ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

*BANK ROBBERY; 17 ಕೆಜಿ ಚಿನ್ನ ವಶ- ಪೊಲೀಸರ ಭರ್ಜರಿ ಬೇಟೆ*

https://youtube.com/shorts/vxEL9it-WBk?feature=shared *BANK ROBBERY; 17 ಕೆಜಿ ಚಿನ್ನ ವಶ- ಪೊಲೀಸರ ಭರ್ಜರಿ ಬೇಟೆ*  ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಮಾಹಿತಿ 🙏 ಭಾರತ, ಮಾರ್ಚ್ 31: ಪ್ರಕರಣವನ್ನ ಭೇದಿಸಿದ ಪೊಲೀಸರು ಆರೋಪಿಗಳಿಂದ 13 ಕೋಟಿ ಮೌಲ್ಯದ 17 ಕೆಜಿ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಬೇಕರಿ ಉದ್ಯಮಕ್ಕೆ ಅಗತ್ಯವಿದ್ದ ಸಾಲವನ್ನ ನೀಡಲು ನಿರಾಕರಿಸಿದ್ದರಿಂದ ಆರೋಪಿಗಳು ನ್ಯಾಮತಿ ಬ್ಯಾಂಕ್ನಲ್ಲಿ ದರೋಡೆ ಮಾಡಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಭಾರತದ ಇತಿಹಾಸದಲ್ಲಿಯೇ ಇಂತಹದೊಂದು ದೊಡ್ಡ ಕಳ್ಳತನ ಪ್ರಕರಣ ಭೇದಿಸಿದ ಖ್ಯಾತಿಗೆ ದಾವಣಗೆರೆ ಪೊಲೀಸರು ಪಾತ್ರರಾಗಿದ್ದಾರೆ. #accused #arrested #police #nyamathi-#bankrobbery #case #bankebihari #bankholiday #bankloan #banking #bankrobber  ಪೂರ್ವ ವಲಯದ ಐಜಿಪಿ ರವಿ ಕಾಂತೇಗೌಡ ಅವರು ಮಾತನಾಡಿದರು:- ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಅ. 28 ರಂದು ಭಾರತೀಯ ಸ್ಟೇಟ್ ಬ್ಯಾಂಕ್ ದರೋಡೆ ಪ್ರಕರಣ ನಡೆದಿತ್ತು. ಆರೋಪಿಗಳ ಸೆರೆಗಾಗಿ ಪೊಲೀಸರು ಐದಾರು ತಂಡ ಕಟ್ಟಿಕೊಂಡು ಕಳ್ಳರ ಬಂಧನಕ್ಕೆ ಅಲೆದಾಡಿದ್ದರೂ ಪ್ರಯೋಜ‌ನ ಆಗಿರಲಿಲ್ಲ. ಇದೀಗ ಆರು ತಿಂಗಳ ಬಳಿಕ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ತಮಿಳುನಾಡಿನ ವಿಜಯ ಕುಮಾರ್(30), ಅಜಯ್ ಕುಮಾರ್(28), ಪರಮಾನಂದ (30), ಹೊನ್ನಾಳಿ ಹಾಗೂ ನ್ಯಾಮತಿಯ ಅಭಿಷೇಕ(23) ಚಂ...

*ಪೆಟ್ರೋಲಿಯಂನ ಉತ್ಪನ್ನಗಳ ನಂತರ ಹೆಚ್ಚಿನ ವಹಿವಾಟು ಹೊಂದಿರುವ ಕಾಫಿಯು, ಭಾರತದ ಮುಖ್ಯ ಪಾನೀಯ*

ಇಮೇಜ್
*ಪೆಟ್ರೋಲಿಯಂನ ಉತ್ಪನ್ನಗಳ ನಂತರ ಹೆಚ್ಚಿನ ವಹಿವಾಟು ಹೊಂದಿರುವ ಕಾಫಿಯು, ಭಾರತದ ಮುಖ್ಯ ಪಾನೀಯ* ಭಾರತ, ಮಾರ್ಚ್ 31:ಕಾಫಿಯು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದು ಅಂತರಾಷ್ಟಿಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂನ  ಉತ್ಪನ್ನಗಳ ನಂತರ ಹೆಚ್ಚಿನ  ವಹಿವಾಟು ಹೊಂದಿರುವ ಕಾಫಿಯು, ಭಾರತದ ಮುಖ್ಯ ಪಾನೀಯವಾಗಿದೆ. ಕಾಫಿ ದೇಶಕ್ಕೆ ವಿದೇಶಿ ವಿನಿಮಯ ಗಳಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಪ್ರಮುಖವಾಗಿ ಕರ್ನಾಟಕದ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲಿ ಬೆಳೆಯುತ್ತದೆ  #ಕಾಫಿ #ರೋಬೆಸ್ಟ್ #ಕೆಫಿನ್ #ರೋಬಸ್ಟಾ #ಬೀನ್ಸ್ #ವಿಶಿಷ್ಟ #ಗುಣಲಕ್ಷಣ  #ಹೆಸರುವಾಸಿ #ಚಹಾ #ಅರೇಬಿಕಾ #coffeelover #coffeeshop #coffeetime #coffeeculture #coffeelovers  ರಾಷ್ಟ್ರದಲ್ಲಿ ,ಕರ್ನಾಟಕ ರಾಜ್ಯ ಕಾಫಿ ಬೆಳೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕಾಫಿಯನ್ನು ಪೂರ್ಣ ಬೆಳೆಯಾಗಿ ಆಥವಾ ಮಿಶ್ರಬೆಳೆಯಾಗಿ  ಶೇ ೫೦-೬೦ ರಷ್ಟು ನೆರಳಿರುವ ತೋಟಗಳಲ್ಲಿ ಬೆಳೆಯಬಹುದು.  ಕಾಫಿಯು ಅಭಿವೃದ್ಧಿ ಹೊಂದುತ್ತಿರುವ ೭೦ ರಾಷ್ಟ್ರಗಳ ಆರ್ಥಿಕ  ವ್ಯವಸ್ಥೆಯ ಬೆನ್ನುಲುಬಾಗಿದೆ. ವಿಶ್ವದಲ್ಲಿ ಸರಿಸುಮಾರು ಶೇಕಡಾ 75 ರಷ್ಟು ಕಾಫಿಯ ಉತ್ಪಾದನೆ ಅರೇಬಿಕಾ ಕಾಫಿಯ  ಪ್ರಬೇದದಿಂದ ಉತ್ಪಾದಿಸಿದರೆ ಶೇಕಡಾ. 24 ರಷ್ಟು ರೋಬಸ್ಟ ಕಾಫಿಯಿಂದ ಹಾಗೂ ಶೇಕಡಾ 1 ರಷ್ಟು ಲಿಬೇರಿಕಾ ಕಾಫಿ (ಮರ ಕಾಫಿ) ಯಿಂದ ಉತ್ಪಾದಿಸಲಾ...

*ಯುಗಾದಿಯ ಕಹಿ-ಗೃಹ ಸಚಿವರ ಸ್ವಕ್ಷೇತ್ರ ತುಮಕೂರಿನ ರಂಗಸ್ವಾಮಿ ಬೆಟ್ಟದ ವಿಷ್ಣು ದೇವರ ವಿಗ್ರಹ ಭಗ್ನ

*ಯುಗಾದಿಯ ಕಹಿ-ಗೃಹ ಸಚಿವರ ಸ್ವಕ್ಷೇತ್ರ ತುಮಕೂರಿನ ರಂಗಸ್ವಾಮಿ ಬೆಟ್ಟದ ವಿಷ್ಣು ದೇವರ ವಿಗ್ರಹ ಭಗ್ನ * ಕರ್ನಾಟಕ, ಮಾರ್ಚ್ 31:ಸಚಿವ ಜಿ. ಪರಮೇಶ್ವರ , ಸ್ವಕ್ಷೇತ್ರ ತುಮಕೂರಿನ  ರಂಗಸ್ವಾಮಿ ಬೆಟ್ಟದ  ವಿಷ್ಣು ದೇವರ ವಿಗ್ರಹ ಭಗ್ನ ಮಾಡಲಾಗಿದೆ. ಇದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. #ಕಿಡಿಗೇಡಿ #ತಂತಿ #ಬೇಲಿ  #ವಿಷ್ಣು #ವಿಗ್ರಹ #ಧ್ವಂಸ  #ಸಿಸಿಟಿವಿ #ವಿಡಿಯೋ #ಇದೀಗ #ಸಾಮಾಜಿಕ #ಜಾಲತಾಣ #ವೈರಲ್  ಕಿಡಿಗೇಡಿಯೊಬ್ಬ ತಂತಿ ಬೇಲಿ ಹಾಕಿದ್ದರೂ ವಿಷ್ಣುವಿಗ್ರಹವನ್ನು ಧ್ವಂಸ ಮಾಡಿದ್ದಾನೆ. ಈ ಘಟನೆಯ ಸಿಸಿಟಿವಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ  https://www.instagram.com/reel/DH2A7RxzfDj/?igsh=bmw4MG1veTBldHh5 ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೆಸರಾಂತ ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನದ ಮೆಟ್ಟಿಲು ಹತ್ತಿರ ಇರುವ ವಿಷ್ಣುವಿನ ವಿಗ್ರಹವನ್ನು ನುಚ್ಚುನೂರು ಮಾಡಿ ಬಿಸಾಡಿದ್ದಾರೆ .  ಕುಣಿಗಲ್ ತಾಲೂಕಿನ ಪೊಲೀಸ್ ಅಧಿಕಾರಿಗಳು ವಿಡಿಯೋದಲ್ಲಿ ಇರುವವನ್ನು ಇಡಿದು ತಕ್ಕ ಶಿಕ್ಷೆ ಕೊಡಿಸಿ,  ಸರ್ಕಾರದಲ್ಲಿ ಹಿಂದೂ ದೇವತೆಗಳು ಎಷ್ಟು ಸೇಫ್ ಎಂಬ ಪ್ರಶ್ನೆಯೂ ಮೂಡಿದೆ. ದೇವಾಲಯದ ಸಿಬ್ಬಂದಿ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿದ್ದಾರೆ. 'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ': ನಾಡ...

ಸುಧಾರಣೆ ಹಾದಿಯಲ್ಲಿ ಕಾರಾಗೃಹಗಳು-ಕೈದಿಗಳಿಗೆ ಕೌಶಲ್ಯಾಧಾರಿತ ಕೋರ್ಸುಗಳ ತರಬೇತಿ*

*ಸುಧಾರಣೆ ಹಾದಿಯಲ್ಲಿ  ಕಾರಾಗೃಹಗಳು-ಕೈದಿಗಳಿಗೆ  ಕೌಶಲ್ಯಾಧಾರಿತ ಕೋರ್ಸುಗಳ ತರಬೇತಿ* ಕರ್ನಾಟಕ , ಮಾರ್ಚ್ 25:  ಬೆಂಗಳೂರು-ಮೈಸೂರು ಹೆದ್ದಾರಿಯ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದ ಎರಡೂವರೆ ಎಕರೆ ವಿಸ್ತೀರ್ಣದಲ್ಲಿರುವ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯ ಜಿಲ್ಲಾ ಕಾರಾಗೃಹ ಸಾಕಷ್ಟು ಸುಧಾರಣೆಯಿಂದ ಗಮನ ಸೆಳೆಯುತ್ತಿದೆ. ವಿವಿಧ ರೀತಿಯ ಅಪರಾಧಗಳನ್ನು ಮಾಡಿ ಶಿಕ್ಷೆಗೆ ಒಳಗಾಗಿರುವ ಕಾರಾಗೃಹ ನಿವಾಸಿಗಳನ್ನು ಸುಧಾರಣೆ ಮಾಡಲು ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ  ರಾಕೇಶ್ ಕಾಂಬಳೆ ಹಲವಾರು ರೀತಿಯ ಉತ್ತಮ ಕ್ರಮಗಳನ್ನು ಕೈಗೊಂಡಿದ್ದಾರೆ. #ಸುಧಾರಣೆ #ಹಾದಿ #ಕಾರಾಗೃಹ #ಕೈದಿ #ಕೌಶಲ್ಯಾಧಾರಿತ #ಕೋರ್ಸುಗಳ #ತರಬೇತಿ ಬಂಧಿಖಾನೆ ನಿವಾಸಿಗಳನ್ನು ಸುಧಾರಣೆ ತರುವ ಹಂತವಾಗಿ ಜಿಲ್ಲಾ ಕಾರಗೃಹದಲ್ಲಿ ವಿವಿಧ ರೀತಿಯ ಸಕಾರಾತ್ಮಕ ಚಟುವಟಿಕೆಗಳು ಹಾಗೂ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಆಸಕ್ತ ಬಂಧಿಖಾನೆ ನಿವಾಸಿಗಳಿಗೆ ಕೌಶಲ್ಯಾಧಾರಿತ ಕೋರ್ಸುಗಳ ತರಬೇತಿ ನೀಡಲಾಗಿದೆ ಹಾಗೂ ನೀಡಲಾಗುತ್ತಿದೆ. ಮುಖ್ಯವಾಗಿ ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂಧಿಖಾನೆ ನಿವಾಸಿಗಳಲ್ಲಿ ಅಕ್ಷರ ಜ್ಞಾನವನ್ನು ಬಿತ್ತಲಾಗುತ್ತಿದೆ, ಮೇಣದಬತ್ತಿ, ಅಗರಬತ್ತಿ ತಯಾರಿಕೆಯಂತಹ ಕೆಲಸಗಳು, ಪ್ಲಂಬಿAಗ್ ಕೆಲಸದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಕಾರಾಗೃಹದಲ್ಲಿ ಕೆಲಸ ಮಾಡಲು ಆಸಕ್ತರಿರುವ ಬಂಧಿ ನಿವಾಸಿಗಳಿಗೆ ಕೆಲ...

*ಪಾಪ.. ಮುಗ್ಧ ಮಗುವಿನ ಕಾರ್ಯಕ್ರಮ, ಪೂರ್ಣವಾಗಲು, ಕನಿಷ್ಠ 5 ನಿಮಿಷ ಸಮಯ ನೀಡಬಹುದಿತ್ತು*

*ಪಾಪ.. ಮುಗ್ಧ ಮಗುವಿನ ಕಾರ್ಯಕ್ರಮ, ಪೂರ್ಣವಾಗಲು, ಕನಿಷ್ಠ 5 ನಿಮಿಷ ಸಮಯ ನೀಡಬಹುದಿತ್ತು* ಕೇರಳ , ಮಾರ್ಚ್ 05:. ಕೇರಳ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮನೋರಂಜನ ಕಾರ್ಯಕ್ರಮವನ್ನು ಕೆಲವು ಜನರು ನಿಲ್ಲಿಸಿದ ಘಟನೆಯು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. https://youtube.com/shorts/Wg1xFiQP3mc?si=P1bV_9R7Zg9yYy-n ಪಾಪ ಮುಗ್ದ ಮಗುವಿನ ಕಾರ್ಯಕ್ರಮವನ್ನು ಪೂರ್ಣಗೊಳಿಸಲು 5 ನಿಮಿಷ ಸಮಯವನ್ನು ನೀಡಬಹುದಿತ್ತು,  ಬೆಳೆಯುವ, ಕನಸು ಕಾಣುವ ಮಕ್ಕಳಲ್ಲಿ ಇದು ಯಾವ ರೀತಿ ಪರಿಣಾಮ ಬೀರುತ್ತದೆ? #ಇಂದು #keralatourism#keralapeoples #ಮನೋರಂಜನ #ಕಾರ್ಯಕ್ರಮ #ನಿಲ್ಲಿಸಿದ #ಮತಾಂಧರು #ಮಗು #Supportskills ದೇವಸ್ಥಾನಗಳಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಕಾನೂನು ಅನುಷ್ಠಾನಗೊಳಿಸುವಲ್ಲಿ ತೋರುವ ಈ ದಕ್ಷತೆಯನ್ನು ಇತರ ಕಾರ್ಯಕ್ರಮಗಳಲ್ಲೂ ತೋರಿಸಬೇಕು ಅಲ್ಲವೇ? https://youtube.com/shorts/Wg1xFiQP3mc?si=v8od-de7NpYw9KJS ದಯವಿಟ್ಟು ಮಕ್ಕಳ ಕೌಶಲ್ಯಗಳನ್ನು ಬೆಂಬಲಿಸಿ ...🙏 #school #college #puc #ಶಿಕ್ಷಣ #coach #Chethana #gowda #Riya #YOGI #ವಿದ್ಯಾರ್ಥಿ #ನೌಕರ #ಆದೇಶ #ಚಿತ್ರ #ದೃಶ್ಯ #ದೇವರು #ನೀರು #ರಾತ್ರಿ #ಹೂ #ಕನ್ನಡ #ಭಾಷೆ #ಮುನಿಸ್ವಾಮಿ #book #AI #child https://www.instagram.com/informationforpeople,

*ಮಿಮಿಕ್ರಿ ಮಾಡುವ *ಹುಲಿ ಪತಂಗಳು ನಿರುಪದ್ರವಿಗಳು*🐝🦋

*ಮಿಮಿಕ್ರಿ ಮಾಡುವ *ಹುಲಿ ಪತಂಗಳು  ನಿರುಪದ್ರವಿಗಳು*🐝🦋  ಭಾರತ, ಮಾರ್ಚ್ 30: ನೋಟದಲ್ಲಿ, ಈ ಕೀಟವು ಕಣಜದಂತೆ ಕಾಣಿಸಬಹುದು - ಆದರೆ, ಇದು ವಾಸ್ತವವಾಗಿ ಪರಭಕ್ಷಕಗಳನ್ನು ದೂರವಿಡಲು ಬುದ್ಧಿವಂತ ಮಿಮಿಕ್ರಿಯನ್ನು ಬಳಸುವ ಪತಂಗವಾಗಿದೆ.  ಇವು ಸಂಪೂರ್ಣವಾಗಿ ನಿರುಪದ್ರವಿಗ video ಳು. ಪತಂಗಗಳಾದರು, ಇವುಗಳಿಗೆ ದವಡೆಗಳಿಲ್ಲ ಮತ್ತು ಕಚ್ಚಲು ಸಾಧ್ಯವಿಲ್ಲ! , 🌏 ಉಷ್ಣವಲಯದ ಪ್ರದೇಶಗಳಲ್ಲಿ  ಕಂಡುಬರುವ ಈ ಪತಂಗಗಳು ಅವುಗಳ ಹೆಸರುವಾಸಿಯಾಗಿದೆ: #ಕಣಜ #ಅಮಟಾಹ್ಯೂಬ್ನೇರಿ  #ಮಿಮಿಕ್ರಿ #ಜೀವವೈವಿಧ್ಯ #ಉಷ್ಣವಲಯದಕೀಟಗಳು #ವನ್ಯಜೀವಿಪರಿಶೋಧನೆ #ಟ್ಯಾಕ್ಸನ್ #ಎಕ್ಸ್‌ಪೆಡಿಶನ್ಸ್ #ಕೀಟಗಳಸಂಯೋಗ #ಪತಂಗಗಳು #ಮಳೆಕಾಡು #ಕಾಡುಅನುಭವ #ಬೋರ್ನಿಯೊ #ಸೊಲೊಟ್ರಾವೆಲ್ಸ್ #ದಿಎಕ್ಸ್‌ಪ್ಲೋರರ್ಸ್ #ದಿಎಕ್ಸ್‌ಪ್ಲೋರರ್ಸ್ಕ್ಲಬ್ #ಸಿಟಿಜನ್‌ಸೈನ್ಸ್ #ರಿಸರ್ಚ್‌ಟ್ರಾವೆಲ್  #huebneri ✨ 🐛 ಕಪ್ಪು-ಮತ್ತು-ಹಳದಿ ಪಟ್ಟಿಯ ಹೊಟ್ಟೆಗಳನ್ನು ಹೊಂದಿರುವ ಇವು ರೆಕ್ಕೆಗಳ ಮೇಲೆ ಪಾರದರ್ಶಕ "ಕಿಟಕಿಗಳ ತರಹ ರಚನೆಗಳನ್ನು ಹೊಂದಿವೆ. ಇವುಗಳ ಸನಿಹ ಬರುವ ಪರಭಕ್ಷಕಗಳನ್ನು ಗೊಂದಲಗೊಳಿಸುವ ಅಲ್ಟ್ರಾಸಾನಿಕ್ ಕ್ಲಿಕ್‌ಗಳನ್ನು ಹೊರಸೂಸುತ್ತದೆ ಅಮಾಟ ಹುಬ್ನೆರಿ, ಕಣಜ ಪತಂಗ, ಎರೆಬಿಡೆ ಇವು ಅಮಾಟ ಕುಲದ ಪತಂಗವಾಗಿದೆ,  ಕಪ್ಪು ಬಣ್ಣದಲ್ಲಿರುತ್ತಾರೆ ಮತ್ತು ಹೊಟ್ಟೆಯಾದ್ಯಂತ ಹಳದಿ ಪಟ್ಟಿಗಳನ್ನು ಮತ್ತು ರೆಕ್ಕೆಗಳಲ್ಲಿ ಪಾರದರ್ಶಕ ಕಿಟ...

ಡ್ರ್ಯಾಗನ್ ಹಣ್ಣು ಹಲವು ರೋಗಗಳ ತಡೆಗಟ್ಟುವಿಕೆಗೆ ಸಾಮರ್ಥ್ಯ ಹೊಂದಿದೆ*

ಇಮೇಜ್
*ಡ್ರ್ಯಾಗನ್ ಹಣ್ಣು ಹಲವು ರೋಗಗಳ ತಡೆಗಟ್ಟುವಿಕೆಗೆ ಸಾಮರ್ಥ್ಯ ಹೊಂದಿದೆ* ಕರ್ನಾಟಕ, ಮಾರ್ಚ್ 28: ಹೈಲೋಸೆರಿಯಸ್ ಕುಲಕ್ಕೆ ಸೇರಿದ ಡ್ರ್ಯಾಗನ್ ಹಣ್ಣು  ಉರಿಯೂತ ಮತ್ತು ಆಕ್ಸಿಡೇಟಿವ್ ಪ್ರಕ್ರಿಯೆಗಳಿಗೆ ಸಂಬಂಧಿಸಿದ   ಸೇರಿದಂತೆ ಹಲವು ರೋಗಗಳ ತಡೆಗಟ್ಟುವಿಕೆಗೆ ಸಾಮರ್ಥ್ಯವನ್ನು ಹೊಂದಿದೆ. ಡ್ರ್ಯಾಗನ್ ಹಣ್ಣು ಗುಲಾಬಿ, ಕೆಂಪು ಅಥವಾ ಹಳದಿ ಬಣ್ಣದ ರೋಮಾಂಚಕ ಛಾಯೆಗಳಾಗಬಹುದಾದ ಚಿಪ್ಪುಳ್ಳ ಹೊರ ಚರ್ಮವನ್ನು ಹೊಂದಿರುತ್ತದೆ. ಡ್ರ್ಯಾಗನ್ ಹಣ್ಣು, ವಿಶಿಷ್ಟವಾದ ನೋಟ ಮತ್ತು ಸ್ವಲ್ಪ ಸಿಹಿ ರುಚಿಯನ್ನು ಹೊಂದಿರುವ ಉಷ್ಣವಲಯದ ಹಣ್ಣಾಗಿದ್ದು, ಇದನ್ನು ಕಿವಿ ಮತ್ತು ಪೇರಳೆ ಹಣ್ಣಿನ ನಡುವಿನ ಮಿಶ್ರತಳಿ ಎಂದು ವಿವರಿಸಲಾಗುತ್ತದೆ.  #ಡ್ರ್ಯಾಗನ್ #ಹಣ್ಣು #ಆರೋಗ್ಯ #ವಿಟಮಿನ್‌ಗಳು, #ಪೊಟ್ಯಾಸಿಯಮ್ #ಬೀಟಾಸಯಾನಿನ್‌  #ವೆನಿಲಿಕ್ #ಆಮ್ಲ #ಗ್ಯಾಲಿಕ್     ಡ್ರ್ಯಾಗನ್ ಹಣ್ಣು  ಆರೋಗ್ಯದ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ, ವಿಟಮಿನ್‌ಗಳು, ಪೊಟ್ಯಾಸಿಯಮ್, ಬೀಟಾಸಯಾನಿನ್, ಪಿ-ಕೌಮರಿಕ್ ಆಮ್ಲ, ವೆನಿಲಿಕ್ ಆಮ್ಲ ಮತ್ತು ಗ್ಯಾಲಿಕ್ ಆಮ್ಲವನ್ನು ಒಳಗೊಂಡಿರುವ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಈ ಹಣ್ಣು ಒಳಗೊಂಡಿದೆ.  ಮಧುಮೇಹ, ಡಿಸ್ಲಿಪಿಡೆಮಿಯಾ, ಮೆಟಾಬಾಲಿಕ್ ಸಿಂಡ್ರೋಮ್, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಕ್ಯಾನ್ಸರ್‌ನಂತಹ ಪರಿಸ್ಥಿತಿಗಳನ್ನು  ಹೊಂದಿರುವ ರ...

ಸಾಮಾಜಿಕ ಜಾಲತಾಣ ಬಳಕೆದಾರರೇ... ಎಚ್ಚರ!SEXTORTION* ಅಂದ್ರೆ ಏನು?*

"ಸಾಮಾಜಿಕ ಜಾಲತಾಣ ಬಳಕೆದಾರರೇ... ಎಚ್ಚರ! SEXTORTION * ಅಂದ್ರೆ ಏನು?* ಕರ್ನಾಟಕ,ಮಾರ್ಚ್ 28:*SEXTORTION* ಅಂದ್ರೆ ಏನು ಅನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ಇರುವವರೆಲ್ಲಾ ತಿಳಿದುಕೊಳ್ಳಿ.... 😡🔥🔥🔥🔥🔥 ಲೈಂಗಿಕ ಚಟುವಟಿಕೆಯ ಪುರಾವೆಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸುವ ಮೂಲಕ ಯಾರೊಂದಿಗಾದರೂ ಹಣ ಅಥವಾ ಲೈಂಗಿಕ ಅನುಕೂಲಗಳನ್ನು ಸುಲಿಗೆ ಮಾಡುವ ಅಭ್ಯಾಸವು SEXTORTION ಆಗಿದೆ. "ಅವಳು ಮತ್ತು ಇತರ ಏಳು ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಬಲಿಯಾದರು" ದಯವಿಟ್ಟು ಪ್ರತಿಯೊಬ್ಬರಿಗೂ  ಈ ವೀಡಿಯೊ ಶೇರ ಮಾಡಿ ಜಾಗೃತಿ ಮೂಡಿಸಿ...🙏 #ಮೆಸೇಜಿಂಗ್ #ಅಪ್ಲಿಕೇಶನ್‌ #ಡೇಟಿಂಗ್  #ಮಾಧ್ಯಮ #ಅಶ್ಲೀಲ #ಸೈಟ್‌ #ಇತ್ಯಾದಿ #ವಿಡಿಯೋ #ಆಡಿಯೋ #ಚಾಟ್‌ #ಪೋಸ್ಟ್ #ನಕಲಿ ₹ಖಾತೆ #ಪ್ರೊಫೈಲ್‌ #ಪುಟಗಳು #ಜಾಹೀರಾತು ₹ ಇತ್ತೀಚಿಗೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಅದರಲ್ಲೂ ನಗ್ನ ಫೋಟೋ, ವಿಡಿಯೋ ಇಂತಹ ದಂಧೆಗಳಿಗೆ ಜನರು ಹೆಚ್ಚು ಬಲಿಯಾಗುತ್ತಿದ್ದಾರೆ. ಕೆಲವು ಸಮಯದ ಹಿಂದೆ, ಪುಣೆಯ ವೈದ್ಯರೊಬ್ಬರು Sextortion ಬಲೆಗೆ ಬಿದ್ದು, ಸಾವಿರಾರು ರೂಪಾಯಿ ಕಳೆದು ಕೊಂಡಿದ್ದಾರೆ. ವಂಚಕನು ನಿಮ್ಮ ಖಾಸಗಿ ಮತ್ತು ಸೂಕ್ಷ್ಮ ವಿಷಯವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದಾಗ ಆನ್‌ಲೈನ್ ಸೆಕ್ಸ್‌ಟಾರ್ಷನ್ ಸಂಭವಿಸುತ್ತದೆ. ನೀವು ಲೈಂಗಿಕ ಸ್ವಭಾವದ ಚಿತ್ರಗಳು, ಲೈಂಗಿಕ ಸಹಾಯ ಅಥವಾ ಹಣವನ್ನು ಒದಗಿಸದಿದ್ದರ...

*ಪೊಲೀಸ್ ರಿಂದ -ಗೋ ಮಾಂಸ ಮತ್ತು ಕೊಬ್ಬಿನ 50 ದೊಡ್ಡ ಡಬ್ಬಿಗಳ ವಶ

*ಪೊಲೀಸ್ ರಿಂದ -ಗೋ ಮಾಂಸ ಮತ್ತು ಕೊಬ್ಬಿನ 50 ದೊಡ್ಡ ಡಬ್ಬಿಗಳ ವಶ" https://youtube.com/shorts/3lmitN42XDg?si=z-_JHTJLsk1KAefg ಕರ್ನಾಟಕ, ಮಾರ್ಚ್ 26:ಇಂದು ಮಧ್ಯಾಹ್ನ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರಿನಲ್ಲಿ ನಡೆದಂತಹ ಗೋ ಹತ್ಯೆ ಪ್ರಕರಣ ರಾಜಾ ರೋಷವಾಗಿ ಹಾಡು ಹಗಲೇ ನಡೆಸುತ್ತಿರುವಂತಹ ಕಸಾಯಿ ಕಾನೆಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಪೊಲೀಸರು ಸೇರಿ ಅಕ್ರಮ ಕಸಾಯಿಕಾನೆ ಮೇಲೆ ದಾಳಿ ಮಾಡಿದಾಗ ಅಲ್ಲಿ ಗೋಗಳ ಮಾಂಸ ಮತ್ತು ಗೋವಿನ ಕೊಬ್ಬಿನಿಂದ ತಯಾರು ಮಾಡಿರುವಂತಹ 50 ಡಬ್ಬಿಗಳ ಎಣ್ಣೆ ಆ ಜಾಗದಲ್ಲಿ ದೊರಕಿದೆ ಮತ್ತು ಬದುಕಿರುವಂತ ಗೋವುಗಳನ್ನ ರಕ್ಷಣೆ ಮಾಡಲಾಗಿದೆ. https://youtube.com/shorts/3lmitN42XDg?si=z-_JHTJLsk1KAefg #ಮಾಂಸ #ಕಸಾಯಿ #ಖಜಾನೆ #ಭಜರಂಗದಳ #ಜಾಗರಣ #ವೇದಿಕೆ #ಗೋವು #ದನ .  ಈ ಪ್ರಕರಣದ ಸಂದರ್ಭದಲ್ಲಿ ಅಲ್ಲಿ ಇರುವಂತಹ ಮುಸಲ್ಮಾನರು ಪೊಲೀಸರು ಮತ್ತು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಹಲ್ಲೆಗೆ ಪ್ರಯತ್ನಿಸಿದರು ಆದರೂ ಕಾರ್ಯಕರ್ತರು ಪೊಲೀಸರು ಸೇರಿ ಅಲ್ಲಿರುವಂಥ ಎಲ್ಲಾ ಮಾಂಸ ಮತ್ತು ಎಣ್ಣೆ ಡೆಬ್ಬೆಗಳನ್ನು ಜಪ್ತಿ ಮಾಡಲಾಯಿತು. ಎಂಬ ಮಾಹಿತಿ ಲಭ್ಯವಾಗಿದೆ. https://youtube.com/shorts/3lmitN42XDg?si=z-_JHTJLsk1KAefg

*ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಲು ಅಲ್ಲಿನ ಜನರ ತಲಾ ಆದಾಯ ಹೆಚ್ಚಳವಾಗಬೇಕು- ಆರ್ಥಿಕ ತಜ್ಞರಾದ ಪ್ರೊ ಎಂ ಗೋವಿಂದರಾವ್

ಇಮೇಜ್
*ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಲು ಅಲ್ಲಿನ ಜನರ ತಲಾ ಆದಾಯ ಹೆಚ್ಚಳವಾಗಬೇಕು- ಆರ್ಥಿಕ ತಜ್ಞರಾದ ಪ್ರೊ ಎಂ ಗೋವಿಂದರಾವ್* *ಕರ್ನಾಟಕ , ಮಾರ್ಚ್ 25 :ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಹಿಂದುಳಿದ ತಾಲ್ಲೂಕುಗಳ ಜನರ ತಲಾ ಆದಾಯ ಹೆಚ್ಚ್ಕವಾಗಬೇಕು. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸಿ ಯೋಜನೆಗಳನ್ನು ರೂಪಿಸಬೇಕು ಎಂದು  ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ  ಸಮಿತಿಯ ಅಧ್ಯಕ್ಷರು ಹಾಗೂ ಆರ್ಥಿಕ ತಜ್ಞರಾದ ಪ್ರೊ ಎಂ ಗೋವಿಂದರಾವ್ ಅವರು ತಿಳಿಸಿದರು.  ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಿಭಾಗ ಮಟ್ಟದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾದೇಶಿಕ ಅಸಮತೋಲನ ಸಮಿತಿ 2024 ರ ಸೆಪ್ಟೆಂಬರ್ ನಿಂದ ಕೆಲಸ ಮಾಡಲು ಪ್ರಾರಂಭಿಸಿದೆ. ನಂಜುಂಡಪ್ಪ ವರದಿಯಲ್ಲಿ 35 ಸೂಚ್ಯಂಕ ಗಳನ್ನು ಅಧ್ಯಯನ ಮಾಡಿ ವರದಿ ನೀಡಿತ್ತು. ವರದಿಯಂತೆ 31 ಸಾವಿರ ಕೋಟಿ ಹಣ ಖರ್ಚು ಮಾಡಲಾಗಿದೆ ಆದರೂ ಹಲವು ಕ್ಷೇತ್ರಗಳಲ್ಲಿ ಅಭಿವೃದ್ದಿ ಆಗಿಲ್ಲ. ಈ ಬಗ್ಗೆ ಸಮಿತಿಯಿಂದ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಲಾಗುವುದು ಎಂದರು.  ಅನುದಾನ ಖರ್ಚು ಮಾಡಿದರೆ ಅಭಿವೃದ್ದಿ ಆಗುತ್ತದೆ ಎಂಬುದು ಸಾಧ್ಯವಿಲ್ಲ. ಅಲ್ಲಿನ ಜನರ ತಲಾ ಆದಾಯ ಹೆಚ್ಚಾಗಬೇಕು. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ  ತಲಾ ಆದಾಯದಲ್ಲಿ ವ್ಯತ್ಯಾಸ ಇವೆ. ಉತ್ತರ ಕರ್ನಾಟಕ ಕಡಿಮೆ ತಲಾ ಆದಾಯ ಹೊಂದಿವೆ.  ಪ್ರಾದೇಶಿಕ ಅ...

*ಹೆಚ್ಚು ಲಾಭ ತರುತ್ತಿರುವ ಬೆಳೆಗಳಲ್ಲಿ ಅವೊಕಾಡೊ/ ಬೆಣ್ಣೆ ಹಣ್ಣು ಕೂಡ ಒಂದು. ಹಾಗಾಗಿ ಬೆಣ್ಣೆ ಹಣ್ಣಿನ ಕೃಷಿ ಬಗ್ಗೆ ತಿಳಿಯೋಣ

*ಹೆಚ್ಚು ಲಾಭ ತರುತ್ತಿರುವ ಬೆಳೆಗಳಲ್ಲಿ ಅವೊಕಾಡೊ/ ಬೆಣ್ಣೆ ಹಣ್ಣು ಕೂಡ ಒಂದು. ಹಾಗಾಗಿ  ಬೆಣ್ಣೆ ಹಣ್ಣಿನ ಕೃಷಿ ಬಗ್ಗೆ  ತಿಳಿಯೋಣ* ಭಾರತ, ಮಾರ್ಚ್ 24: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹಣ್ಣು ಅವಕ್ಯಾಡೋ ಅಥವಾ ಬೆಣ್ಣೆ ಹಣ್ಣು, ಹೆಚ್ಚು ಲಾಭ ತರುತ್ತಿರುವ ಬೆಳೆಯಾಗಿದೆ.   ಇಂದು ಭಾರತದ ರೈತರು  ಹೊಸ ಪ್ರಯೋಗಳನ್ನು ಮೂಲಕ ಹೆಚ್ಚಿನ ಆದಾಯ  ಗಳಿಸುತ್ತಿದ್ದಾರೆ.ಆಧುನಿಕ ಕೃಷಿಯತ್ತ ಮುಖ ಮಾಡಿರುವ ರೈತರು ಇಂದು ಸುಖೀ ಜೀವನದೊಂದಿಗೆ ಕಾರು ಬಂಗಲೆ ಮಾಲೀಕರಾಗುತ್ತಿದ್ದಾರೆ. #Profit #agriculture #ಬೆಣ್ಣೆ #ಹಣ್ಣು #ಅವಕ್ಯಾಡೋ #ಬೆಳೆ #ಫಸಲು ತಂತ್ರಜ್ಞಾನ ಮತ್ತು ಸರಿಯಾದ ಜ್ಞಾನದ ಅಭಿವೃದ್ಧಿಯೊಂದಿಗೆ, ಈ ಹಣ್ಣಿನ ಕೃಷಿಯನ್ನು ಸುಲಭವಾಗಿ ಮಾಡಬಹುದು. ಈ ಹಣ್ಣಿನ ಕೃಷಿಗೆ ತಾಪಮಾನವು 20 ರಿಂದ 40 ಡಿಗ್ರಿಗಳಾಗಿರಬೇಕು. ಭಾರತದಲ್ಲಿ, ಈ ಹಣ್ಣನ್ನು ಪ್ರಸ್ತುತ ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದ ಭಾಗಗಳಲ್ಲಿ ಬೆಳೆಯಲಾಗುತ್ತದೆ.ಕರ್ನಾಟಕ ರ ಬಹುತೇಕ ಜಿಲ್ಲೆಗಳಲ್ಲಿ ಬೆಣ್ಣೆ ಹಣ್ಣು ಕೃಷಿ ಇದೆ ,ನಾಗಮಂಗಲ, ಮಂಡ್ಯ ಹತ್ತಿರ ಹೆಚ್ಚಾಗಿ ಕಂಡು ಬರುತ್ತದೆ. ಈ ಬೆಳೆಯ ಮೂಲಕ ನೀವು ಖಂಡಿತವಾಗಿಯೂ ಮಿಲಿಯನೇರ್ ಆಗಬಹುದು.   ಒಂದು ಗಿಡಕ್ಕೆ ಎಷ್ಟು ಹಣ ಹಣ್ಣು ಬಂದ್ಮೇಲೆ ಮಾರ್ಕೆಟಿಂಗ್ ಎಲ್ಲಿ ಮಾಡುವುದು ಎಂಬುದರ ಬಗ್ಗೆ ಸರಿಯಾದ ತಿಳುವಳಿಕೆ ಇರಬೇಕು. ಹಣ್ಣಾದ ಮತ್ತು ಸ...