_ ವಾಮನ ವಟು ಇಂದ್ರಾನುಜ ಉಪೇಂದ್ರನೆ _,_ _ಶ್ರೀವಾಮನ ದೇವರ ಸ್ತೋತ್ರಸುಳಾದಿ_ ,_ಶ್ರೀವಿಜಯದಾಸರ ರಚನೆ , ರಾಗ ನಾಟಿ.mp3

_ ವಾಮನ ವಟು ಇಂದ್ರಾನುಜ ಉಪೇಂದ್ರನೆ _,_ _ಶ್ರೀವಾಮನ ದೇವರ ಸ್ತೋತ್ರಸುಳಾದಿ_ ,_ಶ್ರೀವಿಜಯದಾಸರ ರಚನೆ , ರಾಗನಾಟಿ

#ವಾಮನ #ವಟು #ಇಂದ್ರಾನುಜ #ಉಪೇಂದ್ರನೆ _,_ _#ಶ್ರೀವಾಮನ #ದೇವರ #ಸ್ತೋತ್ರಸುಳಾದಿ_ ,_#ಶ್ರೀವಿಜಯದಾಸರ #ರಚನೆ , #ರಾಗನಾಟಿ. #mp3

* *ಸ್ಮರಿಸಿ ಬದುಕಿರೋ*
*ದಿವ್ಯ ಚರಣಕ್ಕೆರಗಿರೋ|*
*ದುರಿತ ತರೆದು ಪೊರೆವ ವಿಜಯ ಗುರುಗಳೆಂಬರಾ|


*ಶ್ರೀ ವಿಜಯದಾಸಾರ್ಯರು
*ಆಯಾ ಕಾಲ ಸಂಧರ್ಭದಲ್ಲಿ ಶ್ರೀ ಹರಿಯ ನಾಮ ಸ್ಮರಣೆ ಯಿಂದ ಬರುವ ಫಲ ಮತ್ತು ನಾಮ ಸ್ಮರಣೆ ಮಾಡದೇ ಹೋದರೆ ಬರುವ ದುಷ್ಫಲದ ಬಗ್ಗೆ ಶ್ರೀ ವಿಜಯಪ್ರಭುಗಳು ತಿಳಿಸಿದ್ದಾರೆ.



 ಶ್ರೀ ವಿಜಯದಾಸರ ಕುರಿತು ರಘುಪತಿವಿಟ್ಠಲದಾಸಾರ್ಯರ ಕೃತಿ* 

*ರಾಗ ಆರಭಿ ಆದಿತಾಳ* 

ವಿಜಯರಾಜ ಗುರುರಾಜಾಧಿರಾಜ ಮಹ -
ರಾಜಶಿರೋರತುನ ॥ ಪ ॥
ತ್ಯಜಿಸದೆ ನಿಮ್ಮ ಪದಬುಜವ ಬಿಡೆನೆಂಬೊ 
ಸುಜನರ ಪಾಲಿಸಯ್ಯ ॥ ಅ ಪ ॥ 

ಜ್ಞಾನಭಕುತಿ ಕೊಡು ಗಾನಶೀಲನ ಮಾಡು
ಹೀನಮನವ ಕೆಡಿಸೋ ।
ನಾನೆಂಬೊ ಅಹಂಕಾರವನ್ನೆ ತೊಲಗಿಸೋ
ನಿನ್ನವರವನೆನಿಸೋ ।
ಧೇನಿಸುವಂದದಿ ಹರಿಯ ಪದಬುಜವ
ಮಾನಸದಲಿ ಸರ್ವದಾ ।
ಕಾಣಿಸಿಕೊಡು ನಾನು ಜೀವನು ನಿಜವೆಂಬೊ
ಜ್ಞಾನ ಮನಕೆ ಬರಲಿ ॥ 1 ॥ 

ಮೌನವಾಗಿರಲಾರು ಹೀನತಿ ನುಡಿಯಲು
ಪ್ರಾಣಪ್ರೇರಕರಿಂದಲಿ ।
ಆನೇನಾಡುವುದೆಲ್ಲ ಆನೆ ಎನ್ನುವೆನೆಲ್ಲ
ಆನೆ ಸ್ವತಂತ್ರನಲ್ಲ ।
ದೀನನಾಗೆರಗಿ ಸಜ್ಜನರ ಪದಾಬ್ಜಕ್ಕೆ 
ರೇಣುವಾಗಿ ನಡೆದು ।
ನೀನೇ ಗತಿಯೆಂದು ನಿನ್ನ ಮೊರೆಹೊಕ್ಕೆನೊ
ಕ್ಷೋಣಿಯೊಳಗೆ ಬಳಲಿ ॥ 2 ॥ 

ನಿಮ್ಮ ಕೊಂಡಾಡುವ ಬುಧರು ಕಾಣಲು ಅವ -
ರೆಮ್ಮಾಪ್ತನೆಂದೆನಲಿ ।
ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು
ನಮ್ಮ ರಕ್ಷಕರಾಗಲಿ ।
ಇಮ್ಮಹಿಯೊಳಗೇಸು ಕಾಲವಾದರೂ ಪುಣ್ಯ -
ಸಂಬಂಧ ಕೆಡದಿರಲಿ ।
ಸುಮ್ಮನಸರೀಶ *ರಘುಪತಿವಿಠಲ* 
ನಮ್ಮ ಸ್ವಾಮಿಯಾಗಲಿ ॥ 3 ॥ 

*ವಿಶೇಷಾಂಶ :* 

*ಅನುಪಲ್ಲವಿ :* 

" ನಿಮ್ಮ ಪದಬುಜವ ಬಿಡೆನೆಂಬೊ ಸುಜನರ ತ್ಯಜಿಸದೆ ಪಾಲಿಸಯ್ಯಾ ! " ಅಂತ ಅನ್ವಯ ಮಾಡಬೇಕು.

ಶ್ರೀವಿಜಯದಾಸಾರ್ಯರ ಶಿಷ್ಯರಾದ ಶ್ರೀವೇಣುಗೋಪಾಲವಿಠಲದಾಸರಿಗೂ (ಶ್ರೀಪಂಗನಾಮ ತಿಮ್ಮಣ್ಣಯ್ಯನವರು) ಮತ್ತು ಶ್ರೀವೇಣುಗೋಪಾಲವಿಠಲದಾಸರಿಂದ ಅಂಕಿತಪಡೆದ ಶ್ರೀವ್ಯಾಸವಿಠಲದಾಸರಿಂದ (ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರಿಂದ) ಅಂಕಿತೋಪದೇಶ ಪಡೆದ *ರಘುಪತಿವಿಠಲಾಂಕಿತ ತಿಮ್ಮಣ್ಣದಾಸರಿಗೂ* ಒಂದೇ ನಾಮಧೇಯ ' ತಿಮ್ಮಣ್ಣ ' ಎಂದು. ಇವರ ವೈರಾಗ್ಯಭಾಗ್ಯಕ್ಕೆ ಮೆಚ್ಚಿ ' *ವೈರಾಗ್ಯಶಾಲಿ ತಿಮ್ಮಣ್ಣ* ' ಎಂದು ಶ್ರೀವಿಜಯದಾಸಾರ್ಯರು ಸಂಭೋದನೆ ಮಾಡುತ್ತಿದ್ದರಂತೆ. ಇವರಿಗೆ ತಮ್ಮ ಗುರುಬಾಂಧವರಾದ ಶ್ರೀಗೋಪಾಲದಾಸರಾಯರಲ್ಲಿಯೂ ಪರಮಭಕ್ತಿ. ಆದ್ದರಿಂದ ' *ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು ನಮ್ಮ ರಕ್ಷಕರಾಗಲಿ* ' ಎಂಬ ವರವನ್ನು ಶ್ರೀವಿಜಯದಾಸರಾಯರಲ್ಲಿ ಯಾಚಿಸಿದ್ದಾರೆ ! 


||ಸ್ಮರಿಸಿ ಬದುಕಿರೊ ದಿವ್ಯ ಚರಣಕ್ಕೆರಗಿರೋ||* 
*ದುರಿತ ತರೆದು ಪೊರೆವ ವಿಜಯ ಗುರುಗಳೆಂಬರಾ|*


*ಅಜ್ಞಾನ ತಿಮಿರಚ್ಛೇದಂ ಬುದ್ಧಿ ಸಂಪತ್ಪ್ರದಾಯಕಂ/*
*ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರುಮ್ ಭಜೇ//*

*ಭೇದವಿಲ್ಲ ಎಂಬ ಮಾಯವಾದಿ ರಾಮಶಾಸ್ತ್ರಿ ಬಂದು ಪಾದಕೆರಗೆ ಅವನ ತಮವ ಭೇದಿಸಿ ಸುಜ್ಞಾನವಿತ್ತೆ* 
*ವಾದಿಗಿರಿಗೆ ಇಂದ್ರಸ್ಥಾನೀಯರಾದ ಗುರುಗಳಿಂದ ಮುದ್ರಾಧಾರಣೆಯ ಕೊಡಿಸಿ
 ಪರಮ ಆದರದಿಂದ ಅವನ ಕಾಯ್ದೆ* 

ಎಂದು ಶ್ರೀ ಮೋಹನ ದಾಸಾರ್ಯರು ತಮ್ಮ *ಸರಿಯುಗಾಣೆನೆಲ್ಲಿ ಜಗದೊಳು ಕರವಮುಗಿಪರಘವ ತೆಗೆವ ಗುರು ವಿಜಯದಾಸರಿಗಿನ್ನು* ಎನ್ನುವ ಪದದಲ್ಲಿ ಹೇಳ್ತಾರೆ .. ಸಂದರ್ಭ ಹೀಗಿದೆ..... :-

ಒಮ್ಮೆ ಶ್ರೀ ವಿಜಯಪ್ರಭುಗಳ ಬಳಿ ವಾದಮಾಡಲು ಬಂದ ಮಾಯಾವಾದಿ ಆದ *ರಾಮಶಾಸ್ತ್ರಿ* ಎನ್ನುವವರನ್ನು ವಾದದಲಿ ಸೋಲಿಸಿ ತಮ್ಮ ಕುಲ ಗುರುಗಳಾದ *ವಾದಿಗಿರಿಗೆ ಇಂದ್ರಸ್ಥಾನೀಯರಾದ* ಅರ್ಥಾತ್ ಶ್ರೀ ವಾದೀಂದ್ರತೀರ್ಥ ಗುರುಸಾರ್ವಭೌಮರಿಂದ ಮುದ್ರಾಧಾರಣೆ ಮಾಡಿಸಿ ಆತನಿಗೆ ಸರಿಯಾದ ತತ್ವಗಳನ್ನು ಉಪದೇಶಿಸಿದರು.



ಸಂಜಾತಃ ಕೀರ್ತಿಚಂದ್ರಿಕಾ/*
*ಸಂತಾಪಂ ಹರತು ಶ್ರೀಮಾನ್ ಸತ್ಯವೀರೇಂದು ರಂಜಸಾ//*

18ನೇ ಶತಮಾನದ ಶ್ರೀಮದುತ್ತರಾದಿಮಠದ ಯತಿಗಳು, ಸವಣೂರು ಶ್ರೀ ಸತ್ಯಬೋಧರಾಯರ ಅನುಗ್ರಹದಿಂದ ಜನಿಸಿದವರು, ಮೊದಲಗಟ್ಟಿ ಪ್ರಾಣದೇವರ ಆರಾಧಕರು, ಸಣ್ಣ ವಯಸ್ಸಿನಲ್ಲಿ ಕಾವ್ಯ ರಚನೆ ಮಾಡಿದ ಶ್ರೇಷ್ಠ ಜ್ಞಾನಿಗಳು, ಶ್ರೀ ಸತ್ಯಪರಾಕ್ರಮರ ಶಿಷ್ಯರು, ಶ್ರೀ ಸತ್ಯಧೀರರ ಗುರುಗಳೂ ಆದ ಶ್ರೀ ಸತ್ಯವೀರತೀರ್ಥರು.

#Attack #accident #death #quarrel #sad #rip #terrific #kill #fever #virus #blast #terrist #theft #rowdy #ಹಸಿವು #crime #cruel #horror #fire #assault #beating #chetha #ಮುನಿಸ್ವಾಮಿ #ಗೌಡ #AI #devil #blood 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ