬ ಶಬ್ದಪ್ರಯೋಗವು ಮೇಲ್ನೋಟಕ್ಕೆ ಅರ್ಜುನ ಹಾಗೂ ಭೃಗು ಮಹರ್ಷಿಗಳ ಮೇಲೆ ಪರಮಾತ್ಮನು ಮಾಡಿದ ಪರಮಾನುಗ್ರಹವನ್ನು ಹೇಳುತ್ತಿದೆ ,
- *ಭಿದ್ಯತೇ ಹೃದಯಗ್ರಂಥಿಶ್ಛಿದ್ಯಂತೇ ಸರ್ವಸಂಶಯಾಃ |ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟ ಏವಾತ್ಮನೀಶ್ವರೇ ||* -
ಅಂತರ್ಯಾಮಿಯಾದ ತನ್ನ ಬಿಂಬರೂಪನಾದ ಸರ್ವೇಶ್ವರನಾದ ಶ್ರೀಹರಿಯು ಹೃತ್ಕಮಲಕರ್ಣಿಕಾ ಮಧ್ಯದಲ್ಲಿ ಕಾಣಿಸಿದ ತತ್ಕ್ಷಣದಲ್ಲಿಯೇ ಜಡಮನಸ್ಸಿನಿಂದ ಕೂಡಿದ ಲಿಂಗದೇಹವು ಸುಟ್ಟ ಕಟ್ಟಿಗೆಯಂತೆ ಆಗುವದು , ಪರಾಪರತತ್ತ್ವ ವಿಷಯಕ ಸಂಶಯಗಳೂ ದೂರವಾಗುವವು , ಹಿಂದಿನ ಪ್ರಾರಬ್ಧವಲ್ಲದ ಅನಭೀಷ್ಟವಾದ ಕರ್ಮಗಳ ಫಲಗಳು ನಾಶವಾಗುವವು ,
ಈ ರೀತಿಯ ಫಲಗಳನ್ನು ಸ್ವತಃ ಶ್ರೀವಿಜಯದಾಸಾರ್ಯರೇ ಅನುಭವಿಸಿದ್ದಾರೆ , ಅಂದರೆ ಶ್ರೀವಿಜಯದಾಸಾರ್ಯರಿಗೆ ಪರಮಾತ್ಮನು ಈ ರೀತಿಯಾಗಿ ಒಲಿದಿದ್ದಾನೆ , ತಮ್ಮ ಸ್ವಾನುಭವವನ್ನೇ ಶ್ರೀವಿಜಯದಾಸಾರ್ಯರು *ಮೈದುನಗೊಲಿದ ಶ್ರೀವಿಜಯವಿಠ್ಠಲ* ಎಂಬ ಶಬ್ದಪ್ರಯೋಗದಲ್ಲಿ ತುಂಬಿದ್ದಾರೆ .
ಪರಮಾತ್ಮನು ಸಂಪ್ರೀತನಾಗಿ ಒಲಿಯುತ್ತಾನೆ .ಎನ್ನುವ ತಥ್ಯವನ್ನು ಶ್ರೀವಿಜಯದಾಸಾರ್ಯರು ಈ ಮೈದುನ ಎಂಬ ಶಬ್ದಪ್ರಯೋಗದ ಮೂಲಕ ತಿಳಿಸುತ್ತಾರೆ.
ಇದನ್ನೇ ಶ್ರೀಮದ್ಭಾಗವತಕಾರರು , *ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿರಧೋಕ್ಷಜೇ|ಅಹೈತುಕ್ಯವ್ಯವಹಿತಾ ಯಯಾತ್ಮಾssಶು ಪ್ರಸೀದತಿ||*
ವಿಷಯಾಸಕ್ತಿ ಮೊದಲಾದ ವ್ಯವಧಾನವಿಲ್ಲದ ಯಾವ ಭಕ್ತಿಯಿಂದ ಪರಮಾತ್ಮನು ಪ್ರಸನ್ನನಾಗುವನೋ , ಪ್ರತ್ಯಕ್ಷಕ್ಕೆ ಅವಿಷಯನಾದ ಶ್ರೀಹರಿಯಲ್ಲಿ ಭಕ್ತಿಯು ಯಾವುದರಿಂದ ಉಂಟಾಗುವದೋ ಅದೇ , ಭಾಗವತ ಧರ್ಮವೇ ಪರಮಧರ್ಮವಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ .
ಇಂತಹ ಧರ್ಮಗಳನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುವವರೇ ಪರಮಭಗವದ್ಭಕ್ತರು , ಅವರೇ ಮೈದುನರು , ಇಂತಹ ಮೈದುನರಿಗೆ ಅಂದರೆ ಅನೇಕ ಪರಮಭಗವದ್ಭಕ್ತರಿಗೆ ಪರಮಾತ್ಮನು ಒಲಿದಿದ್ದಾನೆ ಎಂಬುದಾಗಿ ಈ ಭಾಗವತೋಕ್ತಿಯ ಅರ್ಥವನ್ನೇ ಶ್ರೀವಿಜಯದಾಸಾರ್ಯರು ಮೈದುನ ಎಂಬ ಶಬ್ದಪ್ರಯೋಗದ ಮುಖಾಂತರ ತಿಳಿಸಿದ್ದಾರೆ .
*ಯದನುಧ್ಯಾಯಿನೋ ಯುಕ್ತಾಃ ಕರ್ಮಗ್ರಂಥಿನಿಬಂಧನಮ್ |ಛಿಂದಂತಿ ಕೋವಿದಾಸ್ತಸ್ಯ ಕೋ ನ ಕುರ್ಯಾತ್ ಕಥಾರತಿಮ್ ||*-
ಯಾವ ಪರಮಾತ್ಮರೂಪದ ತತ್ತ್ವವನ್ನು ನಿರಂತರ ಧ್ಯಾನ ಮಾಡುವ ಸ್ವಭಾವವುಳ್ಳವರು ಯೋಗಫಲವನ್ನು ಪಡೆದವರಾಗಿ ದರ್ಶನ ಜನ್ಯ ಪ್ರಸಾದವುಳ್ಳವರಾಗುತ್ತಾರೆ .
ಪರಮೋಪಕಾರ ಮಾಡಿದ ಶ್ರೀಹರಿಯ ಕಥೆಗಳಲ್ಲಿ ಆಸಕ್ತರಾಗಿ ಅನುರಕ್ತರಾಗುತ್ತಾರೆ , ಇಂಥವರು ಪರಮಾತ್ಮನಿಗೆ ಮೈದುನರು ಎಂದೆನಿಸಿಕೊಳ್ಳುವರು .
*ನಷ್ಟಪ್ರಾಯೇಷ್ವಭದ್ರೇಷು ನಿತ್ಯಂ ಭಾಗವತ ಸೇವಯಾ |ಭಗವತ್ಯುತ್ತಮಶ್ಲೋಕೇ ಭಕ್ತಿರ್ಭವತಿ ನೈಷ್ಠಿಕೀ||*
ಯಾವಾಗಲೂ ಭಗವದಭಕ್ತರ ಸೇವೆಯಿಂದ ಪಾಪಗಳೆಲ್ಲ ನಾಶವಾಗುತ್ತಿರಲು ಬ್ರಹ್ಮಾದಿಗಳಿಂದ ಕೀರ್ತ್ಯನಾದ ಶ್ರೀಹರಿಯಲ್ಲಿ ಅಚಲವಾದ ಭಕ್ತಿಯನ್ನು ಯಾರು ಮಾಡುತ್ತಾರೋ ಅವರು ಭಗವಂತನಿಗೆ ಮೈದುನರು , ಇಂತಹ ಮೈದುನರಿಗೆ ಪರಮಾತ್ಮನು ಒಲಿಯುತ್ತಾನೆ ಎನ್ನುವದನ್ನು ಶ್ರೀವಿಜಯದಾಸಾರ್ಯರು ಇಲ್ಲಿ ತಿಳಿಸಿದ್ದಾರೆ .
*ತದಾ ರಜಸ್ತಮೋಭಾವಾಃ ಕಾಮಲೋಭಾದಯಶ್ಚಯೇ |ಚೇತ ಏತೈರನಾವಿದ್ಧಂ ಸ್ಥಿತಂ ಸತ್ವೇ ಪ್ರಸೀದತಿ||* -
ಯಾವಾಗ ಶ್ರೀಹರಿಯಲ್ಲಿ ಅಚಲವಾದ ಭಕ್ತಿಯು ಉಂಟಾಗುವದೋ ಆವಾಗ ರಜೋತಮೋಗುಣಗಳಿಂದ ಉಂಟಾಗುವ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಾದಿಗಳಿಂದ ಇಷ್ಟುದಿವಸ ಹೊರಬರಲಾರದ ಈ ಮನಸ್ಸು ಈಗ ಬಲ ಜ್ಞಾನಸ್ವರೂಪನಾದ ಶ್ರೀಹರಿಯ ಪಾದಾರವಿಂದಗಳಲ್ಲಿ ಅನುರಕ್ತವಾಗಿ ಸದಾ ಹರಿಸ್ಮರಣ ಮಾಡಲು ಸಮರ್ಥವಾಗುವದು . ಇಂತಹವರು ಪರಮಾತ್ಮನಿಗೆ ಮೈದುನರು .
ಇಂತಹ ಮೈದುನರಿಗೆ ಪರಮಾತ್ಮನು ಒಲಿಯುವನು ಎಂಬುದನ್ನು ಶ್ರೀವಿಜಯದಾಸಾರ್ಯರು ಇಲ್ಲಿ ತಿಳಿಸಿದ್ದಾರೆ .
*ಏವಂ ಪ್ರಸನ್ನಸೋ ಭಗವದ್ಭಕ್ತಿಯೋಗತಃ|ಭಗವತ್ತತ್ವವಿಜ್ಞಾನಂ ಮುಕ್ತಸಂಗಸ್ಯ ಜಾಯತೇ ||* -
ಭಗವದ್ಭಕ್ತಿರೂಪದ ಉಪಾಯದಿಂದ ವಿಷಯವನ್ನೇ ಬಿಟ್ಟವನಿಗೆ ನಿತ್ಯದಲ್ಲಿಯೂ ಶ್ರೀಹರಿಯ ಸ್ಮರಣರೂಪ ಜಿಜ್ಞಾಸಾ ಮಾಡುವವನಿಗೆ ಭಗವಂತನೆಂಬ ತತ್ತ್ವದ ಸ್ವಯೋಗ್ಯ ಅಪರೋಕ್ಷಜ್ಞಾನವು ಉಂಟಾಗುವದು .
ರಾಗ - ವಸಂತ
ತಾಳ - ಧ್ರುವತಾಳ
ಬಂದೆನೊ ಎಲೊ ಹರಿಯೆ ಪಂಢರಪುರಿಧೊರಿಯೆ l
ಇಂದೆನ್ನ ಪಾಲಿಸೊ ಬಿನ್ನಪವ ಲಾಲಿಸೋ l
ಮಂದನು ನಾನಯ್ಯಾ ಮಹಾತ್ಮ ನೀನಯ್ಯಾ l
ಮಂದಾಕಿನಿ ಜನಕ ಲಿಂಗ ಭಂಗದತನಕ l
ಒಂದು ಸಾಧನ ಕಾಣೊ ನಿನ್ನ ಸ್ಮರಣೆ ಮಾಣೆ l
ಬಂಧು ಬಳಗ ನೀನೆ ಭಕ್ತಾರಕಾಮಧೇನು l
ಎಂದೆಂದಿಗೆ ನಿನ್ನ ಪಾಡಿದವಗೆ ಬನ್ನಾ l
ಪೊಂದಪ್ಪವೆಂದು ಪ್ರತಿದಿನದಲಿ ನಿಂದು l
ವೃಂದಾರಕ ವೃಂದ ಪೊಗಳೀದರಾನಂದ l
ನಂದನಾಗಿ ಕೇಳಿ ಘನಸಂತಸತಾಳಿ l ಬಂದಿನೊ ಎಲೊ ಹರಿಯೆ ಪಂಢರಪುರಿಧೊರಿಯೆ l
ಬಿಂದು ಮಾತುರ ಪುಣ್ಯ ಇಲ್ಲವೊ ಕಾರುಣ್ಯ l
ಸಿಂಧು ಪುಂಡರೀಕವರದ ನಿಷ್ಕಳಂಕ l
ಚಂದಿರ ಭಾಗ ಭೀಮಾತೀರ ಗೋವಾಗಾ l
ನಂದ ವಿಗ್ರಹ ವಿಜಯವಿಟ್ಠಲ ಮುನಿಗೇಯ l
ವಂದಿಸುವೆನು ನಾರಂದಮುನಿ ಹೃದ್ಭಾನು ll 1 ll
ಮಟ್ಟತಾಳ
ದೋಷಿ ಮಾನವರಿಗೆ ದಯಮಾಡುವೆನೆಂದು l
ದೇಶದೊಳಗೆ ನಿನ್ನ ಕೀರ್ತಿ ವ್ಯಾಪಿಸಿ ಇಪ್ಪದು l
ದೋಷ ವಿದೂರ ದುರ್ಜನದೂರ l
ದೋಷ ಭಾವಗಳೆಲ್ಲ ನರರಂತೆ ಕೈಕೊಂಡು l
ದೋಷಿ ಜನರ ಸಂಗಡ ಮಾಡಿ ಅವರ ಪಾಪ l
ಲೇಶ ಉಳಿಯದಂತೆ ಅಪಹರಿಸಿದ ದೇವ l
ಲೇಸು ನಿನ್ನ ಮಹಿಮೆ ಪೊಗಳಲು ಅತಿ ಚಿತ್ರಾ l
ಏಸು ಬಗೆಯಿಂದ ಒಲಿಸಿದ ಕಾಲಕ್ಕು l
ಆಶೆ ತೀರದು ಕಾಣೊ ಅನಿಮಿತ್ಯ ಬಂಧು l
ವಾಸ ಪಂಢರಪುರಿ ವಿಜಯವಿಟ್ಠಲ ಗೋವ l
ಳೇಶ ಇಟ್ಟಗಿ ಮೇಲೆನಿಂದ ಮುಕ್ಕುಂದ ll 2 ll
ತ್ರಿವಿಡೆತಾಳ
ದೇವರೆಂಬುವರೆಲ್ಲ ನಿನ್ನ ತರುವಾಯ l
ಆವಾವ ದೇಶದಲ್ಲಿ ನೋಡಿದರು l
ಕಾವ ನೀತಿಯಲ್ಲಿ ಕೊಡುವಲ್ಲಿ ಕೊಂಬಲ್ಲಿ l
ಭೂವಲಯದಲ್ಲಿ ಸರಿಗಾಣೆನೋ l
ಪಾವನ್ನ ಮೂರ್ತಿಯೆ ನಿನ್ನ ನಂಬಿದೆ ಇನ್ನಾವ l
ದೈವಗಳನ್ನು ಸ್ತುತಿಸಲರಿಯೆ l
ಪೂವಿನೊಳಗೆ ಇಟ್ಟು ನಮ್ಮನ ಸಲಹುವ l
ಗೋವರ್ಧನುದ್ಧರಣ ಕಲಿಹರಣ l
ಭಾವೆ ವಂದನೆ ಕೇಳೊ ನಿರ್ವಿಘ್ನದಾಯಕನೆ l
ದೇವಗಂಗಿಯ ಸ್ನಾನ ಮಾಡಿಸಯ್ಯಾ l
ಸೇವಕ ನುಡಿದದ್ದು ಸತ್ಯ ಮಾಡುವಿ ವಸು l
ದೇವನಂದನ ಪಂಢರಿಪುರಿರಾಯನೆ l
ಶ್ರೀವತ್ಸಲಾಂಛನ ವಿಜಯವಿಟ್ಠಲ ಎನ್ನ l
ಜೀವನೋಪಾಯವೇ ಜೀವ ಜೀವೇಶಾ ll 3 ll
ಅಟ್ಟತಾಳ
ಹೂಣ, ಪುಳಿಂದ, ಪಲ್ಕಸ, ಕುಂಕ, ಕಿರಾತ l
ಕಾಣ, ಅಭೀರ, ಯವನ, ನಾನಾ ವಿಜಾತಿ l
ಯೋನಿ ಜನರಿಗೆ ನೀನೆ ಒಲಿದಂತೆ ಕರುಣಾಳೆ l
ನಾನಂತು ವೈಷ್ಣವ ಸತ್ಕುಲ ಪ್ರಸೂತ l
ಆನಂದ ತೀರ್ಥರ ಮತದಲ್ಲಿ ಪೊಂದಿಪ್ಪೆ l
ಏನಾದರವಗುಣ ಇದ್ದರಾದಡೆ ನೀನೆ l
ಎಣಿಸಾದೆ ಎನ್ನ ಪಾಲಿಸು ಪರದೈವ l
ಕಾಣಿ ಮಿಕ್ಕಾ ದ್ರವ್ಯದಿಂದ ನಿನ್ನಂಘ್ರಿ l
ಮಾನಸದಲಿ ಪೂಜೆ ಮಾಡಲಿಲ್ಲ ಪ್ರಭುವೆ l
ಮಾನಿಸವೇಷನೆ ವಿಜಯವಿಟ್ಠಲರೇಯಾ l
ಜ್ಞಾನವಕೋಡುವೆ ಮಹಾಭಾಗ್ಯವಕೊಡುವೆ ll 4 ll
ಆದಿತಾಳ
ನಿನ್ನ ನುಡಿದೆ ನಾನು ನಿನ್ನ ಪಾಡಿದೆ ನಾನು ನಿನ್ನ ಕಾಡಿದೆ ನಾನು l
ನಿನ್ನ ಮುಂದೆ ಎನ್ನ ಬಡತನ ಪೇಳಿಕೊಂಡು l
ಅನಂತ ಬಗೆಯಿಂದ ಕೊಂಡಾಡುವೆನೊ ವಿಟ್ಠಲಾ l
ಎನ್ನಭಾರ ನಿನ್ನದು ಕ್ಷಣ ಅನಂತ ಕ್ಷಣಕ್ಕೆ l
ಮುನ್ನೆ ಪೆಳುವದೆಲ್ಲಾ ಉಪಚಾರವೊ ಸ್ವಾಮಿ l
ಘನ್ನ ಪಂಢರಿರಾಯಾ ವಿಜಯವಿಟ್ಠಲರೇಯಾ l
ರನ್ನ ಪ್ರಸನ್ನ ಸಂಪನ್ನ ಮತಿಯಕೊಡು ll 5 ll
ಜತೆ
ಮನೋರಥ ಸಿದ್ಧ ಮಾಡಯ್ಯ ಮನ್ಮಥನಯ್ಯಾ l
ಅನುಭವದಿಂದಲಿ ವಿಜಯವಿಟ್ಠಲ ಪಂಢರಿ ll 6 ll
*ಮಟ್ಟತಾಳ :*
*ಪ್ರಾತಃ ಕಾಲದಲ್ಲಿ ನಾರಾಯಣನೆನ್ನಿ*
*ಶ್ರೀತುಳಸಿಯಲ್ಲಿ ವಿಷ್ಣುವಿನ ಸ್ಮರಣೆ ಮಾಡಿ*
*ಮೂತ್ರ ಪುರೂಷ ವಿಸರ್ಜನೆ ಸಮಯದಲ್ಲಿ*
*ನೀ ತಿಳಿಯೋ ಕೇಶವನಾಮಕ ಹರಿಯ*
*ಮಾತು ಮರಿಯದಿರು ಮೃತ್ತಿಕಾ ಶೌಚಕ್ಕೆ*
*ಶ್ರೀತ್ರಿವಿಕ್ರಮನೋ, ದಂತಧಾವನ ಹರಿ*
*ನೇತುರ ಮೊದಲಾದ ಪ್ರಕ್ಷಾಲನಕೆ ಮಾಧವ*
*ಗೋತಂಡವರಿಸುವ ಕಾಲಕೆ ಗೋವರ್ಧನ*
*ವಾತನೊಡಿಯ ನಮ್ಮ ವಿಜಯವಿಟ್ಠಲಮೂರ್ತಿಯ*
*ಮಾತ್ರ ಕಾಲಬಿಡದೆ ನೆನಿಸಿ ಧನ್ಯನಾಗೋ ll*
*ರೂಪಕತಾಳ :*
*ನದ್ಯಾದಿ ಸ್ನಾನ ಮಾಡುವ ಕಾಲಕೆ ವರಾಹ*
*ಊರ್ಧ್ವಪುಂಡ್ರಗಳಲ್ಲಿ ಕೇಶವಾದಿ ಸೂರ್ಯ*
*ಮುದ್ರೆ ಇಡುವಾಗ ಕ್ರುದ್ಧೋಲ್ಕಾದಿ ಐದು*
*ಸಂಧ್ಯಾ ಸಂಧ್ಯಾಕಾಲದಲ್ಲಿ ರಾಮನೆನ್ನು*
*ಸಿದ್ಧವಾಗಿ ಪ್ರಾಣಗ್ರಾಸದಲ್ಲಿ ಅನಿ-*
*ರುದ್ಧಾದಿ ಪಂಚಭಗವನ್ಮೂರ್ತಿಗಳ ಸ್ಮರಿಸು*
*ಮುದ್ದೆ ಮುದ್ದೆ ಕವಳ ಮೆಲುವಾರಂಭದಲಿ ವಾ-*
*ಸುದೇವ, ಆಪೋಶನಗಳಲ್ಲಿ ಶ್ರೀಹರಿ*
*ಪೊದ್ದುಡುವ ವಸ್ತ್ರದಲಿ ಉಪೇಂದ್ರ ಭಗ-*
*ವದ್ರೂಪ ಚಿಂತಿಸು, ಉಪವೀತ ವಾಮನ*
*ಶುದ್ಧಮಂಗಳಾರ್ತಿಕೊಂಬಾಗ ಭಾರ್ಗವ, ವೈ-*
*ಶ್ವದೇವಾದಿಯಲ್ಲಿ ಇದೇ ಮೂರ್ತಿ ನಿಶ್ಚಯ*
*ನಿರ್ದೋಷ ತೀರ್ಥದಲ್ಲಿ ಕೃಷ್ಣ - ರಾಮ - ವ್ಯಾಸ*
*ನಿರ್ಧಾರತ್ರಿವಾರ, ಶಂಖೋದಕ ಮುಕುಂದ*
*ಭದ್ರಮೂರುತಿ ನಮ್ಮ ವಿಜಯವಿಟ್ಠಲರೇಯನ*
*ಹೃದ್ಗುಹದೊಳಲ್ಲಿ ನೆನಿಸಿ ಸಂತೋಷವನನುಭವಿಸು ll - ಶ್ರೀವಿಜಯದಾಸರು*
#nature #amazon #green #forest #falls #river #sea #moon #earth #goodmorning #goodnight #light #Trip #ಚೇತನಾ #ಸ್ವಾಮಿ #ಗೌಡ #flower #leaf #tribal #Lake #hill #sunset #yogi #riya #air #water #ಮೋಡ
#link #chethan #yogi #riya
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏