_ ದಾಸರ ಮಹಿಮೆಗೆ ಅನಂತ ನಮೊ ನಮೊ _,_ _ಶ್ರೀಪುರಂದರದಾಸರ ಸ್ತೋತ್ರ ಸುಳಾದಿ_ ,_ಶ್ರೀ ವಿಜಯದಾಸರ ರಚನೆ ,

ದಾಸರ ಮಹಿಮೆಗೆ ಅನಂತ ನಮೊ ನಮೊ _,_ _ಶ್ರೀಪುರಂದರದಾಸರ ಸ್ತೋತ್ರ ಸುಳಾದಿ_ ,_ಶ್ರೀ ವಿಜಯದಾಸರ ರಚನೆ 
#ದಾಸರ #ಮಹಿಮೆಗೆ #ಅನಂತ #ನಮೊ #ಶ್ರೀಪುರಂದರದಾಸರ #ಸ್ತೋತ್ರಸುಳಾದಿ #ವಿಜಯದಾಸರ #ರಚನೆ 


ಶ್ರೀ ಹರಿ ವಾಯು ಗುರುಗಳ ಅನುಗ್ರಹದಿಂದ ಸಂತಸದಾಯಕವಾಗಿ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಸನ್ಮಂಗಳವನ್ನುಂಟು ಮಾಡಲಿ.





ರಾಗ - ವರಾಳಿ : ತಾಳ - ತ್ರಿವಿಡಿತಾಳ



ಪ್ರಥಮ ದೈವವೇ ಪಂಢರಿರೇಯಾ 

ಪೃಥ್ವಿಯೊಳಗೆ ಭಾಗೀರಥಿಗೆ ಪಥವ ತೋರೊ ll ಪ ll 


ಸಕಲ ಭಯನಾಶ ಸಾತ್ವಿಕ ಮೂರುತಿ

ಭಕ್ತಜನಪೋಷಕ ನೀನಲ್ಲವೇ

ತ್ವಕು ಇಂದ್ರಿಯಂಗಳು ನಿನ್ನಾಧೀನವೋ

ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ ll 1 ll


ಸರ್ವರಂತರಿಯ ಸಿದ್ಧ ಫಲದಾಯಕ

ಸರ್ವರಲಿ ಸ್ವಾಮಿಯೆಂದೆನಿಪ

ಸರ್ವ ವಿಘ್ನೋಪ ಶಾಂತಾ ವೇದಾಂತನೆ

ಗೀರ್ವಾಣ ಮುನಿನುತ ಗಿರಿಧರ ದೇವಾ ll 2 ll


ಸಾಧು ಮೂರುತಿ ಸಿದ್ಧ ಫಲದಾ

ಬೋಧ ಕೀರುತಿ ಆದಿಪರಬೊಮ್ಮ

ವಿಜಯವಿಟ್ಠಲರೇಯಾ ನೀನು

ಈ ಜಗದೊಳು ಭೀಮಾ ತೀರನಿವಾಸಾ ll 3 l


ಪ್ರಥಮ ದೈವವೇ ಪಂಢರಿರೇಯಾ 
ಪೃಥ್ವಿಯೊಳಗೆ ಭಾಗೀರಥಿಗೆ ಪಥವ ತೋರೊ ll ಪ  ll 

ಸಕಲ ಭಯನಾಶ ಸಾತ್ವಿಕ ಮೂರುತಿ
ಭಕ್ತಜನಪೋಷಕ ನೀನಲ್ಲವೇ
ತ್ವಕು ಇಂದ್ರಿಯಂಗಳು ನಿನ್ನಾಧೀನವೋ
ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ ll 1 ll

ಸರ್ವರಂತರಿಯ ಸಿದ್ಧ ಫಲದಾಯಕ
ಸರ್ವರಲಿ ಸ್ವಾಮಿಯೆಂದೆನಿಪ
ಸರ್ವ ವಿಘ್ನೋಪ ಶಾಂತಾ ವೇದಾಂತನೆ
ಗೀರ್ವಾಣ ಮುನಿನುತ ಗಿರಿಧರ ದೇವಾ ll 2 ll

ಸಾಧು ಮೂರುತಿ ಸಿದ್ಧ ಫಲದಾ
ಬೋಧ ಕೀರುತಿ ಆದಿಪರಬೊಮ್ಮ
ವಿಜಯವಿಟ್ಠಲರೇಯಾ ನೀನು
ಈ ಜಗದೊಳು ಭೀಮಾ ತೀರನಿವಾಸಾ ll 3 ll


ಶ್ರೀ ವೆಂಕಟೇಶ ದೇವರ ಅನುಗ್ರಹ ನಿಮ್ಮ ಹಾಗೂ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಮೇಲಿರಲಿ.


ರಾಗ - ಮಧ್ಯಮಾವತಿ : ತಾಳ - 

ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ll ಪ ll



ತೋರಯ್ಯ ನಿನ್ನ ದಯ ತೋಯಜಾಂಬಕನೆ ll ಅ ಪ ll



ದುರುಳರ ತರಿವಂಥ ವರಚಕ್ರಧಾರಿ l

ಪರಮಾತ್ಮ ಪರಬೊಮ್ಮ ಪರರಿಗುಪಕಾರಿ ll 1 ll



ಅರಣ್ಯದಿ ಮೊರೆಯಿಟ್ಟ ಕರಿರಾಜಗೊಲಿದಿ l

ತರಳಪ್ರಹ್ಲಾದನ್ನ ವೈರಿಯ ಮುರಿದಿ ll 2 ll



ವರಶೇಷಗಿರಿಯಲ್ಲಿ ನಿರುತ ನೀನಿರುವಿ l

ಹರಿದಾಸರು ಕರೆದರೆ ಎಲ್ಲಿದ್ದರೂ ಬರುವಿ ll 3 ll



ಅನಂತನಾಮನೆ ನಿನ್ನ ಅನಂತಸದ್ಗುಣವ l

ನೆನವರಿಗೊಲಿವಂಥ ಪವಮಾನನೀಶಾ ll 4 ll



ಅಜಭವಾಧಿಪ ನೀನು ವಿಜಯಸಾರಥಿಯೆ l

ತ್ರಿಜಗವಂದಿತ ಈಶ ವಿಜಯವಿಟ್ಠಲನೆ ll 5 ll




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ