_ ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ,

 ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ, ರಾಗ ವರಾಳಿ

 #ಗೊಲ್ಲನಾದಕ್ಕಿದೇ #ಗುಣಗಳ #ತೋರಿದಿಯೋ _,_ _#ಶ್ರೀಕೃಷ್ಣ #ಮಹಿಮಾ #ಸುಳಾದಿ_ ,_#ಶ್ರೀವಿಜಯದಾಸರ #ರಚನೆ, #ರಾಗ #ವರಾಳಿ

ದಾಸರೆಂದರೆ ಪುರಂದರ ಕುರಿತು ಕೆಲ ವಿಷಯಗಳು:-

 ಎಲ್ಲವನ್ನೂ ತೊರೆದು ಕಾಲಿಗೆ ಗೆಜ್ಜೆ ಕಟ್ಟಿ ಕೈಯಲಿ ತಂಬೂರಿ ಹಿಡಿದು ಜೋಳಿಗೆ ಏರಿಸಿಕೊಂಡು ಭಗವಂತನ ಸೇವೆಗೆ ಹೊರಟೇಬಿಡುತ್ತಾರೆ. ಈ ದಾಸರು,

ಶ್ರೀ ಪುರಂದರ ದಾಸರು. ಅದನ್ನೇ ತಮ್ಮ ಒಂದು ಹಾಡಿನಲ್ಲಿ

ಗುರುವಿನ ಗುಲಾಮನಾಗೋ ತನಕ ದೊರೆಯದಣ್ಣ ಮುಕುತಿ ಪರಪರಿ ಅನೇಕ ಶಾಸ್ತ್ರಗಳೋದಿ ವ್ಯರ್ಥವಾಯ್ತು ಭಕುತಿ  ಎನ್ನುತ್ತಾರೆ.  ಗುರುಗಳ ಉಪದೇಶ ಮಾರ್ಗದರ್ಶನ ಪಡೆದು ಸನ್ಮಾರ್ಗದಲ್ಲಿ ನಡೆದು ಸತ್ಸಾಧನೆ ಮಾಡಿರಿ ಎಂದು ನಮಗೆ ಗುರುವಾಗಿ ದಾರಿ ತೋರಿಸಿದ್ದಾರೆ ಶ್ರೀ ದಾಸಾರ್ಯರು.

 *ದಾಸರೆಂದರೆ ಪುರಂದರದಾಸರೆಂದೆನಿಸುತ್ತ* = ' ದಾಸರೆಂದರೆ ಪುರಂದರದಾಸರಯ್ಯ ' ಎಂಬ ಶ್ರೀಚಂದ್ರಿಕಾಚಾರ್ಯರ ಉಕ್ತಿಯ ಅನುವಾದ ;

 *ಹೀನದೈವವೆ* = ಅವೈಷ್ಣವ ದೇವತೆಗಳನ್ನು ;

 *ಜವನ ದೂತರಿಗೆ* = ಯಮನ ದೂತರಿಗೆ ;

 *ಪರಾಭವ ಮಾಡಿ ದೂರಿರಿಸಿ* = ಕಳೆದು - ತಮ್ಮಲ್ಲಿ ಪರಿಣಾಮವಿಲ್ಲದಂತೆ ಮಾಡಿ ;

 *ಕವಿಗಳ ಮನದ ತಾಪವನು ಪರಿಹರಿಸಿ* = ತಮ್ಮನ್ನು ಅನುಸರಿಸಿದ ಜ್ಞಾನಿಗಳ ತ್ರಿವಿಧ ತಾಪ ಪರಿಹರಿಸಿ ;


"ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣನ ಗುಣ ಆಲಾಪಿಸುತ ಬಲು ಓಲಗ ಮಾಡುವಂತ 

ಮಧುಕರವೃತ್ತಿ ಎನ್ನದು ಬಲು ಚನ್ನದು,ಮಧುಕರ ವೃತ್ತಿ ಎನ್ನದು "



ದಾಸರೆಂದರೆ ಪುರಂದರ ದಾಸರಯ್ಯ ಎಂದು ತಮ್ಮ ಗುರುಗಳಾದ ಶ್ರೀ ವ್ಯಾಸರಾಜರಿಂದಲೇ ಪ್ರಶಂಸನೆಗೊಳಗಾದಂತಹ ಮಹಾನುಭಾವರು ಇವರು.ಇವರು ರಚಿಸಿದ ಕೃತಿಗಳು ಉಪನಿಷತ್ ಗಳಂತೆಯೇ ಶ್ರೇಷ್ಠ ವೆಂದು ಅವುಗಳನ್ನು ಪುರಂದರೋಪನಿಷತ್ ಎಂದು ಕರೆದು ಪೂಜಾರ್ಹವೆಂದು ಪೂಜಾಪೀಠದಲ್ಲಿ ಇಟ್ಟರು ಶ್ರೀ ವ್ಯಾಸರಾಜರು. 


ಬಿನ್ನಹಕೆ ಬಾಯಿಲ್ಲವಯ್ಯಾ ।

ಅನಂತ ಅಪರಾಧ ಎನ್ನಲ್ಲಿ ಇರಲಾಗಿ 

ಎನ್ನುವ ದಾಸರು ತಮ್ಮ ಅಪರಾಧಗಳು ಎಷ್ಟಿವೆ ಎಂದರೆ ಅರಿಷಡ್ವೈರಿಗಳ ಅಂದರೆ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳ ದಾಸರಾಗಿ, ಮಾಡಿದಂತಹ ಅಪಾರವಾದ ತಪ್ಪುಗಳನ್ನು ಭಗವಂತನಲ್ಲಿ ಹೇಳಲೂ ಬಾಯಿಬರುವುದಿಲ್ಲ ಅಷ್ಟು ಅಪರಾಧಗಳನ್ನು ಮಾಡಿಬಿಟ್ಟಿದ್ದೇನೆ ಎನ್ನುತ್ತಾರೆ.




ಸತಿ ಮೋಹ ಸುತ ಮೋಹ ಜನನಿ ,ಜನಕರ ಮೋಹ ,ರಸಿಕ ಮಿತ್ರರ ಮೋಹ ರಾಜ ಮೋಹ 

ಪಶು ಮೋಹ ಭೂ ಮೋಹ ಬಂಧುವರ್ಗದ ಮೋಹ
ಅಸುರಾರಿ ನಿನ್ನ ಮರೆತೆನೋ ಕಾಯೋ ಹರಿಯೇ,

ಎಂದು 

ಪತ್ನಿ, ಮಕ್ಕಳು, ತಂದೆ ತಾಯಿ ಸ್ನೇಹಿತರು ಬಂದುಬಳಗ,ಆಸ್ತಿ ಧನಕನಕ ಹೀಗೆ ತಮ್ಮ ಲೌಕಿಕದ ಸುಖದಲ್ಲಿದ್ದ ಮೋಹವನ್ನು ಹೇಳುತ್ತ ..

ಅನ್ನ ಮದ ಅರ್ಥಮದ ಅಖಿಳವೈಭವದ ಮದ 
ಮುನ್ನ ಪ್ರಾಯದ ಮದ ರೂಪಮದವು
ತನ್ನ ಶಕ್ತಿಯ ಮದ ಶತ್ರುವಶನಾದ ಮದ

ಇನ್ನು ತನಗೆದುರಾರು ಇಲ್ಲೆಂಬ ಮದದಿಂದ ಅಸುರಾರಿ ನಿನ್ನ ಮರೆತೆನೋ ಕಾಯೋ ಹರಿಯೇ ..

ದಾಸರು ಮತ್ತೂ ಮುಂದುವರಿಸುತ್ತ ಹೇಳ್ತಾರೆ.


ಇಷ್ಟು ದೊರಕಿದರೆ ಅಷ್ಟು ಬೇಕಂಬಾಸೆ ।
ಅಷ್ಟು ದೊರಕಿದರೆ ಮತ್ತಷ್ಟರಾಸೆ ।

ಕಷ್ಟ ಬೇಡಂಬಾಸೆ ಕಡು ಸುಖವ ಕಾಂಬಾಸೆ ।
ನಷ್ಟ ಜೀವನದಾಸೆ ಪುರಂದರವಿಠ್ಠಲ ।।


 ನಮಗೆ ದೊರಕಿದ್ದರಲ್ಲಿ ಭಗವಂತ ನಮಗೆ ಕೊಟ್ಟಿದ್ದರಲ್ಲಿ ತೃಪ್ತಿ ಇಲ್ಲ ನಮಗೆ,ಎಷ್ಟು ದೊರಕಿದರೂ ಇನ್ನೂ ಬೇಕು ಮತ್ತೂ ಬೇಕು ಎಂದು ಬೇಕುಗಳ ಪಟ್ಟಿಯೇ ಬೆಳೆಯುತ್ತದೆ.ಮನುಷ್ಯನಿಗೆ ತೃಪ್ತಿ ಎಂಬುದೇ ಇಲ್ಲ ಎಂಬುದನ್ನು ದಾಸರು ಇಲ್ಲಿ ಮನ ಮುಟ್ಟುವಂತೆ ಹೇಳುತ್ತಾರೆ. 


ಶ್ರೀ ಪುರಂದರ ದಾಸರು ಈ ಹಾಡಿನಲ್ಲಿ ಎಲ್ಲವೂ ತಾವು ಮಾಡಿದ ತಮ್ಮ ತಪ್ಪು ಗಳೆಂದು ಹೇಳಿಕೊಂಡರೂ ಸಹ ಇದು ಪ್ರತಿಯೊಬ್ಬ ಮಾನವ ಜೀವಿ ಮಾಡುವ ತಪ್ಪೇ ಆಗಿದೆ.


ದಾಸನ ಮಾಡಿಕೊ ಎನ್ನ ,ಸ್ವಾಮಿ ಸಾಸಿರ ನಾಮದ ವೆಂಕಟರಮಣ 

ಮೊರೆ ಹೊಕ್ಕವರ ಕಾಯ್ವ ಬಿರುದು, 
ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು,
ದುರಿತ ರಾಶಿಗಳೆಲ್ಲ ತರಿದು 
ಸಿರಿ ಪುರಂದರ ವಿಠ್ಠಲನೆ ಎನ್ನ ನೀ ಪೊರೆದು,
ಎಂದು ದೀನರಾಗಿ‌ಭಗವಂತ ನಿನ್ನ ದಾಸ್ಯವನ್ನು ನಿನ್ನ ಸೇವಾಭಾಗ್ಯವನ್ನು ಸದಾ ಕೊಡು ಎಂದು ದೀನರಾಗಿ ಭಗವಂತನಲ್ಲಿ ಮೊರೆಯಿಡುತ್ತಾರೆ ಶ್ರೀ ದಾಸರು.

ಈ ಮೂಲಕ ನಾವು ಸಹ ಭಗವಂತನಲ್ಲಿ ಹೇಗೆ ಬೇಡಿಕೊಳ್ಳಬೇಕು,ಏನನ್ನು ಬೇಡಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಶ್ರೀ ಪುರಂದರ ದಾಸರು.






ರಾಗ - ಉದಯರಾಗ : ತಾಳ - 




ಈ ಕೃಷ್ಣರಾಯನ ನೋಡುವ ಸುಖವೆ ಸಾಕು l

ಪ್ರಾಕೃತಾರಹಿತ ಶರೀರ ವುಡುಪಿಯಾ ll ಪ ll




ಸಾಲ್ಬೆರಳು ಚರಣ ಜಂಘೆ ಜಾನುಕದಳಿಯ l

ಪೋಲ್ವದೊಡೆ ಮದನ ಮುದ್ರಿಕೆ ನಾಭಿ ಕಟಿ ಬಗಲು l

ಸಾಲತ್ರಿವಳಿ ವುದರ ವತ್ಸ ಸುಂದರ ಕಂಠ l

ಹಾಲಗಲ್ಲದ ಪೋಲುವ ಬಾಲ ಚನ್ನಿಗನಾ ll 1 ll




ತರುಣಾಬ್ಜ ಕರತಳಂಗುಲಿವುಗುರು ಮಣಿಬಂದ l

ಕರಿತೊಂಡ ತೋಳು ಭುಜ ವದನ ದಂತಪಂಗ್ತಿ l 

ಮರಿದುಂಬೆ ಗುರುಳು ನಾಶಿಕ ಕರ್ಣನೇತ್ರ ಪಣಿ l

ಶರಪುಬ್ಬು ಮಸ್ತಕದ ಸೊಬಗು ಮಿಂಚಿನ ಕಾಂತಿ ll 2 ll




ನೂಪರಂದಿಗೆ ಪೆಂಡೆ ಕಡಗ ಸರಪಳಿ ಗೆಜ್ಜೆ l

ರೋಪ್ಯಬುಲಕಾಯಿ ಕಿರಿಘಂಟೆ ಕಟಿಸೂತ್ರ ಸುರ l

ಚಾಪ ಮುತ್ತಿನಹಾರ ಕೌಸ್ತುಭ ತುಲಸಿಮಾಲಾ l

ಬಾಪುರಿ ಮುರಿಗೆ ಕರದ ಭೂಷಣದಿಂದೊಪ್ಪುವನ ll 3 ll




ಸರಿಗೆ ಸರಮುತ್ತು ತಾಳಿಯಾನಾನು ಹವಳ ವು l

ತ್ತರಿಕೆ ನ್ಯಾವಳ ಪದಕ ಸಿರಿವತ್ಸ ವೈಜಯಂತಿ l

ಮೆರೆವ ಹುಲಿಯುಗುರು ಕಸ್ತೂರಿ ನಾಮಕುಂಡಲಾ l

ಶಿರೋರತುನ ಶೃಂಗಾರ ಪರಿಪರಿ ಧರಿಸಿದನ ll 4 ll 




ಬಾಲಗೋಪಾಲ ಕಡಗೋಲುಕರ ಅಜ ಚೆಂದ್ರಮೌಳಿ l

ಸುರಪ್ರಾಣೇಶ ಪಾಲಸಾಗರಸದನ l

ಮೂಲ ಅವತಾರಾದಿ ಅತ್ಯಂತ ಅಭೇದ l

ಶ್ಯಾಲ ವಿಜಯವಿಟ್ಠಲ ಯಿಂದೂ ll 5 ll

#ಸಿಹಿತಿನಿಸು #ತಿಂಡಿ #ಕೊಂಬು #ಮಸಾಲೆ #ಭಾರತೀಯಆಹಾರ #ರುಚಿಕರ #ಖಾರ #ಆಹಾರ #ದೋಸೆ #ಇಡ್ಲಿ #ಬಿರಿಯಾನಿ #ಮುದ್ದೆ #ರೊಟ್ಟಿ #ಖಾದ್ಯ
#Cafe #canteen #hotel #ಸಾರು #ಊಟ tea #coffee #milk 







 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ