_ ದಾಸರ ಮಹಿಮೆಗೆ ಅನಂತ ನಮೊ ನಮೊ _,_ _ಶ್ರೀಪುರಂದರದಾಸರ ಸ್ತೋತ್ರ ಸುಳಾದಿ_ ,_ಶ್ರೀ ವಿಜಯದಾಸರ ರಚನೆ ,
ದಾಸರ ಮಹಿಮೆಗೆ ಅನಂತ ನಮೊ ನಮೊ _,_ _ಶ್ರೀಪುರಂದರದಾಸರ ಸ್ತೋತ್ರ ಸುಳಾದಿ_ ,_ಶ್ರೀ ವಿಜಯದಾಸರ ರಚನೆ
#ದಾಸರ #ಮಹಿಮೆಗೆ #ಅನಂತ #ನಮೊ #ಶ್ರೀಪುರಂದರದಾಸರ #ಸ್ತೋತ್ರಸುಳಾದಿ #ವಿಜಯದಾಸರ #ರಚನೆ
ಶ್ರೀ ಹರಿ ವಾಯು ಗುರುಗಳ ಅನುಗ್ರಹದಿಂದ ಸಂತಸದಾಯಕವಾಗಿ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಸನ್ಮಂಗಳವನ್ನುಂಟು ಮಾಡಲಿ.
ರಾಗ - ವರಾಳಿ : ತಾಳ - ತ್ರಿವಿಡಿತಾಳ
ಪ್ರಥಮ ದೈವವೇ ಪಂಢರಿರೇಯಾ
ಪೃಥ್ವಿಯೊಳಗೆ ಭಾಗೀರಥಿಗೆ ಪಥವ ತೋರೊ ll ಪ ll
ಸಕಲ ಭಯನಾಶ ಸಾತ್ವಿಕ ಮೂರುತಿ
ಭಕ್ತಜನಪೋಷಕ ನೀನಲ್ಲವೇ
ತ್ವಕು ಇಂದ್ರಿಯಂಗಳು ನಿನ್ನಾಧೀನವೋ
ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ ll 1 ll
ಸರ್ವರಂತರಿಯ ಸಿದ್ಧ ಫಲದಾಯಕ
ಸರ್ವರಲಿ ಸ್ವಾಮಿಯೆಂದೆನಿಪ
ಸರ್ವ ವಿಘ್ನೋಪ ಶಾಂತಾ ವೇದಾಂತನೆ
ಗೀರ್ವಾಣ ಮುನಿನುತ ಗಿರಿಧರ ದೇವಾ ll 2 ll
ಸಾಧು ಮೂರುತಿ ಸಿದ್ಧ ಫಲದಾ
ಬೋಧ ಕೀರುತಿ ಆದಿಪರಬೊಮ್ಮ
ವಿಜಯವಿಟ್ಠಲರೇಯಾ ನೀನು
ಈ ಜಗದೊಳು ಭೀಮಾ ತೀರನಿವಾಸಾ ll 3 l
ಪ್ರಥಮ ದೈವವೇ ಪಂಢರಿರೇಯಾ
ಪೃಥ್ವಿಯೊಳಗೆ ಭಾಗೀರಥಿಗೆ ಪಥವ ತೋರೊ ll ಪ ll
ಸಕಲ ಭಯನಾಶ ಸಾತ್ವಿಕ ಮೂರುತಿ
ಭಕ್ತಜನಪೋಷಕ ನೀನಲ್ಲವೇ
ತ್ವಕು ಇಂದ್ರಿಯಂಗಳು ನಿನ್ನಾಧೀನವೋ
ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ ll 1 ll
ಸರ್ವರಂತರಿಯ ಸಿದ್ಧ ಫಲದಾಯಕ
ಸರ್ವರಲಿ ಸ್ವಾಮಿಯೆಂದೆನಿಪ
ಸರ್ವ ವಿಘ್ನೋಪ ಶಾಂತಾ ವೇದಾಂತನೆ
ಗೀರ್ವಾಣ ಮುನಿನುತ ಗಿರಿಧರ ದೇವಾ ll 2 ll
ಸಾಧು ಮೂರುತಿ ಸಿದ್ಧ ಫಲದಾ
ಬೋಧ ಕೀರುತಿ ಆದಿಪರಬೊಮ್ಮ
ವಿಜಯವಿಟ್ಠಲರೇಯಾ ನೀನು
ಈ ಜಗದೊಳು ಭೀಮಾ ತೀರನಿವಾಸಾ ll 3 ll
ಶ್ರೀ ವೆಂಕಟೇಶ ದೇವರ ಅನುಗ್ರಹ ನಿಮ್ಮ ಹಾಗೂ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಮೇಲಿರಲಿ.
ರಾಗ - ಮಧ್ಯಮಾವತಿ : ತಾಳ -
ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ll ಪ ll
ತೋರಯ್ಯ ನಿನ್ನ ದಯ ತೋಯಜಾಂಬಕನೆ ll ಅ ಪ ll
ದುರುಳರ ತರಿವಂಥ ವರಚಕ್ರಧಾರಿ l
ಪರಮಾತ್ಮ ಪರಬೊಮ್ಮ ಪರರಿಗುಪಕಾರಿ ll 1 ll
ಅರಣ್ಯದಿ ಮೊರೆಯಿಟ್ಟ ಕರಿರಾಜಗೊಲಿದಿ l
ತರಳಪ್ರಹ್ಲಾದನ್ನ ವೈರಿಯ ಮುರಿದಿ ll 2 ll
ವರಶೇಷಗಿರಿಯಲ್ಲಿ ನಿರುತ ನೀನಿರುವಿ l
ಹರಿದಾಸರು ಕರೆದರೆ ಎಲ್ಲಿದ್ದರೂ ಬರುವಿ ll 3 ll
ಅನಂತನಾಮನೆ ನಿನ್ನ ಅನಂತಸದ್ಗುಣವ l
ನೆನವರಿಗೊಲಿವಂಥ ಪವಮಾನನೀಶಾ ll 4 ll
ಅಜಭವಾಧಿಪ ನೀನು ವಿಜಯಸಾರಥಿಯೆ l
ತ್ರಿಜಗವಂದಿತ ಈಶ ವಿಜಯವಿಟ್ಠಲನೆ ll 5 ll
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏