ಪೋಸ್ಟ್‌ಗಳು

ಫೆಬ್ರವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಕ್ಕಿಜ್ವರದ ಹೆಚ್ಚಿನ ಆತಂಕ ಬೇಡ: ಜಿಲ್ಲಾಧಿಕಾರಿ*

ಇಮೇಜ್
*ಹಕ್ಕಿಜ್ವರದ ಹೆಚ್ಚಿನ ಆತಂಕ ಬೇಡ: ಜಿಲ್ಲಾಧಿಕಾರಿ* *ಕರ್ನಾಟಕ ಫೆ 28*:  ಚಿಕ್ಕಬಳ್ಳಾಪುರ  ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರವನ್ನು ಹತೋಟಿಗೆ ತರಲು ತಾಲೂಕಿನ ವರದಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿಯಂತ್ರಣ ಕ್ರಮಗಳನ್ನು ಸಮರೋಪಾಧಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಜನರು ಹೆಚ್ಚಿನ ಆತಂಕಕ್ಕೆ ಒಳಗಾಗದೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಕ್ರಮಗಳನ್ನು(SOP) ಪಾಲಿಸುವಂತೆ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಮನವಿ ಮಾಡಿದರು. ಹಕ್ಕಿ ಜ್ವರ ನಿಯಂತ್ರಣದ ಕುರಿತು ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ಸೋಂಕು ನಿಯಂತ್ರಿಸುವ ಮೂಲಕ ರೋಗ ಬೇರೆಡೆಗೆ ಹರಡದಂತೆ ಹಲವು ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ.ಈಗಾಗಲೇ ವರದಹಳ್ಳಿಯಲ್ಲಿ ಸಾವನ್ನಪಿದ ಕೋಳಿಗಳಲ್ಲಿ ಹಕ್ಕಿಜ್ವರದ ಸೋಂಕು ಪತ್ತೆಯಾಗಿ ದೃಢಪಟ್ಟಿರುವ ಕಾರಣ ಈ ಗ್ರಾಮವನ್ನು ಕೇಂದ್ರವಾಗಿಸಿಕೊಂಡು ಸುತ್ತಲೂ 10 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ ಸಾಗಾಣಿಕೆ ಮೇಲೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ಹೊರಗಡೆಯಿಂದ ವರದಹಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ಕೋಳಿಗಳನ್ನು ತರದಂತೆ ನಾಕಾಬಂಧಿ ಹಾಕಲಾಗಿದೆ. ವರದಹಳ್ಳಿಯಲ್ಲಿನ ಕೋಳಿಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದ್ದು, ರೋಗ ನಿಯಂತ್ರಣದ ಮುಂಜಾಗ್ರತಾ ಕ್ರಮದ ಭಾಗವಾಗಿ ...

ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ*

police commissioner love video *ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ* ಕರ್ನಾಟಕ, ಫೆಬ್ರವರಿ 28: ಇಂದು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ನಗರ ಪೊಲೀಸ್ ಆಯುಕ್ತ ಸಿ ದಯಾನಂದ ಮಾತನಾಡಿದರು. ಕೆಆರ್ ಪುರ ಪೊಲೀಸ್ ಠಾಣೆಯವರು ಒಂದು ಉತ್ತಮ ಕೆಲಸವನ್ನು ಮಾಡಿದ್ದಾರೆ.ಬೆಂಗಳೂರು ನಗರ ಸೇರಿದಂತೆ ಹೊರ ರಾಜ್ಯಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದಂತಹ ಓರ್ವ ಅಂತರ್ ರಾಜ್ಯ ಕಳ್ಳನನ್ನ ವಾಹನಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಆತನಿಂದ ಬೇರೆ ಬೇರೆ ಕಂಪನಿಗಳ ಒಟ್ಟು 100 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 1,45,00,000 ಆಗಿದೆ. ಬಹುಶಃ ಇದುವರೆಗಿನ ಬೆಂಗಳೂರು ನಗರದಲ್ಲಿಗಳಲ್ಲಿ ಇದು ಅತ್ಯಂತ ಹೆಚ್ಚಿನ ವಾಹನಗಳ ರಿಕವರಿ ಅಂತ ನಾನು ಭಾವಿಸುತ್ತೇನೆ.  .ತಿಂಗಳು ಜನವರಿ ಹತ್ತನೇ ತಾರೀಕಿನಂದು ಕೆ ಆರ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹ ಒಂದು ಮನೆಯ ಮುಂಭಾಗ ನಿಲ್ಲಿಸಿದ್ದ ಅಂತಹ ವಾಹನವನ್ನು ಯಾರೋ ಕಳ್ಳರು ದ್ವಿಚಕ್ರ ವಾಹನ ಕದ್ದು ಕೊಂಡು ಹೋಗುತ್ತಾರೆ ,ಅದರಂತೆ ಅವರು ಹತ್ತನೇ ತಾರೀಖು ಈ ದೂರನ್ನ ದಾಖಲಿಸಿದ್ದಾರೆ. ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ಹಾಗೆ ದಾಖಲಿಸಿಕೊಂಡ ಈ ದೂರಿನ ಅನ್ವಯ ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ತನಿಖೆಯನ್ನ ಕೈಗೊಂಡು ಆರನೇ ತಾರೀಖು ಫೆಬ್ರವರ...

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಇಮೇಜ್
*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*           **** ಭಾರತ, ಮಾರ್ಚ್ 01:ಆಂಥೂರಿಯಂ ಅನ್ನು ಫ್ಲೆಮಿಂಗೊ ಹೂವುಗಳು ಎಂದೂ ಕರೆಯುತ್ತಾರೆ, ಅವುಗಳ ವಿಶಿಷ್ಟವಾದ, ಪ್ರಕಾಶಮಾನವಾದ ಕೆಂಪು, ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಕಂಡು ಬರುತ್ತವೆ.   ಮೂಲ  ಕುಲವು ಮಧ್ಯ ಅಮೇರಿಕಾ, ಉತ್ತರ ದಕ್ಷಿಣ ಅಮೇರಿಕಾ ಮತ್ತು ಕೆರಿಬಿಯನ್‌ಗೆ ಸಂಬಂಧಿಸಿದೆ, ಅಲ್ಲಿ ಸ್ಥಳೀಯವಾಗಿ ಸುಮಾರು 1,000 ದೀರ್ಘಕಾಲಿಕ ವಿವಿಧ ಪ್ರಭೇದಗಳ ಸಸ್ಯಗಳನ್ನು ಒಳಗೊಂಡಿದೆ.  ಕೆಂಪು ಆಂಥೂರಿಯಂ ಸಸ್ಯಗಳು ಪ್ರಕಾಶಮಾನವಾದ, ಪರೋಕ್ಷ ಸೂರ್ಯನ ಬೆಳಕು, ಹೆಚ್ಚಿನ ಆರ್ದ್ರತೆ ಮತ್ತು ತೇವಾಂಶವುಳ್ಳ, ಚೆನ್ನಾಗಿ ಬರಿದುಹೋದ ಮಣ್ಣನ್ನು ಆದ್ಯತೆ ನೀಡುತ್ತವೆ.   ಆಂಥೂರಿಯಂ ಸಸ್ಯಗಳನ್ನು ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: - 1. ನೀರುಹಾಕುವುದು: ಮೇಲಿನ 2 ಇಂಚು ಮಣ್ಣು ಒಣಗಿದಾಗ ನೀರು ಹಾಕಿ. ಶರತ್ಕಾಲ ಮತ್ತು ಚಳಿಗಾಲದಲ್ಲಿ ನೀರು ಕಡಿಮೆ ಹಾಕಬೇಕು. 2. ಬೆಳಕು: ಪ್ರತಿ ದಿನ ಕನಿಷ್ಠ 6 ಗಂಟೆಗಳ ಕಾಲ ಪರೋಕ್ಷ ಸೂರ್ಯನ ಬೆಳಕನ್ನು ಹೊಂದಿರುವ ಸ್ಥಳದಲ್ಲಿ ಇರಿಸಿ. ಆಂಥೂರಿಯಂಗಳು ನೆರಳಿಗಿಂತ ಸೂರ್ಯನನ್ನು ಬಯಸುತ್ತವೆ ಆದರೆ ನೇರ ಸೂರ್ಯನ ಬೆಳಕನ್ನು ತಪ್ಪಿಸಿ,, ಇದು ಎಲೆಗಳನ್ನು ಸುಡಬಹುದು.   3.ಮಣ್ಣು: ಹಗುರವಾದ, ಚೆನ್ನಾಗಿ ಬರಿದುಮಾಡುವ ...

*ಮಾರ್ಚ.2 ರಿಂದ 4 ರವರೆಗೆ ರಾಜ್ಯ ಮಟ್ಟದ**ಪಾರಂಪರಿಕ ವೈದ್ಯ ಸಮ್ಮೇಳನ ಕಾರ್ಯಕ್ರಮ**ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರ ದಿವ್ಯ ಸಾನಿಧ್ಯ*

ಇಮೇಜ್
*ಮಾರ್ಚ.2 ರಿಂದ 4 ರವರೆಗೆ  ರಾಜ್ಯ ಮಟ್ಟದ* *ಪಾರಂಪರಿಕ ವೈದ್ಯ ಸಮ್ಮೇಳನ ಕಾರ್ಯಕ್ರಮ* *ಶ್ರೀ ಆದಿಚುಂಚನಗಿರಿ  ಪೀಠಾಧ್ಯಕ್ಷರ ದಿವ್ಯ ಸಾನಿಧ್ಯ* =================== ಕರ್ನಾಟಕ, ಫೆಬ್ರುವರಿ.27: ಜ ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಬೆಂಗಳೂರು ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ (ರಿ) ಬೆಂಗಳೂರು ಹಾಗೂ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ (ರಿ) ಲಿಂಗಸುಗೂರು ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್.2 ರಿಂದ 4 ರವರೆಗೆ 15ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.   ಮಾರ್ಚ್.2 ರಂದು ಬೆಳಿಗ್ಗೆ 11 ಗಂಟೆಗೆ ಬೆಲ್ದಾಳೆ ಕನ್ವೆನ್ಯನ್ ಹಾಲ್ (ಲಾಹೋಟಿ ಶೋ-ರೂಮ್ ಹಿಂದುಗಡೆ) ಬೀದರದಲ್ಲಿ 15ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆಯನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಮಾಡಲಿದ್ದಾರೆ.   ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಷ.ಪೂ.ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ವಹಿಸಲಿದ್ದಾರೆ. ಸ್ಮರಣ ಸಂಚಿಕೆ ಮುಖಪುಟ ಬಿಡುಗಡೆಯನ್ನು ಬೀದರ ಲೋಕಸಭಾ ಸದಸ್ಯರಾದ ...

ಏನ್ ಸಮಾಚಾರ?*ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಅವಕಾಶ ಮತ್ತು ಸಾಧ್ಯತೆಗಳಿವೆ*

ಇಮೇಜ್
ಏನ್ ಸಮಾಚಾರ? *ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಅವಕಾಶ ಮತ್ತು ಸಾಧ್ಯತೆಗಳಿವೆ* ಮೈಸೂರು ಫೆ.27  ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಅವಕಾಶ ಮತ್ತು ಸಾಧ್ಯತೆಗಳಿವೆ.  ಕರ್ತವ್ಯನಿಷ್ಠೆ ಕೆಲಸದ ಬದುಕಿಗೆ ಅಗತ್ಯವೆಂಬುದನ್ನು ಅರಿತು ಕೆಲಸ ಮಾಡಡಬೇಕು ಎಂದು ಮೈಸೂರು ವಿಶ್ವವಿದ್ಯಾನಿಲುಂದ ಕುಲಪತಿಗಳಾದ  ಪ್ರೊ. ಎನ್.ಕೆ. ಲೋಕನಾಥ್ ಹೇಳಿದರು. ಇಂದು ನಗರದ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪತ್ರಿಕೋದ್ಯಮ  ಮತ್ತು ಸಮೂಹ  ಸಂವಹನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಗುರುವಾರ ಏರ್ಪಡಿಸಿದ್ದ ಏನ್ ಸಮಾಚಾರ. !  ಮೀಡಿಯಾ ಹಬ್ಬ  2025  ಕಾರ್ಯಕ್ರಮವನ್ನು ಉದ್ಘಾಟಿಸಿ ವಾತನಾಡಿದ ಅವರು ವಿದ್ಯೆ,  ವಸ್ತುನಿಷ್ಠತೆ ,ನಿರಂತರ ಶ್ರಮ, ಸದೃಢ ಮನಸ್ಥಿತಿ,ಈ ಅಂಶಗಳನ್ನು ಪತ್ರಿಕೋದ್ಯಮ ಮತ್ತು ಸಂವಹನದ ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪತ್ರಕರ್ತರಾಗುತ್ತಾರೆ ಎಂದರು. ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ಒಂದೇ ವಿಚಾರದ ಬಗ್ಗೆ ಚರ್ಚಿಸುತ್ತಿದ್ದಾರೆ.  ಇಂದಿನ ತಂತ್ರಜ್ಞಾನದ ದಿನಗಳಲ್ಲಿ ಡಿಜಿಟಲ್ ಬಳಸಿಕೊಳ್ಳುತ್ತಾರೆ. ಮಕ್ಕಳಿಗೆ ಹೆಚ್ಚು ಓದು ಹವ್ಯಾಸವಿಲ್ಲ. ನಿಜವಾದ ಪತ್ರಕರ್ತರಾದವರು ಚೆನ್ನಾಗಿ ಓದಬೇಕು. ನೀವು ಬರೆದ ಲೇಖನದ ಬಗ್ಗೆ ವಾತನಾಡಬೇಕು. ಸುದ್ದಿು...

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

ಭಾರತೀಯ ದೇವತೆಗಳ ಮೆಚ್ಚಿನ ಪುಷ್ಪ ಕಮಲ. ಕಮಲದ ಹೂವು ಮನೆಯಲ್ಲಿದ್ದರೆ ಆ ಕುಟುಂಬಕ್ಕೆ ಆಯಸ್ಸು,ಆರೋಗ್ಯ, ಸಕಲ ಸಮೃದ್ಧಿಗಳು ಲಭಿಸುತ್ತವೆ ಎನ್ನುವ ನಂಬಿಕೆಯಿದೆ. ಅದಕ್ಕಾಗಿಯೇ ಅನೇಕ ಮನೆಗಳ ಹಜಾರದ ಮೂಲೆಯೊಂದರಲ್ಲಿ ಸಣ್ಣ ಕಮಲವೊಂದನ್ನು  ಇಟ್ಟಿರುತ್ತಾರೆ. ಈ ಅದೃಷ್ಟದ ಹೂವು ಸದಾ ನಗುತ್ತಾ ಇರಬೇಕು ಅಂದರೆ, . ನಿಮ್ಮ ಮನೆಯ ಕಮಲ ಕಳೆ ಕಳೆಯಾಗಿರುವಂತೆ ಮಾಡಲು ನಾವು ಕೆಲವು ತೋಟಗಾರಿಕಾ ಸಲಹೆಗಳನ್ನು ನಿಮಗಾಗಿ ತಂದಿದ್ದೇವೆ. ಮನೆ ಕಮಲದ ಗಿಡಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ ಏಕೆಂದರೆ ಅವು ತುಂಬಾನೇ ಸೂಕ್ಷ್ಮವಾದವುಗಳು. ಕಮಲ ನೀರಿನಲ್ಲಿ ಬೆಳೆಯುವ ಸಸ್ಯವಾಗಿದ್ದರೂ ಅಗತ್ಯಕ್ಕಿಂತ ಹೆಚ್ಚಿನ ನೀರಿದ್ದರೆ ಈ ಗಿಡಗಳು ಸತ್ತುಹೋಗುತ್ತವೆ! . ದೊಡ್ಡದಾದ ಪಾತ್ರೆಯಲ್ಲಿ ಕಮಲದ ಆರೈಕೆಯತ್ತ ಮೊದಲ ಹೆಜ್ಜೆಯೆಂದರೆ, ಕಮಲದ ಗಿಡವನ್ನು ಒಂದು ದೊಡ್ಡ ಪಾತ್ರೆಯಲ್ಲಿ ನೆಡುವುದು. ಬಟ್ಟಲು ಎಷ್ಟು ದೊಡ್ಡದಿರುತ್ತದೋ ಗಿಡವೂ ಅಷ್ಟು ದೊಡ್ಡದಾಗಿ ಬೆಳೆಯುತ್ತದೆ. ಕಮಲದ ಗಿಡಗಳು ತುಂಬಾ ಸೂಕ್ಷ್ಮ ರೀತಿಯವಾಗಿದ್ದು ಅವು ಆರಾಮವಾಗಿ, ಸಮೃದ್ಧವಾಗಿ ಬೆಳೆಯಬೇಕೆಂದರೆ, ಈ ಗಿಡಗಳನ್ನು ಇರಿಸಿದ್ದ ಬಟ್ಟಲಲ್ಲಿ ಯಾವುದೇ ಹೂವುಗಳನ್ನು ಬೆಳೆಸಬೇಡಿ. ಕಮಲ ಇರಿಸಿದ್ದ ಬಟ್ಟಲಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿಡಲು ಮರೆಯದಿರಿ. ಈ ಚಿಟಿಕೆ ಉಪ್ಪು ನಿಮ್ಮ ಕಮಲದ ಗಿಡವನ್ನು ಹೆಚ್ಚು ದಿನಗಳ ಕಾಲ ಬಾಳಿಸಬಲ್ಲದು. ಕಮಲವು ದೀರ್ಘಕಾಲ ಉಳಿಯಲು , ನೀರನ್ನು ಬದಲಾಯಿಸುವದರಿಂದ ಹಾಗೂ...

ಕೋಕೋ ಬೀನ್ಸ್ ಎಂದು ಕರೆಯಲ್ಪಡುವ ಇದರ ಬೀಜಗಳನ್ನು ಕೋಕೋ ಪೌಡರ್, ಕೋಕೋ ಬೆಣ್ಣೆ ಮತ್ತು ಚಾಕೊಲೇಟ್ ಆಗಿ ಸಂಸ್ಕರಿಸಲಾಗುತ್ತದೆ*

*ಕೋಕೋ ಬೀನ್ಸ್ ಎಂದು ಕರೆಯಲ್ಪಡುವ ಇದರ ಬೀಜಗಳನ್ನು ಕೋಕೋ ಪೌಡರ್, ಕೋಕೋ ಬೆಣ್ಣೆ ಮತ್ತು ಚಾಕೊಲೇಟ್ ಆಗಿ ಸಂಸ್ಕರಿಸಲಾಗುತ್ತದೆ* ಭಾರತ, ಫೆಬ್ರವರಿ 26:ಕೋಕೋ, (ಥಿಯೋಬ್ರೊಮಾ ಕೋಕೋ), ಉಷ್ಣವಲಯದ ನಿತ್ಯಹರಿದ್ವರ್ಣ ಮರ (ಮಾಲ್ವೇಸೀ ಕುಟುಂಬ) ಅದರ ಖಾದ್ಯ ಬೀಜಗಳಿಗಾಗಿ ಬೆಳೆಯಲಾಗುತ್ತದೆ, ಇದರ ವೈಜ್ಞಾನಿಕ ಹೆಸರು "ದೇವರ ಆಹಾರ" ಎಂದರ್ಥ. cocao video  ನದಿ ಜಲಾನಯನ ಪ್ರದೇಶಗಳ ತಗ್ಗು ಪ್ರದೇಶದ ಮಳೆಕಾಡುಗಳಿಗೆ ಸ್ಥಳೀಯವಾಗಿ, ಕೋಕೋವನ್ನು ವಾಣಿಜ್ಯಿಕವಾಗಿ  ಉಷ್ಣವಲಯದಲ್ಲಿ ಮತ್ತು ಪಶ್ಚಿಮ ಆಫ್ರಿಕಾ ಮತ್ತು ಉಷ್ಣವಲಯದ ಏಷ್ಯಾದಲ್ಲಿ ಬೆಳೆಯಲಾಗುತ್ತದೆ. ಕೋಕೋ ಬೀನ್ಸ್ ಎಂದು ಕರೆಯಲ್ಪಡುವ ಇದರ ಬೀಜಗಳನ್ನು ಕೋಕೋ ಪೌಡರ್, ಕೋಕೋ ಬೆಣ್ಣೆ ಮತ್ತು ಚಾಕೊಲೇಟ್ ಆಗಿ ಸಂಸ್ಕರಿಸಲಾಗುತ್ತದೆ.     ಕೋಕೋವು 6-12 ಮೀಟರ್ (20-40 ಅಡಿ) ಎತ್ತರದವರೆಗೆ ಕಾಡಿನ ಕೆಳಭಾಗದಲ್ಲಿ ಬೆಳೆಯುತ್ತದೆ, ಸಾಮಾನ್ಯವಾಗಿ ಈ ಶ್ರೇಣಿಯ ಕೆಳಗಿನ ತುದಿಯಲ್ಲಿ ಉಳಿಯುತ್ತದೆ. ಇದರ ಉದ್ದವಾದ ಚರ್ಮದ ಎಲೆಗಳು 30 ಸೆಂ.ಮೀ (12 ಇಂಚು) ಉದ್ದವನ್ನು ಅಳೆಯುತ್ತವೆ ಮತ್ತು ನಿಯತಕಾಲಿಕವಾಗಿ ಉದುರಿಹೋಗುತ್ತವೆ.  ಮತ್ತು ಚಿಕ್ಕದಾಗಿದ್ದಾಗ ಗಮನಾರ್ಹವಾದ ಕೆಂಪು ಬಣ್ಣದ ಹೊಸ ಎಲೆಗಳಿಂದ ಬದಲಾಯಿಸಲ್ಪಡುತ್ತವೆ. ಇದರ ಹೂವುಗಳು ದುರ್ವಾಸನೆ ಅಥವಾ ವಾಸನೆಯಿಲ್ಲದವು; ಅವು ಎಲ್ಲಾ ಸಮಯದಲ್ಲೂ ಇರುತ್ತವೆ ಆದರೆ ವರ್ಷಕ್ಕೆ ಎರಡು ಬಾರಿ ಹೇರಳವಾಗಿ ಕಾಣಿಸಿಕೊಳ್...

* ಶಿವರಾತ್ರಿ ಉಪವಾಸದ ನಂತರ ಫೆಬ್ರವರಿ 27ರಂದು ಎಲ್ಲರಿಗೂ ಭರ್ಜರಿ ಊಟ* ಇದಕ್ಕಿದೆ ಶತಮಾನದ ಇತಿಹಾಸ*

ಇಮೇಜ್
kack fruit salad full video *  ಶಿವರಾತ್ರಿ ಉಪವಾಸದ ನಂತರ ಫೆಬ್ರವರಿ 27ರಂದು ಎಲ್ಲರಿಗೂ ಭರ್ಜರಿ  ಊಟ* ಇದಕ್ಕಿದೆ ಶತಮಾನದ ಇತಿಹಾಸ* ಕರ್ನಾಟಕ, ಫೆಬ್ರವರಿ 26: ಗುರುವಾರ ಎಳೆಯ ಹಲಸಿನ ಕಾಯಿ ಸಾಂಬರು ರಾಗಿ ಮುದ್ದೆ 15 ಸಾವಿರ ಜನರಿಗೆ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿದೆ. *ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಬಡವನಹಳ್ಳಿ ಪಕ್ಕದ ಅಪನಹಳ್ಳಿ ನಂಜುಡೇಶ್ವರ ದೇವಾಲಯದ ಆವರಣದಲ್ಲಿ (ದಿನಾಂಕ: 27-02-25) ಗುರುವಾರ ಬೆಳಿಗ್ಗೆಯಿಂದ 10 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಶಿವರಾತ್ರಿಯ ಉಪವಾಸ ಬಿಡುವ ಕಾರ್ಯಕ್ರಮ ನಡೆಯುತ್ತದೆ* ಹಲವು ದಶಕಗಳಿಂದ ಸ್ಥಳೀಯ ಸಮಿತಿಯವರು ದಾನಿಗಳ ಮತ್ತು ಭಕ್ತರ ಸಹಕಾರದಿಂದ ಎಳೆಯ ಹಲಸಿನ ಕಾಯಿ ಕೆತ್ತಕಾಯಿ ಸಾಂಬರು, ರಾಗಿ ಮುದ್ದೆ, ಅನ್ನ ಮತ್ತು ಪಾಯಸವನ್ನು ಉಚಿತವಾಗಿ ಪ್ರತಿ ವರ್ಷ 10-15 ಸಾವಿರ ಜನರುಗಳಿಗೆ ಸಾಮೂಹಿಕ ಭೋಜನ ವ್ಯವಸ್ಥೆ ಮಾಡುತ್ತಾರೆ. ಬುಧವಾರ ಮದ್ಯಾಹ್ನದಿಂದ ಹಲಸಿನ ಕಾಯಿ ಕೋಚ್ಚುವ ಕೆಲಸವನ್ನು ಪ್ರಾರಂಭವಾದರೆ ಗುರುವಾರ ಬೆಳಗಿನ ಜಾವದವರೆಗೂ ನಡೆಯುತ್ತದೆ.  ಮದ್ಯರಾತ್ರಿ ಭಕ್ತರು ದಾನ ನೀಡಿರುವ, ಖರೀದಿಸಿರುವ ದ್ವಿದಳ ಧಾನ್ಯಗಳನ್ನು ಬೇಯಿಸಲು ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಹಾಕಿ ಕೆಲವು ಗಂಟೆಗಳ ನಂತರ ಹಲಸಿನ ಕೊಚ್ಚಿರುವ ಚೂರುಗಳನ್ನು ಹಾಕುತ್ತಾರೆ.  ಈ ಸನ್ನಿವೇಶ ಗಳನ್ನು ಕಣ್ಣುತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು...

*ರಾಜ್ಯದಲ್ಲಿನ 25 ಸಾವಿರಕ್ಕೂ ಹೆಚ್ಚು ಸ್ಮಾರಕಗಳಿಗೆ ರಕ್ಷಣೆ ಇಲ್ಲ:ಸಚಿವ ಎಚ್.ಕೆ.ಪಾಟೀಲ್*

ಇಮೇಜ್
*ರಾಜ್ಯದಲ್ಲಿನ 25 ಸಾವಿರಕ್ಕೂ ಹೆಚ್ಚು  ಸ್ಮಾರಕಗಳಿಗೆ  ರಕ್ಷಣೆ ಇಲ್ಲ:ಸಚಿವ ಎಚ್.ಕೆ.ಪಾಟೀಲ್* *ಫೆ 26 ರಿಂದ 28 ರವರೆಗೆ  ಬೆಂಗಳೂರುನಲ್ಲಿ ಇಂಟರನ್ಯಾಶನಲ್ ಟೂರಿಸಮ್ ಎಕ್ಸಪೋ* ಕರ್ನಾಟಕ  ಫೆ.25: ವಿಶ್ವಕ್ಕೆ ರಾಜ್ಯದ ಅದ್ಭುತ ಪ್ರವಾಸಿ ತಾಣಗಳ ಪರಿಚಯ ಮಾಡಿಸುವ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಮ್ ಸೊಸೈಟಿಯ ಸಹಯೋಗದೊಂದಿಗೆ ಫೆಬ್ರವರಿ 26 ರಿಂದ 28 ರವರೆಗೆ ಕರ್ನಾಟಕ ಇಂಟರನ್ಯಾಶನಲ್ ಟೂರಿಸಮ್ ಎಕ್ಸಪೋವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಕ್ಸಪೋವನ್ನು ಉದ್ಘಾಟಿಸುವರು ಎಂದು  ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ಹೇಳಿದರು.  ಇಂದು ಹುಬ್ಬಳ್ಳಿ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ನಮ್ಮ ರಾಜ್ಯದಲ್ಲಿ ಅಸಂಖ್ಯಾತ ಪ್ರವಾಸಿ ತಾಣಗಳು, ಸ್ಮಾರಕಗಳು ಇವೆ. 25 ಸಾವಿರಕ್ಕೂ ಹೆಚ್ಚು ಅರಕ್ಷಿತ ಸ್ಮಾರಕಗಳಿದ್ದು, ಅವುಗಳಲ್ಲಿ 800 ಕ್ಕೂ ಹೆಚ್ಚು ಸ್ಮಾರಕಗಳನ್ನು ರಕ್ಷಿತ ಸ್ಮಾರಕಗಳಾಗಿ ಘೋಷಿಸಲಾಗಿದೆ. ಮುಂದಿನ ಪೀಳಿಗೆಗೆ ಇವುಗಳ ಮಹತ್ವವನ್ನು ತಿಳಿಸಲು ಹಾಗೂ ಅವುಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಮಹಾತ್ಕಾರ್ಯಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ನಮ್ಮ ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸ, ಕರಕುಶಲ ಉತ್ಪನ್ನಗಳು, ಪಾಕ ಪದ್ಧತಿ, ನೃತ್ಯ ಪ್ರಕಾರಗಳು, ಜೀವನ ಶೈಲಿ, ಅತಿಥಿ ಸತ್ಕ...

*ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ*

ಇಮೇಜ್
*ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ* ಕರ್ನಾಟಕ .25:- ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ ಪೂಜೆ ಮಂಗಳವಾರ ನಡೆಯಿತು.  ಗಂಗಾ ಪೂಜೆ ನೆರವೇರಿಸಿದ ಮೇಯರ್ ಮನೋಜ್ ಕುಮಾರ್ ಮಾತನಾಡಿ, ನೇತ್ರಾವತಿ ನದಿಯಿಂದ ಮಂಗಳೂರು ನಗರವಾಸಿಗಳಿಗೆ, ಕೃಷಿಗೆ ಹಾಗೂ ಇನ್ನಿತರ ಪ್ರದೇಶಗಳಿಗೆ ನೀರು ಸರಬರಾಜು ಆಗುತ್ತಿದೆ. ನೀರಿನ ಒಳಹರಿವು ಚೆನ್ನಾಗಿದ್ದು, ಈ ವರ್ಷದಲ್ಲಿಯೂ ಕೂಡ ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ ನೀರು ಸಂಗ್ರಹವಾಗಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಲಸಿರಿ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿಗಳು ಪೂರ್ಣಗೊಂಡರೆ ಶೀಘ್ರದಲ್ಲಿ ಮಂಗಳೂರು ಜನತೆಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲಾಗುತ್ತದೆ ಎಂದು ಅವರು ಹೇಳಿದರು.   ಮಹಾನಗರಪಾಲಿಕೆ ಆಯುಕ್ತ  ಮಾತನಾಡಿ, ನೀರು ಸೀಮಿತವಾಗಿ ಸಿಗುವ ಸಂಪನ್ಮೂಲವಾಗಿದೆ. ಮುಂದಿನ ಬರುವಂತಹ ಬೇಸಿಗೆ ಕಾಲದಲ್ಲಿ ಹಾಗೂ ನಂತರವೂ ಕೂಡ ಮಹಾನಗರಪಾಲಿಕೆ ಸುವ್ಯವಸ್ಥಿತವಾಗಿ ನಗರದ ಜನತೆಗೆ ಸಕಾಲದಲ್ಲಿ ನೀರು ಪೂರೈಸಲು ಇಂದು ನೇತ್ರಾವತಿ ನದಿಗೆ ಗಂಗಾಪೂಜೆ ಮಾಡಲಾಯಿತು ಹಾಗೂ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗದಿರಲಿ ಎಂದರು.   ಉಪಮೇಯರ್ ಭಾನುಮತಿ, ವಿಪಕ್ಷ ನಾಯಕ ಅನಿಲ್ ಕುಮಾರ್, ಪಾ...

ಮಕ್ಕಳ ಸಾಹಸಕ್ಕೆ ಸಾರ್ವಜನಿಕರ ಪ್ರಶಂಸೆ*

*ಮುಸ್ಲಿಂ ಧರ್ಮ ಗುರುವಿಗೆ ಬಿತ್ತು ಹೊಡೆತ* -ಹೆಣ್ಣು ಮಕ್ಕಳ ಸಾಹಸಕ್ಕೆ ಸಾರ್ವಜನಿಕರ ಪ್ರಶಂಸೆ* ಭಾರತ, ಫೆಬ್ರವರಿ 25: ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ  ಮುಸ್ಲಿಂ ಧಾರ್ಮಿಕ ಗುರುಗೆ , ಬಾಧಿತ ಎಲ್ಲಾ ಹೆಣ್ಣು ಮಕ್ಕಳು ಸೇರಿ ಹೊಡೆದಿರುವ ಘಟನೆ ಕರ್ನಾಟಕ ರಾಜ್ಯದಲ್ಲಿ ನಡೆದಿದೆ. women assault full video *ಈ ರೀತಿ ಹೆಣ್ಮಕ್ಕಳು, ಹೆಂಗಸರು ಮುಂದೆ ಬಂದರೇನೇ ಈ ಇಂತಹ ಕೆಟ್ಟ ಶಕ್ತಿಗಳ  ಭೂತವನ್ನು ಸುಟ್ಟು ಹಾಕಬಹುದು*. 😊    ಇಂತಹವರಿಂದ ಆದ ನಷ್ಟ, ನಾಶವನ್ನು ಕಂಡ ಪಾಪದ ಬಡ ಕುಟುಂಬ ಗಳನ್ನು ಮರೆಯಲಿಕ್ಕೆ ಸಾಧ್ಯವಿಲ್ಲ*. #ಭಾರತ '#ಲೈಂಗಿಕಕಿರುಕುಳ' #ವಿಡಿಯೋ #ಪುರುಷರಬಂಧನ #ಬಿಸಿಬಿಸಿ #ಕಜ್ಜಾಯ ಮಹಿಳಾ ಸಹಾಯವಾಣಿ ಸಂಖ್ಯೆ 181:-  ಮಹಿಳಾ ಸಹಾಯವಾಣಿಯು ಹಿಂಸೆಯಿಂದ ಪೀಡಿತ ಮಹಿಳೆಯರಿಗೆ 24 ಗಂಟೆಗಳ ಸಹಾಯ ಮತ್ತು ತುರ್ತು ಪ್ರತಿಕ್ರಿಯೆಯನ್ನು ಒದಗಿಸುತ್ತದೆ.  ಒಂದೇ ಏಕರೂಪದ ಸಂಖ್ಯೆಯ ಮೂಲಕ ದೇಶಾದ್ಯಂತ ಮಹಿಳೆಯರಿಗೆ ಸಂಬಂಧಿಸಿದ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.  ಮಹಿಳಾ ಸಹಾಯವಾಣಿಯ ಸಮಗ್ರ ಉದ್ದೇಶವು ಮರಣ ಪ್ರಮಾಣ, ರೋಗಗ್ರಸ್ತವಾಗುವಿಕೆ, ಅಪೌಷ್ಟಿಕತೆ ಮತ್ತು ಶಾಲೆ ಬಿಟ್ಟವರ ಸಂಭವವನ್ನು ಕಡಿಮೆ ಮಾಡುವುದು.  #Bharata #mone #budget #achivement #people #Kashmir #border #election #Chethana #gowda #traffic...

ಮೂಲಂಗಿ ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಕರಗುವ ಮತ್ತು ಕರಗದ ನಾರಿನಂಶದ ಸಮೃದ್ಧ ಮೂಲವಾಗಿದೆ

ಇಮೇಜ್
*ಮೂಲಂಗಿ* ಅಗ್ಗವಾಗಿ ಸಿಗುವ ಯಾವ ವಸ್ತುಗಳೂ ನಮಗೆ ಅಮೂಲ್ಯವಲ್ಲ! ಆಹಾರದ ವಿಷಯದಲ್ಲಂತೂ ಈ ಮಾತು ಮೂಲಂಗಿಗೆ ಸ್ಪಷ್ಟವಾಗಿ ಅನ್ವಯಿಸುತ್ತದೆ. ವಾಸ್ತವದಲ್ಲಿ ಮೂಲಂಗಿ ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಕರಗುವ ಮತ್ತು ಕರಗದ ನಾರಿನಂಶದ ಸಮೃದ್ಧ ಮೂಲವಾಗಿದೆ. ಇನ್ನೂ ಒಳ್ಳೆಯ ಅಂಶವೆಂದರೆ ಇದನ್ನು ಹಸಿಯಾಗಿಯೂ ಬೇಯಿಸಿಯೂ ಸೇವಿಸಬಹುದು ತರಕಾರಿಗಳಲ್ಲಿ ಕೆಲವು ಮಾತ್ರವೇ ಹಸಿಯಾಗಿಯೂ ಸೇವಿಸಬಹುದಾದ ಮತ್ತು ಬೇಯಿಸಿಯೂ ಸೇವಿಸಬಹುದಾಗಿವೆ. ಕ್ಯಾರೆಟ್, ಎಲೆಕೋಸು, ಟೊಮಾಟೋ ಹಾಗೂ ಮೂಲಂಗಿ ಇವುಗಳಲ್ಲಿ ಪ್ರಮುಖವಾಗಿವೆ. ಆದರೆ ಸಾಲಾಡ್ ಒದಗಿಸುವ ತಟ್ಟೆಯಲ್ಲಿ ಇತರ ತರಕಾರಿಗಳು, ಸೌತೆಕಾಯಿ ಮೊದಲಾದವುಗಳಿದ್ದರೂ ಮೂಲಂಗಿ ಏಕೆ ಇರುವುದಿಲ್ಲ? ಕಾರಣ, ಮೂಲಂಗಿಯ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ಇರುವ ಅಸಡ್ಡೆ. ಇದು ಅಗ್ಗವಾಗಿ ದೊರಕುತ್ತದೆ ಎಂಬ ಕಾರಣಕ್ಕೇ ಹೆಚ್ಚಿನವರ ಅಸಡ್ಡೆಗೆ ಗುರಿಯಾಗಿದೆ. ವಾಸ್ತವದಲ್ಲಿ, ಮೂಲಂಗಿ ಒಂದು ಅದ್ಭುತವಾದ ಆರೋಗ್ಯಕರ ತರಕಾರಿಯಾಗಿದೆ.  ಮೂಲಂಗಿ ಬಣ್ಣ ಮೂಲಂಗಿ ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿದ್ದರೂ ಇತರ ಬಣ್ಣಗಳಲ್ಲಿಯೂ ದೊರಕುತ್ತದೆ. ಕೆಂಪು, ಹಳದಿ, ನೇರಳೆ, ಬಿಳಿ-ಕೆಂಪು ಮಿಶ್ರಿತ ಬಣ್ಣ, ಹಸಿರು ಮೊದಲಾದ ಬಣ್ಣಗಳಲ್ಲಿ ದೊರಕುತ್ತದೆ. Daikon ಎಂಬ ತಳಿಯ ಬಿಳಿ ಮೂಲಂಗಿ ಸಾಮಾನ್ಯವಾಗಿ ಉದ್ದ ಮತ್ತು ದೊಡ್ಡದಾಗಿದ್ದರೆ ಉಳಿದವು ಚಿಕ್ಕ ಬೀಟ್ರೂಟಿನ ಆಕಾರದಲ್ಲಿರುತ್ತವೆ. ಅಪರೂಪಕ್ಕೆ ಕಪ್ಪು ಬಣ್ಣಕ್ಕೆ ಅತಿ ಹತ...

*ಮಹಾ ಶಿವರಾತ್ರಿ ಹಬ್ಬ: ಫೆಬ್ರವರಿ 26 ರಂದು ಪ್ರಾಣಿ ವಧೆ, ಮಾಂಸ ಮಾರಾಟ ಸಂಪೂರ್ಣ ನಿಷೇಧಿಸಿ - ಆದೇಶ ಹೊರಡಿಸಿದ ಸರ್ಕಾರ*

ಇಮೇಜ್
*ಮಹಾ ಶಿವರಾತ್ರಿ ಹಬ್ಬ: ಫೆಬ್ರವರಿ 26 ರಂದು  ಪ್ರಾಣಿ ವಧೆ, ಮಾಂಸ ಮಾರಾಟ ಸಂಪೂರ್ಣ ನಿಷೇಧಿಸಿ - ಆದೇಶ ಹೊರಡಿಸಿದ ಸರ್ಕಾರ* ಕರ್ನಾಟಕ, ಫೆಬ್ರವರಿ 24:ಶಿವರಾತ್ರಿ ಹಬ್ಬಕ್ಕೆ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ. ಈ ಬಗ್ಗೆ ಬಿಬಿಎಂಪಿ ಆದೇಶ ನೀಡಿದೆ. ಇನ್ನು ಬೆಂಗಳೂರಿನ ಹಲವೆಡೆ ವೈಭವಯುತ ಶಿವರಾತ್ರಿ ಹಬ್ಬದ ಆಚರಣೆ ನಡೆಯುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಗಂಗಾಧರ ನಗರದ ಸಾರಕ್ಕಿ ಸರ್ಕಲ್‌ನಲ್ಲಿರುವ ಶ್ರೀ ಉಮಾಮಹೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಮಹೋತ್ಸವ ಶುಕ್ರವಾರ ಅದ್ಧೂರಿಯಾಗಿ ನಡೆಯಲಿದೆ. #ಮಾಂಸ #ಶಿವರಾತ್ರಿ #ನಿಷೇದ @mib_india #MIB_Photography #Contest #Chethana #Muniswamy #Riya #YOGI #ಗೌಡ #AI #aivideo #viral #trending # Boss #news #1million #view #ncc #nss #army  https://mojapp.in/@pressnws

*ಮೀನಿನ ತೊಟ್ಟಿಯನ್ನು ಹೇಗೆ ಹೊಂದಿಸುವುದು*

*ಮೀನಿನ ತೊಟ್ಟಿಯನ್ನು ಹೇಗೆ ಹೊಂದಿಸುವುದು*  ಭಾರತ, ಫೆಬ್ರವರಿ 23: ಹೊಸ ಅಕ್ವೇರಿಯಂ ಅನ್ನು ಪ್ರಾರಂಭಿಸುವ ಸಿದ್ಧತೆಗಳು ಸರಿಯಾದ ವಸ್ತುಗಳನ್ನು ಸಂಗ್ರಹಿಸಲು, ಉಪಕರಣಗಳನ್ನು ಸ್ಥಾಪಿಸಲು ಮತ್ತು ಅಕ್ವೇರಿಯಂ ಸೈಕ್ಲಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸುಮಾರು ಒಂದರಿಂದ ಎರಡು ವಾರಗಳನ್ನು ತೆಗೆದುಕೊಳ್ಳಬಹುದು.  aquarium music video  ಮೀನುಗಳು ತುಲನಾತ್ಮಕವಾಗಿ ಅಗ್ಗದ ಸಾಕುಪ್ರಾಣಿಗಳಾಗಿರುವುದರಿಂದ, ತಮ್ಮ ಅಕ್ವೇರಿಯಂಗಳು ಮತ್ತು ಫಿಶ್ ಟ್ಯಾಂಕ್ ಬಿಡಿಭಾಗಗಳು ಹೆಚ್ಚು ವೆಚ್ಚವಾಗುವುದಿಲ್ಲ ಎಂದು ಅನೇಕ ಜನರು ಊಹಿಸುತ್ತಾರೆ. ನೀವು ಹೊಚ್ಚಹೊಸ ಅಕ್ವೇರಿಯಂ ಸರಬರಾಜುಗಳನ್ನು ಖರೀದಿಸಲು ಯೋಜಿಸಿದರೆ, ಸುಮಾರು $200 ಅಥವಾ ಹೆಚ್ಚಿನದನ್ನು ಖರ್ಚು ಮಾಡಲು ಸಿದ್ಧರಾಗಿರಿ.  ಅಕ್ವೇರಿಯಂ ಎಷ್ಟು ದೊಡ್ಡದಾಗಿದೆ ಎಂಬುದನ್ನು ನೀವು ನಿರ್ಧರಿಸುವ ಮೊದಲು, ನೀವು ಮೊದಲು ಅದಕ್ಕೆ ಸೂಕ್ತವಾದ ಸ್ಥಳವನ್ನು ಕಂಡುಹಿಡಿಯಬೇಕು. ಮೀನಿನ ತೊಟ್ಟಿಗಳನ್ನು ಗಟ್ಟಿಯಾದ, ಸಂಪೂರ್ಣವಾಗಿ ಸಮತಟ್ಟಾದ, ಜಲನಿರೋಧಕ ಮೇಲ್ಮೈ ಅಥವಾ ಅಕ್ವೇರಿಯಂ ಸ್ಟ್ಯಾಂಡ್‌ನಲ್ಲಿ ಇರಿಸಬೇಕು ಅದು ಅದರ ಸಂಪೂರ್ಣ ತೂಕವನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಕ್ವೇರಿಯಂ ನೆಲ ಮಹಡಿಯಲ್ಲಿ ಇಲ್ಲದಿದ್ದರೆ, ನೆಲವು ತೂಕವನ್ನು ಸಹ ನಿಭಾಯಿಸಬಲ್ಲದು ಎಂದು ಖಚಿತಪಡಿಸಿಕೊಳ್ಳಿ. ನೀರು, ತಲಾಧಾರ, ಉಪಕರಣಗಳು ಮತ್ತು ಅಲಂಕಾರಗಳಿಂದ ತುಂಬಿದ ಸಿಹಿನೀರಿನ ತೊಟ್ಟಿಯು ಪ್ರತಿ ಗ್ಯಾ...

*ಯಶಸ್ಸಿಗೆ ಈ ಆರೋಗ್ಯಕರ ಜೀವನಶೈಲಿ ಅಗತ್ಯ *

*ಯಶಸ್ಸಿಗೆ ಈ ಆರೋಗ್ಯಕರ ಜೀವನಶೈಲಿ ಅಗತ್ಯ * ಭಾರತ, ಫೆಬ್ರವರಿ 23: ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗಿಯೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ. ನವಗ್ರಹಗಳ ಪ್ರಭಾವ ಶಮನವಾಗಿಸಿ ಯಶಸ್ಸು ಸಾಧಿಸಬಹುದು. 1.*ರವಿಯ ಅನುಗ್ರಹ* :  ಬೆಳಗಿನ ಜಾವ ಬೇಗನೆ ಎದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ಉಂಟಾಗುತ್ತದೆ.  ಸೂರ್ಯನ ಕಿರಣದಲ್ಲಿರುವ 'ಡಿ' ಮತ್ತು 'ಇ' ಪ್ರೊಟೀನ್ ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ.  2.*ಚಂದ್ರನ ಅನುಗ್ರಹ* :  ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.  ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ. 3.*ಕುಜನ ಅನುಗ್ರಹ* :  ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ 'ಅನ್ನಂ ಬ್ರಹ್ಮ' ಎಂಬ ವೇದವಾಕ್ಯವನ್ನು ಗೌರವಿಸಬೇಕು.  ಆಹಾರ ಪದಾರ್ಥವನ್ನು ವೇಸ್ಟ್ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು.  4*ಬುಧನ ಅನುಗ್ರಹ* :  ಬುಧ ಬುದ್ದಿಕಾರಕ. ಬುದ್ಧಿ ಹೀನನಾದರ...