ವಕೀಲರಿಲ್ಲದೆ ನ್ಯಾಯ ಸಾಧ್ಯವೇ?#KannadaLaw
ವಕೀಲರಿಲ್ಲದೆ ನ್ಯಾಯ ಸಾಧ್ಯವೇ? #KannadaLaw #IndianJudiciary #BarCouncilOfIndia #JusticeForAdvocates ಕಪ್ಪು ನಿಲುವಂಗಿ ತೊಟ್ಟು "Sorry... I am begging" ಎಂದು ಕೈ ಜೋಡಿಸಿ ಬೇಡಿಕೊಂಡ — ಆದರೂ ಕೋರ್ಟ್ ಒಳಗೇ ಬಂಧಿಸಲ್ಪಟ್ಟ. ತಪ್ಪು? ಆದೇಶದ ಪ್ರತಿ ತರಲಿಲ್ಲ — ಅಷ್ಟೇ. ಇಂದು ಅವನು — ನಾಳೆ ನಾವು. ಎಚ್ಚೆತ್ತುಕೊಳ್ಳಿ. Description (CM writes):ನ್ಯಾಯಾಲಯ ಇರುವುದು ಯಾರಿಗಾಗಿ? ವಕೀಲರಿಲ್ಲದೆ ನ್ಯಾಯ ಸಾಧ್ಯವೇ? ಸಹ ವಕೀಲ ಮಿತ್ರರೇ, ನ್ಯಾಯದಲ್ಲಿ ನಂಬಿಕೆ ಇಟ್ಟ ಎಲ್ಲ ಸ್ನೇಹಿತರೇ, ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ನಡೆದ ಒಂದು ಘಟನೆ ಇಡೀ ದೇಶದ ವಕೀಲ ಸಮುದಾಯವನ್ನು ತಲ್ಲಣಗೊಳಿಸಿದೆ. ಆ ಘಟನೆಯ ವಿಡಿಯೋ ನೋಡಿ ನನ್ನ ಮನಸ್ಸು ಕಲಕಿಹೋಯಿತು. ಅದರ ಬಗ್ಗೆ ಬರೆಯದೇ ಇರಲು ಆಗಲಿಲ್ಲ. ಒಬ್ಬ ಯುವ ವಕೀಲ — ಕಪ್ಪು ನಿಲುವಂಗಿ ತೊಟ್ಟು, ನ್ಯಾಯಾಲಯದ ಮುಂದೆ ನಿಂತು, ಕೈ ಜೋಡಿಸಿ, "Sorry... I am begging for your grace" ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾನೆ. ನೋವಿನಲ್ಲಿದ್ದೇನೆ ಎಂದು ಹೇಳುತ್ತಿದ್ದಾನೆ. ಆದರೂ ಕರುಣೆ ಇಲ್ಲ. ನ್ಯಾಯಮೂರ್ತಿ ತರ್ಲಡ ರಾಜಶೇಖರ ರಾವ್ ಅವರು ಪೊಲೀಸರಿಗೆ ಆದೇಶಿಸಿದರು ಪೊಲೀಸರು ನೇರ ಕೋರ್ಟ್ ಒಳಗೇ ಬಂದು ಆ ವಕೀಲರನ್ನು ಎಳೆದೊಯ್ದರು. 24 ಗಂಟೆ ನ್ಯಾಯಾಂಗ ಬಂಧನ. ಆ ವಕೀಲರ ತಪ್ಪು? ಆದೇಶದ ಪ್ರತಿ (Order Copy) ತರಲಿಲ್ಲ — ಅಷ್ಟೇ. ಇದು ಒ...