_ಆರಾದರು ಛೀ ಎನಲಿ ಆರಾದರು ಥೂ ಎನಲಿ_,_ _ಸಾಧನ ಸುಳಾದಿ_ ,_ಶ್ರೀವಿಜಯದಾಸರ ರಚನೆ,_ರಾಗ ತೋಡಿ

_ಆರಾದರು ಛೀ ಎನಲಿ ಆರಾದರು ಥೂ ಎನಲಿ_,_ _ಸಾಧನ ಸುಳಾದಿ_ ,_ಶ್ರೀವಿಜಯದಾಸರ ರಚನೆ,_ರಾಗ ತೋಡಿ

#ಶ್ರೀ #ವಿಜಯದಾಸರ #ಸುಳಾದಿ: #ಸತ್ಸಭೆಗೆ #ನೇಮಿಸುವೆ #ಮಾಸ #ನಿಯಾಮಕ #ತ್ರಿವಿಕ್ರಮಾಯ #ನಮಃ #ರಾಗ #ತಾಳ #ಕಾಮ #ವಿಸ್ತರ #ಮಹಿಮ



ರಾಗ - ಭೈರವಿ : ತಾಳ - ಧೃವತಾಳ

*ಧೃವತಾಳ :*

*ಹರಿದಾಸರೊಡನಾಡು, ಹರಿಯಂಘ್ರಿ ಯುಗ್ಮನೋಡು*
*ಹರಿಯೆಂದು ಕೊಂಡಾಡು, ಹರಿನಾಮ ಹಾಡಿ ಪಾಡು*
*ಹರಿ ಪ್ರಸಾದವೆ ಬೇಡು, ಹರಿಸೇವೆಯನ್ನು ಮಾಡು*
*ಹರಿಗೆ ಕರವ ನೀಡು, ಹರಿಯ ಬಿಡದೆ ಕಾಡು*
*ಹರಿಯ ಪೊಗಳಿ ಪಾಡು, ಹರಿಗೆ ಮನಸು ಕೊಡು*
*ಹರಿಗೊಪ್ಪಿಸು ಈ ಬೀಡು, ಹರಿದ್ವೇಷಿಗಳ ಬಿಡು*
*ಹರಿಧ್ಯಾನದಲ್ಲಿ ಕೂಡು, ಹರಿಕರುಣದ ಜೋಡು -*
*ಹರಿಯದಂತೆ ತೊಡು, ಹರಿನಗರಿಗೆ ಓಡು*
*ಹರಿಯಲ್ಲಿ ರತಿ ಇಡು, ಹರಿಗೆ ಇಲ್ಲವೋ ಈಡು*
*ಹರಿವಿಜಯವಿಟ್ಠಲನ್ನ ಹರಿಯೆಂದರೆ ಈ ನಾಡು*
*ಹರುಷ ಬಡುವುದು ನೋಡು, ಹರಿದು ಪೋಗದೆ ಕೇಡು ll 1 ll

*ಮಟ್ಟತಾಳ :*

*ಹರಿಯ ಭಕುತಿ ಹರಿ ಬಲ್ಲವನೆಲ್ಲ*
*ಹರಿತಾ ಹತ್ತರೊಳಗೆ ಹರಿ ಹರಿದಾಡುವ*
*ಹರಿವಂತನು ಕಾಣೊ, ಹರಿ ದಿಕ್ಕುವ ಭವದ*
*ಹರಿಯೊಳಗಿಂದಲಿ ಹರಿದೆದ್ದು ಬಪ್ಪ, ಹರಿಗಂಡವನೆನ್ನು*
*ಹರಿವದನ ನಮ್ಮ ವಿಜಯವಿಟ್ಠಲ ನರ -*
*ಹರಿನಾಮವೆ ಪರಿಹರಿಸುವುದು ನರಕ ll 2 ll*

*ತ್ರಿವಿಡಿತಾಳ :*

*ಹರಿಯ ನಂಬಿರೊ ಜನರು ವೈರಾಗ್ಯಪರರಾಗಿ*
*ಹರಿದು ಪೋಗದೆ ನಿತ್ಯ ಪರರ ಒಡವಿಗೆ*
*ಹರಿ ಹನುಮಂತ ಒಂದೇ ಎಂದು ತಿಳಿದು*
*ಹರಿ ಇದ್ದಲ್ಲಿ ಪವಮಾನ ಇಪ್ಪನೆಂದು*
*ಹರಿಯ ಭಜಿಸಿ ಪವಮಾನನ್ನೆ ತೊರೆದರೆ*
*ಹರಿಪುರವಾಗದು ಶತಕಲ್ಪಕ್ಕೂ*
*ಹರಿಶರಣರ ಬಳಿವಿಡಿದು ಭಕುತಿಯಲ್ಲಿ*
*ಹರಿಶ್ರವಣವ ಕೇಳು ಶ್ರವಣದಲ್ಲಿ*
*ಹರಿತವಂದಿತ ನಮ್ಮ ವಿಜಯವಿಟ್ಠಲರೇಯ*
*ಹರಿ ಎಂದು ನುಡಿದರೆ ಹರಿದು ಬಪ್ಪನು ಕಾಣೋ ll 3 ll*

*ಅಟ್ಟತಾಳ :*

*ಹರಿಯ ಭಕುತಿ ಕಂಡವರಿಗೆ ದೊರಕುವದೆ ?*
*ಹರಿದೇರಿ ಪರ್ವತಾಗ್ರದಿಂದ ಭೂಮಿಗೆ*
*ಹರಿಯ ಬಿದ್ದರೆ ಇಲ್ಲ, ಸುತ್ತುವ ಸುಳಿಯೊಳು*
*ಹರಿದು ಮುಣುಗಿ ಎದ್ದು ಬಂದರೆ ಇಲ್ಲ*
*ಹರಿಯರೊಳಗೆ ನಿತ್ಯಹಗಲಿರುಳು ತಲೆ*
*ಹರಿ ಮಾಡಿಕೊಂಡು ನಭಕೆಪಾರಿದರಿಲ್ಲ*
*ಹರಿಭಕುತಿ ಕಂಡವರಿಗೆ ಸೂರೆ ?*
*ಹರಿಭಕುತಿ ಸಂಪಾದನೆ ಗಂಟೇ ?*
*ಹಾರಿಣಾಂಕಕುಲಪಾಲ ವಿಜಯವಿಟ್ಠಲನಂಘ್ರಿ*
*ಹರಿಯ ಬಲ್ಲವನಿಗೆ ಸುಲಭಸಾಧ್ಯವೆನ್ನಿ ll 4 ll*

*ಆದಿತಾಳ :*

*ಹರಿಯೆ ಪರಮಪುರುಷ, ಹರಿ ಪರಾತ್ಪರ ದೇವ*
*ಹರಿ ಚತುರನಾಶರಹಿತ, ಹರಿ ಅಚಿಂತ್ಯಾದ್ಭುತ*
*ಹರಿ ಅಪ್ರಾಕೃತಕಾಯ, ಹರಿ ಪ್ರಳಯವಿರಹಿತ*
*ಹರಿ ಮುಕ್ತಾಶ್ರಯ, ಹರಿ ಸರ್ವಾಂತರ್ಯಾಮಿ*
*ಹರಿ - ಜೀವ - ಜಡಕೆ ಭೇದ, ಹರಿ ಅನುಮಹಾರೂಪ*
*ಹರಿ ಕರ್ತಾ, ಜಗತ್ಕಾರಣ, ಹರಿರಮಾದಯಪ್ರೀಯ*
*ಹರಿ ವೈಕುಂಠ ರಮಣ, ವಿಜಯವಿಟ್ಠಲರೇಯ*
*ಹರಿ ತೋರುವನು ಭಕುತಿ ಕೈಕೊಂಡ ಮನುಜರಿಗೆ ll 5 ll*

*ಜತೆ : ಭಕುತಿಗೆ ಕೇಡಿಲ್ಲ ಅನಂತಕಾಲಕ್ಕೆ*
*ಭಕುತಿಪಡಿಯಿರೋ ವಿಜಯವಿಟ್ಠಲನಲ್ಲಿ ll - 

'ಭಕ್ತೈಕವಶ್ಯ ಪ್ರಭುಹು' ಅಂದಂತೆ ಶ್ರೀಹರಿಯಲ್ಲಿ, ಜ್ಞಾನಪೂರ್ವಕ ಮಾಡುವ ಭಕ್ತಿಗೆ ಮಾತ್ರ ವಶನಾಗುವ. ಅಂದರೆ ಅನುಗ್ರಹಿಸುವ. ಅದಕ್ಕೇ ದಾಸರು *'ಭಕುತಿ ಪಡಿಯಿರೋ ವಿಜಯವಿಟ್ಠಲನಲ್ಲಿ'* ಎಂದದ್ದು. ದಾಸರು ಈ ಸುಳಾದಿಯಲ್ಲಿ ತಿಳಿಸಿದ ಪ್ರತಿಪದ ವಾಕ್ಯವೂ ಅನಂತಾರ್ಥ ಗರ್ಭಿತವಾಗಿದೆ. ಇದರ ಅಧ್ಯಯನ ಅನುಷ್ಠಾನ - ಅನುಸಂಧಾನಗಳು ಸತ್ಸಾಧನೆಗೆ ಮಾರ್ಗದರ್ಶಕಗಳೂ ಎಂಬಲ್ಲಿ ಸ


ರಾಗ - : ತಾಳ - 

ಜೋಕುಮಾರನೆಂದು ಪಾಡಿದಳೊ
ಲೋಕಮೋಹಿಸುವಂಥ ಹೋಲಿಕೆಯವನ ಗೋಪಿ ll ಪ ll

ಬಾಯಲ್ಲಿ ಬೆಣ್ಣೆ ಬಗೆಬಗೆ ವೈಯ್ಯಾರ
ಕಾಯ ನೋಡಿದರದು ಬಲು ಕಪ್ಪು
ಮಾಯದ ವೇಶದವ ಮನೆ ಮನೆ ತಿರುಗುವ
ಸ್ತ್ರೀಯರ ಕಾಣುತ ಭಂಡಾಟನಾಡುವ ll 1 ll

ವಾವಿಗಳಿಲ್ಲದವಳ ತಾ ಮಾರಿ ಗಂಡು
ಆವಾಗ ಬಂದರಿವ ಇದೆ ತೆರನು
ದೇವದಾನವರೊಳಗಿವನೆ ಬಲು ಚಲುವ
ಕೇವಲ ನಾಚಿಕೆ ತೊರೆದ ಲಂಡನ್ನ ll 2 ll

ಅಷ್ಟಮಿ ದಿನದಲ್ಲಿ ಒಬ್ಬರ ವಶನಾಗಿ
ಬುಟ್ಟಿಯೊಳಗೆಯಿದ್ದು ಹೊರಗೆ ಪೋಪಾ
ಪಟ್ಟ ಗುಡುಪಾ ನಮ್ಮ ವಿಜಯವಿಟ್ಠಲರೇಯಾ
ಸೊಟ್ಟವಳನ ಬಿಡದಿಪ್ಪಕುವಲ್ಲಭಾht


tps://youtu.be/Tclv7N8LyAA?feature=shared
                      

ರಾಗ - : ತಾಳ -

ಕಾಮಹರ ಒಬ್ಬ ತಾನೆ ಬಲ್ಲಾ l
ರಾಮ ರಾಮ ಸೀತಾರಾಮ ರಾಮನಲ್ಲದಿಲ್ಲವೆಂದು ll ಪ ll

ಕೈಯಲಿ ಕಿನ್ನರಿ ಧರಿಸಿ ಸಿರಿಮೊಗದಿಂದ l
ಮೈಯಲಿ ದ್ವಾದಶ ಪುಂಡ್ರ ಧರಿಸಿ l
ಕೈಲಾಸಗಿರಿಯಲ್ಲಿ ಪಾರ್ವತಿ ಕೂಡ ಜಗ
ದಯ್ಯನಯ್ಯ ಜಗದೊಡಿಯ ರಾಮನಲ್ಲದಿಲ್ಲೆಂದು ll 1 ll

ಫಣಿಯಾಭರಣವು ಪೆಡೆಯೆತ್ತಿ ಇರಲು l
ಮಣಿ ಮಣಿ ರುಂಡಮಾಲೆ ತೂಗಾಡಲು l
ಕುಣಿದು ಕಣಕಾಲಿಂದ ಥಕ್ ಥಕ್ ಥೈ ರು
ಕ್ಮಿಣಿ ಪತಿ ಸರ್ವೋತ್ತಮ ರಾಮನಲ್ಲದಿಲ್ಲವೆಂದು ll 2 ll

ಕಾಳಕೂಟದ ವಿಷಬಿಂದು ಮಾತುರನುಂಗೆ l
ತಾಳಲಾರದೆ ತಳಮಳವಗೊಂಡು l
ಕಾಳಿಮರ್ದನ ಕಮಲಾಯತಾಕ್ಷ ಎನ್ನ l
ಪಾಲಿಸಿದ ಪರಮಾತ್ಮ ರಾಮನಲ್ಲದಿಲ್ಲವೆಂದು ll 3 ll

ಗಜಮುಖ ತಾಳವ ಪಿಡಿದು ತಥೈ ಎನ್ನೆ l
ಅಜಸುತ ರಿಪು ಮದ್ದಳಿಯೆ ಮುಟ್ಟಿ l
ಗಜ ಚರ್ಮಾಂಬರ ಗಾಯನವ ಮಾಡುತ-ತ್ರಿ
ಜಗಾಧಿಪತಿ l ವಿಷ್ಣು ರಾಮನಲ್ಲದಿಲ್ಲವೆಂದು ll 4 ll

ಆರು ಮುಖದವ ಶಂಖವನ್ನು ಊದೆ l
ಭೈರವ ನಾಗಸ್ವರವ ನುಡಿಸೆ l
ಚಾರು ಪ್ರಥಮ ಭೂತ ತಲೆ ಚಪ್ಪಳಿಡೇ l
ಧಾರಣಿಧರ ಸೀತಾರಾಮನಲ್ಲದಿಲ್ಲವೆಂದು ll 5 ll

ಗೋರಾಜ ಸರಿಗಮಪದನಿಸ ಎಂದು ನಲಿಯೇ l
ಉರಗಾದಿ ಮೂಷಕಾದಿ ಚಿಗಿದಾಡಲು l
ವಾರಣದ ಗಂಗೆ ಸಿರದಲಿ ತುಳುಕಲು l
ನಾರಾಯಣ ಪರದೈವ ರಾಮನಲ್ಲದಿಲ್ಲವೆಂದು ll 6 ll

ತುಂಬುರುನಾರಂದ ತಂದನ್ನತಾ ಎನ್ನೆ l
ಅಂಬರದಿಂದ ಪೂಮಳೆಗರೆಯೆ l
ಅಂಬುಜಪತಿ ಶಿರಿ ವಿಜಯವಿಟ್ಠಲ ವಿ
ಶ್ವಂಭರಜಾಂಡಕರ್ತು ರಾಮನಲ್ಲದಿಲ್ಲವೆಂದು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ