_ ಪ್ರಣವ ಮಂತ್ರವ ಗ್ರಹಿಸು ಪ್ರಣುತನಾಗಿ _ ,_ _ಪ್ರಣವ ಮಂತ್ರ ಸುಳಾದಿ_ ,_ಶ್ರೀ ವಿಜಯದಾಸರ ರಚನೆ , ರಾಗ ಸಾರಂಗ
_ ಪ್ರಣವ ಮಂತ್ರವ ಗ್ರಹಿಸು ಪ್ರಣುತನಾಗಿ _ ,_ _ಪ್ರಣವ ಮಂತ್ರ ಸುಳಾದಿ_ ,_ಶ್ರೀ ವಿಜಯದಾಸರ ರಚನೆ , ರಾಗ ಸಾರಂಗ
#ಪ್ರಣವ #ಮಂತ್ರವ #ಗ್ರಹಿಸು #ಪ್ರಣುತನಾಗಿ _ ,_ #ಪ್ರಣವಮಂತ್ರ #ಸುಳಾದಿ_ #ಶ್ರೀ ವಿಜಯದಾಸರ #ರಚನೆ , #ರಾಗಸಾರಂಗ
*ತಾತ ಪಡೆದ ನಾಯಿಯ ಜನ್ಮ ವ ಪರಿಹರಿಸಿದ ಶ್ರೀ ವಿಜಯದಾಸರು*
ನಮ್ಮ ಶ್ರೀ ವಿಜಯಪ್ರಭುಗಳು ಸಾಮಾನ್ಯ ರಲ್ಲ. ಇವರ ಮಹಿಮೆ ಅಸಂಖ್ಯಾತ, ನಮ್ಮ ಹಾಗೆ ನರ ಮನುಷ್ಯರಲ್ಲ. ದೇವತಾ ಕಕ್ಷೆಯಲ್ಲಿ ಇರುವ ಮಹಾನುಭಾವರು..*..
ಧರ್ಮ ಕರ್ಮವಶದಿಂದ ಶ್ರೀ ವಿಜಯದಾಸರ ತಂದೆಯ ತಾತ ಅವರಿಗೆ (ಪಿತೃಪಿತಾಮಹ) ನಾಯಿಯ ಜನ್ಮಬಂದಿತ್ತು ಇದನ್ನು ಅರಿತ ದಾಸರು
ಕಾಶಿಯಾತ್ರೆಗೆ ಹೋಗಿದ್ದಾಗ ಗಯಾ ವಿಷ್ಣುಪಾದದಲ್ಲಿ ಪಿತೃಗಳ ಉದ್ದಾರಕ್ಕೆ , ಪಿಂಡ ಪ್ರಧಾನ ಮಾಡಿ ಶ್ರೀ ಗಯಾ ಗದಾಧರನಿಗೆ ಅರ್ಪಿಸಲು ಅವರ ಪಿತೃ, ಪಿತಾಮಹರು, ನಾಯಿ ಯೋನಿಯಿಂದ ಮುಕ್ತರಾಗುತ್ತಾರೆ..*.
ಇದನ್ನು ಅರಿತ ಸಾಂಶರಾದ ಶ್ರೀ ವಿಜಯಪ್ರಭುಗಳು ಸೂಕ್ಷ್ಮ ರೂಪದಿಂದ ಚೀಕಲಪರವಿಯಲ್ಲಿ ಇದ್ದ ತನ್ನ
ಸಹೋದರ ರಾದ ಹಯವದನ ವಿಠ್ಠಲ ರಿಗೆ(ಆನಂದ ದಾಸರಿಗೆ) ದರ್ಶನ ಕೊಟ್ಟು
ಸಹೋದರ ಆನಂದ ನೇ !!ಇಂದು ನಾವು ಮಾಡಿದ ಗಯಾ ಶ್ರಾದ್ದದಿಂದ ತೃಪ್ತನಾದ ಶ್ರೀ ಗಯಾ ಗದಾಧರನು ಕರ್ಮವಶಾತ ನಮ್ಮ ಮುತ್ತಜ್ಜನಿಗೆ ಬಂದಿದ್ದ ನಾಯಿ ಜನ್ಮವನ್ನು ಕಳೆದನು.ಎಂದು ಹೇಳುತ್ತಾರೆ.
*ಮುತ್ತಜ್ಜನನ್ನು ಅನುಗ್ರಹ ಮಾಡಿ ಶ್ರೀ ಹರಿಯು ನಮ್ಮ ವಂಶವನ್ನು ಉದ್ದಾರ ಮಾಡಿದನು.ಏನು ಅವನ ಕಾರುಣ್ಯ!!* ಅಂತ ನಡೆದ ವಿಷಯಗಳನ್ನು ಸಹೋದರನಿಗೆ ತಿಳಿಸುವರು, ಈ ವಿಷಯವನ್ನು ತಿಳಿದ ಆನಂದ ದಾಸರಿಗೆ ಅತೀವ ಸಂತಸ ಪಡುತ್ತಾರೆ.
ಈ ಘಟನೆಯ ಬಗ್ಗೆ ಅವರ ಸೋದರರು ಆದ ಆನಂದ ದಾಸರು ಹೀಗೆ ಹೇಳುತ್ತಾರೆ.
*ಭಗೀರಥರಾಯನು ಅಂದದಿ ಜಾನ್ಹವಿತಂದ ಬಲು ಆನಂದ*|
*ವಿಗಡವಾಗಿ ಪೋದ*| *ವಂಶೋದ್ದಾರಕ ನೀತ ಅತಿ ಪ್ರಖ್ಯಾತ*|
*ಭಗವಂತನ ಲೀಲೆ ಪರಿಪರಿಇಂದಲಿ ತಿಳಿದು*| *ಮನದೊಳು ನಲಿದು*|..
*ಕಮಲನಾಭನ ಪದಕೆ* *ಗಯದಲಿ ಪಿಂಡವನು ಅಮಲ ಮನದಿಂದಲಿ ಹಾಕಲಾಗಿ*|
*ಮಮಪಿತಾ ಪಿತಾಮಹನು ನಾಯಾಗಿ ಜನಿಸಿರಲು*| *ಕ್ರಮದಿಂದ ಉದ್ದಾರ ಮಾಡಿದ*
*ಕಾರಣದಿಂದ||*
*ದಾಸರ ನೋಡಿರೋ|* *ವಿಜಯದಾಸರ ಪಾಡಿರೋ*||
ಹಿಂದೆ ಭಗವದ್ ಭಕ್ತ ನಾದ ಭಗೀರಥ ಮಹಾರಾಜನು ತಪಸ್ಸುಮಾಡಿ ಗಂಗೆಯನ್ನು ಭೂಲೋಕಕ್ಕೆ ತರಿಸಿ ತನ್ನ ಪೂರ್ವಜರ ಉದ್ದಾರ ಮಾಡಿದಂತೆ..*
*ನಮ್ಮ ಶ್ರೀವಿಜಯಪ್ರಭುಗಳು ತಮ್ಮ ಹಿರಿಯರಿಗೆ ನಾಯಿ ಜನುಮ ಬಂದಿದ್ದು ತಿಳಿದು ಗಯಾ ಕ್ಷೇತ್ರದಲ್ಲಿ ಕಾರ್ಯಗಳನ್ನು ಮಾಡಿ ಪಿತೃಗಳನ್ನು ಉದ್ದಾರ ಮಾಡಿದರು.*
ಈ ಮಹಿಮೆಯನ್ನು ಕುರಿತು ಶ್ರೀಗೋಪಾಲ ದಾಸರು ಹೇಳುತ್ತಾರೆ..
*||ದುರ್ಯೋನಿಬಂದ ವಂಶಸ್ಥರ| ಉದ್ದರಿಸಿದ್ಯೋ ವಿಜಯರಾಯ||*
*ಶ್ರೀ ವಿಜಯದಾಸರು ಭೃಗು ಋಷಿಗಳ ಅವತಾರ ಹಾಗಾಗಿ ಇದು ಅವರಿಗೆ ಸಾಧ್ಯವಾಯಿತು.. ಇದನ್ನೇ
ಶ್ರೀ ಗೋಪಾಲ ದಾಸರು ಬಾರಿ ಬಾರಿಗು ಹೇಳುತ್ತಾರೆ.*
ಇವರು ಸಾಮಾನ್ಯ ಮಾನವರಲ್ಲ.ದೇವತೆಗಳ ಕಕ್ಷೆಯಲ್ಲಿ ಬರುವ, ಋಷಿಗಳಲ್ಲಿ ಶ್ರೇಷ್ಠ ರಾದ ಇವರು ಸಾಕ್ಷಾತ್ ಶ್ರೀ ಬ್ರಹ್ಮ ದೇವರ ಮಕ್ಕಳಾದ ಶ್ರೀ ಭೃಗು ಋಷಿಗಳು..*
*ದಿವಿಜರಾ ವೇಶದಿಂದ,ಭಗವಂತನ ಆಜ್ಞೆಯಂತೆ ಧರೆಯೊಳು ಜನಿಸಿದರು..*.
*ನಾವು ಯಾವ ಯೋನಿಯಲ್ಲಿ ಬಂದರು ಸಹ ಅವರು ನಮಗೆ ಉದ್ದಾರ ಮಾಡಲಿ ಎಂದು ಅವರಲ್ಲಿ ಕೇಳಿಕೊಳ್ಳೊಣ..*
*||ವಿ||* ಎಂದು ನುಡಿಯಲು *ವಿಷ್ಣು ದಾಸನಾಗುವನು*
*||ಜ||* *ಯೆನಲು ಜನನ ಹಾನಿ*
*||ಯ||* ಎಂದು ಕೊಂಡಾಡೆ *ಯಮ ಭಟರು ನೋಯಿಸರು*.
*||ರಾಯ||*
#ಸಿಹಿತಿನಿಸು #ತಿಂಡಿ #ಕೊಂಬು #ಮಸಾಲೆ #ಭಾರತೀಯಆಹಾರ #ರುಚಿಕರ #ಖಾರ #ಆಹಾರ #ದೋಸೆ #ಇಡ್ಲಿ #ಬಿರಿಯಾನಿ #ಮುದ್ದೆ #ರೊಟ್ಟಿ #ಖಾದ್ಯ
#Cafe #canteen #hotel #ಸಾರು #ಊಟ tea #coffee #milk
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏