_ಏಸೇಸು ಜನುಮಗಳು ಸೂಸಿ ಬಂದರೆ ಏನು_,_ _ಶ್ರೀಹರಿಭಕ್ತರ ಸಂಗ ಸುಳಾದಿ_ ,_ಶ್ರೀವೇಣುಗೋಪಾಲದಾಸರ ರಚನೆ,_ರಾಗ ಭೈರವಿ.
"-ಶ್ರೀ ಏಸೇಸು ಜನುಮಗಳು ಸೂಸಿ ಬಂದರೆ ಏನು_,_ _ಶ್ರೀಹರಿಭಕ್ತರ ಸಂಗ ಸುಳಾದಿ_ ,_ಶ್ರೀವೇಣುಗೋಪಾಲದಾಸರ ರಚನೆ,_ರಾಗ ಭೈರವಿ
#ಏಸೇಸು #ಜನುಮ #ಸೂಸಿ #ಶ್ರೀಹರಿಭಕ್ತರ £ಸಂಗ #ಸುಳಾದಿ #ವೇಣುಗೋಪಾಲ
ದಾಸರು ತಮ್ಮ ಹರಿಕಥೆಗಳಿಂದ ಬಹಳ ಪ್ರಸಿದ್ಧರಾಗಿದ್ದಾರೆ ಮತ್ತು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.
ಶ್ರೀ ವಿಜಯದಾಸಾರ್ಯರ ಪರಮ ಕಾರುಣ್ಯಕ್ಕೆ ಪಾತ್ರರಾದ, (ಹಿಂದೆ ಶ್ರೀ ಪಂಗನಾಮ ತಿಮ್ಮಣ್ಣದಾಸರಾದ- ಶ್ರೀ ವೈಕುಂಠದಾಸರು, ಇವರೇ ಮುಂದೆ ಮೊದಲಕಲ್ಲು ಶೇಷದಾಸರೂ ಹೌದು) ಆಗಿನ ಕಾಲದಲ್ಲಿ ಆದವಾನಿಯ ದೀವಾನರಾಗಿದ್ದರೂ, ಶ್ರೀ ವಿಜಯದಾಸಾರ್ಯರ ಕಾರುಣ್ಯದಂತೆ ವೈರಾಗ್ಯವನ್ನು ತಾಳಿ, ಪರಮಾತ್ಮನ ನಿತ್ಯ ಸೇವೆಯಲ್ಲಿ ನಿರತರಾಗಿ, ಪದ, ಪದ್ಯ ಸುಳಾದಿಗಳನ್ನು ರಚಿಸಿ ಸಜ್ಜನರ ಸಾಧನೆಗೆ ಹಾದಿಯನ್ನು ತೋರಿಸಿದವರಾದ, ಶಕ್ತಿಯಲ್ಲಿ ತಿಮ್ಮಣ್ಣ ಎಂದೇ ಹೆಸರಾದವರಾದ ಶ್ರೀ *ವೇಣುಗೋಪಾಲದಾಸ.
ದಾಸರ ಹೆಸರು: ವೇಣುಗೋಪಾಲದಾಸರು
ಜನ್ಮ ಸ್ಥಳ: ಅದವಾನಿ
ತಂದೆ ಹೆಸರು: ರುಕ್ಮಣ್ಣ
ತಾಯಿ ಹೆಸರು: ಮಾಹಿತಿ ಲಭ್ಯವಿಲ್ಲ
ಕಾಲ: 1732 -
ಅಂಕಿತನಾಮ: ವೇಣುಗೋಪಾಲವಿಠಲ
ಲಭ್ಯ ಕೀರ್ತನೆಗಳ ಸಂಖ್ಯೆ : 27
ಗುರುವಿನ ಹೆಸರು: ವಿಜಯದಾಸರು
ಆಶ್ರಯ: ಅದವಾನಿಯನನಾಬ ಬಸಾಲತ್ಜಂಗ್
ಪೂರ್ವಾಶ್ರಮದ ಹೆಸರು: ತಿಮ್ಮಣ್ಣ
ಮಕ್ಕಳು: ಅವರ ಹೆಸರು: ವಾಸಪ್ಪ ಎಂಬ ಮಗ - ಇವನನ್ನು ಇಸ್ಲಾಂಧರ್ಮಕ್ಕೆ ಮತಾಂತರ ಮಾಡಿಸಲಾಗಿತ್ತು.
ವೃತ್ತಿ: ಅದವಾನಿಯ ನವಾಬನ ಆಸ್ಥಾನದಲ್ಲಿ ದಿವಾನ
ಕಾಲವಾದ ಸ್ಥಳ ಮತ್ತು ದಿನ: ಮಲಗವೇಲಿಯೆಂಬ ಗ್ರಾಮ #ರಚನೆ #ರಾಗ #ಭೈರವಿವೇಣುಗೋಪಾಲ ದಾಸರು ತಮ್ಮ ಹರಿಕಥೆಗಳಿಂದ ಬಹಳ ಪ್ರಸಿದ್ಧರಾಗಿದ್ದಾರೆ ಮತ್ತು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.
ಶ್ರೀ ವಿಜಯದಾಸಾರ್ಯರ ಪರಮ ಕಾರುಣ್ಯಕ್ಕೆ ಪಾತ್ರರಾದ, (ಹಿಂದೆ ಶ್ರೀ ಪಂಗನಾಮ ತಿಮ್ಮಣ್ಣದಾಸರಾದ- ಶ್ರೀ ವೈಕುಂಠದಾಸರು, ಇವರೇ ಮುಂದೆ ಮೊದಲಕಲ್ಲು ಶೇಷದಾಸರೂ ಹೌದು) ಆಗಿನ ಕಾಲದಲ್ಲಿ ಆದವಾನಿಯ ದೀವಾನರಾಗಿದ್ದರೂ, ಶ್ರೀ ವಿಜಯದಾಸಾರ್ಯರ ಕಾರುಣ್ಯದಂತೆ ವೈರಾಗ್ಯವನ್ನು ತಾಳಿ, ಪರಮಾತ್ಮನ ನಿತ್ಯ ಸೇವೆಯಲ್ಲಿ ನಿರತರಾಗಿ, ಪದ, ಪದ್ಯ ಸುಳಾದಿಗಳನ್ನು ರಚಿಸಿ ಸಜ್ಜನರ ಸಾಧನೆಗೆ ಹಾದಿಯನ್ನು ತೋರಿಸಿದವರಾದ, ಶಕ್ತಿಯಲ್ಲಿ ತಿಮ್ಮಣ್ಣ ಎಂದೇ ಹೆಸರಾದವರಾದ ಶ್ರೀ *ವೇಣುಗೋಪಾಲದಾಸ.
ದಾಸರ ಹೆಸರು: ವೇಣುಗೋಪಾಲದಾಸರು
ಜನ್ಮ ಸ್ಥಳ: ಅದವಾನಿ
ತಂದೆ ಹೆಸರು: ರುಕ್ಮಣ್ಣ
ತಾಯಿ ಹೆಸರು: ಮಾಹಿತಿ ಲಭ್ಯವಿಲ್ಲ
ಕಾಲ: 1732 -
ಅಂಕಿತನಾಮ: ವೇಣುಗೋಪಾಲವಿಠಲ
ಲಭ್ಯ ಕೀರ್ತನೆಗಳ ಸಂಖ್ಯೆ : 27
ಗುರುವಿನ ಹೆಸರು: ವಿಜಯದಾಸರು
ಆಶ್ರಯ: ಅದವಾನಿಯನನಾಬ ಬಸಾಲತ್ಜಂಗ್
ಪೂರ್ವಾಶ್ರಮದ ಹೆಸರು: ತಿಮ್ಮಣ್ಣ
ಮಕ್ಕಳು: ಅವರ ಹೆಸರು: ವಾಸಪ್ಪ ಎಂಬ ಮಗ - ಇವನನ್ನು ಇಸ್ಲಾಂಧರ್ಮಕ್ಕೆ ಮತಾಂತರ ಮಾಡಿಸಲಾಗಿತ್ತು.
ವೃತ್ತಿ: ಅದವಾನಿಯ ನವಾಬನ ಆಸ್ಥಾನದಲ್ಲಿ ದಿವಾನ
ಕಾಲವಾದ ಸ್ಥಳ ಮತ್ತು ದಿನ: ಮಲಗವೇಲಿಯೆಂಬ ಗ್ರಾಮ
ಇಂದ್ರಾಂಶರಾದ ಶ್ರೀ ದಾಸಾರ್ಯರು ಆದವಾನಿಯ ದಿವಾನ ರುಕ್ಮಣ್ಣರ ಪುತ್ರರು.ಶ್ರೀ ವಿಜಯದಾಸಾರ್ಯರ ಪಂಗನಾಮ ಎಂಬ ಸಂಬೋಧನೆಯಿಂದ ತಾವು ಬೇಲೂರಿನ ವೈಕುಂಠದಾಸರಾಗಿದ್ದ ಸ್ಮೃತಿ ಹೊಂದುತ್ತಾರೆ. ಆದವಾನಿಯ ಬಸಾಲತ್ ಜಂಗ್ ನವಾಬನ ಬಳಿ ಅನುವಂಶಿಕವಾದ ದಿವಾನ್ ಪದವಿಯ ಅಧಿಕಾರದಲ್ಲಿದ್ದರೂ ಲೌಕಿಕ ವಿಷಯ ವಿರಕ್ತರಾಗಿ ಶ್ರೀ ವಿಜಯಾರ್ಯರಿಂದ ತಮ್ಮ 24ನೆಯ ಹರಯದಲ್ಲಿ ಶ್ರೀ ವೇಣುಗೋಪಾಲ ವಿಠಲಾಂಕಿತರಾಗುತ್ತಾರೆ.
ಆದವಾನಿಯಲ್ಲಿ ಕಾರ್ತೀಕಮಾಸದಲ್ಲಿ ಇವರು ಮಾರಿಕಾ(ಪ್ಲೇಗ್) ಮಹಮ್ಮಾರಿಗೆ ಈಡಾದಾಗ ಶ್ರೀ ವಿಜಯದಾಸರ ಅನುಗ್ರಹದಿಂದ ಪಾರಾಗಿದ್ದ, ಸವಿನೆನಿಪಿಗಾಗಿ ಶ್ರೀ ವಿಜಯದಾಸರಿಂದ ಶ್ರೀ ಮುಖ್ಯಪ್ರಾಣದೇವರ ಪ್ರತಿಷ್ಠೆ ಮಾಡಿಸಿ ದೇವಾಲಯ ಶಿಲಾಸ್ಥಂಭ ಮಂಟಪ ಹಾಕಿಸಿ ವಿಜಯಾರ್ಯ ರಿಗೇ ದಾನಕೊಡುತ್ತಾರೆ.ಅಲ್ಲಿಯೇ ಶ್ರೀವಿಜಯಾರ್ಯರು ನಿವಾಸಮಾಡಿದ ಕಾರಣ ಅದು ವಿಜಯರಾಯರ ಕಟ್ಟಿಯೆಂದು ಹೆಸರಾಯಿತು.
ಶಕ್ತಿಯಲ್ಲಿ ತಿಮ್ಮಣ್ಣ ಎಂದು ಖ್ಯಾತರಾದ ಇವರು ಯೋಗಶಕ್ತಿಯುಳ್ಳವರು. ಅನೇಕ ಶಿಷ್ಯಸಂಪತ್ತಿ ಯುಳ್ಳವರು. ಆರು ಜನ ಶಿಷ್ಯರಿಗೆ ಅಂಕಿತ ಪ್ರಧಾನಮಾಡಿ, ಹರಿದಾಸ ಪರಂಪರೆಯನ್ನು ಬೆಳಗಿದ್ದಾರೆ. ಶ್ರೀ ವಿಜಯ ಪ್ರಭುಗಳ ಅನುಗ್ರಹದಿಂದ ಅದ್ಯಾಪಿ ಮುಂದುವರೆಯುತ್ತಿ ರುವ ಹರಿದಾಸ ಪರಂಪರೆ ಶ್ರೀ ತಿಮ್ಮಣ್ಣ ದಾಸವರ್ಯರ ಪರಂಪರೆಯಾಗಿದೆ.
" ಶ್ರೀ ರಾಯರ ಅಂತರಂಗ ಭಕ್ತರೂ ಆದ ಇವರು ರಾಯರು ಕುರೀತು ನಿರ್ಮಿಸಿದ್ದಾರೆ.
ರಾಘವೇಂದ್ರ ಗುರುರಾಯರ -
ನಂಬಿದೇನೋ ।
ಯತಿವರ ಸುರದೇನೋ ।। ಪಲ್ಲವಿ ।।
.... ವರ ಸುಧೀಂದ್ರ ಕರಕಮಲದಿ ಸಂಜಾತ । ರಾಘವೇಂದ್ರ ವಿಖ್ಯಾತ । ಹರಿ ಸರ್ವೋತ್ತಮನೆಂಬ ಗ್ರಂಥಕೆ ಕರ್ತಾ । ಬಂದ ಜನರಿಗೆ ಮಾತಾ । ಎಲ್ಲರೊಂದೇ ಎಂಬ ಜನರನ್ನು ಗೆಲಿದಾತಾ । ವೃಂದಾವನದಿ ನಿಂತ ಭಕ್ತ ಜನರಿಷ್ಟಾರ್ಥವ ಕೊಡುವಾತಾ । ಹರಿ ಚರಣವ ಕಂಡಾತಾ । ವರವೃದ್ಧ ತನು ವೇಷದಿ ಮೆರೆದಾತಾ । ಜಯರಾಯರಿಗೆ ಪ್ರೀತಾ । ವೇಣು ಗೋಪಾಲವಿಠ್ಠಲನ ನಿಜ ದೂತಾ । ಹೊಂದಿದವರಿಗೆ ತಾತಾ ।। 3 ।।
"ಹಾಗೂ ಗುರು ವಿಜಯದಾಸರ ಕುರಿತು
ವಿಜಯದಾಸ ಪದಾಸಕ್ತಮ್
ವಿಠಲೋಪಪದ ಸಂಯುತಮ್ ।
ವೇಣುಗೋಪಾಲದಾಸಾಖ್ಯಂ
ದಾಸವರ್ಯಂ ಮಹಂಭಜೇ ।।
"
ರಾಗ : ಕಲ್ಯಾಣಿ ತಾಳ : ಆದಿ
ವೇಣುಗೋಪಾಲ ವಿಠ್ಠಲರೇಯಾ ।
ನಿನ್ನ ಪಾದರೇಣು -
ನಂಬಿದ ಮಾನವಾ ।
ಏನು ಅರಿಯದಲಿಪ್ಪ -
ನೀನೊಲಿದು ಕರುಣದಲಿ ।
ಜ್ಞಾನ ಭಕುತಿಯನು -
ಕೊಡುವದು ಸ್ವಾಮಿ ।। ಪಲ್ಲವಿ ।।
... ಓರ್ವನ ಪೆಸರುಗೊಂಡು -
ಪೇಳಲೇತಕೆ ಇನ್ನು ।
ಸರ್ವರನು ವಿಧದಲಿ ।
ಊರ್ವಿಯೊಳಗೆಯಿಟ್ಟು ಉದ್ಧರಿಸೆ ।
ಉರು ಕಾಲ ನಿರ್ವ್ಯಾಜದವನ ಮಾಡಿ ।।
ಸರ್ವರ ಗೋಸುಗ ನಾನು -
ತುತಿಸಿ ಯೋಗ್ಯರಿಗೆ ।
ಸರ್ವದಾ ಕೃಪೆ ಮಾಡೆಂದು ।
ಸರ್ವರಾಧಾರಿ ಸಿರಿ -
ವಿಜಯ ವಿಠ್ಠಲ ನಿನ್ನ ।
ಶರ್ವ ತುತಿಸಿ ಕಾಣ ನಾನೊಬ್ಬ
ಪೊಗಳುವೆನೆ ।। 3 ।।
ಇವರ ಆಪ್ತ ಮಿತ್ರರು "
ಶ್ರೀ ಗೋಪಾಲದಾಸರು
ಇವರ" ಸಮಕಾಲೀನ ದಾಸರೆಂದರೆ
ಶ್ರೀ ಹಯವದನವಿಠ್ಠಲರು
ಶ್ರೀ ಆನಂದದಾಸರು,
ಶ್ರೀ ವಿಜಯರಾಯರ ತಮ್ಮಂದಿರು
ಶ್ರೀ ಮೋಹನದಾಸರು -
ಶ್ರೀ ವೇಂಕಟೇಶ ವಿಠ್ಠಲರು
ಶ್ರೀ ಬೇಲೂರು ವೆಂಕಟದಾಸರು
- ಶ್ರೀ ವೆಂಕಟವಿಠ್ಠಲರು
ಶ್ರೀ ಹೊನ್ನಾಳಿ ವೆಂಕಪ್ಪಾಚಾರ್ಯರು
- ಶ್ರೀ ಮುದ್ದುವಿಠ್ಠಲರು
ಶ್ರೀ ಮೀನಪ್ಪ ದಾಸರು
ಶ್ರೀ ಗುರು ಮಧ್ವ್ವೇಶವಿಠ್ಠಲರು
ಕೂಡ್ಲಿ ಶ್ರೀ ಮಧ್ವಾಚಾರ್ಯರು
"ಇವರ ಶಿಷ್ಯರ ಹೆಸರುಗಳು ಇಂತಿವೆ:-
ಶ್ರೀ ವ್ಯಾಸವಿಠ್ಠಲರು
ಶ್ರೀ ಕಲ್ಲೂರು ಸುಬ್ಬಣ್ಣದಾಸರು
ಶ್ರೀ ರಾಮಚಂದ್ರ ವಿಠ್ಠಲರು -
ಶ್ರೀ ಗುರು ವೇಣುಗೋಪಾಲವಿಠ್ಠಲರು -
ಶ್ರೀ ತಂದೆ ವೇಣುಗೋಪಾಲವಿಠ್ಠಲರು
- ಶ್ರೀ ಶಿರಿ ವೇಣುಗೋಪಾಲ ವಿಠ್ಠಲರು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏