ಶ್ರೀಮಠದಲ್ಲಿ ಜಾತ್ರೆ ಸಂಭ್ರಮ-ದೊಡ್ಡ ಮೀನೊಂದು
ಶ್ರೀಮಠದಲ್ಲಿ ಜಾತ್ರೆ ಸಂಭ್ರಮ-ದೊಡ್ಡ ಮೀನೊಂದು ಅಕ್ವೇರಿಯಂ ನಲ್ಲಿ !
ಕರ್ನಾಟಕ, ಸಿದ್ದಗಂಗಾ ಮಠ:ಮಾರ್ಚ್ 1 ರಿಂದ 15 ರವರೆಗೆ ಶ್ರೀಮಠದಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಲಿದೆ. ರಾಜ್ಯ ಮಾತ್ರವಲ್ಲದೆ ದೇಶದ ನಾನಾ ಕಡೆಗಳಿಂದಲೂ ಭಕ್ತರು ಶ್ರೀಮಠಕ್ಕೆ ಆಗಮಿಸಲಿದ್ದಾbig fish full video ರೆ.
ಜಾತ್ರೆ ಹಿನ್ನೆಲೆ: -
ಶ್ರೀ ಉದ್ಧಾನ ಶಿವಯೋಗಿಗಳು 1905ರಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಆರಂಭಿಸಿದರು.ಪ್ರಸ್ತುತ ರೈತರಿಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಜಾನುವಾರು ಮೇಳ ನಡೆಯುತ್ತದೆ. ರೈತರಿಗೆ ಕೃಷಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡಲು, ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅನುಕೂಲವಾಗುವಂತೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಡೆಯುತ್ತದೆ.
ಜಾನುವಾರು ಜಾತ್ರೆ: ಅಪರೂಪದ ಹಳ್ಳಿಕಾರ್ ತಳಿ ಸೇರಿದಂತೆ ನಾನಾ ತಳಿ ರಾಸುಗಳನ್ನು ರೈತರು ತರುತ್ತಾರೆ. ರಾಮನಗರ, ದಾವಣಗೆರೆ, ಚಿತ್ರದುರ್ಗ, ಗದಗ, ಹರಿಹರ, ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯದ ಹತ್ತಾರು ಕಡೆಗಳಿಂದ ರೈತರು ಜಾನುವಾರುಗಳೊಂದಿಗೆ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಾನುವಾರುಗಳ ಕೊಡು-ಕೊಳ್ಳುವಿಕೆ ನಡೆಯುತ್ತದೆ. ಈ ಬಾರಿ ಜಾನುವಾರು ಜಾತ್ರೆ ಮಾರ್ಚ್ 5ರಿಂದ ಆರಂಭವಾಗಲಿದೆ.
ವಸ್ತು ಪ್ರದರ್ಶನ: ಶ್ರೀಮಠದಲ್ಲಿ ನಡೆಯುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಜಾತ್ರೆಯ ಪ್ರಮುಖ ಆಕರ್ಷಣೆ. ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು 1964ರಲ್ಲಿ ಈ ವಿಶೇಷ ವಸ್ತು ಪ್ರದರ್ಶನ ಆರಂಭಿಸಿದರು. ಗ್ರಾಮೀಣ ಜನತೆಗೆ ಕೈಗಾರಿಕಾ ಕ್ಷೇತ್ರಗಳ ಮಾಹಿತಿ ಮತ್ತು ಜ್ಞಾನ ಪ್ರಸಾರ ಮಾಡುವುದು, ವಿವಿಧ ಇಲಾಖೆಗಳ ಪ್ರಗತಿಪರ ಕಾರ್ಯಕ್ರಮಗಳ ಪ್ರದರ್ಶನ, ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ, ಹೊಸ ಕೃಷಿ ಸಂಶೋಧನೆಗಳ ಪರಿಚಯ ಇದರ ಪ್ರಮುಖ ಉದ್ದೇಶ. ಈ ವರ್ಷ ಮಾರ್ಚ್ 1 ರಿಂದ ಪ್ರದರ್ಶನ ಆರಂಭವಾಗಲಿದೆ. ಮಳಿಗೆ ಹಾಕಬಯಸುವವರು ಫೆಬ್ರುವರಿ 25ರೊಳಗೆ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ವಸ್ತು ಪ್ರದರ್ಶನ ಕಾರ್ಯದರ್ಶಿಯವರಿಗೆ ತಲುಪಿಸಬೇಕು. ಮಳಿಗೆಗಳ ನಾಮಫಲಕ ಕನ್ನಡದಲ್ಲಿಯೇ ಇರಬೇಕು.
ಧಾರ್ಮಿಕ ಕಾರ್ಯಕ್ರಮಗಳು: ಮಾರ್ಚ್ 5ರಂದು ಗೋಸಲ ಸಿದ್ಧೇಶ್ವರ ಸ್ವಾಮಿ ಉತ್ಸವ, ಶೂನ್ಯ ಸಿಂಹಾಸನಾರೋಹಣೋತ್ಸವ ಮತ್ತು ವೃಷಭವಾಹನ, ಮಾರ್ಚ್ 6ರಂದು ನಂದಿ ವಾಹನ, ಗಜವಾಹನ, 7ರಂದು ಹುಲಿವಾಹನ, ಸಿಂಹವಾಹನ, 8ರಂದು ಹುತ್ತದವಾಹನ, ಶೇಷವಾಹನ, 9ರಂದು ಅಶ್ವವಾಹನ, ನವಿಲುವಾಹನ, 10ರಂದು ರಾವಣವಾಹನ, ಬಿಲ್ವವೃಕ್ಷವಾಹನ, ನವರಂಗಪಾಲಕಿ ಉತ್ಸವ, 11ರಂದು ಮಹಾಶಿವರಾತ್ರಿ ಪೂಜೆ, ಬೆಳ್ಳಿ ರಥೋತ್ಸವ, 12ರಂದು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ, 13ರಂದು ಬೆಳ್ಳಿಪಲ್ಲಕ್ಕಿ ಉತ್ಸವ, 14ರಂದು ತೆಪ್ಪೋತ್ಸವ ನಡೆಯಲಿದೆ.
ಮಾ. 1ರಿಂದ 15ರವೆರೆಗೆ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ. 1-15 ರವರೆಗೆ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನವಿದೆ. ಜಾನುವಾರು ಜಾತ್ರೆ ಕೂಡ ನಡೆಯಲಿದೆ. ಮಾ.5ರಂದು ಶ್ರೀ ಗೋಸಲ ಸಿದ್ಧೇಶ್ವರಸ್ವಾಮಿ ಉತ್ಸವ, 12ರಂದು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ರಥೋತ್ಸವ ಜರುಗಲಿದೆ ಎಂದು ಸಿದ್ದಗಂಗಾ ಮಠದ ಆಡಳಿತಾಧಿಕಾರಿ ಮಾಹಿತಿ ನೀಡಿದ್ಧಾರೆ.
ಗುರುಕುಲ:-10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿದಿನ ಜಾತಿ ಅಥವಾ ಧರ್ಮದ ಯಾವುದೇ ತಾರತಮ್ಯವಿಲ್ಲದೆ ಉಚಿತ ಆಹಾರ, ಉಚಿತ ಶಿಕ್ಷಣ ಮತ್ತು ಉಚಿತ ವಸತಿಯ ಅನ್ನದಾಸೋಹವನ್ನು ಒದಗಿಸುತ್ತದೆ
ಅಲ್ಲದೇ ಪ್ರತಿ ದಿನ ಶ್ರೀ ಮಠಕ್ಕೆ ಬೇಟಿ ನೀಡುವ, ಸುಮಾರು 3000 ಯಾತ್ರಿಕರಿಗೆ ಉಚಿತ ಊಟವನ್ನು ಒದಗಿಸುತ್ತದೆ, ಒಂದು ಊಟಕ್ಕೆ ಅಂದಾಜು 5 ರೂ.
ಸಂಸ್ಥೆಯು ಕಿಂಡರ್ಗಾರ್ಟನ್ನಿಂದ ಕಾಲೇಜುಗಳವರೆಗೆ 150 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.
ಈಗ ಸುಮಾರು 60% ವೆಚ್ಚವನ್ನು ದತ್ತಿ ಮತ್ತು ಸರ್ಕಾರಿ ಅನುದಾನಗಳಿಂದ ಭರಿಸಲಾಗುತ್ತಿದೆ. ಉಳಿದವು ಸ್ವಯಂಪ್ರೇರಿತ ದೇಣಿಗೆಗಳಿಂದ ತೋರಿಸಲಾಗುತ್ತಿದೆ.
ಸಿದ್ದಗಂಗಾ ಮಾನವೀಯ ಮಿಷನ್ - ಸಿದ್ದಗಂಗಾ ಗುರುಕುಲ (ತುಮಕೂರು–572 104, ಕರ್ನಾಟಕ ರಾಜ್ಯ, ಭಾರತ) ಕುರುಡರು, ಕಿವುಡರು ಮತ್ತು ಮೂಕರು ಮತ್ತು ದೈಹಿಕವಾಗಿ ಅಂಗವಿಕಲರಿಗಾಗಿ ಶಾಲೆ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಸಂಕೀರ್ಣವಾಗಿದ್ದು, ಜಾತಿ, ಧರ್ಮ, ಲಿಂಗ ಅಥವಾ ಭೌಗೋಳಿಕ ಮೂಲದ ಯಾವುದೇ ತಾರತಮ್ಯವಿಲ್ಲದೆ ಸಾವಿರಾರು ಮಕ್ಕಳಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ಶಿಕ್ಷಣ ನೀಡುತ್ತದೆ.
ನಾವು ಅಮೆರಿಕದಲ್ಲಿ ವಾಸಿಸುವ ಸಿದ್ಧಗಂಗಾ ಗುರುಕುಲದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳು - ಎಲ್ಲಾ ನಂಬಿಕೆಗಳ ಬಗ್ಗೆ ಸಹಾನುಭೂತಿ, ಧರ್ಮ, ಲಿಂಗ ಮತ್ತು ಜನಾಂಗವನ್ನು ಲೆಕ್ಕಿಸದೆ ಜನರಲ್ಲಿ ಸಮಾನತೆಯ ಆಧಾರದ ಮೇಲೆ ಶೈಕ್ಷಣಿಕ ಮತ್ತು ಮಾನವೀಯ ಸೇವೆಗಳನ್ನು ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಗಳು - ಸಿದ್ಧಗಂಗಾ ಗುರುಕುಲ ಮತ್ತು ಅದರ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವ ಅಮೂಲ್ಯ ಕಾರ್ಯಗಳನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಲಾಭರಹಿತ ದತ್ತಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
#ಸಿದ್ದು #ಸಿದ್ದಗಂಗಾ #ಮಠ #ಉಚಿತ #ವಸತಿ #ಹಳೆಯ ₹ಲಿಂಗೈಕ್ಯ #ಶ್ರೀ #Chethana #Oldest #culture #tradition #mantra #ಸನಾತನ #ಗೌಡ #yogi #riya #swami #ಶ್ರೀಮತಿ #ಭಾರತ #truth #trust #ಮಠ #raya #ದಾಸ #ಕೃಷ್ಣ #ರಾಮ #ಈಶ್ವರ #Devi #Litrature
https://pratilipi.page.link/yyeYky1GboXSBxrr9
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏