_ ಚಿಂತನೆ ಮಾಡು ಮನವೆ ಚಿನ್ಮಯದೇವನ್ನ _ , _ಅಜಾದಿ ಸುಳಾದಿ_ , _ಶ್ರೀ ವಿಜಯದಾಸರ ರಚನೆ ,

_ ಚಿಂತನೆ ಮಾಡು ಮನವೆ ಚಿನ್ಮಯದೇವನ್ನ _ , _ಅಜಾದಿ ಸುಳಾದಿ_ , _ಶ್ರೀ ವಿಜಯದಾಸರ ರಚನೆ , ರಾಗ ರೇವಗುಪ್ತಿ

_ ಚಿಂತನೆ ಮಾಡು ಮನವೆ ಚಿನ್ಮಯದೇವನ್ನ _ , _ಅಜಾದಿ ಸುಳಾದಿ_ , _ಶ್ರೀ ವಿಜಯದಾಸರ ರಚನೆ , ರಾಗ ರೇವಗುಪ್ತಿ


#ಸ್ಮರಿಸಿ #ಬದುಕಿರೋ #ದಿವ್ಯ #ಚರಣಕ್ಕೆರಗಿರೋ|*
#ದುರಿತ #ತರೆದು #ಪೊರೆವ #ವಿಜಯ #ಗುರುಗಳೆಂಬರಾ
#ಚಿಂತನೆ #ಮಾಡು #ಮನವೆ #ಚಿನ್ಮಯದೇವನ್ನ _ , #ಅಜಾದಿ #ಸುಳಾದಿ_ , #ಶ್ರೀವಿಜಯದಾಸರರಚನೆ , #ರಾಗ #ರೇವಗುಪ್ತಿ

*ಕಾಶಿಯ ಗಂಗೆ ಸ್ತ್ರೀ ರೂಪ ಧರಿಸಿ:ಸಾವಿರಾರು ಯಾತ್ರಿಕರಿಗೆ ದರ್ಶನ ನೀಡಿದ ಘಟನೆ

ನಮ್ಮ ವಿಜಯರಾಯರ ಕೀರ್ತಿ ಮೆರೆಯಲಿ ಕೋಲೇ||*
ಶ್ರೀ ವಿಜಯಪ್ರಭುಗಳು ಕಾಶಿಯಾತ್ರಿಗೆ ಹೊರಟಾಗ ಅವರ ಆರಾಧಕರು ವೈಭವದೊಡನೆ ಹೊರಟರು, ಸ್ಕೂಲ್ ಶಿಷ್ಯರ,ಪರಿವಾರವು , ಕಾಶಿಯ ಕಡೆ ನಡೆಯಿತು .

ಮಾರ್ಗದಲ್ಲಿ ಅನೇಕ,ರಾಜ ಮಹಾರಾಜ ರಿಂದ ಗೌರವ/ಮನ್ನಣೆಯನ್ನು ಪಡೆಯುತ್ತಾ, ಕಂಡ ಮತ್ತು ಶರಣು ಬಂದು ದೀನ ಜನರನ್ನು ಉದ್ಧರಿಸುತ್ತಾ, ಶ್ರೀಹರಿಯ ಮಹಿಮೆಯನ್ನು ಸಾರುತ್ತಾ, ಹಲವು ಕೀರ್ತನೆಗಳ/ಸುಳಾದಿ ಗಳ ಹಾಡುತ್ತಾ ಕಾಶಿಗೆ ಪಯಣಿಸಿದರು.

 ಶ್ರೀವಿಜಯದಾಸರು ಗಂಗಾಸ್ನಾನ ಮಾಡಿ,ಗಯಾ ಕ್ಷೇತ್ರದಲ್ಲಿಹೋಗಿ ಪಿತೃಕಾರ್ಯವನ್ನು ಮಾಡಿ ಮತ್ತೆ ಕಾಶಿಗೆ ತಿರುಗಿ ಬಂದು ಕೆಲ ಕಾಲ ಕಾಲ್ಲಿ ಉಳಿದು ಕೊಂಡರು.


*ಒಂದು ದಿನ ಶ್ರೀವಿಜಯದಾಸರು ಗಂಗಾಸ್ನಾನ ಮಾಡಿ ಊರ್ಧ್ವಪುಂಡ್ರಗಳಾದಿಗಳನ್ನು ಧರಿಸಿಕೊಂಡು ಆಹ್ನೀಕಕ್ಕೆ ನದಿಯಿಂದ ದೂರದ ದಡದಲ್ಲಿ 
ಕುಳಿತ ಸಮಯ, ಗಂಗೆ ತುಂಬಿ ಪ್ರಶಾಂತವಾಗಿ ಹರಿಯುತ್ತಾ ಇದ್ದಾಳೆ. ಸಾವಿರಾರು ಜನ ಯಾತ್ರಿಕರ ಸಮ್ಮಿಲನ. ಅನೇಕರು ತಮ್ಮ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ.ದಾಸರ ಭಕ್ತರು ಹಾಗೂ ಶಿಷ್ದಾಯರು ದಾಸರನ್ನು ನೋಡುತ್ತ ಕುಳಿತಿದ್ದಾರೆ.


*ಗಂಗಾನದಿಯ ದಡದಲ್ಲಿ ಕುಳಿತು ಗಂಗೆಯ ಮಹಿಮೆಯನ್ನು ಚಿಂತನೆ* ಮಾಡುತ್ತಾ ಶ್ರೀ ವಿಜಯ ದಾಸರು ಕುಳಿತಿದ್ದಾರೆ. 

ಅವರ ಚಿಂತನೆ ಹೀಗಿದೆ:-
*ಪ್ರಳಯಕಾಲದಲ್ಲಿ ಮತ್ಸ್ಯ ರೂಪಿ ಪರಮಾತ್ಮನನ್ನು ವರುಣದೇವರು ಉದರದಲ್ಲಿ ಧರಿಸಿದರು.*.
*ಆ ಸ್ವಾಮಿಯು ಇಲ್ಲಿ ಗಂಗೆಯಲ್ಲಿ ವರುಣದೇವನೊಡನೆ ವಿರಾಜಿಸಿದನು.*. 
*ತನ್ನ ಪತಿಯೊಡನೆ ಆ ಮತ್ಸ್ಯ ರೂಪಿ ಪರಮಾತ್ಮನನ್ನು ಧರಿಸಿದ ಗಂಗೆಯು ಮತ್ಸ್ಯೋದರಿ ಎನಿಸಿದಳು.
*ಈ ಸ್ಥಳದಲ್ಲಿ ಪರ್ವಕಾಲದಲ್ಲಿ ಅನೇಕಾನೇಕ ದೇವತೆಗಳು ಸ್ನಾನಕ್ಕಾಗಿ ಇಲ್ಲಿ ಬರುತ್ತಾರೆ.* ಎಂದು ಅಲ್ಲಿ ನ ಮಹಿಮೆಯನ್ನು ಚಿಂತಿಸಿಸುತ್ತಾ..

*ಗಂಗೆ ಸನ್ಮಂಗಳಾಂಗೆ* *ರಂಗನಂಘ್ರಿಯ ಸಂಗೆ|*...
*ಅನನುತ ವಿಜಯವಿಠ್ಠಲನ* *ಮನಸಿನಲಿ ನೆನೆಸುವ ಸಾಧನ ಕೊಡು ವಿರಜೆ*||
ಎನ್ನುವ ಕೃತಿಯನ್ನು ರಚನೆ ಮಾಡಿದರು.


ಆ ಸಮಯದಲ್ಲಿ 
*ಶ್ರೀ ಗಂಗಾದೇವಿಯು "ನಮ್ಮಪ್ಪನಾದ , ಸಕಲ ಜಗದೊಡೆಯಆ ಶ್ರೀಹರಿಯ ಪರಮಭಕ್ತರಾದ ಶ್ರೀ ಭೃಗು ಋಷಿಗಳು ಇಂದು, ಮಾನವ ರೂಪದಲ್ಲಿ ಅವತಾರವೆತ್ತಿ, ಶ್ರೀ ವಿಜಯದಾಸರ ರೂಪಿನಲ್ಲಿ,ಎನ್ನ ಮನೆಗೆ ಬಂದಿರುವರು ಎಂದು ಭಾವಿಸಿದಳು.

 .ನನ್ನ ಸೌಭಾಗ್ಯ ದೊಡ್ಡದು!!. ನಾನು ಅವರ ಸಂಗದಿಂದ ನಾನೇ ಪುನೀತಳಾದೆ,ಅಂತ ಬಹಳ ಆನಂದದಿಂದ ಹಾಗೆ ಗಂಗಾ ನದಿ ಉಕ್ಕೇರಿ ದಾಸರ ಮೇಲೆ ಬಂದು ಉದಕ ಸುರಿಯುತ್ತಾ , ದಾಸರ ಪಾದ ಮುಟ್ಟಿತು.

ಆಗ ಶ್ರೀ ವಿಜಯದಾಸರ ವಸ್ತ್ರಗಳು ತೊಯ್ಯಲಿಲ್ಲ.ನಾಮ ಮುದ್ರೆಗಳು ಕೆಡಲಿಲ್ಲ.ಅವಾಗ ಗಂಗಾದೇವಿ ಸುಂದರವಾದ ಸ್ತ್ರೀ ರೂಪಧಾರಣೆ ಮಾಡಿ,ಸರ್ವಾಭರಣದಿಂದ ಅಲಂಕೃತ ಳಾಗಿ ದಾಸರ ಸಮೀಪಕ್ಕೆ ಬಂದು, ಮನುಜ ವೇಷ ಧಾರಿಗಳಾದ ಶ್ರೀ ವಿಜಯಪ್ರಭುಗಳನ್ನು ಪೂಜಾ ಸಾಮಗ್ರಿ ಗಳಿಂದ ಪೂಜಿಸಿದಳು..*
ಇಂದು ಈ ಕಲಿಯುಗದಲ್ಲಿ ಮನುಜ ವೇಷಧಾರಿಗಳಾಗಿ, ಆ ಹರಿಯನ್ನು ಪಾಡುತ್ತಾ,ಸ್ತುತಿಸುತ್ತಾ,ಸಜ್ಜನರನ್ನು ಉದ್ದಾರ ಮಾಡುತ್ತಾ ಇರುವ ದಾಸರ ಸಂದರುಶನ ಎನಗಾಯಿತೆಂದು ಪ್ರತ್ಯಕ್ಷ ರೂಪಧಾರಣೆ ಮಾಡಿ ಅವರನ್ನು ಪೂಜಿಸಿದಳು.*

*ದಾಸರನ್ನು ಪೂಜಿಸಿದ ನಂತರ ಗಂಗಾದೇವಿ ತಿರುಗಿ ತಾನು ಹೇಗೆ ಬಂದಳೋ ಹಾಗೇ ತಿರುಗಿ* ಹೋದಳು.


ಅಲ್ಲಿ ನೆರೆದಿದ್ದ ಸಕಲ ಸಜ್ಜನರಿಗೆಲ್ಲ ಗಂಗಾದೇವಿಯ ಪ್ರತ್ಯಕ್ಷ ದರುಶನವನ್ನು ದಾಸರು ಮಾಡಿಸಿ ಆನಂದ ಪಟ್ಟರು.*

ಎಲ್ಲಾ ಯಾತ್ರಿಕರು,ಶಿಷ್ಯರು *ನಮ್ಮ ಅಹೋಭಾಗ್ಯ!!.ಏಕ ಕಾಲಕ್ಕೆ ಶ್ರೀಹರಿಯ ಮಗಳಾದ ಗಂಗಾದೇವಿಯ ಮತ್ತು ಅವನ ಭಕುತರಾದ ದಾಸರ ದರುಶನ ಅಂತ ಬಾರಿ ಬಾರಿಗೆ* ದಾಸರಿಗೆ ನಮಸ್ಕಾರ ಮಾಡಿದರು.


ತನಗಿಂತಲು ಉತ್ತಮರಾದ ಭಗವದ್ಭಕ್ತರು ಮನೆಗೆ ಬರಲು,ಭಕ್ತರಿಗೆ ಎಷ್ಟು ಆನಂದವೋ*!!

*ಶ್ರೀಗಂಗಾದೇವಿಯು ೨೦ನೆಯ ಕಕ್ಷ ,ಶ್ರೀಭೃಗು ಋಷಿಗಳು ೧೫ನೆಯ ಕಕ್ಷ*


,
ಅಂದು ದಾಸರ ಜೊತೆಯಲ್ಲಿ ಇದ್ದ ಅವರ ತಮ್ಮಂದಿರು ಆದ ಶ್ರೀಆನಂದ ದಾಸರು
*ತೃತಿಯ ಕಾಶೀಯಾತ್ರೆ ಮಾಡ ಬಂದಾಗ*| *ಉನ್ನತವಾಗಿ ನಭಗಂಗೆ ಉಕ್ಕೇರಿ ಗಗನಕ್ಕೆ*| *ಅತಿಶಯದಿ ಬಂದು ಮತ್ಸ್ಯೊದರಿಯ ನಾಮದಲ್ಲಿ ಪ್ರತಿ ಇಲ್ಲ ದಂತೆ ತೋರೆ*||
ಎಂಬ ಕೀರ್ತನೆ ರಚಿಸಿದರು.

ಶ್ರೀಗೋಪಾಲದಾಸರು ಈ ಘಟನೆಯನ್ನುನೋಡಿ,ದಾಸರ ಮಹಿಮೆಯನ್ನು ವರ್ಣಿಸುತ್ತಾರೆ.
*ಸ್ವಚ್ಛವಾಗಿ ಗಂಗಾತೀರವ ವಾಸಮಾಡಿ ನಿಚ್ಚಾಗಿ ಶ್ರೀ ವಿಜಯರಾಯ*|
*ಹೆಚ್ಚಾದ ಪರ್ವಣೆ ಮಚ್ಚೊದರಿಯ ತೋರ್ದೆ ವಿಚಿತ್ರವಿಜಯರಾಯ*||
🙏ಶ್ರೀ ಕೃಷ್ಣಾರ್ಪಣಮಸ್ತು🙏


ಶ್ರೀ ವೇದವ್ಯಾಸ ದೇವರು, ಶ್ರೀಮದಾಚಾರ್ಯರು ತೋರಿಸಿದ *ವಿಜಯ -ಉತ್ಕರ್ಷ* ಮಾರ್ಗದಲ್ಲಿ ಹೋಗಲಿಕ್ಕೆ ಅರ್ಹರಾಗ ಬೇಕು , ಅದಕ್ಕೆ ಬೇಕಾದ ಇಚ್ಛಾ ಶಕ್ತಿ ಜಾಗೃತವಾಗಬೇಕು ಇಂಥಾ ಶ್ರವಣಕ್ಕೆ ಬೇಕಾದ, ಭಗವದ್ಭಕ್ತಿಯನ್ನು *ಈರ *ಪ್ರೇರಿಸುವ* ಸಾಹಿತ್ಯವನ್ನು ದಯಪಾಲಿಸಿ, ಸಂಸಾರದಮೇಲಿನ ವಿಜಯ ಮಾರ್ಗದತ್ತ ಕರೆದೊಯ್ಯುತ್ತಾರೆ ಆದ್ದರಿಂದಲೂ ಶ್ರೀ ವಿಜಯದಾಸರು ಅಂತ ಸಾರ್ಥಕ ಹೆಸರು.
ಈ ಕಾರಣದಿಂದ 
*ಅಜ್ಞಾನ ತಿಮಿರಚ್ಛೇದರೂ* ಹೌದು, ಅದರ ಜೊತೆಗೆ ಮೋಕ್ಷಕ್ಕೆ ಬೇಕಾದ -ಮೋಕ್ಷೋಪಯೋಗಿ *ಬುದ್ಧಿ ಅನ್ನೋ ಸಂಪತ್ತಿನ ಪ್ರದಾಯಕರೂ* ಹೌದು. 

ಸ್ಮರಿಸಿ ಬದುಕಿರೋ*
*ದಿವ್ಯ ಚರಣಕ್ಕೆರಗಿರೋ|*
*ದುರಿತ ತರೆದು ಪೊರೆವ ವಿಜಯ ಗುರುಗಳೆಂಬರಾ||*


*ಅಜ್ಞಾನ ತಿಮಿರಚ್ಛೇದಂ ಬುದ್ಧಿ ಸಂಪತ್ಪ್ರದಾಯಕಂ/*
*ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರುಮ್ ಭಜೇ//*


*ವೀರ:* ಅಂದರೆ ವಿಶಿಷ್ಟ ವಾದ ಇಚ್ಛಾ ಶಕ್ತಿ ಉಳ್ಳವರು ಅಂತ ಅರ್ಥ. 
*ವಿ* ಅಂದ್ರೆ ವಿಶಿಷ್ಟ,
*ಈರ*:ಅಂದ್ರೆ ಇಚ್ಚಾ ಶಕ್ತಿ, ಅಥವಾ ಪ್ರೇರಣೆ ಅಂತ ಅರ್ಥ.





*ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ*


*ಸಂತಾಪಾನ್ ಹರತು ಶ್ರೀಮಾನ್ ಸತ್ಯವೀರೇಂದುರಂಜಸಾ*

ಶ್ರೀ ಸತ್ಯವೀರ ಗುರುರಾಜೋ ವಿಜಯತೇ...

*ಜೈ ವಿಜಯರಾಯ* 
*ಜೈ ವಿಜಯರಾಯ* 
*ಜೈ ವಿಜಯರಾಯ* 



 ಮೇಲಿಂದ ಮೇಲೆ ದುಃಸ್ವಪ್ನಗಳು ಆಗುತ್ತಿರುವವರಿಗೆ ಈ ಪ್ರಾರ್ಥನೆ ವಿಶೇಷ ಫಲಕಾರಿ. 

ಒಂದು ಕೈಯಲಿ ಖಡ್ಗ l
ಒಂದು ಕೈಯಲಿ ಹಲಿಗೆ l
ಅಂದವಾಗಿ ಪಿಡಿದು l ದಿವಾ ರಾತ್ರಿಯಲಿ ಬಂದು ಬದಿಯಲಿ ನಿತ್ಯ ಬಾರಾಸನನಾಗಿ l ಹಿಂದು ಮುಂದುಪದ್ರವಾಗದಂತೆ l
ಇಂದಿರೇರಮಣ ಕಾಯುತ್ತಲಿರೆ l
ಎನಗಾವ ಬಂಧಕಗಳಿಲ್ಲ l ಧನ್ಯ ಧನ್ಯ ಕಂದರ್ಪನಯ್ಯ l ಸಿರಿವಿಜಯ ವಿಠಲರೇಯ ಎಂದೆಂದಿಗಾಪತ್ತು ಬರಲೀಯನೋ ||


||ಸ್ಮರಿಸಿ ಬದುಕಿರೊ ದಿವ್ಯ ಚರಣಕ್ಕೆರಗಿರೋ||* 
*ದುರಿತ ತರೆದು ಪೊರೆವ ವಿಜಯ ಗುರುಗಳೆಂಬರಾ|


*ಶ್ರೀ ರಘುಪತಿವಿಟ್ಠಲದಾಸಾರ್ಯರ ವಿಜಯರಾಜ ಕೃತಿ* 

*ರಾಗ ಆರಭಿ ಆದಿತಾಳ* 

ವಿಜಯರಾಜ ಗುರುರಾಜಾಧಿರಾಜ ಮಹ -
ರಾಜಶಿರೋರತುನ ॥ ಪ ॥
ತ್ಯಜಿಸದೆ ನಿಮ್ಮ ಪದಬುಜವ ಬಿಡೆನೆಂಬೊ 
ಸುಜನರ ಪಾಲಿಸಯ್ಯ ॥ ಅ ಪ ॥ 




ಇನ್ನೋಂದು ಶ್ಲೋಕ:-

*ಸಂತತಂ ಚಿಂತಯೇsನಂತಮಂತಕಾಲೇ ವಿಶೇಷತಃ|*
*ನೈವೋದಾಪುರ್ಗೃಣಂತೋsಂತಂ ಯದ್ಗುಣಾನಾಮಜಾದಯಃ ||*

ಪರಮಾತ್ಮನ ನಾಮಸ್ಮರಣೆ ಸದಾ ಕಾಲ ಕ್ಷಣಕ್ಷಣಕ್ಕೂ ನಮ್ಮ ನಾಲಿಗೆಯಲ್ಲಿರಬೇಕು. ಮನಸಿನಲ್ಲಿ ಅಚ್ಚಳಿಯಬೇಕು, ಅನುಸಂಧಾನದಲಿ ಅನಂತವಾಗಬೇಕು..


ಜೈ ವಿಜಯರಾಯ 
ಜೈ ವಿಜಯರಾಯ 
ಜೈ ವಿಜಯರಾಯ 


*ಅಂಗದ ಮುಸುಕು ತೆಗದನೋ ಕ್ಷೇತ್ರದಿ ಪಾಂಡುರಂಗ| ವಿಜಯರಾಯ||*


*||ವಿ||* ಎಂದು ನುಡಿಯಲು *ವಿಷ್ಣು ದಾಸನಾಗುವನು*
*||ಜ||* *ಯೆನಲು ಜನನ ಹಾನಿ*
*||ಯ||* ಎಂದು ಕೊಂಡಾಡೆ *ಯಮ ಭಟರು ನೋಯಿಸರು*.
*||ರಾಯ||*
*ಎಂದೆನಲು ಹರಿ ಕಾವ ವರವೀವ*.
🙏



*||ನಮ್ಮ ವಿಜಯರಾಯರ ಕೀರ್ತಿ ಮೆರೆಯಲಿ ಕೋಲೇ||*
🙏🙏
*ಅರಳಮ್ಮನವರಿಗೆ ಚಾತುರ್ಥಿಕ ಜ್ವರ (typhoid) ಬಂದಾಗಲೂ,*.
*ಛಾಗಿ ಕೇಶವರಾಯರಿಗೆ* ಮತ್ತು ತಮ್ಮ ಶಿಷ್ಯರಾದ 
*ಶ್ರೀವೇಣುಗೋಪಾಲವಿಠ್ಠಲ* ದಾಸರಿಗೆ ಮತ್ತು,ತಮ್ಮ ಮಗನಾದ 
*ಶ್ರೀಶೇಷಗಿರಿ ದಾಸರಿಗೆ ಇವರಿಗೆಲ್ಲಾ ಆಪತ್ತು ಬಂದಾಗ ಇಂತಹ*, ವಿಷಯದಲ್ಲೂ ಸಹ ನಮ್ಮ 
*ಶ್ರೀವಿಜಯಪ್ರಭುಗಳು ಮಾಡಿದ್ದೊಂದೇ ಕೆಲಸ..*
*ಭಗವಂತನಿಗೆ ಶರಣು ಹೋಗಿದ್ದು..*.
*ಅವರಿಗೆ ಗೊತ್ತಿದ್ದ ಭಾಷೆ ಸುಳಾದಿ ಹಾಗು ಭಗವಂತನ ಕುರಿತಾದ ಪದಗಳು..*.....*
*ಏನೇ ಆಪತ್ತು ಬಂದರು ಭಗವಂತನ ಬಳಿ ಮೊರೆಹೋಗಬೇಕು ಎನ್ನುವ ಭಾಗವತರ ಲಕ್ಷ ಣ ವನ್ನು ನಾವು ಶ್ರೀ ವಿಜಯಪ್ರಭುಗಳ ಜೀವನಚರಿತ್ರೆ ಯಲ್ಲಿ ಕಾಣಬಹುದು..*


 #BabyDJ #Baby #DanceVideoAnimated #chethan #yogi #riya #FunnyBabyVideo #BabyDanceCompetition #BabyDanceCartoonVideo #ಜಶ್ವಿತ್ #okkaliga
#Bengalururural #palya #horticulture 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ