_ ಪೋಗಿ ಬರುವೆ ಗೋಪ ನಾಗವೇಣಿಯರೆ _ ,_ಶ್ರೀ ರಾಮಸುಂದರವಿಟ್ಠಲ ದಾಸರ ರಚನೆ ,_ರಾಗ ಮೋಹನ , ಖಂಡಛಾಪುತಾಳ

_ ಪೋಗಿ ಬರುವೆ ಗೋಪ ನಾಗವೇಣಿಯರೆ _ ,_ಶ್ರೀ ರಾಮಸುಂದರವಿಟ್ಠಲ ದಾಸರ ರಚನೆ ,_ರಾಗ ಮೋಹನ , ಖಂಡಛಾಪುತಾಳ


_ #ಪೋಗಿ #ಬರುವೆ #ಗೋಪ #ನಾಗವೇಣಿಯರೆ _ ,_ಶ್ರೀ #ರಾಮಸುಂದರವಿಟ್ಠಲ #ದಾಸರರಚನೆ ,_#ರಾಗಮೋಹನ , #ಖಂಡ #ಛಾಪುತಾಳ* 

*ಆಕಾಶದಲ್ಲಿ ಸಹ್ರಸ್ರಾರು ದೇವತೆಗಳ ಸಮೂಹ ಕಂಡು ಜನರು: ವಿಜಯದಾಸರ  ಅವತಾರ ಕಾಲ ಮುಗಿಯುವ ಸಂದರ್ಭದಲ್ಲಿ*

 
ಬದುಕಿದ್ದ ಎಲ್ಲಾ ಸಮಯದಲ್ಲಿ ಸಹ ಹರಿನಾಮದ ಸ್ಮರಣೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ಜೀವನದ ಅವಸಾನದ ಸಮಯದಲ್ಲಿ ಮಾಡುವ ಹರಿ ಸ್ಮರಣೆಯೂ  ಅಜಮಿಳನ ದೃಷ್ಟಾಂತವೇ ಸಾಕ್ಷಿ..

ವಿಜಯ ಪ್ರಭುಗಳ ಮಹಾನುಭಾವರ ಜೀವನ ಚರಿತ್ರೆಗಳು ನಮಗೆ ಈ ಪಾಠವನ್ನು ಕಲಿಸಿಕೊಡ್ತವೆ. 

 ದೇವಾಂಗ ಸಂಭೂತರಾದ ಶ್ರೀ ದಾಸರು
ಕಾರ್ತೀಕ ಶುದ್ಧ ದಶಮಿಯ ದಿನ , ಪ್ರಾತಃಕಾಲದಲ್ಲೇ ಎದ್ದು ಸ್ನಾನ ಆಹ್ನಿಕಗಳೆಲ್ಲವನ್ನೂ ಮುಗಿಸಿ, ತಮಗೆ ಅನುಗ್ರಹವಾದ ಶ್ರೀ ಗೋಪಾಲಕೃಷ್ಣ ಮೂರ್ತಿಯ
ಪೂಜೆ ಮಾಡಿದರು.
 
ನಂತರ ಅಲ್ಲಿರುವಂತಹ ಸಾಕುಮಗ ಶ್ರೀ ಮೋಹನದಾಸಾರ್ಯರು, ಹಾಗೂ ಸೋದರರಾದ ಶ್ರೀ ಹಯವದನವಿಠಲರು, ಪ್ರೀತಿಯ ಶ್ರೀ ವ್ಯಾಸವಿಠಲರೇ ಮೊದಲು ಎಲ್ಲ ಶಿಷ್ಯರಿಗೆ ತೀರ್ಥವನ್ನು ನೀಡಿದರು.

ಶ್ರೀ ದಾಸರು ಹೊಲದಲ್ಲಿ ತಾವು ಕಟ್ಟಿಸಿದ ಕಟ್ಟಿಯ ಹತ್ತಿರವೇ ದರ್ಭಾಸನಸ್ಥರಾಗಿ ಕುಳಿತು, ಎಲ್ಲ ಸಜ್ಜನರಿಗೆ ಕೈ ಮುಗಿದು - *ನಮ್ಮ ಅವತಾರ ಕಾಲ ಮುಗಿತು , ಮಹಾ ಯಾತ್ರೆಗೆ ಹೊರಡುವೆವು ಎಂದು ಘೋಷ ಮಾಡಿದರು.

 ಲೋಕರೀತ್ಯಾ ಬಂದ ಮಾನವ ಜನ್ಮವಿದು, ಏನಾದರೂ ತಪ್ಪುಗಳು ಇದ್ದಲ್ಲಿ ಕ್ಷಮಿಸಬೇಕು ಎಂದು ಎಲ್ಲಾ ಜೀವಿಗಳಲ್ಲಿ ಕೇಳಿಕೊಂಡರು. ನೋಡಿ ಅವತಾರಮಾಡಿ ಬಂದ ಮಹಾತಪಸ್ವಿ ಭೃಗು ಋಷಿಗಳವರು ಆದರೂ ಎಷ್ಟು ವಿನಮ್ರತೆ ತೋರಿಸಿದರು ಜನರ‌ ನಡುವೆ.


ನಂತರ ಎಲ್ಲ ಶಿಷ್ಯರಿಂದಲೂ ವಂದನಾ ಪೂರ್ವಕವಾಗಿ ಅಂತಃಕರಣದಿಂದ ಬಂದಂತಹ ನಮಸ್ಕಾರಗಳನ್ನು ಸ್ವೀಕಾರ ಮಾಡ್ತಾರೆ . ನಮ್ಮ ಸ್ಥಾನಕ್ಕೆ ನಾವು ಹಿಂತಿರುಗುವೆವು, ನೀವೆಲ್ಲಾ ಚಿಂತೆ ಮಾಡಬೇಡಿ, ಪರಮಾತ್ಮನು ಸದಾ ನಿಮ್ಮ ಎಲ್ಲರನ್ನೂ ರಕ್ಷಿಸುವನು ಎಂದು  ಎಂದು ಮತ್ತೆ ಮತ್ತೆ ಹೇಳಿ, ಕುಳಿತಲ್ಲೇ ಧ್ಯಾನಾಸಕ್ತರಾಗಿ , ಭಗವಂತನ  ಚಿಂತನೆ ಮಾಡುತ್ತಾ, ತಮ್ಮ ಶ್ವಾಸವನ್ನು ಊರ್ಧ್ವ ಮುಖವನ್ನಾಗಿ ಮಾಡಿ ಪರಮಾತ್ಮನ ಪಾದಗಳಲ್ಲಿ ಮನಸ್ಸಿಟ್ಟು  ಪ್ರಾಜ್ಞ ನಾಮಕ ಪರಮಾತ್ಮನ ಧ್ಯಾನವನ್ನು ಮಾಡುತ್ತಾ *ಪಿಂಗಳಾ ನಾಡಿಯಿಂದ ಬಿಂಬನಾದ ವಿಠಲನ ಬಳಿಗೆ ಆನಂದದಿಂದ ಪ್ರಯಾಣ ನಡೆಸಿದರು ನಮ್ಮ
ಶ್ರೀ ವಿಜಯ ಪ್ರಭುಗಳು

ಕುಳಿತ ಜಾಗದಲ್ಲೇ ತಲೆಯು ಸ್ವಲ್ಪ ಒರಗಿ ಕೆಳಗಾಯ್ತು. ಆಕಾಶದಲ್ಲಿ ದೇವ ದುಂದುಭಿ, ವಾದ್ಯಗಳು ಮೊಳಗಿದವು ,  ಸಹ್ರಸ್ರಾರು ದೇವತೆಗಳ ಸಮೂಹ ಅವರನ್ನು ವಿಮಾನದಲ್ಲಿ ಗೌರವದಿಂದ ಕರೆದುಕೊಂಡು ಹೋಗ್ತಿದೆ,  ಅಲ್ಲಿ ನೆರೆದಿದ್ದ ಜನರು ಇದನ್ನು ಕಂಡ 
ಪ್ರತಿಯೊಬ್ಬರೂ ಶ್ರೀ ದಾಸಾರ್ಯರ ಭಕ್ತಿಯನ್ನು ಹಾಡಿ ಹೊಗಳಿದರು..


ಕರಿರಾಜವರದನ್ನ ಸ್ಮರಣೆ ಮಾಡುತ್ತ ಶ್ರೀ ವಿಜಯದಾಸರು ಹರಿಪುರವಾದ ವೈಕುಂಠ ಲೋಕಕ್ಕೆ ತೆರಳಿದರು, 


*ಯುವ ಸಂವತ್ಸರ ಕಾರ್ತೀಕ ಶುದ್ಧ ಅವದ್ಯವಾದ ದಶಮಿ ನವನಾಡಿ ಗುರುವಾರ ದಿವಿಜರ ಮೇಳದಲಿ, ಖವಖವ ನಗುತ ಭಳಿರೆ ನಗಿಮುಖದಿಂದ ಹರಿಚರಿತೆ ಪಾಡುತಲಿ. ಪಿಂಗಳಾನಾಡಿಯಿಂದ ಹಿಂಗದಲೆ ನಡೆತಂದು ರಂಗಪ್ರಾಜ್ಞ ವಾಯು ಪದವಪೊಂದಿ ಸಂಗೀತಪಾಡುತ್ತ ಸಾಂಗೋಪಾಂಗದಿಂದ ಮಂಗಳ ಘೋಷಣದಿಂದಿಂಗಿತಜ್ಞರು ನೋಡೆ*

ಶ್ರೀ ಹಯವದನವಿಠಲರು ಇದನ್ನು ದಾಖಲಿಸಿ ಇಟ್ಟಿದ್ದಾರೆ*...

 ನಮಸ್ಕಾರಗಳು ಶ್ರೀ ವಿಜಯ ಪ್ರಭುಗಳಿಗೆ.. ಮತ್ತೆ 

ಅಂತ್ಯಕಾಲದಲ್ಲಿ ಮನುಷ್ಯನ ಕರ್ತವ್ಯವೇನು ಎಂಬುವದನ್ನು ತಿಳಿಸಿ ಹೇಳಿದ, ನಾಮ ಸ್ಮರಣೆ ಮಾತ್ರದಿ ಕಾಯುವ, ಇಂದಿಗೂ ಸಜ್ಜನರನ್ನು ಕಾಪಾಡುತ್ತಿರುವ ಶ್ರೀ ವಿಜಯ ಪ್ರಭುಗಳ ಕಾರುಣ್ಯವನ್ನು ತಿಳಿಸಿ ಹೇಳಲು, 

ಶ್ರೀ ವಿಜಯ ಪ್ರಭುಗಳ ಕೃತಿ,ಪದ್ಯ, ಸುಳಾದಿಗಳ ನಿರಂತರ ಪಾರಾಯಣವೇ ನಮ್ಮ ಜೀವದ ಕರ್ತವ್ಯವಾಗಲಿ ಎಂದು ಅವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡೋಣ.

ಸಂತತಂ ಚಿಂತಯೇsನಂತಮಂತಕಾಲೇ ವಿಶೇಷತಃ|*
*ನೈವೋದಾಪುರ್ಗೃಣಂತೋsಂತಂ ಯದ್ಗುಣಾನಾಮಜಾದಯಃ ||*

ಪರಮಾತ್ಮನ ನಾಮಸ್ಮರಣೆ ಸದಾ ಕಾಲ ಕ್ಷಣಕ್ಷಣಕ್ಕೂ ನಮ್ಮ ನಾಲಿಗೆಯಲ್ಲಿರಬೇಕು. ಮನಸಿನಲ್ಲಿ ಅಚ್ಚಳಿಯಬೇಕು.

*ಶ್ರೀ ವಿಜಯದಾಸಾರ್ಯರ  ಶುಭಸ್ಮರಣೆಗಳು
ಜೈ ವಿಜಯರಾಯ 
ಜೈ ವಿಜಯರಾಯ 
ಜೈ ವಿಜಯರಾಯ 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ